Friday 1 August 2014

ಮಂಡ್ಯ-ಅಂಗನವಾಡಿ ಮಕ್ಕಳೊಂದಿಗೆ ಕಾರ್ಯಕರ್ತರು, ಸಹಾಯಕಿಯರು ಆಹಾರ ಸೇವಿಸಬೇಕು’ರೋಹಿಣಿ ಸಿಂಧೂರಿ .

‘ಅಂಗನವಾಡಿ ಮಕ್ಕಳೊಂದಿಗೆ ಕಾರ್ಯಕರ್ತರು, ಸಹಾಯಕಿಯರು ಆಹಾರ ಸೇವಿಸಬೇಕು’
ಮಂಡ್ಯ, ಆಗಸ್ಟ್ 1 ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರವನ್ನೇ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇವಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.
ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಲು ಸರ್ಕಾರ ಎಲ್ಲಾ ಸವಲತ್ತುಗಳನ್ನು ನೀಡಿದೆ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಆಹಾರವನ್ನೇ ಸೇವಿಸಿದರೆ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಾರೆ ಎಂಬ ಉದ್ದೇಶದಿಂದ ಸರ್ಕಾರ ಈ ಆದೇಶ ನೀಡಿದೆ ಎಂದರು.
ಎಲ್ಲಾ ಮಕ್ಕಳಿಗೆ ಉತ್ತಮ ಶಾಲಾ ಪೂರ್ವ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ಸಿಗಬೇಕು. ಮಕ್ಕಳಿಗೆ ಹಲವಾರು ಚಟುವಟಿಕೆಗಳನ್ನು ಮಾಡಿಸಿದರೆ ಲವಲವಿಕೆ ಹೆಚ್ಚುತ್ತದೆ. ಶೌಚಾಲಯವನ್ನು, ಅಂಗನವಾಡಿ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
13ನೇ ಹಣಕಾಸು: ಅಂಗನವಾಡಿ ಕಟ್ಟಡಗಳ ದುರಸ್ಥಿಗೆ 13ನೇ ಹಣಕಾಸಿನಲ್ಲಿ ಅನುದಾನ ಲಭ್ಯವಿದೆ. ಅತ್ಯಾವಶ್ಯಕವಾದ ದುರಸ್ಥಿಗಳ ಬಗ್ಗೆ ವಿವರ ನೀಡಿದರೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಕೆಲವು ಅಂಗನವಾಡಿಗಳಿಗೆ ಖುದ್ದು ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ಲೋಪಗಳು ಕಂಡು ಬಂದಿವೆ. ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿರ್ಲಕ್ಷತೆ ಮುಂದುವರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅತ್ಯುತ್ತಮ ಕಾರ್ಯಕರ್ತೆಯರಿಗೆ ಪುರಸ್ಕಾರ: ಮಕ್ಕಳಿಗೆ ಉತ್ತಮ ಆಹಾರ, ಶೈಕ್ಷಣಿಕ ಚಟುವಟಿಕೆ, ಸ್ವಚ್ಛತೆ ಮುಂದಾದ ಹಲವಾರು ಮಾನದಂಡಗಳು ಅಂಗನವಾಡಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಕಾರ್ಯಕರ್ತೆಯರಲ್ಲಿ ಉತ್ತಮ ಹವ್ಯಾಸಗಳನ್ನು ಬೆಳಸಲು ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಯರಿಗೆ ಪುರಸ್ಕಾರ ಸಹ ನೀಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಹೆಚ್.ಸಿ.ಚಂದ್ರಶೇಖರಯ್ಯ, ವಿವಿಧ ತಾಲ್ಲೂಕುಗಳ ಶಿಶಿ ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು ಉಪಸ್ಥಿತರಿದ್ದರು.

No comments:

Post a Comment