Tuesday 19 August 2014

ಶಾಂತಿ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿ-ಡಿವೈಎಸ್ಪಿ.

ಶಾಂತಿ ಸೌಹಾರ್ದತೆಯಿಂದ ಯಾವುದೇ ಗಲಭೆಗಳು, ಅಹಿತಕರ ಘಟನೆಗಳು ನಡೆಯದಂತೆ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಬೇಕೆಂದು ಮಂಡ್ಯ ಡಿವೈಎಸ್‍ಪಿ ಉದೇಶ್‍ರವರು ತಿಳಿಸಿದರು.
ಮಂಡ್ಯ ನಗರದ ಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‍ಪಿ ಉದೇಶ್‍ರವರು ಗಣಪತಿ ಪ್ರತಿಷ್ಠಾಪನೆ ಮಾಡಲು ಸಾರ್ವಜನಿಕ ಅಥವಾ ಅಂಗಡಿ ಮಾಲೀಕರುಗಳಿಂದ ಬಲವಂತವಾಗಿ ಚಂದಾ ವಸೂಲಿ ಮಾಡಬಾರದು, ಇದರ ಬಗ್ಗೆ ಇನ್ನು ಎರಡು ದಿನಗಳಲ್ಲಿ 9 ವಜ್ರ ವಾಹನಗಳನ್ನು ನಗರದಾದ್ಯಂತ ಧ್ವನಿವರ್ಧಕಗಳನ್ನು ಅಳವಡಿಸಿ ಇದರ ಬಗ್ಗೆ ಪ್ರಚಾರ ಮಾಡಲಾಗುವುದು ಎಂದರು.
ಗಣಪತಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ರಾತ್ರಿ ವೇಳೆ ಇಬ್ಬರನ್ನು ಕಾವಲಾಗಿ ಇರಿಸಿರಬೇಕು. ಇದರ ಬಗ್ಗೆ ಪೆÇಲೀಸ್ ಠಾಣೆಯಲ್ಲಿ ಕಾವಲುಗಾರರ ಬಗ್ಗೆ ನೋಂದಣಿ ಮಾಡಿಸಿರಬೇಕು. ಹಾಗೂ ಗಣಪತಿ ವಿಸರ್ಜನೆ ಮಾಡುವ ವೇಳೆ ಬೆಳಿಗ್ಗೆ 8-00 ರಿಂದ ಸಂಜೆ 6.00 ಗಂಟೆಯೊಳಗೆ ಮಾತ್ರ ವಿಸರ್ಜನೆ ಮಾಡಬೇಕು. ರಾತ್ರಿ ವೇಳೆಯಲ್ಲಿ ವಿಸರ್ಜನೆಯನ್ನು ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.
ಗಣಪತಿ ವಿಸರ್ಜನೆ ಮಾಡುವ ವೇಳೆಯಲ್ಲಿ ಮಧ್ಯಪಾನ ಮಾಡಿ ಮೆರವಣಿಗೆಯಲ್ಲಿ ತೊಡಗುವವರಿಗೆ ಮುಫ್ತಿಯಲ್ಲಿ ಇರುವ ನಮ್ಮ ಸಿಬ್ಬಂದಿಗಳು ಅವರ ಬಗ್ಗೆ ಕಾನೂನು ರೀತ್ಯ ಕ್ರಮವನ್ನು ಜರುಗಿಸಲಾಗುವುದೆಂದರು ಹಾಗೂ ಗಣಪತಿ ವಿಸರ್ಜನೆ ಮಾಡುವಾಗ ಮೆರವಣಿಗೆಯ ಮಾರ್ಗದ ಬಗ್ಗೆ ಪೆÇಲೀಸ್ ಇಲಾಖೆಯ ತೀರ್ಮಾನವೇ ಅಂತಿಮವಾಗಿರುತ್ತದೆ. ಪ್ರತಿಷ್ಠಾನ ಮಾಡುವವರು ಪೆÇಲೀಸ್ ಇಲಾಖೆಗೆ 20 ರೂ.ನ ಛಾಪಾ ಕಾಗಗದಲ್ಲಿ ಕಡ್ಡಾಯವಾಗಿ ಮುಚ್ಛಳಿಕೆ ಬರೆದುಕೊಡಬೇಕೆಂದರು.
ರಸ್ತೆಯಲ್ಲಿ ಗಣಪತಿ ಪ್ರತಿಷ್ಠಾನವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪ್ರತಿಷ್ಠಾಪನೆ ಮಾಡುವವರು ಸ್ಥಳದ ಬಗ್ಗೆ ಸಂಚಾರಿ ಪೆÇಲೀಸ್ ಠಾಣೆಯಲ್ಲಿ, ಲೋಕೋಪಯೋಗಿ ಇಲಾಖೆಯಲ್ಲಿ, ವಿದ್ಯುತ್‍ಚ್ಛಕ್ತಿ ಬಳಕೆಗೆ ಕೆಇಬಿ ಕಛೇರಿ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪತ್ರ ತಂದ ನಂತರವಷ್ಟೆÉ ಪೆÇಲೀಸ್ ಇಲಾಖೆಯಿಂದ ಅನುಮತಿ ನೀಡಲಾಗುವುದು.
ಪಶ್ಚಿಮ ಪೆÇಲೀಸ್ ಠಾಣೆಯ ಆರಕ್ಷಕ ವøತ್ತ ನಿರೀಕ್ಷಕರಾದ ಪ್ರೀತಿಮ್‍ರವರು ಮಾತನಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಷ್ಟರಲ್ಲೆ ರೌಡಿಪೆರೆಡ್ ಮಾಡಿಸಲಾಗುವುದು. ಶಾಂತಿ ಸಭೆಯಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಮಂಡ್ಯದಲ್ಲಿ ಚಿಕ್ಕ ಮಕ್ಕಳುಗಳು ಸಹ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾರೆ ಅವರಿಗೆ ಹಿರಿಯರಾದ ತಾವುಗಳು ಸಲಹೆ ಸೂಚನೆ ನೀಡಬೇಕು ಸಾಧ್ಯವಾದರೆ ಇಲಾಖೆಗೆ ತಿಳಿಸಿದರೆ ನಾವು ಸಿಬ್ಬಂದಿಗಳನ್ನು ಕಳುಹಿಸಿ ಬಂದೋಬಸ್ತ್ ಮಾಡಿಕೊಡಲಾಗುವುದು ಎಂದರು.
ಶಾಂತಿ ಸಭೆಯಲ್ಲಿ ಡಿಎಸ್‍ಎಸ್ ಮುಖಂಡ ಎಂ.ಬಿ.ಶ್ರೀನಿವಾಸ್, ದೊಡ್ಡಯ್ಯ, ಭಜರಂಗದಳದ ಮಂಜುನಾಥ್, ಮುನವರ್ ಖಾನ್, ಥಾಮಸ್ ಬೆಂಜಮಿನ್‍ರವರುಗಳು ಸಲಹೆ ಸೂಚನೆಗಳನ್ನು ನೀಡಿದರು. ಮುಖಂಡರುಗಳಾದ ನಗರಸಭೆ ಸದಸ್ಯ ರವಿಕುಮಾರ್, ಬೋರೇಗೌಡ, ಮಹೇಶ್, ರಾಮಲಿಂಗೇಗೌಡ ಹಾಗೂ ದೇವ್‍ಪ್ರಸಾದ್, ಪಿಲಿಫ್ ಅಕ್ಮಲ್ ಪಾಷ, ಜಾರ್ಜ್ ಮೋಹನ್ ಕುಮಾರ್, ಮಹಿಳಾ ಸಂಘಟನೆಯ ಮುಖಂಡರುಗಳು, ಮಂಜುನಾಥ್, ಚಂದ್ರು, ನಯಾಜ್ ಅಹಮದ್ ಮತ್ತಿತರರು ಭಾಗವಹಿಸದರು.


No comments:

Post a Comment