Monday 30 November 2015

ನಿರುದ್ಯೋಗಿ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ
ಮೈಸೂರು, ನವೆಂಬರ್ 30 -  ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಯಡಿ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ ಪಾಸ್/ಫೇಲಾದ ನಿರುದ್ಯೋಗಿ ಅಭ್ಯರ್ಥಿಗಳಿಗೆ 6 ತಿಂಗಳ ಸಿ.ಎನ್.ಸಿ. ಮೆಷಿನ್ ಆಪರೇಟರ್ ಹಾಗೂ 12 ತಿಂಗಳ ಟೂಲ್ ರೂಮ್ ಮೆಷಿನಿಸ್ಟ್ ತಾಂತ್ರಿಕ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
  ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಶಿಷ್ಯವೇತನದ ಸೌಲಭ್ಯ ಲಭ್ಯವಿದೆ. 18 ವರ್ಷ ತುಂಬಿದ ನಿರುದ್ಯೋಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅರ್ಜಿಯನ್ನು ಕೂಡಲೇ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸಲ್ಲಿಸಬೇಕು.
  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9141629598 ಅಥವಾ 9066710155  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 6 ರಂದು ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಸಲ್ಪಿ ಡಾ. ಬಿ.ಆರ್.ಅಂಬೇಡ್ಕರ್  ರವರ 59ನೇ ವರ್ಷದ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಬೆಳಿಗ್ಗೆ 9:30 ಗಂಟೆಗೆ ಟೌನ್‍ಹಾಲ್ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ  ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಣೆಯಾದ ವ್ಯಕ್ತಿಗಳ ಪತ್ತೆಗೆ ಮನವಿ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾದ ಕಾಣೆ ಪ್ರಕರಣಗಳಲ್ಲಿ 12 ವ್ಯಕ್ತಿಗಳ ಪತ್ತೆಯಾಗಿರುವುದಿಲ್ಲ.
  ಹೂಟಗಳ್ಳಿ ನಿವಾಸಿಗಳಾದ 40 ವರ್ಷದ ಬಿ.ಭೈರಪ್ಪ ಹಾಗೂ 58 ವರ್ಷದ  ಎಂ.ಪಿ.ಮೊಣ್ಣಪ್ಪ,  ಹೆಬ್ಬಾಳ್ ನಿವಾಸಿ 31 ವರ್ಷದ ಜಿ.ಎನ್.ಬದರಿನಾರಾಯಣ, ಬೆಳವಾಡಿ ನಿವಾಸಿ 41 ವರ್ಷದ ದೇವಪ್ಪನಾಗರಾಜು, ಮಹದೇಶ್ವರ ಬಡಾವಣೆ ನಿವಾಸಿ 75 ವರ್ಷದ ಮಾದಯ್ಯ ಮತ್ತು ಹಿನಕಲ್ ನಿವಾಸಿ 19 ವರ್ಷದ ಮನೋಜ್ .ಆರ್ ಕಾಣೆಯಾಗಿರುವವರು.
  20 ವರ್ಷದ ಮಂಗಳಗೌರಿ, 21 ವರ್ಷದ ಸೌಮ್ಯ ಟಿ.ಕೆ, 23 ವರ್ಷದ ರೀಟಾ, 23 ವರ್ಷದ ಮಂಗಳ ಎನ್ ಮಧುಮಂಗಳ, 19 ವರ್ಷದ ಕಾವ್ಯ, 21 ವರ್ಷದ ಪಿಂಕಿ, 22 ವರ್ಷದ ನಿಶಾ, 21 ವರ್ಷದ ರಾಣಿ ತುಳಸಿ ಇವರುಗಳು ಸ್ತ್ರೀ ಸೇವಾನಿಕೇತನ ಸಂಸ್ಥೆಯಿಂದ ಕಾಣೆಯಾಗಿದ್ದಾರೆ.
  ಕಾಣೆಯಾದ ವ್ಯಕ್ತಿಗಳ ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ವಿಜಯನಗರ ಪೊಲೀಸ್ ಠಾಣೆ. ದೂ.ಸಂ: 0821-2418117, 2418317, 2418517  ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0821-241833)ಗಾಗಲಿ ತಿಳಿಸುವಂತೆ ವಿಜಯನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಕೋರಿದ್ದಾರೆ.
ಡಿಸೆಂಬರ್ 1 ರಂದು ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ
ಮೈಸೂರು, ನವೆಂಬರ್ 3೦. ವಿಕಲಚೇತನರÀ ದಿನಾಚರಣೆ ಪ್ರಯುಕ್ತ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಡಿಸೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವಿಧದ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
  ಆಸಕ್ತರು ಸ್ಥಳದಲ್ಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಸ್ಪರ್ಧೆಗಳ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ:0821-2497496, 0821-2494104, 0821-2490111  ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.1ರಂದು ವಿಶ್ವ ಏಡ್ಸ್ ದಿನಾಚರಣೆ
ಮಂಡ್ಯ ನ.30. ಜಿಲ್ಲಾಡಳಿತ ಮಂಡ್ಯ, ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಸನ್ ಸೋಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂದಕ ಘಟಕ ಮಂಡ್ಯ, ಭಾರತೀ ರೆಡ್‍ಕ್ರಾಸ್ ಮಂಡ್ಯ, ಲಯನ್ಸ್ ಸಂಸ್ಥೆ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಡಿ.1ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ತಾವರೆಗೆರೆಯ ಎಸ್.ಬಿ.ಸಮುದಾಯ ಭವನದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶರತ್ ಬಿ. ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ಅವರು ಅಧ್ಯಕ್ಷತೆ ವಹಿಸುವರು. ವಿಶೇಷ ಉಪನ್ಯಾಸವನ್ನು ಮಿಮ್ಸ್ ವೈದ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಭಾಷ್‍ಬಾಬು ನೀಡುವರು.
ಜಾಗøತಿ ಜಾಥಾವು ಅಂದು ಬೆಳಿಗ್ಗೆ 9.30ಕ್ಕೆ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಆರಂಭವಾಗಿ ಎಸ್.ಬಿ.ಸಮುದಾಯಭವನದಲ್ಲಿ ಸಮಾವೇಶಗೊಳ್ಳಲಿದೆ. ಜಾಥಾವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್‍ಜಿ.ಬೊರಸೆಯವರು ಚಾಲನೆ ನೀಡುವರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಮಂಚೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
 ಸಾಹಿತ್ಯ ಪರಿಷತ್ತಿನ ಚುನಾವಣೆ: ಅಧಿಸೂಚನೆ, ಕರಡು ಮತದಾರರ ಪಟ್ಟಿ ಪ್ರಕಟ
ಮೈಸೂರು, ನವೆಂಬರ್ 30- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ, ಜಿಲ್ಲಾ ಘಟಕಗಳ ಅಧ್ಯಕ್ಷಡಿ, ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯನ್ನು ನಡೆಸಲು ಅಧಿಸೂಚಿನೆ
ಮತ್ತು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಜಿಲ್ಲಾ ಕೇಂದ್ರದ ತಹಶೀಲ್ದಾರ್, ಮೈಸೂರು ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚನಾವಣಾಧಿಕಾರಿಗಳು, ಮೈಸೂರು ಜಿಲ್ಲೆ ಇವರ ಕಚೇರಿಯಲ್ಲಿ ನವೆಂಬರ್ 30 ರಂದು ಪ್ರಕಟಿಸಲಾಗಿದೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ನವೀನ್ ಜೋಸೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಜಿಲ್ಲೆಯ ಜಿಲ್ಲಾ ಕೇಂದ್ರದ ತಹಶೀಲ್ದಾರ್ ಗಳನ್ನು ಚುನಾವಣಾಧಿಕಾರಿಗಳನ್ನಾಗಿ ಹಾಗೂ ಜಿಲ್ಲೆಯ ಉಳಿದ ತಹಶೀಲ್ದಾರ್ ರವರುಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮೈಸೂರು ಜಿಲ್ಲೆಯ ಪ್ರತೀ ತಾಲ್ಲೂಕಿನ ತಹಶೀಲ್ದಾರ್ ರವರ ಕಚೇರಿಯಲ್ಲಿ ಆ ತಾಲ್ಲೂಕು ವ್ಯಾಪ್ತಿಯ ಕರಡು ಮತದಾರರ ಪಟ್ಟಿಯನ್ನು ಹಾಗೂ ಚುನಾವಣಾ ಅಧಿಸೂಚನೆಯನ್ನು ಪ್ರಕಟಣೆ ಮಾಡಲಾಗಿದೆ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಸಂಬಂಧ ಕರಡು ಮತದಾರರ ಪಟ್ಟಿ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ: 19-12-2015 ರಂದು ಕಡೆಯ ದಿನವಾಗಿದೆ. ಆಕ್ಷೇಪಣೆ ಸಲ್ಲಿಸುವವರು ಕಡೆಯ ದಿನಾಂಕದೊಳಗೆ ಸಂಬಂಧಿಸಿದ ತಹಶೀಲ್ದಾರ್ ರವರ ಕಚೇರಿಯಲ್ಲಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿರುತ್ತದೆ. ಕಡೆಯ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಮತನೀಡುವವರು ಚುನಾವಣಾ ತಾರೀಖಿಗೆ ಮೂರು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ ಜಿಲ್ಲಾ ಗಡಿನಾಡ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಐದು ವರ್ಷ ಹಿಂದಿನಿಂದ ಸತತವಾಗಿ ಪರಿಷತ್ತಿನ ಸದಸ್ಯರಾಗಿರತಕ್ಕದ್ದು. ಪರಿಷತ್ತಿನ  ಬಾಕಿ ಉಳಿಸಿಕೊಂಡಿರುವವರು ಹಾಗೂ ಕೋರ್ಟಿನಿಂದ ಶಿಕ್ಷೆಗೆ ಒಳಗಾದವರು ಚುನಾವಣೆಗೆ ನಿಲ್ಲಲು ಅರ್ಹರಾಗಿರುವುದಿಲ್ಲ. ಪರಿಷತ್ತಿನ ಸಿಬ್ಬಂದಿಯವರು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.
  ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ದಿನಾಂಕ: 18-01-2016 ಸೋಮವಾರದಿಂದ 25-01-2016 ಸೋಮವಾರದವರೆಗೆ ಪ್ರತೀ ದಿನ ಬೆಳಿಗ್ಗೆ 11ರಿಂದ ಸಂಜೆ5ಗಂಟೆ ವರಗೆ.  ( ರಜಾದಿನಗಳನ್ನು ಹೊರತುಪಡಿಸಿ) ಅವಕಾಶವಿರುತ್ತದೆ.

  ದಿನಾಂಕ:25-01-2016 ಸೋಮವಾರ ಸಂಜೆ 5ಗಂಟೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಚುನಾವಣಾ ನೀತಿಸಂಹಿತೆಯು ದಿನಾಂಕ:30-11-2015 ರಿಂದ ಜಾರಿಗೆ ಬಂದಿರುತ್ತದೆ.
 ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಮತದಾರರ ಪಟ್ಟಿಯ ಕರಡು ಪ್ರತಿಯಂತೆ ಮೈಸೂರು ತಾಲ್ಲೂಕು  5475, ಹೆಗ್ಗಡದೇವನಕೋಟೆ 236, ಹುಣಸೂರು 538, ಪಿರಿಯಾಪಟ್ಟಣ 331, ತಿ.ನರಸೀಪುರ: 837, ಕೃಷ್ಣರಾಜನಗರ 754 ಹಾಗೂ ನಂಜನಗೂಡು 278 ಮತದಾರರು ಇದ್ದಾರೆ ಎಂದು ಮೈಸೂರು ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  

Saturday 28 November 2015

  ಮಹನೀಯರ ತತ್ವ ಸಿದ್ದಾಂತ ಕಡೆಗಣನೆ ಸರಿಯಲ್ಲ-ಪುಟ್ಟಸ್ವಾಮಿ

ಮಂಡ್ಯ:ನಾವು ವರ್ಷದಲ್ಲಿಬುದ್ಧ,ಬಸವ,ಗಾಂಧಿ,ಅಂಬೇಡ್ಕರ್,ವಾಲ್ಮೀಕಿ,ಕನಕದಾಸ ಮುಂತಾದವರ ಜಯಂತಿಗಳನ್ನು ಆಚರಿಸುತ್ತೇವೆ.ಇದು ಕೇವಲ ತೋರಿಕೆಗಾಗಿ ಆಗಿರದೇ ಅವರ ತತ್ವ ಸಿದ್ದಾಂತಗಳನ್ನು ಅನುಸರಿಸುವ ನಿಟ್ಟಿನಲ್ಲಿ ಆಚರಿಸಬೇಕು.ಕೇವಲ ನೆಪ ಮಾತ್ರಕ್ಕೆ ಆಚರಣೆ ಮಾಡಿ ಮಹನೀಯರ ತತ್ವ ಸಿದ್ದಾಂತಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹೆಚ್.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
     ಅವರು ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
    ಕನಕದಾಸರು ಭಕ್ತಿ ಪಂಥಕ್ಕೆ ಮಾತ್ರ ಸೀಮಿತವಾಗಿರಲಿಲ್ಲ.ಅವರುಜಾತೀಯತೆ,ಮೂಢನಂಬಿಕೆ,ಕಂದಾಚಾರ,
ವರ್ಗಬೇಧ ಮುಂತಾದುವುಗಳನ್ನು ಕಂಡು ಅವುಗಳ ಬಗ್ಗೆ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದರು.ಅವರು ನೀಡಿದ ಜೀವನ ಸಂದೇಶಗಳು ಇಂದಿಗೂ ಸಹ ನಮ್ಮ ಸಮಾಜಕ್ಕೆ ಮಾರ್ಗದರ್ಶಕವಾಗಿವೆ.ಇಂತಹ ಸಂದೇಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ.ಅವರ ಸಂದೇಶಗಳು ಒಂದು ಜಾತಿ,ಧರ್ಮ,ವರ್ಗಕ್ಕೆ ಮೀಸಲಾಗಿರಲಿಲ್ಲ.ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ.ಆದರೆ ಇಂದು ಕನಕನನ್ನು ಒಂದು ಜಾತಿಗೆ ಸೀಮಿತವಾಗಿ ನೋಡುವ ಮನೋಭಾವ ರೂಪುಗೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕನಕ ‘ನಾನು’ ಎಂಬ ಅಹಂಕಾರ ತೊಲಗಿದರೆ ಮಾತ್ರ ನಾವು ಮುಕ್ತಿ ಸಾಧನೆ ಪಡೆಯಲು ಸಾಧ್ಯ ಎಂಬುದನ್ನು ಗುರುಗಳ ಎದುರಿಗೆ ಪ್ರತಿಪಾದಿಸಿದರು.ಆದರೆ ಇಂದು ನಾವು ‘ನಾನು ನನ್ನಿಂದ’ ಎಂಬ ಧೋರಣೆಯಲ್ಲಿ ಮುಳುಗಿದ್ದೇವೆ ಇದು ಸರಿಯಲ್ಲ ಎಂದು ಅವರು ತಿಳಿಸಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಚಂದ್ರೇಗೌಡ ಮಾತನಾಡಿ  ಕನಕದಾಸರು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಸಂದೇಶ ಸಾರುವ ನೂರಾರು ಕೀರ್ತನೆಗಳನ್ನು ರಚಿಸಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು.ಅವರ ಸಂದೇಶಗಳು ಇಂದಿಗೂ ಪ್ರಸ್ತುತ.ಸರ್ವಧರ್ಮೀಯರು ಕನಕನನ್ನು ಆದರಿಸಬೇಕು,ಗೌರವಿಸಬೇಕು ಎಂದು ತಿಳಿಸಿದರು.
     ಉಪನ್ಯಾಸಕ ನಾಗರಾಜು ಕನಕನನ್ನು ಕುರಿತು ಮಾತನಾಡಿದರು.ವಿದ್ಯಾರ್ಥಿನಿ ಬಿ.ಎಲ್.ತೇಜಸ್ವಿನಿ ಕನಕದಾಸರ ಜೀವನ ಚರಿತ್ರೆ ಮತ್ತು ಜೀವನದ ಪ್ರಮುಖ ಘಟನೆಗಳನ್ನು ಕುರಿತು ಸವಿಸ್ತಾರವಾಗಿ ವಿವರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.ಮತ್ತೋರ್ವ ವಿದ್ಯಾರ್ಥಿನಿ ಪೂರ್ಣಶ್ರೀ ಕನಕದಾಸರ ಕುರಿತಾದ ಲೇಖನವೊಂದನ್ನು ಸಭೆಯ ಮುಂದಿಟ್ಟರು.
     ಸಮಾರಂಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎನ್.ಮನುಕುಮಾರ,ಉಪನ್ಯಾಸಕರಾದ ಹೊಳಲು ಶ್ರೀಧರ್,ವಿಶ್ವನಾಥ್, ವೈ.ಸುರೇಶ್, ಮಂಜುನಾಥ್,ರೂಪಶ್ರೀ,ಚೇತನಾ,ಲತಾ ಉಪಸ್ಥಿತರಿದರು.
ಬೆಂಗಳೂರು, ನ.28- ನಾವು ಯಾವ ಪಕ್ಷದ ಏಜೆಂಟರಲ್ಲ, ಯಾರಿಗೂ ಏಜೆಂಟರೂ ಅಲ್ಲ ನಮಗೆ ಸ್ವಃತ ದುಡಿಮೆ ಮಾಡಿ ಬದುಕು ಶಕ್ತಿ ಇದೆ. ನಮ್ಮ ಬಗ್ಗೆ  ಜಾ.ದಳ ರಾಜ್ಯಾ ಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಲಘುವಾಗಿ ಮಾತನಾಡ ಬಾರದು ಎಂದು ನಾಗಮಂಗಲ ಶಾಸಕ ಎನ್.ಚಲುವರಾಯ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ವಿಚಾರವಾಗಿ ಶಾಸಕರಾದ ಚಲುವರಾಯಸ್ವಾಮಿ ಹಾಗೂ ಜಮೀರ್ ಅಹಮದ್‍ಖಾನ್ ಚರ್ಚಿಸಿದ್ದರು. ಈ ಹಿನ್ನಲೆಯಲ್ಲಿ ಎಚ್.ಡಿ.ಕುಮಾರಸ್ವಾಮಿ  ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದರು. ಇದರಿಂದ ಸಾಕಷ್ಟು ಬೇಸರಗೊಂಡಿರುವ ಚಲುವರಾ ಯಸ್ವಾಮಿ ಎಚ್.ಡಿ.ಕುಮಾರ ಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ನಮ್ಮನ್ನು ಕಾಂಗ್ರೆಸ್ ಪಕ್ಷದ ಏಜೆಂಟರೆಂದು ಕರೆದಿದ್ದಾರೆ. ಕುಮಾರಸ್ವಾಮಿಯವರು ನಾಯಕರಂತೆ ವರ್ತಿಸಬೇಕು. ಲಘುವಾಗಿ ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿ ಗೊಂದಲ ಸøಷ್ಠಿಸಬಾರದು. ಮೈತ್ರಿ ವಿಚಾg Àವಾಗಿ ಕಾಂಗ್ರೆಸ್ ಪಕ್ಷದ ಜೊತೆ ಚರ್ಚಿಸಲು ದೇವೇಗೌಡರೇ ತಿಳಿಸಿದ್ದರು.
 ಆದರೆ ದಿಗ್ವಿಜಯ ಸಿಂಗ್‍ರವರೊಂದಿಗೆ ಚರ್ಚಿ ನಡೆಸಿದ ನಂತರ ಮಾರನೆ ದಿನ ನಾನು ಹೇಳಿಲ್ಲ ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದರು. ಯಾಕೆ ಹೀಗೆ ಮಾಡಿದ್ದರು ಎಂಬುದು ಗೊತ್ತಾಗುತ್ತಿಲ್ಲ. ಇದಕ್ಕೆಲ್ಲಾ ಕುಮಾರ ಸ್ವಾಮಿಯವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಬಳಿ ಕ್ಷಮೆಯಾಚನೆ
ಕಾಂಗ್ರೆಸ್ ಜೊತೆ ಮೈತ್ರಿ ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಇಂದು ಚಲುವರಾಯಸ್ವಾಮಿ, ಜಮೀರ್ ಅಹಮದ್‍ಖಾನ್, ಅಖಂಡ ಶ್ರೀನಿವಾಸಮೂರ್ತಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದಾರೆ. ಮೈತ್ರಿ ವಿಚಾರ ಮುಗಿದ ಅಧ್ಯಾಯ ಎಂದು ಇದೇ ವೇಳೆ ಜಮೀರ್ ಅಹಮದ್‍ಖಾನ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಮಂಡ್ಯದಲ್ಲಿ ಕನಕ ದಾಸರ ಜಯಂತೋತ್ಸವ ಆಚರಣೆ



  ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟಿವಟಿಕೆಗೂ ಗಮನಕೊಡಿ-ಪುಟ್ಟಲಿಂಗಯ್ಯ

ಮಂಡ್ಯ:ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಕೇವಲ ಪಠ್ಯ ವಿಷಯವನ್ನಷ್ಟೇ ಕಲಿಯಲು ಆದ್ಯತೆ ನೀಡದೆ ಕಲಿಕೆಯ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಿಗೂ ಗಮನಕೊಡಬೇಕು ಎಂದು ಅರ್ಕೇಶ್ವರ ನಗರ ಬಾಲಕಿಯರ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಲಿಂಗಯ್ಯ ತಿಳಿಸಿದರು.
     ಅವರು ನಗರದ ಬಾಲಕಿಯರ ಸ.ಪ.ಪೂ.ಕಾಲೇಜು(ಕಲ್ಲು ಕಟ್ಟಡ)ಇಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯ ತಾಲೂಕು ಪದವಿ ಪೂರ್ವ ಕಾಲೇಜುಗಳ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಾಂಸ್ಕøತಿಕ ಚಟುವಟಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
      ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಹಲವು ಅವಕಾಶಗಳಿವೆ.ಆದರೆ ಪದವಿ ಪೂರ್ವ ಹಂತದಲ್ಲಿ ಹೆಚ್ಚಿನ ಅವಕಾಶಗಳಿಲ್ಲ.ವರ್ಷಕ್ಕೊಮ್ಮೆ ಏರ್ಪಡಿಸುವ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬರಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮಾನಸಿಕ ಶಕ್ತಿ ಬೇರೆಬೇರೆಯಾಗಿದ್ದರೂ ನಿಮಗೆ ಆಸಕ್ತಿಯುತವಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಿಂಜರಿಕೆ ಬೇಡ ಎಂದರು.ಕ್ರೀಡೆಯು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದರೆ ಸಾಂಸ್ಕøತಿಕ ಚಟುವಟಿಕೆಗಳು ಮಾನಸಿಕ ಬೆಳವಣಿಗೆಗೆ,ಮನಸ್ಸಿನ ಉಲ್ಲಾಸಕ್ಕೆ ಕಾರಣವಾಗುತ್ತವೆ ಎಂದರಲ್ಲದೇ ಇಲ್ಲಿ ವಿಜೇತರಾದವರು ಮುಂದಿನ ಹಂತಗಳಲ್ಲೂ ಯಶಸ್ಸು ಗಳಿಸಿ ಎಂದು ಆಶಿಸಿದರು.
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಕೆ.ಸಿದ್ದಲಿಂಗು ಮಾತನಾಡಿ ವಿದ್ಯಾರ್ಥಿಗಳು ಸೋಲು ಗೆಲುವುಗಳಿಗೆ ಮಾನ್ಯತೆ ನೀಡದೆ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.
     ಮಂಡ್ಯ ತಾಲೂಕಿನ ವಿವಿಧ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರಸಪ್ರಶ್ನೆ,ಭಾವಗೀತೆ,ಜನಪದಗೀತೆ,ಪ್ರಬಂಧಸ್ಪರ್ಧೆ,ಚರ್ಚಾಸ್ಪರ್ಧೆ,ಏಕಪಾತ್ರಾಭಿನಯ,ವಿಜ್ಞಾನ ಉಪನ್ಯಾಸ,ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆರಿಸಲಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾದ ಕೃಷ್ಣೇಗೌಡ,ಹೊಳಲು ಶ್ರೀಧರ್,ನಾಗೇಶ್,ಶ್ರೀನಿವಾಸ್ ಬಹುಮಾನ ವಿತರಿಸಿದರು.
    ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕರಾದ ಪ್ರಭು ಆಲ್ಸೋನ್,ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ.ಕೃಷ್ಣ,ಪ್ರಾಂಶುಪಾಲರುಗಳಾದ ಶಿವರಾಮು,ಶ್ರೀನಿವಾಸ್, ಲೋಕಪ್ರಕಾಶ್ ನಾರಾಯಣ್,ಉಪನ್ಯಾಸಕರುಗಳಾದ ಕೆ.ಎಲ್.ರಮೇಶ್,ನಾಗೇಶ್,ಸಾಂಸ್ಕøತಿಕ ಕಾರ್ಯದರ್ಶಿ ಬಸವೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟಕ್ಕೆ ಬಸರಾಳು ವಿದ್ಯಾರ್ಥಿಗಳು: ಪ್ರಥಮ ಪಿಯುಸಿ ವಿಭಾಗದಿಂದ ಪೂರ್ಣಶ್ರೀ(ವಿಜ್ಞಾನ ಉಪನ್ಯಾಸ),ತೇಜಸ್ವಿನಿ.ಬಿ.ಎಲ್(ಚರ್ಚಾಸ್ಪರ್ಧೆ),ದ್ವಿತೀಯ ಪಿಯುಸಿ ವಿಭಾಗದಿಂದ ಸಿಂಚನ.ಎಚ್.ಎಂ. (ವಿಜ್ಞಾನ ಉಪನ್ಯಾಸ),ಕವನ ಹೆಚ್.ಬಿ(ಪ್ರಬಂಧ ಸ್ಪರ್ಧೆ),ಸುಷ್ಮಿತ.ಹೆಚ್.ಎಸ್.(ಏಕಪಾತ್ರಾಭಿನಯ)ಆಯ್ಕೆಯಾಗಿದ್ದಾರೆ.
ಮೈಸೂರು, ನ. 28- ವಿಧಾನ ಪರಿಷತ್ ಚುನಾವಣೆಗೆ ಕೇಂದ್ರ ಚುನಾವನಾ ಆಯೋಗ ಅಧಿಕೃತ ಘೋಷಣೆ ಮಾಡಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಜಿಲ್ಲಾಧಿಕಾರಿ ಹಾಗೂ ಚುನಾವನಾ ಅಧಿಕಾರಿಯು ಆಗಿರುವ ಸಿ. ಶಿಖಾ ಅವರು ತಿಳಿಸಿದರು.
ಡಿ. 2ರಿಂದ 9 ರವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಬಹುದು ಎಂದರು.
ನಾಮಪತ್ರವನ್ನು ಹಿಂದಕ್ಕೆ ಪಡೆಯಲು ಡಿ. 12 ಕೊನೆದಿನ. ಡಿ. 27ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಡಿ. 30ರಂದು ಬೆಳಗ್ಗೆ 8ಕ್ಕೆ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಮೈಸೂರು ಮತ್ತು ಚಾಮರಾಜ ನಗರದಲ್ಲಿ ಒಟ್ಟು 7628 ಮಂದಿ ಮತದಾರರಿದ್ದು, ಈ ಪೈಕಿ ಮೈಸೂರಲ್ಲಿ 5212 ಮತ್ತು ಚಾಮರಾಜ ನಗರದಲ್ಲಿ 2416 ಮಂದಿ ಮತದಾರರಿದ್ದಾರೆಂದರು.
ಈ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಮತವನ್ನು ಚಲಾಯಿಸಬಹುದೆಂದು ಅವರು ಹೇಳಿದರು.
ಅಭ್ಯರ್ಥಿಗಳಿಗೆ ವೆಚ್ಚದ ಮಿತಿ ಇಲ್ಲ ಎಂದ ಅವರು ಮತದಾರರಿಗೆ ಆಮಿಷವೊಡ್ಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಶಾಸಕರು, ಮಂತ್ರಿಗಳು ಸರಕಾರಿ ವಾಹನವನ್ನು ಚುನಾವಣಾ ಕಾರ್ಯಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ಮೊದಲ ಬಾರಿಗೆ ಮತಪತ್ರದಲ್ಲಿ ಅಭ್ಯರ್ಥಿಯ ಹೆಸರಿನೊಂದಿಗೆ ಅವರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ ಎಂದು ಅವರು ಹೇಳಿದರು.
2016ರ ಜನವರಿ 1ರ ವರೆಗೆ ಚುನಾವನಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದವರು ತಿಳಿಸಿದರು.

ಮೈಸೂರು, ನ. 28- ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಇಂದು ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಸಿ. ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸೇರಿದಂತೆ ಮತ್ತಿತರ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕಿ ನಾಗರತ್ನ ಅವರು ಕನಕದಾಸರ ತತ್ವ, ಆದರ್ಶ, ಅವರು ಬೆಳೆದು ಬಂದ ಬಗ್ಗೆ, ಮುಕ್ತಿಪಡೆದ ಮಾರ್ಗದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನಕದಾಸರ ಕೀರ್ತನೆಯನ್ನು ಹಾಡಲಾಯಿತು.

 ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭ-2015-16
 ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಕನ್ನಡ ಮಾಧ್ಯಮ ಪ್ರಶಸ್ತಿ ಕಾರ್ಯಕ್ರಮವೂ ಒಂದು. ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯನ್ನು ವ್ಯಾಸಂಗ ಮಾಡಿ, ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಈ ಕಾರ್ಯಕ್ರಮವನ್ನು ಕಳೆದ ಆರು ವರ್ಷಗಳಿಂದ ನಡೆಸುತ್ತಾ ಬಂದಿದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಕನ್ನಡ ಮಾಧ್ಯಮ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನವೆಂಬರ್ 29, 2015ರ ಬೆಳಗ್ಗೆ 10.30 ಗಂಟೆಗೆ ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
 
       ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ.ಯ 1091 ವಿದ್ಯಾರ್ಥಿಗಳು ಮತ್ತು ಪಿ.ಯು.ಸಿ.ಯ 920 ವಿದ್ಯಾರ್ಥಿಗಳನ್ನು ಸೇರಿದಂತೆ ಒಟ್ಟು 1011 ವಿದ್ಯಾರ್ಥಿಗಳನ್ನು ಗೌರವಿಸಿ, ಪುರಸ್ಕರಿಸಲಾಗುತ್ತಿದೆ.  ಮೈಸೂರು ವಿಭಾಗದ ಪ್ರತಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾಥಿಗಳಂತೆ ಎಸ್.ಎಸ್.ಎಲ್.ಸಿ.ಯ 285 ಹಾಗೂ ಪಿ.ಯು.ಸಿ.ಯ 232 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 517 ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣೀಭೂತರಾದ ಪೋಷಕರನ್ನು ಆಹ್ವಾನಿಸಿ, ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು, ಇದರಿಂದ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಒಲವು ಮೂಡಿಸಿದಂತಾಗುತ್ತದೆ. ಈ ಪುರಸ್ಕಾರವು ಪ್ರಥಮ ನಗದು ಬಹುಮಾನ ರೂ.10,000/-, ದ್ವಿತೀಯ ಬಹುಮಾನ ರೂ.9,000/-, ತೃತೀಯ ಬಹುಮಾನ ರೂ.8,000/- ಗಳಲ್ಲದೆ, ಸ್ಮರಣಿಕೆ, ಪ್ರಮಾಣಪತ್ರ, ಕೈಗಡಿಯಾರ, ಶಾಲಾ ಬ್ಯಾಗು, ಕನ್ನಡ-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು ಹಾಗೂ ಪೆನ್‍ಸೆಟ್‍ನ್ನು ಒಳಗೊಂಡಿರುತ್ತದೆ.

ಮೈಸೂರಿನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸಿ. ಶಿಖಾರವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವವರು. ಮೈಸೂರಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ   ಶ್ರೀ ಪಿ.ಎ. ಗೋಪಾಲರವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ            ಶ್ರೀ ಹೆಚ್. ಆರ್. ಬಸಪ್ಪರವರು ಮತ್ತು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಚಂದ್ರಶೇಖರ್‍ರವರು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಸದಸ್ಯರಾದ ಶ್ರೀ ವಿಶ್ವನಾಥ್‍ರವರುಗಳು ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುವರು. ಹಿರಿಯ ಸಾಹಿತಿಗಳಾದ ಡಾ. ಕಾಳೇಗೌಡ ನಾಗವಾರರವರು ವಿದ್ಯಾರ್ಥಿಗಳಿಗೆ ಹಿತನುಡಿಯನ್ನಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಎಲ್. ಹನುಮಂತಯ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

Thursday 26 November 2015

ಕನ್ನಡದ ಚಿತ್ರ ರಂಗದ ಇತಿಹಾಸ ಬಿಂಬಿಸುವ
ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು,ನ.26.-ಕನ್ನಡ ಚಲನಚಿತ್ರರಂಗದ ಇತಿಹಾಸ ಬಿಂಬಿಸುವ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಮೈಸೂರು ನಗರದ ಕಲಾಮಂದಿರದಲ್ಲಿ ಇದೇ 28 ರಂದು ಶನಿವಾರ ಸಂಜೆ 5-30 ಕ್ಕೆ ನಡೆಯಲಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಸತಿಸುಲೋಚನಾ ಚಿತ್ರದಿಂದ ಆರಂಭಗೊಂಡು ಅಮೃತ ಮಹೋತ್ಸವ ಪೂರೈಸಿರುವ ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ           ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಶ್ರೀಮತಿ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು, ಎಸ್.ಕೃಷ್ಣಪ್ರಸಾದ್(ಕೊಳಲು),          ಸಿ ವಿಶ್ವನಾಥ್( ಮ್ಯಾಂಡೋಲೀನ್), ವಿ.ವಿ.ಆನಂದ್ (ಗಿಟಾರ್), ಪ್ರಸನ್ನ ಕುಮಾರ್ (ಕೀಬೋರ್ಡ್) ಮೋಹನ್ (ರಿದಂಸ್ಯಾಟ್) ಇಂದುಶೇಖರ್ ಮತ್ತು ಜಗದೀಶ್ (ತಬಲ), ಕಿರಣ್ ಕುಮಾರ್ (ಡೋಲಕ್) ವಾದ್ಯ ಸಹಕಾರ ನೀಡುವರು.
     ಟಿ.ಎಸ್.ಅಶ್ವಿನಿ, ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ಗಾನ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ. ಎನ್. ವೈಷ್ಣವಿ ಕಾರ್ಯಕ್ರಮ ನಿರೂಪಿಸುವರು.
      ಪ್ರವೇಶ ಉಚಿತವಾಗಿದ್ದು, ಸರ್ವಜನಿಕರು ಕಾರ್ಯಕ್ರಮಕ್ಕೆ ಅಗಮಿಸಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ



ನವೆಂಬರ್ 30 ರಂದು ಸಾಮಾನ್ಯ ಕೌನ್ಸಿಲ್ ಸಭೆ
      ಮೈಸೂರು,ನ.26.ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆ ನವೆಂಬರ್ 30 ರಂದು ಸಂಜೆ 4 ಗಂಟೆಗೆ  ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಪ್ರಭಾರ ಕೌನ್ಸಿಲ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆಜಿಸ್ಟೀರಿಯಲ್ ವಿಚಾರಣೆ ಮುಂದೂಡಿಕೆ
      ಮೈಸೂರು,ನ.26.ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ದಿನಾಂಕ 10-11-2015 ರಂದು ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ದಿನಾಂಕ 26-11-2015 ರಂದು ನಡೆಯಬೇಕಿದ್ದ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದ್ದು,  ಮೆಜಿಸ್ಟೀರಿಯಲ್ ವಿಚಾರಣೆ ದಿನಾಂಕ  30-11-2015 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ, ಜಿಲ್ಲಾಧಿಕಾರಿಗಳ ಕಚೇರಿ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
   ಭಾರತ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‍ಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ವೇಳಾಪಟ್ಟಿ ಹೊರಡಿಸಿದ್ದು, ಈ ಸಂಬಂಧ ತುರ್ತು ಸಿದ್ದತೆಗಳನ್ನು ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಮೆಜಿಸ್ಟೀರಿಯಲ್ ವಿಚಾರಣೆಯನ್ನು ಮುಂದೂಡಲಾಗಿದೆ. ದಿನಾಂಕ 26-11-2015 ರಂದು ವಿಚಾರಣೆಗೆ ಹಾಜರಾಗಲು ತಿಳಿವಳಿಕೆ ನೀಡಲಾಗಿದ್ದ ಸಾರ್ವಜನಿಕರು ದಿನಾಂಕ 30-11-2015 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ : ಬಹುಮಾನ ಪ್ರಕಟ
      ಮೈಸೂರು,ನ.26.-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ದಿನಾಂಕ 7-11-2015 ರಂದು ಕನಕ ಸಾಹಿತ್ಯ ಲೋಕ ಪ್ರಬಂಧ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.
     ಸದರಿ ಪ್ರಬಂಧ ಸ್ಪರ್ಧೆಯಲ್ಲಿ ನಂಜನಗೂಡು ತಾಲ್ಲೂಕಿನ ತಾಂಡವಪುರದ ಸರ್ಕಾರಿ ಪ್ರೌಢಶಾಲೆಯ ಪ್ರೇಮ ಪ್ರಥಮ ಬಹುಮಾನ, ಮೈಸೂರು ತಾಲ್ಲೂಕು ದೊಡ್ಡಕಾನ್ಯ ಸರ್ಕಾರಿ ಪ್ರೌಢಶಾಲೆಯ ಪಲ್ಲವಿ ಪಿ. ದ್ವಿತೀಯ ಬಹುಮಾನ, ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ರೋಜ ಬಿ. ತೃತೀಯ ಬಹುಮಾನ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಾಜಶೇಖರಮೂರ್ತಿ ಹಾಗೂ ಹೊಸಹುಂಡಿ ಸರ್ಕಾರಿ ಪ್ರೌಢಶಾಲೆಯ ಉಮಾ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ ಎಂದು ಡಯಟ್ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                     

ನಗರದಲ್ಲಿ ಇಂದು ಸಂವಿದಾನ ದಿನಾ ಆಚರಣೆ
ಮೈಸೂರು,ನ. 26- ನಗರದಲ್ಲಿ ಇಂದು ಜಿಲ್ಲಾಡಳಿತ ಹಾಗೂ ನಾಯಾಲಯದ ವತಿಯಿಂದ ಸಂವಿದಾನ ದಿನಾಚರಣೆಯನ್ನು ಆಚರಿಸುವ ಮೂಲಕ ಸಂವಿದಾನದ ಕರಡು ಪ್ರತಿಗೆ ನಮಸ್ಕರಿಸಲಾಯಿತು.
 ಭಾರರದ ಒಕ್ಕೂಟ ರಾಷ್ಟ್ರದಲ್ಲಿ ಸಂವಿದಾನಾತ್ಮಕ ಆಡಳಿತ ಜಾರಿಗೆ ಬಂದ್ದದ್ದು ಜನವರಿ 26, 1950 ಆದಿನವನ್ನು ದೇಶಾದ್ಯಂತ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ, ಅಂತೆಯೇ ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಎಲ್ಲಾ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಆಚಾರ, ವಿಚಾರ, ಅವರವರ ನಂಬಿಕೆ ಆಚರಣೆ ಗಳಿಗನುಗುಣವಾಗಿ ಡಾ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿದಾನದ ಕರಡು ಪ್ರತಿಗಳಿಗೆ ಹಲವಾರು ವಾರಿ ತಿದ್ದುಪಡಿ ತಂದು ಅದರಲ್ಲಿನ ಸರಿ ತಪ್ಪುಗಳನ್ನು ತಿದ್ದಿ ಸರಿಪಡಿಸಿ ಅಂತಿಮವಾಗಿ ಸಂವಿದಾನ ಒಪ್ಪಿಕೊಂಡ ದಿನ ಈ ದನ, ಆದ್ದರಿಂದಲೇ ಇಂದು ಕೇಂದ್ರ ಸರ್ಕಾರದ ವತಿಯಿಂದಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನವೆಂಬರ್ 26ರ ಈ ದಿನವನ್ನು ಸಂವಿದಾನ ದಿನವನ್ನಾಗಿ  ಈ ವರ್ಷದಿಂದ ಆಚರಿಸಲಾಗುತ್ತದೆ.
 ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರಮೋದಿಯವರು  ನಮ್ಮ ದೇಶದ ಸಂವಿದಾನಕ್ಕೆ ಸೆಲ್ಯುಟ್ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ. ಅಂತೆಯೇ ಇಂದು ಮೈಸೂರು ಜಿಲ್ಲಾಧಿಕಾರಿಗಳ  ಕಚೇರಿಯಲ್ಲಿ, ಜಿಲ್ಲಾಧಿಕಾರಿ ಸಿ.ಶಿಖಾ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂವಿದಾನ ದಿನ ಆಚರಿಸಿ ಆಡಳಿತಾತ್ಮಕವಾದ ಸಂವಿದಾನ ಕರಡು ಪ್ರತಿಗೆ ನಮಿಸಿ ಗೌರವ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಮವಿದಾನಕ್ಕೆ ಗೌರವ ಸಲ್ಲಿಸಿದರು.
 ಅದೇರೀತಿ ನಗರದ ಜಿಲ್ಲಾ ನ್ಯಾಯಾಲಯದಲ್ಲೂ ಆವರಣದಲ್ಲೂ, ನ್ಯಾಯಾಧೀಶರುಗಳ ನೇತೃತ್ವದಲ್ಲಿ ವಕೀಲರುಗಳು ಸಂವಿದಾನ ಕರಡು ಪ್ರತಿಗೆ ಗೌರವ ಸಲ್ಲಿಸುವ ಮೂಲಕ ಸಂವಿದಾನ ದಿನಾಚರಣೆ  ಆಚರಿಸಿದರು. ನಂತರ ನ್ಯಾಯಾಧೀಶರು, ನೆರೆದಿದ್ದವರಿಗೆ ನಮ್ಮ ದೇಶದ ಸಂವಿದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಈ ಸಮಯದಲ್ಲಿ ನೂರಾರು ಮಂದಿ ವಕೀಲರುಗಳು, ಕೋರ್ಟ್ ಕಲಾಪದ ಕೇಸ್‍ಗಳಿಗಾಗಿ ಹಾಜರಾಗಲು ದೂರದ ಊರುಗಳಿಂದ ಆಗಮಿಸಿದ್ದ ಕಕ್ಷಿದಾರರು ಸಾರ್ವಜನಿಕರು, ಅಧಿಕಾರಿಗಳು, ನ್ಯಾಯಾಲದ ನೌಕರರು ಹಾಜರಿದ್ದರು.
     ಕುಡಿಯುವ ನೀರಿಗಾಗಿ ಒತ್ತಾಯಿಸಿ 46ನೇ ವಾರ್ಡ್‍ನಲ್ಲಿ ಪ್ರತಿಭಟನೆ
ಮೈಸೂರು, ನ.26- ಮೈಸೂರು ನಗರದ ಹಳೆ ಕೆಸರೆ ಭಾಗದ 46ನೇ ವಾರ್ಡ್
ನಲ್ಲಿ ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಆಗ್ರಹಿಸಿ, ಜೆಡಿಎಸ್‍ನ ಅಲ್ಪಸಂಖ್ಯಾತ ವಿಭಾಗದ ನಗರಾಧ್ಯಕ್ಷ ಅಜ್ಜು (ಅಜಿಜುಲ್ಲಾ) ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡಸಿದರು.
 ಈ ವಾರ್ಡ್ ಸದಸ್ಯರಾಗಿ ಹಸಿನಾತಾಜ್ ಪ್ರತಿನಿಧಿಸಿದ್ದಾರೆ, ಅವರು ಕಳೆದಬಾರಿ ಮೇಯರ್ ಆಕಾಂಕ್ಷಿಯೂ ಆಗಿದ್ದರು, ಅದು ಕೈ ತಪ್ಪಿದ್ದರಿಂದ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಆಡಳಿತ ಪೂರೈಸಿ ಉತ್ತಮ ಬಜೆಟ್ ಅನ್ನೂ ಮಂಡಿಸಿದರು. ಆದರೆ ಅವರ ವಾರ್ಡಿನಲ್ಲೇ  ಸರಿಯಾಗಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ, ಇದರಿಂದಾಗಿ ಆ ವಾರ್ಡಿನ ಪಾಲಿಕೆ ಸದಸ್ಯರು ಸೇರಿದಂತೆ ಜೆಡಿಎಸ್. ಕಾರ್ಯಕರ್ತರು, ಬಡಾವಣೆಯ ನಿವಾಸಿಗಳು ಇಂದು ಕುಡಿಯುವ ನೀರು ಸರಬರಾಜಿಗಾಗಿ ಆಗ್ರಹಿಸಿ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ
 ಇಂದು ಕೆಲಸ ಕಾರ್ಯಗಳಿಗೆ, ಶಾಲಾ-ಕಾಲೇಜುಗಳಿಗೆ, ಹೊರ ಊರುಗಳಿಗೆ ತೆರಳಬೇಕಾದ  ಸಾರ್ವಜನಿಕರು ಅಡಚಣೆ ಜೊತೆಗೆ ತೊಂದರೆ ಅನುಭವಿಸಬೇಕಾಯಿತು.
 ಪ್ರತಿಭಟನೆಯಲ್ಲಿ ಹಸಿನಾತಾಜ್, ಆಯಿಷಾಬಾನು, ಎಂ.ಡಿ. ಸಲೀಂ, ಅಕ್ರಂ, ಆಯಿಸ್‍ಪಾಷ, ಜಾನ್‍ಬಾಸ್ಕೊ, ಸಲ್ಮಾನ್, ಶಿವಣ್ಣ, ಮಂಜುಳಾ, ಸರೋಜಾ, ರೇವತಿ ಸೇರಿದಂತೆ ನೂರಾರು ಮಂದಿ ಆರ್.ಎಸ್.ನಾಯ್ಡು ನಗರದ ಜನತೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

  28 ರಿಂದ ಕನಕ ದಾಸರ ಜಯಂತ್ಯೋತ್ಸ ಆಚರಣೆ
ಮೈಸೂರು,ನ.26-ಇಲ್ಲಿನ ಸಂತ ಶ್ರೀ ಕನಕದಾಸರ ಜಯಂತೋತ್ಸವ ಸಮಿತಿ ವತಿಯಿಂದ ಇದೇ ತಿಂಗಳ 28 ರಿಂದ ಡಿ. 1ರ ವರೆಗೆ ಕನಕ ದಾಸರ 528ನೇ ಜಯಂತೋತ್ಸವ ಕಾರ್ಯಕ್ರಮವನ್ನು ಮೂರುದಿನಗಳ ಕಾಲ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ ಎಂದು ಸಮಿತಿಯ  ಪ್ರಾಧಾನ ಕಾರ್ಯದರ್ಶಿ ಬ್ಯಾಂಕ್ ಪುಟ್ಟಸ್ವಾಮಿ ತಿಳಿಸಿದರು.
 ಇಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ 28ರ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಅಲಂಕರಿಸಿದ ಕನಕದಾಸದರ ಭಾವಚಿತ್ರವಿರಿಸಿ ಮೆರವಣಿಗೆ ಮಾಡಿಸಲಾಗುತ್ತದೆ, ಇದರ ಉದ್ಘಾಟನೆಯನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ನೆರವೇರಿಸಲಿದ್ದಾg,É ಜಗನ್ಮೋಹನರಮನೆಯಲಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದಾರೆ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕನಕದಾಸರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಲಿದ್ದಾರೆ , ಮಾಜಿ ಸಂಸದ ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ, ಯುವ ಕಾಂಗ್ರೆಸ್ ಮುಖಂಡ ರಾಕೇಶ್‍ಸಿದ್ದರಾಮಯ್ಯ, ಮೇಯರ್ ಬಿಎಲ್.ಬೈರಪ್ಪ ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನ.29,30, ಡಿ.1 ರಂದು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಗೆ ದಾಸರವಾಣಿ ಪದಗಳ ಹಾಡುಗಾರಿಕೆ, ಕಲಾವಿಧ ಶಶಿಧರ ಕೋಟೆ ವೃಂಧದವರಿಂದ ದಾಸರ ಕಿರ್ತನೆಗಳು, ಡಾ. ವಸುಂದರ ದೊರೆಸ್ವಾಮಿ ಅವರಿಂದ ಕನಕ ಕಂಡ ಕೃಷ್ಣ ಎಂಬ ನೃತ್ಯರೂಪಕ ನಡೆಯಲಿದೆ ಎಂದರು.
 ಪತ್ರಿಕಾ ಗೋಷ್ಠಿಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಎಂ. ಶಿವಣ್ಣ, ಸಿದ್ದನಾಂಗೇಂದ್ರ, ಜೆ. ಮಹದೇವಪ್ಪ, ಎಂ. ನಾಗರಾಜು ಉಪಸ್ಥಿತರಿದ್ದರು.

 ಚೆಲುವಾಂಬ ಆಸ್ಪತ್ರೆಯಲ್ಲಿ ಮತ್ತೊಂದು ಮಗು ಸಾವು
ಮೈಸೂರು,ನ.26-ದೊಡ್ಡಾಸ್ಪತ್ರೆ ಯೆಂದೇ ಪ್ರಸಿದ್ಧಿಹೊಂದಿರುವ ಮೈಸೂರಿನ ಕೆ. ಆರ್. ಆಸ್ಪತ್ರೆಯ ಪಕ್ಕದಲ್ಲಿರುವ ಹೆರಿಗೆಗಳಿಗೆಂದೇ ಮೀಸಲಾಗಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ನಿನ್ನೆ ದಿನ ಮತ್ತೊಂದು ಮಗು ಮೃತಪಟ್ಟಿರುವ ಘಟನೆ  ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲುಕಿನ ಉಲ್ಲಹಳ್ಳಿಯ ಕಲ್ಲೇನಹಳ್ಳಿ ಗ್ರತಾಮವಾಸಿ ಗೀತಾ (24)
ಎಂಬುವರಿಗೆ ಜನಿಸಿದ ನವಜಾಥ ಶಿಶು ಮೃತಪಟ್ಟಿದೆ, ಗೀತಾ ಹೆರಿಗೆಗಾಗಿ ಕಳೆದ ಬಾನುವಾರ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು, ಸೋಮವಾರ ಇವರನ್ನು ಪರೀಕ್ಷಿಸಿದ ವೈದ್ಯರು, ಮಗು ಅನಾರೋಗ್ಯದಿಂದಿದೆ ಆದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಡಿಸ್ಛಾರ್ಜ್ ಮಾಡಿದ್ದರು.
 ಆದರೆ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗು ಮೃತಪಟ್ಟಿರುತ್ತದೆ,  ಇದರಿಂದ  ಆಕ್ರೋಶಗೊಂಡ ಗೀತಾಳ ಕುಟುಂಬಸ್ತರು, ಸಂಬಧಿಕರು ಇಮದು ಚೆಲುವಾಂಬ ಆಸ್ಪತ್ರೆಮುಂದೆ  ಜಮಾಯಿಸಿ  ಮಗು ಸಾವಿಗೆ ಚೆಲುವಾಂಬ ಆಸ್ಪತ್ರೆಯ ವೈಧ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಇಲ್ಲಿಗೆ ದಾಖಲಿಸಿದಾಗ ನಿಡಿದ ಚಿಕಿತ್ಸೆಗಳ ದಾಖಲಾತಿಗಳನ್ನು ನೀಡಿ ಎಂದು ಒತ್ತಾಯಿಸಿ ಕೆಲಕಾಲ ಗಲಾಟೆ ನಡೆಸಿದರು.
 ನಿನ್ನೆಯಷ್ಟೇ ಶಾಸಕ ವಾಸು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಸಿ ವೈದ್ಯರನನ್ನು ತರಾಟೆಗೆ ತೆಗೆದುಕೊಂಡು ಹೋದ ಕೆಲ ಹೊತ್ತಿನಲ್ಲೇ ಈ ಘಟನೆ ಸಂಭವಿಸಿದೆ. ಇಲ್ಲಿನ ಪರಿಸ್ಥಿತಿ ಸರಿಯಿಲ್ಲ, ಕಳೆದ 15 ದಿನಗಳಲ್ಲೇ 12 ಬಾಣಂತಿಯರು, 13 ಶಿಸುಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.     

Monday 23 November 2015


 ಚಿತ್ತಾರದಲಿ ಜನಸಾಮಾನ್ಯರಿಗೆ  ಮಾಹಿತಿ ನೀಡಿದ ಲೇಸರ್ ಶೋ
       ಮೈಸೂರು,ನ.23-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾನುವಾರ ವಿನೂತನವಾಗಿ ಬಣ್ಣ, ಬಣ್ಣದ ಬೆಳಕಿನಲ್ಲಿ ಜನಸಮಾನ್ಯರ ಮನಸೆಳೆಯುವ  ಲೇಸರ್ ಶೋವನ್ನು  ಮೈಸೂರಿನ ಕೋಟೆ ಅಂಜುನೇಯ ಸ್ವಾಮಿ ದೇವಸ್ಥಾನ ಆವರಣ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆವರಣ, ಹುಣಸೂರು ಪುರಸಭೆ ಮೈದಾನ ಹಾಗೂ ಕೆ.ಆರ್.ನಗರ ಪುರಸಭೆ ಬಯಲು ರಂಗಮಂದಿರ ಮೈದಾನದಲ್ಲಿ ಆಯೋಜಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು.
       ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಕೃಷಿಭಾಗ್ಯ, ಸಾಲಮನ್ನ,ವಿದ್ಯಾಸಿರಿ ಸೇರಿದಂತೆ ಹಲವಾರು ಯೋಜನೆಗಳ ವಿವರವು ಬಣ್ಣ, ಬಣ್ಣದ ಗೆರೆಗಳಲ್ಲಿ ಮೂಡಿ ನೋಡುಗರನ್ನು ಮನರಂಜಿಸುವುದರ ಜೊತೆಗೆ ಮಾಹಿತಿಯನ್ನು ಸಹ ಲೇಸರ್ ಶೋ ನೀಡಿತು.
     ಸರ್ಕಾರದ ಸಾಧಿಸಿದ ಪ್ರಗತಿಯ ವಿವಿರ ಸೇರಿದಂತೆ ಬಾರಿಸು ಕನ್ನಡ ಡಿಂಡಿಮವಾ ಹಾಡಿನ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕವಿ ಹಾಗೂ ಸಾಹಿತಿಗಳನ್ನು ಸಹ ಬೆಳಕಿನ ಗೆರೆಗಳಲ್ಲಿ ಮೂಡಿ ಬಂದವು.ಬಾರಿಸು ಕನ್ನಡ ಡಿಂಡಿಮವಾ, ಈ ಸರ್ಕಾರ ನಮ್ಮ ಸರ್ಕಾರ ಹಾಗೂ ಪುಣ್ಯಕೋಟಿ ವಿಷಯಗಳಡಿ ಲೇಸರ್ ಶೋ ಆಯೋಜಿಸಲಾಗಿತ್ತು.
ಲಘುವಾಹನ ಚಾಲನಾ ತರಬೇತಿ
    ಮೈಸೂರು,ನ.23.ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ಪರಿಶಿಷ್ಟವರ್ಗದ ನಿರುದ್ಯೋಗಿ ಯುವಕ ಯುವತಿಯರಿಗೆ ಲಘುವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
    ಆಸಕ್ತರು ವೋಟರ್ ಐಡಿ, ವಯಸ್ಸಿನ ಬಗ್ಗೆ ದಾಖಲೆ, ವಿದ್ಯಾರ್ಹತೆ, ಜಾತಿ ಪ್ರಮಾಣಪತ್ರ,  ವರಮಾನ ಪ್ರಮಾಣ ಪತ್ರದೊಂದಿಗೆ ಸಂಬಂದಿಸಿದ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ / ತಾಲ್ಲೂಕು ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:20-12-2015ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಮೈಸೂರು ದೂರವಾಣಿ ಸಂಖ್ಯೆ 0821-2427140)ನ್ನು ಸಂಪರ್ಕಿಸಲು ಕೋರಲಾಗಿದೆ.

Thursday 19 November 2015



ಮಂಡ್ಯದ ಮಿಮ್ಸ್‍ನಲ್ಲಿ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಕ್ಷಯರೋಗ- ಪ್ರಸ್ತುತ ಮಾಹಿತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮವನ್ನು ಮಿಮ್ಸ್ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಉದ್ಘಾಟಿಸಿದರು. ಡಾ.ಕೆ.ಎಂ.ಶಿವಕುಮಾರ್, ಡಾ.ಎಚ್.ಪಿ.ಮಂಜೇಗೌಡ, ಡಾ.ಅನಿಲ್, ಉಮೇಶ್ ಇತರರಿದ್ದಾರೆ. ಚಿತ್ರ- ಸಿದ್ದರಾಜು

ಮಂಡ್ಯದ ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಎಂ.ಎಸ್.ಆತ್ಮಾನಂದ, ಅಮರಾವತಿ ಚಂದ್ರಶೇಖರ್, ಎನ್.ಆರ್.ಜಗದೀಶ್, ಎಚ್.ಎಂ.ದಿವ್ಯಾನಂದಮೂರ್ತಿ, ಬೇಲೂರು ಸೋಮಶೇಖರ್, ಯಡಿಯೂರಪ್ಪ ಇತರರಿದ್ದಾರೆ. ಚಿತ್ರ- ಸಿದ್ದರಾಜು

ಮಂಡ್ಯದ ಅಶೋಕನಗರದಲ್ಲಿ ಹೋಲ್‍ಸೇಲ್ ದರದಲ್ಲಿ ದೊರೆಯುವ ಶ್ರೀ ಅನ್ನಪೂರ್ಣೆಶ್ವರಿ ಟ್ರೇಡರ್ಸ್ ಮಳಿಗೆಯನ್ನು ನಗರಸಭೆ ಸದಸ್ಯ ಎಸ್.ಕೆ.ಶಿವಪ್ರಕಾಶ್‍ಬಾಬು ಉದ್ಘಾಟಿಸಿದರು. ಟಿ.ಕೆ.ರಾಮಲಿಂಗಯ್ಯ, ಚಂದ್ರಕುಮಾರ್, ವೆಂಕಟರಾಜು, ಉಮೇಶ್, ಸತೀಶ್, ಶಂಕರ್ ಇತರರಿದ್ದಾರೆ.

ಮಂಡ್ಯ: ಅಶೋಕನಗರ ಹೋಟೆಲ್ ಸರೋವರ ಹತ್ತಿರ ನೂತನವಾಗಿ ಪ್ರಾರಂಭವಾದ ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರಷೋತ್ತಮಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ,  ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ತುಮಕೂರು ಮಾತ್ರವಲ್ಲದೆ ರಾಜ್ಯಾದ್ಯಂತ ವಿವಿಧೆಡೆ ಶಾಖೆಗಳನ್ನು ಆರಂಭಿಸಿದೆ. ಮಂಡ್ಯ ನಗರದಲ್ಲಿಯೂ ಸಹ ನೂತನ ಶಾಖೆ ಆರಂಭಿಸಿದೆ. ಜಿಲ್ಲೆಯ ರೈತಾಪಿ ಜನತೆ ಸಂಕಷ್ಟದಲ್ಲಿದ್ದು, ರೈತರಿಗೆ ಸಹಾಯವಾಗುವಂತಹ ಯೋಜನೆಗಳನ್ನು ಬ್ಯಾಂಕ್ ರೂಪಿಸಲಿ. ಜಿಲ್ಲೆಯ ಜನತೆಗೂ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹೇಳಿದರು.
ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಬ್ಯಾಂಕ್ ಕೆಲಸ ಮಾಡಲಿ. ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡಲಿ ಎಂದರು.
ಬ್ಯಾಂಕ್‍ನ ಅಧ್ಯಕ್ಷ ಎನ್.ಆರ್.ಜಗದೀಶ್ ಮಾತನಾಡಿ, ಬ್ಯಾಂಕ್ ರಾಜ್ಯಾದ್ಯಂತ 25 ಶಾಖೆಗಳನ್ನು ಆರಂಭಿಸಿದ್ದು, 2.5 ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ. 1200 ಕೋಟಿ ರೂ. ಡಿಪಾಸಿಟ್ ಇಟ್ಟಿದ್ದು, 900 ಕೋಟಿ ಸಾಲ ಸೌಲಭ್ಯ ನೀಡಿದೆ. ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ವಾಣಿಜ್ಯ ಉದ್ಯಮಿಗಳು, ನೌಕರರು, ರೈತರಿಗೂ ಎಲ್ಲ ರೀತಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಖಜಾಂಚಿ ಅಮರಾವತಿ ಚಂದ್ರಶೇಖರ್, ಬ್ಯಾಂಕ್ ಉಪಾಧ್ಯಕ್ಷ ಎಚ್.ಎಂ.ದಿವ್ಯಾನಂದಮೂರ್ತಿ, ಬ್ಯಾಂಕ್‍ನ ವ್ಯವಸ್ಥಾಪಕ ಯಡಿಯೂರಪ್ಪ, ಮುಖಂಡರಾದ ಬೇಲೂರು ಸೋಮಶೇಖರ್, ಶಿವನಂಜು, ಎಸ್.ಕೆ.ಶಿವಪ್ರಕಾಶ್‍ಬಾಬು, ಎಂ.ಪುಟ್ಟೇಗೌಡ ಇತರರು ಭಾಗವಹಿಸಿದ್ದರು.

Wednesday 18 November 2015

19 ನೇ ನವೆಂಬರ್ 2015
ಅದ್ದೂರಿ ಕನಕದಾಸ ಜಯಂತಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ
    ಮೈಸೂರು, ನವೆಂಬರ್ 19. ಮೈಸೂರು ಜಿಲ್ಲಾಡಳಿತ ಹಾಗೂ ಕನಕ ಜಯಂತೋತ್ಸವ ಸಮಿತಿ ಸಹಯೋಗದೊಂದಿಗೆ ಕನಕದಾಸ ಜಯಂತಿಯನ್ನು ನವೆಂಬರ್ 28 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
    ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
      ನವೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದಿಂದ ಕನಕದಾಸರ ಭಾವಚಿತ್ರ ಹಾಗೂ ವಿವಿಧ ಸ್ತಬ್ಥಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ಹಾಗೂ 11:30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ತಜ್ಞರನ್ನು ಆಹ್ವಾನಿಸಲಾಗುವುದು.  ಮೆರವಣಿಗೆ ಹಾಗೂ ವೇದಿಕೆ  ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
   ಕಾರ್ಯಕ್ರಮಕ್ಕೆ ಅವಶ್ಯವಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡÀಲಾಗುತ್ತದೆ. ಸಮಾರಂಭದ ಯಶಸ್ವಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಕನಕದಾಸರ ಜನ್ಮ ಜಯಂತಿ ಕೇವಲ ಒಂದು ವರ್ಗದ ಆಚರಣೆಯಾಗಬಾರದು. ಎಲ್ಲ ವರ್ಗದ ಜನತೆಯ ಸಹಕಾರ ಪಡೆದು ಒಗ್ಗೂಡಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಒಟ್ಟಾರೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
    ಪೊಲೀಸ್ ಉಪ ಆಯುಕ್ತ ಶೇಖರ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘಟನೆಗಳ ಮುಖಂಡರುಳಾದ ಎಂ.ಶಿವಣ್ಣ, ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜೆ.ಮಹದೇವಪ್ಪ, ರೇವಣ್ಣ,  ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಛಾಯಾಚಿತ್ರ ಲಗ್ತತಿಸಿದೆ)
ನ. 19 ರಿಂದ ಕಲಾಮಂದಿರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಛಾಯಾಚಿತ್ರ ಪ್ರದರ್ಶನ
ಮೈಸೂರು, ನವೆಂಬರ್ 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ನವೆಂಬರ್ 19 ರಿಂದ 24ರ ವರೆಗೆ ಕನ್ನಡ ನಾಡು-ನುಡಿ ಸಂಬಂಧಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.
   ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, 1956 ರ ನವೆಂಬರ್ 01 ರಂದು ಕನ್ನಡ ನಾಡು ಒಂದಾಗಿದ್ದು, ನಂತರ 1973 ರ ನವೆಂಬರ್ 01 ರಂದು ಕರ್ನಾಟಕ ರಾಜ್ಯದ ನಾಮಕರಣ, ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
  ವಿಶೇಷ ಛಾಯಾಚಿತ್ರ ಫಲಕಗಳು ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ 5:30 ಗಂಟೆಯ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

19 ನೇ ನವೆಂಬರ್ 2015
ಅದ್ದೂರಿ ಕನಕದಾಸ ಜಯಂತಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ
    ಮೈಸೂರು, ನವೆಂಬರ್ 19. ಮೈಸೂರು ಜಿಲ್ಲಾಡಳಿತ ಹಾಗೂ ಕನಕ ಜಯಂತೋತ್ಸವ ಸಮಿತಿ ಸಹಯೋಗದೊಂದಿಗೆ ಕನಕದಾಸ ಜಯಂತಿಯನ್ನು ನವೆಂಬರ್ 28 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
    ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
      ನವೆಂಬರ್ 28 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದಿಂದ ಕನಕದಾಸರ ಭಾವಚಿತ್ರ ಹಾಗೂ ವಿವಿಧ ಸ್ತಬ್ಥಚಿತ್ರ, ಜನಪದ ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ಹಾಗೂ 11:30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮವು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.
    ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲು ತಜ್ಞರನ್ನು ಆಹ್ವಾನಿಸಲಾಗುವುದು.  ಮೆರವಣಿಗೆ ಹಾಗೂ ವೇದಿಕೆ  ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು.
   ಕಾರ್ಯಕ್ರಮಕ್ಕೆ ಅವಶ್ಯವಿರುವ ಸಿದ್ದತೆಗಳನ್ನು ತ್ವರಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡÀಲಾಗುತ್ತದೆ. ಸಮಾರಂಭದ ಯಶಸ್ವಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಕನಕದಾಸರ ಜನ್ಮ ಜಯಂತಿ ಕೇವಲ ಒಂದು ವರ್ಗದ ಆಚರಣೆಯಾಗಬಾರದು. ಎಲ್ಲ ವರ್ಗದ ಜನತೆಯ ಸಹಕಾರ ಪಡೆದು ಒಗ್ಗೂಡಿ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆ ಕೈಗೊಳಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು. ಒಟ್ಟಾರೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕೆಂದು ಸಲಹೆ ಮಾಡಿದರು.
    ಪೊಲೀಸ್ ಉಪ ಆಯುಕ್ತ ಶೇಖರ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸೋಮಶೇಖರ್, ನೆಹರು ಯುವ ಕೇಂದ್ರ ಯುವ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘಟನೆಗಳ ಮುಖಂಡರುಳಾದ ಎಂ.ಶಿವಣ್ಣ, ಬ್ಯಾಂಕ್ ಎಂ.ಪುಟ್ಟಸ್ವಾಮಿ, ಜೆ.ಮಹದೇವಪ್ಪ, ರೇವಣ್ಣ,  ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
(ಛಾಯಾಚಿತ್ರ ಲಗ್ತತಿಸಿದೆ)
ನ. 19 ರಿಂದ ಕಲಾಮಂದಿರದಲ್ಲಿ ‘ಬಾರಿಸು ಕನ್ನಡ ಡಿಂಡಿಮವ’ ಛಾಯಾಚಿತ್ರ ಪ್ರದರ್ಶನ
ಮೈಸೂರು, ನವೆಂಬರ್ 19. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕಲಾಮಂದಿರದ ಸುಚಿತ್ರ ಗ್ಯಾಲರಿಯಲ್ಲಿ ನವೆಂಬರ್ 19 ರಿಂದ 24ರ ವರೆಗೆ ಕನ್ನಡ ನಾಡು-ನುಡಿ ಸಂಬಂಧಿಸಿದ ‘ಬಾರಿಸು ಕನ್ನಡ ಡಿಂಡಿಮವ’ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.
   ಕನ್ನಡ ನಾಡು, ನುಡಿ, ಕನ್ನಡ ನಾಡಿನ ಮೊದಲ ದೊರೆಗಳು, ಕನ್ನಡದ ಪ್ರಮುಖ ಶಾಸನಗಳು, ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪಡೆದಿರುವ ಕನ್ನಡಿಗರು, 1956 ರ ನವೆಂಬರ್ 01 ರಂದು ಕನ್ನಡ ನಾಡು ಒಂದಾಗಿದ್ದು, ನಂತರ 1973 ರ ನವೆಂಬರ್ 01 ರಂದು ಕರ್ನಾಟಕ ರಾಜ್ಯದ ನಾಮಕರಣ, ಹಂತ ಹಂತವಾಗಿ ಕರ್ನಾಟಕ ರಾಜ್ಯದ ಅಭಿವೃದ್ಧಿಗೊಂಡಿದ್ದು, ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಸಂಗತಿಗಳನ್ನು ವಿಶೇಷ ಛಾಯಾಚಿತ್ರ ಪ್ರದರ್ಶನ ಒಳಗೊಂಡಿದೆ.
  ವಿಶೇಷ ಛಾಯಾಚಿತ್ರ ಫಲಕಗಳು ಸಾರ್ವಜನಿಕರಿಗೆ ಪ್ರತಿದಿನ ಬೆಳಿಗ್ಗೆ 10 ರಿಂದ 5:30 ಗಂಟೆಯ ವರೆಗೆ ಪ್ರದರ್ಶನಕ್ಕೆ ಮುಕ್ತವಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರು ಡಿಕ್ಕಿ: ಬೈಕ್ ಸವಾರ ಸಾವು
ಮೈಸೂರು,ನ.18- ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಉತ್ತನಹಳ್ಳಿ ವರ್ತುಲ ರಸ್ತೆಯ ಹೊಸಹುಂಡಿ ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.
 ತಾಲ್ಲೂಕಿನ ಕೊಚನಹಳ್ಳಿ ಗ್ರಾಮದ ನಿವಾಸಿ ನರಸಿಂಹನ್(35) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ಪ್ರತಿಭಟಿಸಿದರು.
ಕಾರ್ಯ ನಿಮಿತ್ತ ಮೈಸೂರಿಗೆ ಸ್ಕೂಟರ್‍ನಲ್ಲಿ ನರಸಿಂಹನ್ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಅಪಘಾತದ ಸುದ್ದಿ ತಿಳಿದ ಗ್ರಾಮದ ನೂರಾರು ಜನತೆ ರೊಚ್ಚಿಗೆದ್ದು ರಸ್ತೆತಡೆ ನಡೆಸಿ ಅಪಘಾತ ತಡೆಗಟ್ಟಲು ಕ್ರಮವಹಿಸುವಂತೆ ಒತ್ತಾಯಿಸಿದರು.
ಪೊಲೀಸರು ಮದ್ಯೆ ಪ್ರವೇಶಿಸಿ ಪ್ರತಿಭಟನಾಕಾರರನ್ನು  ಸಮಾಧಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಕಂಬಕ್ಕೆ ಕಟ್ಟಿ ವ್ಯಕ್ತಿ ಸಜೀವ ದಹನ
ಮೈಸೂರು,ನ.18-ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಜೀವವಾಗಿ ದಹಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು-ಬನ್ನೂರು ವರ್ತುಲ ರಸ್ತೆಯ ನಾರಾಯಣ ಹೃದಯಾಲದ ಬಳಿ ದುಷ್ಕøತ್ಯ ನಡೆದಿದ್ದು, ಸುಮಾರು 25ರಿಂದ 30ರ ಪ್ರಾಯಾದ ವ್ಯಕ್ತಿ ಬೀಕರವಾಗಿ ಹತ್ಯೆಯಾಗಿದ್ದಾನೆ.
ದುಷ್ಕøರ್ಮಿಗಳು ರಾತ್ರಿವೇಳೆ ವ್ಯಕ್ತಿಯನ್ನು ಕರೆ ತಂದು ಇಲ್ಲಿನ ವಿದ್ಯುತ್ ಕಂಬಕ್ಕೆ ವೈಯರ್‍ನಿಂದ ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ವ್ಯಕ್ತಿ ಸಜೀವವಾಗಿ ದಹನಗೊಂಡಿದ್ದಾನೆ.
ಬೆಳಿಗ್ಗೆ ವೇಳೆಗೆ ದಾರಿಹೋಕರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣಾ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಪ್ರಾಥಮಿಕ ತನಿಖೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Monday 16 November 2015

ಎಂ.ಎನ್. ಕಿರಣ್     ಮೈಸೂರು
ಟಿಪ್ಪು ಜಯಂತಿ ವಿರೋಧಿಸಿದವರು  ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿ ವಿರೋಧಿಸುತ್ತಾರೆ?
 ಮೈಸೂರು,ನ.14- ಇಂದು ಟಿಪ್ಪು ಜಯಂತಿ ವಿರೋಧಿಸುವವರು ನಾಳೆ ದಿನ ಅಂಬೇಡ್ಕರ್ ಜಯಂತಿಯನ್ನು ವಿರೋಧಿಸುವುದಿಲ್ಲ ಎಂಬುದಕ್ಕೆ ಯಾವ ಆಧಾರಗಳಿವೆ. ಅಂಬೇಡ್ಕರ್ ಅವರು ಕೂಡ, ಪುರೋಹಿತಶಾಷಿ ಪ್ರಾಬಲ್ಯದ ಹಿಂದುತ್ವವನ್ನು ವಿರೋಧಿಸಿದವರಾಗಿದ್ದು, ಶೋಷಿತ ಸªಮುದಾಯಗಳಿಗೆ ಸಮಾನತೆ ಸಿಗದಿದ್ದಾಗ, ಅನಿವಾರ್ಯವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮ್ಮೊಂದಿಗೆ ಲಕ್ಷಾಂತರ ಮಂದಿ ದಲಿತರನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿ ಮುಕ್ತಿ ಮಾರ್ಗ ಕಲ್ಪಿಸಿದರು. ಇಂತಹಾ ನಡವಳಿಕೆಯ ವಿರುದ್ಧ ತೀರ್ವ ವಿರೋಧ ವ್ಯಕ್ತಪಡಿಸಿದ್ದ ಪುರೋಹಿತಶಾಹಿಗಳು, ಹಿಂದುಪರ ಸಂಘಟನೆಗಳನ್ನು ಅಂಬೇಡ್ಕರ್ ಅವರನ್ನು ಮತಾಂದ ಎಂದು ಹೇಳುವರೇ…? ಅವರ ಜಯಂತಿ ಆಚರಣೆಯನ್ನು ವಿರೋಧಿಸುತ್ತಾರೆಯೇ…?
ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದ ಹಿಂದು ಪರ ಸಂಘಟನೆಗಳು ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನರ ಜಯಂತಿ ಆಚರಣೆÉಗೆ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿ ಶಾಂತಿ ಭಂಗ ಉಂಟುಮಾಡುತತಿದ್ದಾರೆ.
 ಟಿಪ್ಪುಸುಲ್ತಾನ್ ಒಬ್ಬ ಈ ನಾಡುಕಂಡ ಅಪ್ರತಿಮ ವೀರ, ಕಾವೇರಿಯಿಂದ ಗೋದಾವರಿ ವರೆಗೆ ರಾಜ್ಯವನ್ನು ವಿಸ್ತರಿಸಿ ವಿಶಾಲ ಕರ್ನಾಟಕವನ್ನಾಗಿ ಮಾಡಿದ ಏಕೈಕ ದೊರೆ, ವ್ಯಾಪಾರಕ್ಕಾಗಿ ನಮ್ಮದೇಶಕ್ಕೆ ಬಂದ ಬ್ರಿಟೀಷರು ಹಂತ ಹಂತವಾಗಿ ನಮ್ಮ ದೇಶವನ್ನು ತಮ್ಮ ಸ್ವಾಧೀನಕ್ಕೆ ವಶಪಡಿಸಿಕೊಳ್ಳುತ್ತಾ ಇಡೀ ದೇಶವನ್ನೇ  ಅತಿಕ್ರಮಿಸಿಕೊಳ್ಳುತ್ತಿದ್ದಾಗ ಆಗ ಇದ್ದಂತಹ ರಾಜ ಮಹಾರಾಜರುಗಳು ಅದನ್ನು ತಡೆಯಲು ಮುಂದಾಗಲಿಲ್ಲ,
ಬ್ರಿಟೀಷರ ವಿರುದ್ಧ ಹೋರಾಡಿ ತಮ್ಮ ರಾಜ್ಯ ಉಳಿಸಿಕೊಳ್ಳುವ ಸಾಹಸ ಮಾಡಲಿಲ್ಲ, ಯಾವೊಬ್ಬ ಮಹಾರಾಜರಾಗಲೀ, ಸಾಮಂತ ರಾಜರುಗಳಾಗಲೀ ಬ್ರಿಟೀಷರನ್ನು ಎದುರಿಸಿ ಹೋರಾಡಲು ಮುಂದೆ ಬರಲಿಲ್ಲ, ಆದರೆ ದೇಶಾಭಿಮಾನಿ ಮೈಸೂರಿನ ಹುಲಿ ಎಂದೇ ಖ್ಯಾತಿಯಾಗಿರುವ ಟಿಪ್ಪುಸುಲ್ತಾನ್ ಕೆಚ್ಚೆದೆಯಿಂದ ತಾನು ಕಟ್ಟಿದ ನಾಡನ್ನು ಉಳಿಸಿಕೊಳ್ಳುವ ಮುಖ್ಯವಾಗಿ ದೇಶವನ್ನು ಬ್ರಿಟೀಷರಿಗೆ ಬಿಟ್ಟುಕೊಡಬಾರದೆಂದು ತನ್ನ ಸೈನ್ಯ ಕಟ್ಟಿಕೊಂಡು  ಏಕಾಂಗಿಯಾಗಿ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ನಿಂತ ಮೊದಲ ವೀರದೊರೆ ಎನಿಸಿಕೊಂಡಿರುವುದು ಚರಿತ್ರೆಯಲ್ಲಿ ರುಜುವಾತಾಗಿದೆ. ಹಲವಾರು ಭಾರಿ  ಯುದ್ಧಮಾಡಿ ಬ್ರಿಟೀಷÀರನ್ನು ಎದುರಿಸಿ ಅವರಿಗೆ ಸಿಂಹಸ್ವಪ್ನವಾಗಿದ್ದ, ಬ್ರಿಟೀಷರೂ ಕೂಡ ಯಾವುದೇ ರಾಜರುಗಳಿಗೆ ಹೆದರದೇ ಇದ್ದರೂ, ಟಿಪ್ಪುವಿಗೆ ಮಾತ್ರ ಹೆದರುತ್ತಿದ್ದರು, ಅಂದ ಮೇಲೆ ಟಿಪ್ಪುವಿನಿಂದ ಅವರಿಗೆ ಭಯ ಇತ್ತು, ಆದ್ದರಿಂದಲೇ ಬ್ರಿಟೀಷರು ಟಿಪ್ಪುವನ್ನು ಸ್ವತಃ ಎದುರಿಸಲಾಗದೇ,  ಸಾಮಂತ ರಾಜರುಗಳೊಂದಿಗೆ ಒಳಸಂಚು ನಡೆಸಿ ಅವರನ್ನು ಎತ್ತಿಕಟ್ಟಿ ಟಿಪ್ಪುವಿನ ವಿರುದ್ಧ ತಿರುಗಿ ಬೀಳುವಂತೆ ಮಾಡಿ ಯುದ್ಧ ಮಡಿಸುತ್ತಿದ್ದರು. ಸಾಮಂತ ರಾಜರುಗಳ ಸಹಕಾರೊಂದಿಗೆ ಟಿಪ್ಪು ಸೈನ್ಯದ ಜೊತೆ ಯುದ್ಧಮಾಡಿ ಶ್ರೀರಂಗಪಟ್ಟಣದ ಯುದ್ಧ ಭೂಮಿಯಲ್ಲಿ ಕೊಲ್ಲಿಸುವ ಮೂಲಕ ಟಿಪ್ಪು ವೀರಮರಣ ಹೊಂದುವಂತೆ ಮಾಡಿದರು. ಇಲ್ಲಿ ತಿಳಿದು ತಿಳಿದುಕೊಳ್ಳಬೇಕಾದ ಒಂದು ವಿಷಯವಿದೆ ಟಿಪ್ಪು ಸತ್ತಿದ್ದು ಬ್ರಿಟೀಷರ ಬಂದೂಕಿನಿಂದಲೋ ಅಥವಾ ಅವರ ಕತ್ತಿಯಿಂದಲೋ ಅಲ್ಲ, ಟಿಪ್ಪುವಿನ ಆತ್ಮೀಯನೂ ರಾಜ ತಾಂತ್ರಿಕನೂ ಆಗಿದ್ದ, ಟಿಪ್ಪುವಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದ್ದ ಆತನ ಹಿಂಬಾಲಕ ಮೀರ್‍ಸಾಕ್ ಎಂಬ ಕುಚೋದ್ಯನಿಂದ ಟಿಪ್ಪು ಸಾಯಬೇಕಾಯಿತು.
 ಟಿಪ್ಪುವಿನ ಮುಂದಾಳತ್ವದಲ್ಲಿ ಸಾವಿರಾರು ಮಂದಿ ಸೈನಿಕರು ಯುದ್ಧ ಮಾಡುತ್ತಿದ್ದಾಗ ದೊರೆ ಟಿಪ್ಪು ತನ್ನ ಖಡ್ಗ ಹಿಡಿದು ವೀರಾವೇಶದಿಂದ ಬ್ರಿಟೀಷ್ ಸೈನಿಕರ ರುಂಡ ಚೆಂಡಾಡುತ್ತಿದ್ದಾಗ ಟಿಪ್ಪುವಿನ  ಅಂಗರಕ್ಷಕನಾಗಿದ್ದ ಮೀರ್‍ಸಾದಿಕ್ ಬ್ರಿಟೀಷರ ಕುತಂತ್ರದ ಮಾತಿಗೆ ಮರುಳಾಗಿ ಹಿಂಬದಿಯಿಂದ ವೀರಯೋಧ ಟಿಪ್ಪುಸುಲ್ತಾನರನ್ನು ಕೊಂದನು. ಬ್ರಟೀಷರಿಂದಲೂ ಟಿಪ್ಪುವನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಆಗ ಟಿಪ್ಪು ತನ್ನರಾಜ್ಯದ ಪ್ರಜೆಯಿಂದಲೇ ಹತರಾದರೇ ಹೊರತು ಬ್ರಿಟೀಷರಿಂದಲ್ಲ ಸಾಯುವ ಮುನ್ನ ಇದನ್ನರಿತ ಟಿಪ್ಪು ಸಂತೋಷದಿಂದಲೇ ಪ್ರಾಣಬಿಟ್ಟಿದ್ದಾರೆ ಎನ್ನುವುದು ಸತ್ಯ.
 ಟಿಪ್ಪು ತನ್ನ ನಾಡಿಗಾಗಿ, ಕನ್ನಡ ಮಣ್ಣಿಗಾಗಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ, ಹಿಂದು, ಕ್ರೈಸ್ತ, ಪಾರ್ಶಿ, ಮುಂತಾದ ಧರ್ಮಗಳ ಉದ್ದಾರಕ್ಕಾಗಿ ಪ್ರಶಸ್ಯ್ತ ನೀಡಿದ್ದಾರೆ, ಹಿಂದು ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಹಲವಾರು ದೇವಸ್ಥಾನಗಳಿಗೆ ಚಿನ್ನ, ವಜ್ರಾಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ದೇಶದ ಉಳಿವಿಗಾಗಿ  ತನ್ನ ಇಬ್ಬರು ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಟ್ಟ ಮಹಾನ್ ದೊರೆಯಾಗಿದ್ದಾರೆ, ಇವರ ಅಮರ ದೇಶಪ್ರೇಮವನ್ನು ಬ್ರಿಟಿಷರೇ ಒಮ್ಮೆ ಹೊಗಳಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ.
ಇದನ್ನರಿಯದ ಕೆಲವರು ಟಿಪ್ಪು ಒಬ್ಬ ಮತಾಂದ, ಹಿಂದು ವಿರೋಧಿ, ಸಾವೀರಾರು ಜನರ ಹತ್ಯೆ ಮಾಡಿಸಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
 ಟಿಪ್ಪು ಯಾರನ್ನು ಕೊಲ್ಲಿಸಿದ್ದ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಟಿಪ್ಪುವಿನ ಆಸ್ತಾನದಲ್ಲಿ ಇದ್ದುಕೊಂಡು ಟಿಪ್ಪುವಿನ ಚಲನವಲನಗಳ ಬಗ್ಗೆ ಬ್ರಿಟೀಷರಿಗೆ  ಮಾಹಿತಿ ನೀಡುತ್ತಾ ಉಂಡಮನೆಗೆ ಎರಡು ಬಗೆಯುತ್ತಿದ್ದ ದೇಶದ್ರೋಹಿಗಳನ್ನು ಕೊಲ್ಲಿಸುತ್ತಿದ್ದ, ಇದನ್ನು ಎಲ್ಲಾ ರಾಜರುಗಳು ಮಾಡುತ್ತಿದ್ದರು, ಮತಾಂತರ ವಿಷಯಕ್ಕೆ ಬಂದರೆ ತನ್ನ ರಾಜ್ಯದಲ್ಲೇ ಇದ್ದುಕೊಂಡು ತನ್ನ ವಿರುದ್ಧವೇ ಸಂಚು ರೂಪಿಸುತ್ತಿದ್ದವರನ್ನು ಕೊಲ್ಲುವುದು ಬೇಡ ಎಂದು ಅವರನ್ನು ಮತಾಂತರ ಮಾಡಿ ಜೀವಧಾನ ನಿಡುತ್ತಿದ್ದ, ಟಿಪ್ಪು ಎಲ್ಲಾ ಧರ್ಮವÀನ್ನು  ಪ್ರೀತಿಸುತ್ತಾ ಸಮನಾಗಿ ಕಾಣುತ್ತಿದ್ದ ಎಂದು ದಾಕಲಾತಿಗಳು ಹೇಳುತ್ತವೆ.
 ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತ ಪಡಿಸುತ್ತಿರುವ ಹಿಂದುಪರ ಸಂಘಟನೆಗಳು ಮುಂದೊದು ದಿನ ಸಂವಿದಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‍ರವರ ಜಯಂತಿನ್ನು ವಿರೋಧಿಸು ಎಂಬುದರಲ್ಲಿ ಯಾವುದೇ ಶಂಸಯವಿಲ್ಲ, ಟಿಪ್ಪುವಿನ ಚರಿತ್ರೆಯನ್ನೇ ತಿರುಚಿ ಇಲ್ಲ ಸಲ್ಲದನ್ನು ಹೇಳುತ್ತಿರುವ  ಇವರು ಮುಂದಿನ ಪೀಳಿಗೆಗೆ ಅಂಬೇಡ್ಕರ್‍ರವರ ಚರಿತ್ರೆಯನ್ನು ತಿರುಚಿ ಹೇಳುವುದಿಲ್ಲ ಎಂಬುರಲ್ಲಿ ಯಾವ ಅನುಮಾನವೂ ಇಲ್ಲ,
ಹಿಂದು ವಿರೋಧಿ ಎಂದು ಟಿಪ್ಪುವನ್ನು ಧೂಶಿಸುವವರು ನಾಳೆ ಅಂಬೇಡ್ಕರ್‍ರನ್ನು ಧೂಶಿಸುತ್ತಾರೆ, ಕಾರಣ ಅಂಬೆಡ್ಕರ್‍ರವರೂ ಹಿಂದುತ್ವವನ್ನು ವಿರೋಧಿಸುತ್ತಿದ್ದರು, ದೇವರ ಪೂಜೆ, ಮೂರ್ತಿ ಪೂಜೆಗಳನ್ನು ಸಹಿಸುತ್ತಿರಲಿಲ್ಲ, ಅಂಬೇಡ್ಕರ್ ತಾವು ಬೌದ್ಧಧರ್ಮಕ್ಕೆ ಮಂತಾರ ಗೊಂಡಾಗ ತಮ್ಮೊಂದಿಗೆ ಲಕ್ಷಾಂತರ ಮಂದಿಯನ್ನು ಮತಾಂತರಗೊಳಿಸಿದ್ದಾರೆ, ಹಾಗೆ ನೋಡುವುದಾದರೇ ಅಂಬೇಡ್ಕರ್ ಮತಾಂದರು ಎಂಬ ಪ್ರಶ್ನೆ  ಅವರಲ್ಲಿ ಮೂಡದೇ ಇರದು, ಹಿಂದುಪರ ಸಂಘನೆಗಳು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಮುಂದಿನ ಪೀಳಿಗೆಯ ಮನಸನ್ನು ಕೆಡಿಸಿ ಅವರುಗಳಿಂದಲೇ ಅಂಬೇಡ್ಕರ್ ಜಯಂತಿ ಆಚರಣೆ ವಿರೋಧಿಸುವಂತೆ ಮಾಡಿಸದೇ ಇರಲಾರರು. ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.
 ಆದ್ದರಿಂದ ಸಾರ್ವಜನಿಕರು ಈಗಲೇ ಎಚ್ಚೆತುಕೊಂಡು ಈ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ.
 ಮಹಾನೀಯರುಗಳ ಜಯಂತಿ ಆಚರಣೆ ಈಗ ಜಾತಿಗೊಂದು ಜಯಂತಿಯಾಗಿ ಮಾರ್ಪಾಡಾಗಿದೆ, ಇದರಿಂದ ಜಾತಿ ಧರ್ಮಗಳ ನಡುವೆ ಕಂದಕಗಳು ಸುರುವಾಗಿವೆ, ಒಂದುಕಾಲದಲ್ಲಿ ಜಾತಿಯನ್ನು ಹೋಗಲಾಡಿಸಿ ಎಲ್ಲನ್ನೂ ಒಗ್ಗೂಡಿಸುವ ಪ್ರಯತ್ನಗಳು ನಡೆದವು, ಅದು ಕೆಲಮಟ್ಟಿಗೆ ಯಶಸ್ವಿಯಾಯಿತ್ತು, ಆದರೆ ಈಗ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮ್ಮ ಮಹಾನಿಯರ ಜಯಂತಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ.
 ಸರ್ಕಾರವೂ ಈ ನಿಟ್ಟಿನಲ್ಲಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ, ನಮ್ಮ ರಾಜ್ಯದಲ್ಲಿ ಮಹನೀಯರ ಜಯಂತಿಗಳಿಗಾಗಿ ನೀಡಿರುವ ರಜಾದಿನಗಳು ಹೇರಳವಾಗಿದ್ದು, ಇದರಿಂದಾಗಿ ಸಾರ್ವಜನಿಕ ಹಾಗೂ ಕಚೇರಿಯ ಕೆಲಸ ಕಾರ್ಯಗಳು ನಡೆಯದೇ ಅಭಿವೃದ್ಧಿಕಾರ್ಯಗಳು ಕುಂಟಿತಗೊಳ್ಳುತ್ತಿವೆ, ಜನರೂ ಸೋಮಾರಿಗಳಾಗುತ್ತಾರೆ. ಆದ್ದರಿಂದ ಸರ್ಕಾರ ಈ ಎಲ್ಲಾ ಜಯಂತಿಯ ರಜೆಗಳನ್ನು ರದ್ದುಮಾಡಿ,  ಆಯಾ ಜಯಂತಿ ದಿನಗಳಂದು, ಎಲ್ಲಾ ಕಚೇರಿಗಳಲ್ಲೂ ಮಹಾನಿಯರುಗಳ ಭಾವÀಚಿತ್ರವಿಟ್ಟು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆ ಮಾಡಬೇಕು ಮತ್ತು ಆ ಮಹನೀಯರ ಹೆಸರಿನಲ್ಲಿ ಎರಡು ಗಂಟೆಗಳ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಬೇಕು, ಆಗಮಾತ್ರ ಅವರುಗಳ ಸ್ಮರಣೆ ಮಾಡಿದಂತಾಗಿ ಅವರುಗಳ ಆತ್ಮಕ್ಕೂ ಶಾಂತಿ ಲಭಿಸುತ್ತದೆ, ಅವರುಗಳ ಜನ್ಮದಿನಾಚರಣೆ ಸಾರ್ಥಕತೆಯಾಗುತ್ತದೆ. ನಾಡಿನ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಎಲ್ಲಾ ಮಹಾನಿಯರ ಜಯಂತಿ ರಜೆಗಳ ರದ್ದತಿಗೆ ಒತ್ತಾಯಿಸಿ ಸಹಕರಿಸಬೇಕಾಗಿದೆ.
                                 

Saturday 14 November 2015

ಪ್ಯಾರಿಸ್ ಭಯೋತ್ಪಾದಕ ದಾಳಿ ಖಂಡಿಸಿ ಪ್ರಧಾನಿ ಹೇಳಿಕೆ
ಪ್ಯಾರಿಸ್ ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಲ್ಲಿ ಅವರು ತಾವು ಪ್ರೀತಿಸುವ ಕಾರ್ಯ ಮಾಡುತ್ತಿದ್ದಾಗ ಇಲ್ಲವೇ ತಮ್ಮ ಪ್ರೀತಿಪಾತ್ರರೊಂದಿಗೆ ಇದ್ದಾಗ ನೂರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.
ಫ್ರಾನ್ಸ್ ಜನತೆಯ ನೋವು, ಅವರಿಗಾಗಿರುವ ಆಘಾತವನ್ನು ನಾವು ಅರ್ಥಮಾಡಿಕೊಳ್ಳಬಲ್ಲವರಾಗಿದ್ದೇವೆ. ಈ ದುರಂತವನ್ನು ಎದುರಿಸುವಲ್ಲಿ ಫ್ರಾನ್ಸ್ ಜನತೆಯ ಜೊತೆಗೆ ಭಾರತ ನಿಲ್ಲುತ್ತದೆ. ನಾವು ನಮ್ಮ ಕಾಲದ ಪ್ರಮುಖ ಜಾಗತಿಕ ಭೀತಿಯನ್ನು ಹತ್ತಿಕ್ಕಲು ಮಾನವತೆಯಿಂದ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಮತ್ತು ನಾವು ನಮ್ಮ ಜೀವನ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶ್ರೀಮತಿ ಡಾ|| ಪುಷ್ಪ ಅಮರ್‍ನಾಥ್‍ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜಯ್ಯ, , ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜವರೇಗೌಡರವರು, ಸದಸ್ಯರಾದ ಸಿದ್ದೇಗೌಡರು, ಜವರಯ್ಯ, ಪ್ರಭಾರಿ ಸಿಇಒ ರವರಾದ ಶ್ರೀ ಶಂಕರ್‍ರಾಜ್, ಜಿಲ್ಲಾ ಪಂಚಾಯತ್, ಯೋಜನಾ ಅಧಿಕಾರಿಯಾದ ಶ್ರೀ ಪ್ರಭುಸ್ವಾಮಿ, ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್.ಆರ್.ಬಸಪ್ಪರವರು, ವಿದ್ಯಾಧಿಕಾರಿಗಳು, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು( ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ)ಕ್ಷೇತ್ರ ಶಿಕ್ಷಣಾಧಿಕಾರಿಗಳು,ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಮಹದೇವಯ್ಯ, ಕಾರ್ಯದರ್ಶಿ ಮಂಗಳ ಮುದ್ದುಮಾದಪ್ಪ, ಪ್ರೌಢಶಾಲಾ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ಕಾರ್ಯದರ್ಶಿ ಶ್ರೀ ಸೋಮಶೇಖರ್, ವಿಷಯ ಪರಿವೀಕ್ಷಕರು, ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳು, ಜಿಲ್ಲೆಯ ಆಯ್ದ ಶಾಲೆಯ 120 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಮಾಧ್ಯಮ ಸ್ನೇಹಿತರು ಭಾಗವಹಿಸಿದ್ದರು.
    ಈ ದಿನದ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ನಿಕಟಪೂರ್ವ ಸಾಮಾಜಿಕ ಸಂಪರ್ಕ ಅಧಿಕಾರಿ ಶ್ರೀಯುತ ಕೆ. ಜಯಪ್ರಕಾಶ್‍ರಾವರು ಭಾಗವಹಿಸಿದ್ದರು.
     ಮೊದಲಿಗೆ ಸರ್ಕಾರಿ ಪ್ರಾಥಮಿಕ ಶಾಲೆ, ಮೇಟಗಳ್ಳಿ ಮಕ್ಕಳು ನಾಡಗೀತೆ ಹಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಆ ನಂತರ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತ ಭಾಷಣ ಮಾಡಿದ ಸಾಶಿಇ ಉಪನಿರ್ದೇಶಕರಾದ ಶ್ರೀಯುತ ಹೆಚ್ ಆರ್ ಬಸಪ್ಪರವರು ಮಾತನಾಡಿ ಮಕ್ಕಳಿಗೆಲ್ಲಾ ಶುಭಾಶಯಗಳನ್ನು ಕೋರಿದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಕಳೆದ ಬಾರಿ 10 ನೇ ಸ್ಥಾನದಲ್ಲಿದ್ದು ಈ ಬಾರಿ 5ನೇ ಸ್ಥಾನದೊಳಗೆ ತರಬೇಕೆನ್ನುವ ಆಶಯದೊಂದಿಗೆ ಇಂದು “ಮೈಸೂರು –ಗುರಿ ನೂರು” ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲಾ ಅತಿಥಿಗಳಿಗೂ ಸ್ವಾಗತವನ್ನು ಕೋರಿದರು.
   ಡಾ|| ಪುಷ್ಪ ಅಮರ್‍ನಾಥ್, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಮೈಸೂರು ಹಾಗೂ ಇತರೆ ಗಣ್ಯವ್ಯಕ್ತಿಗಳು ಕಾರ್ಯಕ್ರಮವನ್ನು ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ನೆರವೇರಿಸಿದರು. ಆ ನಂತರ “ ಮೈಸೂರು-ಗುರಿ ನೂರು” ಕಾರ್ಯಕ್ರಮವನ್ನು ಭಿತ್ತಿಚಿತ್ರದ ಉದ್ಘಾಟನೆಯೊಂದಿಗೆ ಹಾಗೂ ಇ-ಬಟನ್ ಒತ್ತುವುದರೊಂದಿಗೆ  ವಿನೂತನವಾಗಿ ನೆರವೇರಿಸಿದರು. ಆ ನಂತರ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಒಡನಾಟದಲ್ಲಿದ್ದ ಅವರ ಸಾಮಾಜಿಕ ಸಂಪರ್ಕ ಅಧಿಕಾರಿಯಾಗಿದ್ದ ಶ್ರೀಯುತ ಜಯಪ್ರಕಾಶ್. ಕೆ ರವರು ಕನ್ನಡಕ್ಕೆ ಅನುವಾದಿಸಿದ್ದ ಅಗ್ನಿಯ ರೆಕ್ಕೆಗಳು ಪುಸ್ತಕವನ್ನು ಬಿಡುಗಡೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿದರು.
   ಉದ್ಘಾಟನಾ ಭಾಷದಲ್ಲಿ ಡಾ|| ಪುಷ್ಪ ಅಮರ್‍ನಾಥ್ ಮಾತನಾಡುತ್ತಾ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಮಕ್ಕಳು ಉತ್ತಮ ಗುರಿಗಳೊಂದಿಗೆ ತಮ್ಮ ಜೀವನದಲ್ಲಿ ಮುಂದೆ ಬರಬೇಕೆಂದು ಹಾರೈಸಿದರು. ಈ ದಿನದ ಮುಖ್ಯ ಕಾರ್ಯಕ್ರಮದ ಗುರಿ “ ಮೈಸೂರು-ಗುರಿ ನೂರು” ಕಾರ್ಯಕ್ರಮದ ಉದ್ದೇಶ ಗುರಿಗಳನ್ನು ತಿಳಿಸಿದರು. ಆ ನಂತರ ಪೋಸ್ಟರ್ ಬಗ್ಗೆ ವಿವರವಾಗಿ ತಿಳಿಸಿದರು. ಪೋಸ್ಟರ್‍ನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ವಪಲ್ಲಿ ಡಾ|| ರಾಧಾಕೃಷ್ಣನ್‍ರವರು, ಪ್ರೀತಿಯ ಚಾಚಾ ನೆಹರುರವರು ಹಾಗೂ ಮಕ್ಕಳ ವಿಜ್ಞಾನಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಚಿತ್ರಗಳನ್ನು ಹಾಕಿರುವುದರ ವಿವರಣೆಯನ್ನು ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಉಳ್ಳವರಾಗಿದ್ದರು. ಡಾ|| ರಾಧಾಕೃಷ್ಣನ್ ರವರು ಶಿಕ್ಷಕರಿಗೆ ಮಾದರಿಯಾಗಿದ್ದರು , ಅಬ್ದುಲ್ ಕಲಾಂರವರು ಮಕ್ಕಳಿಗೆ ಪ್ರೇರಕರಾಗಿದ್ದಾರೆ. ಹಾಗಾಗಿ ಎಲ್ಲರನ್ನೂ ಒಳಗೊಂಡಂತೆ ಪೋಸ್ಟರ್ ರಚಿಸಲಾಗಿದೆ. ಇದರ ಕಾರ್ಯಸಾಧನೆಗಾಗಿ ಎಲ್ಲರೂ ಶ್ರಮಿಸೋಣ, ಜಿಲ್ಲೆಯ ಫಲಿತಾಂಶವನ್ನು 5ನೇ ಸ್ಥಾನದೊಳಗೆ ತರಲು ಪ್ರಯತ್ನಿಸೋಣ ಎಂದು ತಿಳಿಸಿದರು.
    ಆ ನಂತರ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳಾದ ಚೇತನ್  ಮತ್ತು ಸ್ಮøತಿ ರವರಿಂದ ನೆಹರೂ ಮತ್ತು ಅಬ್ದುಲ್ ಕಲಾಂರ ಬಗ್ಗೆ ತಿಳಿಸಿಕೊಟ್ಟರು.
    ಆ ನಂತರ ಶ್ರೀಯುತ ಜಯಪ್ರಕಾಶ್ ಕೆ ರವರು ಮಾತನಾಡಿ ಡಾ|| ಕಲಾಂ ಏಕೆ ಮಕ್ಕಳಿಗೆ ಪ್ರೀತಿ ಪಾತ್ರರಾಗಿದ್ದರು ? ಅವರ ಒಡನಾಟನ ಹಲವು ಘಟನೆಗಳನ್ನು ತಿಳಿಸಿಕೊಟ್ಟರು. ಮಕ್ಕಳು ಮೊದಲು ನಾನು ಏನು ಆಗಬೇಕೆಂಬ ಗುರಿ ಇಟ್ಟಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು. ಪ್ರತಿ ಮಕ್ಕಳೂ ತಮ್ಮ ಗುರಿಯನ್ನು ಸಾಧಿಸಲು ಶ್ರಮ ವಹಿಸಬೇಕು. ಮಕ್ಕಳು ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕು ದೇಶದ ಉತ್ತಮ ಆಸ್ತಿಯಾಗಬೇಕು ಎಂದು ತಿಳಿಸಿದರು.
   ಆ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡು ಹಲವಾರು ಪ್ರಶ್ನೆಗಳನ್ನು ಕೇಳಿದರು. ಜೀವನದಲ್ಲಿ ಯಾರಿಂದ ಮಾರ್ಗದರ್ಶನ ಪಡೆಯಬೇಕು ? ಡಾ|| ಕಲಾಂರವರು ಏಕೆ 2020 ವಿಷನ್ ಇಟ್ಟುಕೊಂಡಿದ್ದರು? ಹೊಸದನ್ನು ಸಾಧಿಸಲು ಹೇಗೆ ಧೈರ್ಯ ಪಡೆಯಬೇಕು? ಹೇಗೆ ಪ್ರಭಾವಗೊಳ್ಳಬೇಕು ? ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ಯೋಚನಾ ಲಹರಿ ಹೇಗೆ ಹೊಂದಾವಣಿಕೆ ಮಾಡುವುದು ? ಹೀಗೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
   ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳಿಂದ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ವಿದ್ಯಾರ್ಥಿ ಮತ್ತು ಯುವ ಜನತೆಯ 10 ಶಪಥಗಳನ್ನು ಮಾಡಿಸಲಾಯಿತು.
      ಆ ನಂತರ ಕಳೆದ ಸಾಲಿನಲ್ಲಿ ಉತ್ತಮ ಫಲಿತಾಂಶ ಗಳಿಸಲು ಶ್ರಮವಹಿಸಿದ ಮಾನ್ಯ ಉಪನಿರ್ದೇಶಕರು, 9 ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿದ್ಯಾಧಿಕಾರಿ ಹಾಗೂ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳನ್ನು ಮಾನ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ|| ಪುಷ್ಪ ಅಮರ್‍ನಾಥ್ ಸನ್ಮಾನಿಸಿದರು. ಈ ಬಾರಿ ಈ ಫಲಿತಾಂಶವನ್ನು ಇನ್ನೂ ಹೆಚ್ಚು ಗಳಿಸುವಂತೆ ಪ್ರಯತ್ನಿಸಬೇಕು ಎಂದು ಕೋರಿದರು.
      ಆ ನಂತರ ಜವಹರ್‍ಲಾಲ್ ನೆಹರು ಮತ್ತು ಅಬ್ದುಲ್ ಕಲಾಂರವರ ಜೀವನ ಚಿತ್ರದ ಡಾಕ್ಯುಮೆಂಟರಿ ಚಿತ್ರ ಪ್ರದರ್ಶಿಸಲಾಯಿತು. ಶ್ರೀ ಎಂ ಆರ್ ಶಿವರಾಮು, ವಿದ್ಯಾಧಿಕಾರಿಗಳು, ಸಾಶಿಇ ರವರು ಎಲ್ಲರಿಗೂ ವಂದಿಸಿದರು. ನಂತರ ಜಿಲ್ಲಾ ಪಂಚಾಯತ್ ವತಿಯಿಂದ ಮಕ್ಕಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು ಎಂದು ಹೆಚ್.ಆರ್.ಬಸಪ್ಪ ತಿಳಿಸಿದ್ದಾರೆ.

                                             
                                                                    

Friday 13 November 2015


ಮೈಸೂರು -ಪಿರಿಯಾಪಟ್ಟಣದಲ್ಲಿ ಕನಕ ಸಮುದಾಯ ಆರಭಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.ಸಮಾರಂಭದಲ್ಲಿ ಕನಕ ಗುರು ಪೀಠದ ಸ್ವಾಮೀಜಿಯವರು ಶಿವಾನಂದಪುರಿ ಸ್ವಾಮೀಜಿ,  ಶಾಸಕ ವೆಂಕಟೇಶ್,ಸಚಿವರಾದ ಹೆಚ್.ಸಿ.ಮಹದೇವಪ್ಪ,ಹೆಚ್. ಎಸ್.ಮಹದೇಪ್ರಸಾದ್,ವಿಧಾನ ಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್,


  ನ.26 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ
ನ.26 ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಬೆಳ್ಳಿಗ್ಗೆ 10.30ಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ, ಸಭಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿರುತ್ತದೆ. ಪ್ರಯುಕ್ತ ಈಗಾಗಲೇ ಪ್ರಾಧಿಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿರುವ ಅರ್ಜಿದಾರರು ಸದರಿ ಸಭೆಗೆ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳೊಂದಿಗೆ ಹಾಜರಾಗಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.14 ರಂದು ಕೆ.ಆರ್.ಪೇಟೆಯಲ್ಲಿ ಟಿಪ್ಪುಸುಲ್ತಾನ್‍ರವರ ಜನ್ಮ ದಿನಾಚರಣೆ
ಕೆ.ಆರ್.ಪೇಟೆ ತಾಲ್ಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್‍ರವರ ಜನ್ಮ ದಿನಾಚರಣೆಯನ್ನು  ನವೆಂಬರ್ 14 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್.ಪೇಟೆ ಶಾಸಕರಾದ ನಾರಾಯಣ ಗೌಡ ಅವರು ವಹಿಸುವರು. ಈಕಾರ್ಯಕ್ರಮಕ್ಕೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಂದು ಕೆ.ಆರ್.ಪೇಟೆ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಗುವಿನ ಪತ್ತೆಗಾಗಿ ಸಹಕರಿಸಲು ಮನವಿ

ದಿನಾಂಕ 26-10-2015 ರಂದು ತಾವರೆಗೆರೆ, ವಾಟರ್ ಟ್ಯಾಂಕ್ ಹತ್ತಿರ ಇರುವ ಎಸ್.ಬಿ. ಸಮುದಾಯ ಭವನದ ರಸ್ತೆ ಬದಿಯಲ್ಲಿ ಒಂದು ದಿನದ ನವಜಾತ ಗಂಡು ಮಗು ಪತ್ತೆಯಾಗಿದ್ದು, ಬಿಳಿ ಮೈ ಬಣ್ಣವನ್ನು ಹೊಂದಿರುತ್ತದೆ. ಪ್ರಸ್ತುತ ಮಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದು, ಮಗುವಿನ ಪೋಷಕರು ಇದ್ದಲ್ಲಿ, ಮಗು ಕಾಣೆಯಾಗಿರುವ ಕುರಿತು ನೀಡಿರುವ ದೂರಿನ ಪ್ರತಿಯ ಜೊತೆಗೆ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣ ಘಟಕ, ನಂ. 2083/5, 1 ನೇ ಕ್ರಾರ್ಶ, ಸುಭಾಷ್ ನಗರ, ಮಂಡ್ಯ ಇವರನ್ನು ಸಂಪರ್ಕಿಸುವಂತೆ ಅಥವ ದೂ. ಸಂಖ್ಯೆ 08232-223222 ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

                       ನ.19 ರಂದು ಕೃಷಿಮೇಳ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿ.ಕೆ.ವಿ.ಕೆ) ದಿನಾಂಕ:19-11-2015 ರಿಂದ 22-11-2015 ರವರೆಗೆ ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ ಕೃಷಿಮೇಳವನ್ನು ಏರ್ಪಡಿಸಲಾಗಿದೆ ಎಂದು ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾನಿಲಯ, ಬೆಂಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


ಮೇಲುಕೋಟೆ : ಚಿತ್ರಕಲೆಯ ಕಲಿಕೆಯಿಂದ ಮಕ್ಕಳ ಬರವಣಿಗೆ ಅಂದಗೊಳ್ಳುತ್ತದೆ ಎಂದು ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್ ತಿಳಿಸಿದರು ಅವರು ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದ ಮೇಲುಕೋಟೆ  ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಜಿಲ್ಲಾ ಚಿತ್ರಕಲಾ ಶಿಕ್ಷಕರ ತರಬೇತಿ ಶಿಭಿರವನ್ನು  ಅಕ್ಷರ ಚಿತ್ರಬರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಕ್ರಿಯಾಶೀಲತೆ ಹೆಚ್ಚುತ್ತದೆ ಜೊತೆಗೆ ಬರವಣಿಗೆಯ ಎಲ್ಲಾ ವಿಧಾನಗಳೂ ಸಹ ರೂಢಿಯಾಗುತ್ತದೆ. ಇದರಿಂದ ಮಕ್ಕಳು ಪಠ್ಯ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಹಕಾರಿಯಾಗುತ್ತದೆ ಹೀಗಾಗಿ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳಬೇಕು  ಶಿಕ್ಷಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಪೂರಕವಾತಾವರಣ ನಿರ್ಮಿಸಬೇಕು ವಿದ್ಯಾರ್ಥಿಗಳು ಸಹ ವಿವೇಕಾನಂದರ ವಾಣಿಯಂತೆ ಗುರಿಮುಟ್ಟುವವರೆಗೂ ವಿಶ್ರಮಿಸದೆ ಸಾಧನೆ ಮಾಡಬೇಕು ಎಂದರು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್ ಶಂಕರಪ್ಪ ಮೇಲುಕೋಟೆಯಲ್ಲಿ ಮಂಡ್ಯ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದವತಿಯಿಂದ  ಮೂರುದಿನಗಳ ಕಾಲ ಚಿತ್ರಕಲಾ ಶಿಕ್ಷಕರಿಗಾಗಿ ವಿಶೇಷ ಚಿತ್ರಕಲಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಉದ್ಘಾಟನೆಯ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ  ಮಕ್ಕಳಿಗೂ ಸಹ  ಸರಳವಾಗಿ ಚಿತ್ರ ಬಿಡಿಸುವ ಒಂದು ದಿನದ ತರಬೇತಿ ನೀಡಲಾಯಿತು ಎಂದರು

ಇಂದು ಚಿತ್ರಪ್ರದರ್ಶನ :
ಮೇಲುಕೋಟೆಯಲ್ಲಿ ಚಿತ್ರಕಲಾ ಶಿಕ್ಷಕರು ಬಿಡಿಸುವ ಚಿತ್ರಗಳನ್ನು ಭಾನುವಾರ ಚೆಲುವನಾರಾಯಣಸ್ವಾಮಿ ದೇವಾಲಯದ ಮುಂದೆ ಭಾನುವಾರ ಪ್ರದರ್ಶನ ಮಾಡಿ ಪ್ರವಾಸಿಗರಲ್ಲೂ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈವೇಳೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರೋಪ ಸಮಾರಂಬದಲ್ಲಿ ಭಾಗವಹಿಸಲಿದ್ದಾರೆ  ಶಾಲೆಯಲ್ಲಿ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಕ್ಕಳ ದಿನಾಚರಣೆಯಂದು ಬಹುಮಾನ ನೀಡಲಾಗಿದೆ ಎಂದು  ಶಂಕರ್ ತಿಳಿಸಿದರು.

 ಪುಟಾಣಿಗಳಿಗೆ ಕನ್ನಡ ವರ್ಣಮಾಲೆಯ ಸ್ವರಾಕ್ಷರಗಳು ಮತ್ತು ಆಂಗ್ಲಭಾಷೆಯ ಅಕ್ಷರಗಳನ್ನು ಆಧಾರವಾಗಿಟ್ಟುಕೊಂಡು ಕೇವಲ ಗೆರೆಗಳ ಸಹಾಯದಿಂದ ಚಿತ್ರರಚಿಸುವ ತರಬೇತಿ ನೀಡಲಾಯಿತು, ಅ ಅಕ್ಷರದಲ್ಲಿ ಹೂವಿನ ಕುಂಡ ಆ ಅಕ್ಷರದಲ್ಲಿ ಪಕ್ಷಿ, ಇ ಮೂಲಕ ಇಲಿ, ಆನೆ  ಹೀಗೆ ಪಕ್ಷಿಗಳು, ಪ್ರಾಣಿಗಳು, ಪರಿಸರದ ಚಿತ್ರಗಳನ್ನು ಬಿಡಿಸಿದ ಮಕ್ಕಳು ಅಂಕಿಗಳ ಮೂಲಕ ವಿವಿದ ಚಿತ್ರಗಳ ಚಿತ್ತಾರ, ಸರಳವಾಗಿ ಪರಿಸರದ ಅಪೂರ್ವ ದೃಶ್ಯಗಳ ಚಿತ್ರ ಬಿಡಿಸುವುದರ ಬಗ್ಗೆ ಹಾಗೂ ಚಿತ್ರಗಳಿಗೆ ವೈವಿಧ್ಯಮಯವಾಗಿ ಬಣ್ಣ ಬಳಸುವ ಬಗ್ಗೆಯೂ ಸಹ  ಪ್ರಾತ್ಯಕ್ಷಿಕ ತರಬೇತಿ ಪಡೆದರು

 ಇದೇ ವೇಳೆ ಮಕ್ಕಳದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಳ್ಳಿಯ ಪರಿಸರದ ಮತ್ತು ಕಾಡಿನ ಪರಿಸರದ ಚಿತ್ರಣಗಳ ಬಗ್ಗೆ ವರ್ಣಮಯ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಸಹ ನಡೆಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಡಿನಲ್ಲಿರುವ ಆನೆಗಳು, ಹಳ್ಳಿಯ ಮನೆ, ಕೆರೆ ತೋಟಗಳು, ಮೊಲ, ಹೂಗಳು ಅರಳಿದ ಹೂಗಳಿರುವ ಸುಂದರ ಪರಿಸರದ ಚಿತ್ರಬಿಡಿಸಿ ತಮ್ಮ ಕ್ರಿಯಾಶೀಲ ಚಿತ್ರಗಳನ್ನು ರಚಿಸಿದರು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ  ರಾಜ್ಯ ಚಿತ್ರಕಲಾ ಪರಿಷತ್‍ನ ಉಪಾಧ್ಯಕ್ಷೆ ಮಂಜುಳಾ,  ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಶಿಕ್ಷಕರಾದ ಪ್ರಸಾದ್, ದೈಹಿಕ ಶಿಕ್ಷಕ ಶಿವರಾಮು, ಶಿಕ್ಷಕಿ ರಶ್ಮಿ, ಮತ್ತಿತರರು ಭಾಗವಹಿಸಿದ್ದರು

Wednesday 11 November 2015

ಮಂಡ್ಯ ಜಿಪಂ ಅದ್ಯಕ್ಷೆ ಕೋಮಲ ಸ್ವಾಮಿ ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ

Monday 9 November 2015

 ನವೆಂಬರ್ 11 ರಂದು ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ
    ಮೈಸೂರು,ನ.9.ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಹೋರಾಟದ ಮೊದಲ ವೀರ ಯೋಧ ಮೈಸೂರು ಹುಲಿ ಹಜûರತ್ ಟಿಪ್ಪು ಸುಲ್ತಾನ್ ಅವರ 266ನೇ ಜನ್ಮ ದಿನಾಚರಣೆ ನವೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಸರ್ ಖಾಜಿ ಮೌಲಾನ ಮೊಹಮ್ಮದ್ ಉಸ್ಮಾನ್ ಷರೀಫ್, ಮಿಲ್ಲಿ ಕೌನ್ಸಿಲ್ ಅಧ್ಯಕ್ಷ ಮೌಲಾನ ಜಕಾವುಲ್ಲಾ, ಬಸವಧಾನ್ಯ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಅವರಗಳು ದಿವ್ಯಸಾನಿಧ್ಯ ವಹಿಸುವರು.
     ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ,  ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಮೈಸೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆ ರಾಣಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಆರಿಫ್ ಅಹ್ಮದ್ ಮೇಕ್ರಿ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
    ಅಂದು ಬೆಳಿಗ್ಗೆ 9 ಗಂಟೆಗೆ ಟಿಪ್ಪು ಸುಲ್ತಾನ್ ಅವರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೊರಟು ಕೆ.ಆರ್.ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಮೆಟ್ರೋಪೋಲ್ ವೃತ್ತದ ಮೂಲಕ ಕಲಾಮಂದಿರ ತಲುಪಲಿದೆ.
ದೀಪಾವಳಿ ಹಬ್ಬದ ಶುಭಾಶಯಗಳು
     ಮೈಸೂರು,ನ.9.ಪಟಾಕಿ ಬಿಟ್ಟಾಕಿ, ಪರಿಸರ ಹುಟ್ಟಾಕಿ ,ಪುಟ್ಟ ಮಕ್ಕಳನ್ನು ಪಟಾಕಿಯಿಂದ ದೂರವಿರಿಸಿ, ಮೈಸೂರು ನಗರವನ್ನು ವಿಶ್ವಮೋಹಕ ನಗರವನ್ನಾಗಿ ರೂಪಿಸಲು ಮೈಸೂರು ನಗರಪಾಲಿಕೆಯೊಂದಿಗೆ ಸಹಕರಿಸಿ ಎಂದು ಕೋರುತ್ತಾ , ಬೆಳಕಿನ ಹಬ್ಬ ದೀಪಾವಳಿ ಸಮಸ್ತ ಜನತೆಗೆ ಸುಖ-ಶಾಂತಿ ನೆಮ್ಮದಿ ನೀಡಲಿ ಹಾಗೂ ಎಲ್ಲರೂ ಬಾವೈಕತೆಯಿಂದ ಸಹಬಾಳ್ವೆಯಿಂದ ಸಾಗಲಿ ಎಂದು ಮೈಸೂರು ಮಹಾನಗರಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ ಶುಭ ಹಾರೈಸಿದ್ದಾರೆ.
ನ. 10 ರಂದು ಪ್ರದರ್ಶನ ಮಳಿಗೆ ಉದ್ಘಾಟನೆ
      ಮೈಸೂರು,ನ.9. ಮೈಸೂರು ದಸರ ವಸ್ತು ಪ್ರದರ್ಶನ ಆವರಣದಲ್ಲಿ ಜಿಲ್ಲೆಯ ಸರ್ಕಾರದ ಜನಪರ ಕಾರ್ಯಕ್ರಮ -ಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ಚಾಮರಾಜನಗರ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲಾಗಿರುವ ಮಳಿಗೆಯನ್ನು   ದಿನಾಂಕ:10-11-2015 ರಂದು  ಸಂಜೆ 6.00ಗಂಟೆಗೆ ಸಹಕಾರ ಮತ್ತು ಸಕ್ಕರೆ ಸಚಿವ ಹಾಗೂ  ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ  ಹೆಚ್.ಎಸ್.ಮಹದೇವಪ್ರಸಾದ್ ಅವರು ಉದ್ಘಾಟಿಸಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿವೇತನಕ್ಕೆ  ಅರ್ಜಿ ಆಹ್ವಾನ
     ಮೈಸೂರು,ನ.9. ವಿದ್ಯಾರ್ಥಿವೇತನ ಕೋರಿ 2015-16ನೇ ಸಾಲಿನಲ್ಲಿ ಆನ್‍ಲೈನ್‍ನಲ್ಲಿ ಇದುವರೆವಿಗೂ ನೋಂದಣಿಯಾಗದ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಸಮಾಜ ಕಲ್ಯಾಣ ಇಲಾಖಾ ವೆಬ್‍ಸೈಟ್ sತಿ.ಞಚಿಡಿ.ಟಿiಛಿ.iಟಿ ನಲ್ಲಿ ಮ್ಯಾನ್ಯುಯಲ್ಲಿ ಅರ್ಜಿ ಡೌನ್‍ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 15 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು  # 446, ಸರಸ್ವತಿ ನಿಲಯ, ಕೆಂಪನಂಜಾಂಬ ಅಗ್ರಹಾರ, ಮೈಸೂರು ಇಲ್ಲಿಗೆ ಸಲ್ಲಿಸುವಂತೆ ಮೈಸೂರು ತಾಲ್ಲೂಕು ಸಮಾಜ ಕಲ್ಯಾಣಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಷ್ಯವೇತನ: ಅರ್ಜಿ ಆಹ್ವಾನ
ಮೈಸೂರು,ನ.9.ಮೈಸೂರು ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರು  ನಗರ ಮತ್ತು ತಾಲ್ಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಐಟಿಐ ಮತ್ತು ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 1 ಲಕ್ಷದೊಳಗಿರಬೇಕು. ಅರ್ಜಿಯನ್ನು ಆಯಾ ಕಾಲೇಜು ಮುಖ್ಯಸ್ಥರು ಅಥವಾ ಪ್ರಾಂಶುಪಾಲರ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 30 ರೊಳಗಾಗಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು (ತಾಲ್ಲೂಕು ಪಂಚಾಯಿತಿ ಕಚೇರಿ) ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2445447 ನ್ನು ಸಂಪರ್ಕಿಸುವುದು.
ಸರಿತಾ ಕೆ. ಅವರಿಗೆ ಪಿಎಚ್.ಡಿ. ಪದವಿ

Y   ಮೈಸೂರು,ನ.9.ಮೈಸೂರು ವಿಶ್ವವಿದ್ಯಾಲಯವು ಸರಿತಾ ಕೆ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಚಂದ್ರಶೇಖರ್ ಬಿ. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ ಖegioಟಿಚಿಟ Pಚಿಣಣeಡಿಟಿs oಜಿ Poಠಿuಟಚಿಣioಟಿ ಂgeiಟಿg ಚಿಟಿಜ ಕಿuಚಿಟiಣಥಿ oಜಿ ಐiಜಿe oಜಿ ಇಟಜeಡಿಟಥಿ iಟಿ ಏಚಿಡಿಟಿಚಿಣಚಿಞಚಿ” ಕುರಿತು ಸಾದರಪಡಿಸಿದ ಭೂಗೋಳಶಾಸ್ತ್ರ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸರಿತಾ ಕೆ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಬಾಲ ದಿವಸ ಆಚರಣೆ

ಮೈಸೂರು,ನ.9. ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಸಿದ್ದಾರ್ಥನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಇಂದು ಬಾಲ ದಿವಸ್ ಆಚರಿಸಲಾಯಿತು.
    ಕಾರ್ಯಕ್ರಮವನ್ನು ಡಿ.ಎಫ್.ಆರ್.ಎಲ್ ನಿರ್ದೇಶಕ ಡಾ. ಹರ್ಷವರ್ಧನ್ ಬಾಟ್ರ ಅವರು ಉದ್ಘಾಟಿಸಿದರು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಕುಮಾರಿ, ಉಪಪ್ರಾಂಶುಪಾಲರಾದ ರೂಬಿ ಹುರಿಯಾ ಹಾಗೂ ಮುಖ್ಯೋಪಾಧ್ಯಾಯರಾದ ಸುಶ್ಮಿತಾ ಉಪಸ್ಥಿತರಿದ್ದರು.
    ಬಾಲ ದಿವಸ್ ಅಂಗವಾಗಿ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಕಲೆ, ಸಂಗೀತ, ನೃತ್ಯ, ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪತ್ರಿಕೋದ್ಯಮ ವೃತ್ತಿ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
      ಮೈಸೂರು,ನ.9.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2015-16ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವೃತ್ತಿ ಕೌಶಲ್ಯ ತರಬೇತಿ ನೀಡಲಿದೆ.
     ಪತ್ರಿಕೋದ್ಯಮ/ವಿದ್ಯುನ್ಮಾನ ಮಾಧ್ಯಮ/ಸಮೂಹ ಸಂವಹನ ವಿಷಯಗಳಲ್ಲಿ ಪದವಿ/ಸ್ನಾತಕ ಪದವಿ/ಪಿಜಿ ಡಿಪ್ಲೋಮ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಯಾವುದೇ ಇಲಾಖೆಯಿಂದ ಪ್ರಸ್ತುತ ಸಾಲಿನಲ್ಲಿ ಇದೇ ಸ್ವರೂಪದ ತರಬೇತಿ ಪಡೆದಿರಬಾರದು.
    ಆಸಕ್ತರು ಅರ್ಜಿಯನ್ನು ತಿತಿತಿ.ಞಚಿಡಿಟಿಚಿಣಚಿಞಚಿvಚಿಡಿಣhe.oಡಿg ನಿಂದ ಡೌನ್‍ಲೋಡ್ ಮಾಡಿಕೊಂಡು ಅರ್ಜಿ ಲಕೋಟೆಯ ಮೇಲೆ ಪತ್ರಿಕೋದ್ಯಮ ವೃತ್ತಿ ಕೌಶಲ್ಯ ತರಬೇತಿಗಾಗಿ ಅರ್ಜಿ ಎಂದು ಕಡ್ಡಾಯವಾಗಿ ನಮೂದಿಸಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 20 ರೊಳಗಾಗಿ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು -560001 ಇಲ್ಲಿಗೆ ಹಾಗೂ ಅರ್ಜಿ ಮತ್ತು ದಾಖಲೆಗಳ ಸ್ಕ್ಯಾನ್ ಕಾಪಿಯನ್ನು    sಛಿಠಿiಟಿಜಿoಡಿmಚಿಣioಟಿಜeಠಿಚಿಡಿಣmeಟಿಣ@gmಚಿiಟ.ಛಿom ಗೆ ಇ ಮೇಲ್ ಮುಖಾಂತರ ಸಲ್ಲಿಸುವುದು.
ಖಾಸಗಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಪ್ರಾರಂಭಿಸಲು ಅರ್ಜಿ ಆಹ್ವಾನ
ಮೈಸೂರು,ನ.9.2016-17ನೇ ಸಾಲಿನಲ್ಲಿ ಹೊಸದಾಗಿ ಖಾಸಗಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಅನುಮತಿ ಕೋರಲು ಇಚ್ಛಿಸುವ ಆಡಳಿತ ಮಂಡಳಿ/ಸಂಸ್ಥೆಯವರು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿಸಲ್ಲಿಸಲು ದಿನಾಂಕ: ದಿನಾಂಕ:20-11-2015ರಂದು ಅಂತಿಮ ದಿನವಾಗಿರುತ್ತದೆ. ಆಸಕ್ತಿಯುಳ್ಳ ಸಂಸ್ಥೆಯವರು ಸರ್ಕಾರದ ದಿನಾಂಕ:    11-11-2014 ಮತ್ತು 05-09-2015ರ ಆದೇಶ ಮತ್ತು ಸುತ್ತೋಲೆಗಳಂತೆ ಆನ್ ಲೈನ್ ನಲ್ಲಿ ನೊಂದಾಯಿಸಿಕೊಂಡು  ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಅಥವಾ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ   ಪಡೆಯಬಹುದಾಗಿದೆ.
62ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

      ಮೈಸೂರು,ನ.9.62ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ಉದ್ಯೋಗ ಮತ್ತು ನೈಪುಣ್ಯತೆಯ ಅಭಿವೃದ್ಧಿಯ ದಿನ ನವೆಂಬರ್ 14 ರಂದು  11 ಗಂಟೆಗೆ  ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
      ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜರೋಹಣ ನೆರವೇರಿಸಲಿದ್ದು, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಅವರು ವಸ್ತುಪ್ರದರ್ಶನ ಉದ್ಘಾಟಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅವರು ಹಿರಿಯ ಸಹಕಾರಿಗಳು ಹಾಗೂ ಶಾಸಕ ವಾಸು ಅವರನ್ನು ಸಹಕಾರ ಸಂಘಗಳನ್ನು ಸನ್ಮಾನಿಸುವರು.  ಕರ್ನಾಟಕ ರಾಜ್ಯ ಮಹಾಮಂಡಳಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಅವರು ಅಧ್ಯಕ್ಷತೆ ವಹಿಸುವರು.
     ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಂ.ಕೆ. ಸೋಮಶೇಖರ್,  ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಆರ್. ಧರ್ಮಸೇನ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
     ಅಂದು ಬೆಳಿಗ್ಗೆ 10 ಗಂಟೆಗೆ ಬೇಡನ್ ಪೊವೆಲ್ ಮೈದಾನದಿಂದ ಸಹಕಾರ ಜಾಥಾ ನಡೆಯಲಿದೆ.

Saturday 7 November 2015

ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
 ಮೈಸೂರು,ನ.7- ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ತಮ್ಮ ಮನೆಯ ಬಳಿಯಿರುವ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತೊಣಚಿಕೊಪ್ಪಲು ಬಡಾವಣೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಬಡಾವಣೆಯ ನಿವಾಸಿ ಗಾರೆಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ ನಂಜುಂಡ(35) ಎಂಬಾತನೇ  ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಈ ತನಿಗೆ ಮದುವೆಯಾಗಿದ್ದರೂ  ಹೆಮಡತಿಯಿಂದ ಬೇರಾಗಿ ತನ್ನ ತಾಯಿಮನೆಯಲ್ಲಿ ವಾಸವಾಗಿದ್ದ, ಕೆಲ ತಿಂಗಳ ಹಿಂದೆ ಬಲಗಾಲಿನಲ್ಲಿ ಗ್ಯಾಂಗರಿನ್ ಆಗಿದ್ದ ಪರಿಣಾಮ ಕೆಲದಿನಗಳ ಹಿಂದೆ ಒಂದು ಕಾಲನ್ನು ತೆಗೆಯಲಾಗಿತ್ತು ಆದರೂ  ಕೃತಕ ಕಾಲು ಹಾಕಿಸಿಕೊಂಡು ಹೇಗೋ ಬದುಕ್ಕಿದ್ದ. ಆದರೆ ಕಾಲು ಇಲ್ಲದೇ ಇರುವುದು, ಹೆಂಡತಿ ಈತನಿಂದ ದೂರಾಗಿರುವುದು ಆತನ ಜೀವನದಲ್ಲಿ ಜಿಗುಪ್ಸೆ ಉಂಟಾಗಿದೆ.
 ಇದರಿಂದ  ಬೇಸತ್ತು ತನ್ನ ಮನೆಯ ಪಕ್ಕದಲ್ಲಿರುವ  ಹೊಂಗೆ ಮರಕ್ಕೆ ನೇಣುಬಿಗಿದು ಕೊಂಡಿದ್ದಾನೆ. ಇಮದು ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ನೋಡಿ ಸರಸ್ವತಿಪುರಂ ಠಾಣೆಗೆ ಮಾಹಿತಿ ನೀಡಿದಾಗ  ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
  ------------------------------------------------
 
 ನಗರದ ಇರ್ವಿನ್ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ಆ ರಸ್ತೆ  ಸೇರಿದಂತೆ ಯಾದವಗಿರಿಯಲ್ಲಿರುವ ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‍ರವರು ಗುದ್ದಲಿಪೂಜೆ ನಡೆಸಿದರು.

Friday 6 November 2015

ಅಶಾಂತಿಯ ವಾತಾವರಣಕ್ಕೆ ಸಿಲುಕಿರುವ ಕನ್ನಡದ ಸಂಸ್ಕøತಿ: ನಲ್ಲೂರು
ಮಂಡ್ಯ: ಪ್ರಸ್ತುತ ಕನ್ನಡ ಸಾಹಿತ್ಯ ಹಾಗೂ ಸಂಸ್ಕøತಿ ಅಶಾಂತಿಯ ವಾತಾವರಣಕ್ಕೆ ಸಿಲುಕಿ ನಲುಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ.ಆರ್.ಕೆ.ನಲ್ಲೂರು ಪ್ರಸಾದ್ ವಿಷಾದಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಡಾ.ಜೀ.ಶಂಪ. ಸಾಹಿತ್ಯ ವೇದಿಕೆ ವತಿಯಿಂದ ನಡೆದ ಕನ್ನಡ ಹಬ್ಬ ಹಾಗೂ ಕರ್ನಾಟಕ ಭೂಷಣ ಪ್ರಶಸ್ತಿ ಪ್ರದಾನ ಮತ್ತು ಗುಡ್ಡೆಬಾಡು ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಶಾಂತಿ ಕದಡಲು ಪ್ರಮುಖವಾಗಿ ಇತ್ತೀಚೆಗೆ ಖ್ಯಾತ ಸಂಶೋಧಕ ಹಾಗೂ ಸಾಹಿತಿ ಡಾ.ಕಲ್ಬುರ್ಗಿ ಅಂತಹ ಮಹನೀಯರನ್ನು ಹತ್ಯೆ ಗೈದಿರುವುದು. ಕಲ್ಬುರ್ಗಿ ಹತ್ಯೆ ನಾಡಿನ ಸಂಸ್ಕøತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸತ್ಯವನ್ನು ನೇರವಾಗಿ ಹೇಳುತ್ತಿದ್ದ ಕಲ್ಬುರ್ಗಿ ಅವರ ಹತ್ಯೆ ನಿಜಕ್ಕೂ ಖಂಡನೀಯ. ಇಂತಹ ಸಂದರ್ಭದಲ್ಲಿ ಕನ್ನಡಿಗರು ಒಂದಾಗಬೇಕು. ಶಾಂತಿ ಕದಡುವವರ ವಿರುದ್ಧ ಸಮರ ಸಾರಲು ಸಿದ್ಧರಾಗಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಎಷ್ಟು ಗಟ್ಟಿಯಾಗುತ್ತಿದೆಯೋ ಹಾಗೆಯೇ ಕನ್ನಡದ ಬೆಳವಣಿಗೆ ಮಾತ್ರ ದಿನೇ ದಿನೇ ಕುಗ್ಗುತ್ತಿದೆ. ಅಪಾಯದ ಅಂಚಿನಲ್ಲಿರುವ ಕನ್ನಡವನ್ನು ಉಳಿಸಬೇಕಾದ ಕೆಲಸ ನಮ್ಮದ್ದಾಗಿದೆ. ಇದರ ಜೊತೆಗೆ ಕೇವಲ ಕನ್ನಡ ಉಳಿಸಿ ಬೆಳೆಸುವಂತಹ ಕೆಲಸ ಕನ್ನಡ ಪರ ಸಂಘಟನೆಗಳದ್ದು ಮಾತ್ರವಲ್ಲ. ಎಲ್ಲಾ ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊಂದಾಗಬೇಕೆಂದು ಸಲಹೆ ನೀಡಿದರು.
ಜೀ.ಶಂ.ಪರಮಶಿವಯ್ಯ ಒಬ್ಬ ದೈತ್ಯ ಜನಪದ ಶಕ್ತಿ. ಜನಪದ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದ್ದು, ಇವರನ್ನು ಕನ್ನಡದ ಜಗತ್ತಿಗೆ ನೆನಪಿಸುವ ಜೀ.ಶಂ.ಪ. ಸಾಹಿತ್ಯ ವೇದಿಕೆಯ ಕೆಲಸ ಅನನ್ಯವಾಗಿದೆ ಎಂದ ಅವರು, ಜನಪದ ಸಾಂಸ್ಕøತಿಕ ಲೋಕದಲ್ಲಿ ಜೀ.ಶಂ.ಪ. ಇನ್ನು ಜೀವಂತವಾಗಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಮಾತನಾಡಿ, ಕನ್ನಡದ ವಿಚಾರದಲ್ಲಿ ಇಡೀ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಶೇ.95ರಷ್ಟು ಜನ ಕನ್ನಡವನ್ನು ಮಾತನಾಡುವವರಿದ್ದು, ಬೇರೆ ರಾಜ್ಯದಲ್ಲಿ ಇದು ಕ್ಷೀಣಿಸಿದೆ. ರಾಜ್ಯ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕನ್ನಡ ಭಾಷೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಜಿಲ್ಲೆಯಲ್ಲೂ ಕನ್ನಡ ಭಾಷೆಯನ್ನ ಮಾತನಾಡುವಂತಹ ನಿಟ್ಟಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ಕನ್ನಡ ಭಾಷೆಯನ್ನು ಪಸರಿಸುವ ಕಾರ್ಯಕ್ಕೆ ಮುಂದಾಗಬೇಕೆಂದರು.
ಕನ್ನಡ ಭಾಷೆ ಇವತ್ತು ರಾಜ್ಯದಲ್ಲಿ ಕ್ಷೀಣಿಸಲು ಪರರಿಗಿಂತ ನಮ್ಮವರೇ ಕಾರಣವಾಗಿದ್ದಾರೆ. ಕನ್ನಡಿಗರ ಪರ ಭಾಷಾ ವ್ಯಾಮೋಹವೇ ಕನ್ನಡದ ತುಳಿತಕ್ಕೆ ಕಾರಣವಾಗಿದೆ. ಕನ್ನಡಿಗರು ಮೊದಲು ನಮ್ಮ ಭಾಷೆ ಬಗ್ಗೆ ವ್ಯಾಮೋಹ ಬೆಳೆಸಿಕೊಂಡರೆ ಅದು ಪರಕೀಯರಲ್ಲೂ ಕನ್ನಡದ ಬಗ್ಗೆ ಕುತೂಹಲ ಉಂಟಾಗಲು ಕಾರಣವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಬೂಕಹಳ್ಳಿ ಮಂಜುನಾಥ್, ಮೈಸೂರು ಮಹಾರಾಜ ಕಾಲೇಜಿನ ಪ್ರೊ.ಕಮಲಾಜೈನ್, ವಿಶ್ವ ಒಕ್ಕಲಿಗ ವೇದಿಕೆ ರಾಜ್ಯಾಧ್ಯಕ್ಷ ರವಿಶಂಕರ್, ಕರ್ನಾಟಕ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಭೀಮಶಂಕರ್ ಪಾಟೀಲ್ ಅವರಿಗೆ ಕರ್ನಾಟಕ ಭೂಷಣ  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 28 ಮಂದಿಗೆ ಕನ್ನಡ ರತ್ನ ಹಾಗೂ ಕಾಯಕ ರತ್ನ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ನಿವೃತ್ತ ನಿರ್ದೇಶಕ ಕಾ.ತ.ಚಿಕ್ಕಣ್ಣ, ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಕ್ರಾಂತಿ ಶಿವಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರವಿ, ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

ಖಾಸಗಿ ಬಸ್ಸ್ ಚಾಲಕರಿಗೆ ಚಾಲನಾ ಪರೀಕ್ಷೆ

  ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ  ಹಾಗೂ ಖಾಸಗಿ ಶಾಲಾ ಮಕ್ಕಳುಗಳ ವಾಹನಗಳ ಅಪಘಾತಗಳು ಕೂಡ ಜಿಲ್ಲೆಯ ಕೆಲವು ಭಾಗಗಳಲ್ಲಿ ವರದಿಯಾಗಿದ್ದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ., ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖಾ ವತಿಯಿಂದ ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಖಾಸಗಿ ಬಸ್ ಚಾಲಕರುಗಳ ಹಾಗೂ ಖಾಸಗಿ ಶಾಲಾ ಮಕ್ಕಳ ಬಸ್ ಚಾಲಕರ ಚಾಲನಾ ಪರೀಕ್ಷೆ/ತರಬೇತಿಯನ್ನು ಪರಿಣತಿ ಹೊಂದಿರುವ ಕೆ.ಎಸ್.ಆರ್.ಟಿ.ಸಿ. ಚಾಲಕರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಸಹಯೋಗದೊಡನೆ ನಡೆಸಲು ನಿರ್ಧರಿಸಲಾಗಿದೆ.

    ಈ ಪರೀಕ್ಷೆ/ತರಬೇತಿಯನ್ನು 2015ರ ನವೆಂಬರ್ ತಿಂಗಳ ಪ್ರತಿ ಭಾನುವಾರ ಅಂದರೆ, ದಿನಾಂಕ: 08-11-2015, 15-11-2015, 22-11-2015 ಮತ್ತು 29-11-2015 ಹಮ್ಮಿಕೊಳ್ಳಲಾಗಿದೆ. ಆದುದರಿಂದ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಬಸ್ಸುಗಳ ಚಾಲಕರುಗಳು ಮತ್ತು ಎಲ್ಲಾ ಖಾಸಗಿ ಶಾಲಾ ಮಕ್ಕಳ ವಾಹನಗಳ ಚಾಲಕರುಗಳು, ತಮ್ಮ ಚಾಲನಾ ಪರವಾನಿಗೆಯೊಂದಿಗೆ ಮೇಲ್ಕಂಡ ದಿನಾಂಕಗಳಂದು ಮಂಡ್ಯ ನಗರದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೆರೇಡ್ ಮೈದಾನದಲ್ಲಿ ಬೆಳಿಗ್ಗೆ 09-00 ಗಂಟೆಯಿಂದ ಮಧ್ಯಾಹ್ನ 01-00 ಗಂಟೆಯವರೆಗೆ ಭಾಗವಹಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ.
1. ಶ್ರೀ.ಸೋಮಶೇಖರ್, ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್-2,
  ಹಾಗೂ ಮೋಟಾರ್ ವಾಹನ ವಿಭಾಗ, ಜಿಲ್ಲಾ ಸಶಸ್ತ್ರ ಮೀಸಲು ಪಡೆ,
  ಮಂಡ್ಯ ನಗರ : ಮೊ.ಸಂ.:9448643207- 08232-224057.
2. ಶ್ರೀ.ಅಬ್ದುಲ್ ನಸೀಮ್, ಸಾರಿಗೆ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಇಲಾಖೆ,
   ಮಂಡ್ಯ, ಮೊ.ಸಂ. 9481905786.

Thursday 5 November 2015

ಮಂಡ್ಯ  : ತಾಲೂಕಿನ ಮಂಗಲ ಗ್ರಾಮದಲ್ಲಿ ಪರಿಸರ ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ ವತಿಯಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಕನ್ನಡ ರಾಜ್ಯೋತ್ಸವ ಅಂಗವಾಗಿ ನೂರಾರು ವಿವಿಧ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಜೈವಿಕ ಇಂಧನ ಗಿಡಗಳಾದ ಹಿಪ್ಪೆ, ನೇರಳೆ, ಹೊಂಗೆ, ಬೇವು, ಮಾಗನಿ ಇತ್ಯಾದಿ ಗಿಡಗಳನ್ನು ನಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಶಶಿಧರ್ ಬಸವರಾಜು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸ್ಯ ಸಂರಕ್ಷಣೆಯು ನಿತ್ಯ ಕಾಯಕವಾಗಬೇಕು. ಮರ-ಗಿಡ ಬೆಳೆಸುವ ಕಾಯಕವನ್ನು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ತೊಡಗಿಸಿಕೊಳ್ಳಬೇಕಾಗಿದೆ. ನಿಸರ್ಗ ಸೇವೆಯ ಕಾಯಕವನ್ನು ನಿಷ್ಠೆಯಿಂದ ನೆರವೇರಿಸಿದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಪ್ರಕೃತಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ ಎಂಬ ಮಾತಿನಂತೆ ಗ್ರಾಮದ ಸ್ವಾಭಾವಿಕ ಸಂಪನ್ಮೂಲಗಳ ಕೆರೆ-ಕಟ್ಟೆ, ಗೋಮಾಳ ಇತ್ಯಾದಿ ಸ್ಥಳಗಳಲ್ಲಿ ಜೀವ ಸಂಕುಲಗಳ ಉಳಿವಿಗೆ ಒಂದಾಗಬೇಕಿದೆ ಎಂದರು.
ತಾಲೂಕಿನ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಸರ ಸಂಸ್ಥೆ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಪ್ರಸಕ್ತ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪರಿಸರ ರೂರಲ್ ಡೆವೆಲಪ್‍ಮೆಂಟ್ ಸಂಸ್ಥೆಯ ಗೌರವಾಧ್ಯಕ್ಷ ಕೆ.ಟಿ. ಹನುಮಂತು ಮಾತನಾಡಿ, ಶೇ. 35ರಷ್ಟು ಕಾಡು ಅವಶ್ಯಕತೆ ಇದೆ. ಮನುಷ್ಯನ ದೈನಂದಿನ ಬದುಕಿಗೆ ಉಸಿರಾಡುವ ಗಾಳಿ ಅತ್ಯಂತ ಹೆಚ್ಚು ಅವಶ್ಯಕತೆ ಇದ್ದು, ಇಂದು ಮಾಲಿನ್ಯಗೊಳ್ಳುತ್ತಿರುವ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯು ಪ್ರಸ್ತುತ ಯುವಜನಾಂಗದ ಮೇಲಿದೆ ಎಂದು ತಿಳಿಸಿದರು.

Wednesday 4 November 2015



 ಮದ್ದೂರು ಧಾರಾ ಕಾರ ಮಳೆಗೆ ಮದ್ದೂರು ಶಿಂಷಾ ನದಿ ತುಂಬಿ ಹರಿಯುತ್ತಿರುವುದು





Tuesday 3 November 2015

ಕೃಷ್ಣರಾಜಪೇಟೆ. ತಮ್ಮನ್ನೇ ದೇವರೆಂದು ನಂಬಿ ಬರುವ ರೋಗಿಗಳಿಗೆ ವೈದ್ಯರು ನಗುಮೊಗದೊಂದಿಗೆ ಉತ್ತಮವಾದ ಚಿಕಿತ್ಸೆಯನ್ನು ನೀಡುವ ಮೂಲಕ ವೈದ್ಯೋ ನಾರಾಯಣೋಹರಿ ಎಂಬ ಮಾತನ್ನು ನಿಜವಾಗಿಸಬೇಕು. ವ್ಲತ್ತಿಯಲ್ಲಿ ಬದ್ಧತೆ, ಕರ್ತವ್ಯ ದಕ್ಷತೆ ಹಾಗೂ ಸೇವಾ ಮನೋಭಾವನೆ ಜೀವನದ ಉಸಿರಾಗಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಅವರು ಇಂದು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡ ರೋಗಿಗಳ ಜೀವನದೊಂದಿದೆ ಚೆಕ್ಕಾಟವಾಡಿ ಚಿಕಿತ್ಸೆ ನೀಡಲು ಹಣಕ್ಕಾಗಿ ಒತ್ತಾಯಿಸುವ ವೈದ್ಯರು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವುದು ಬೇಕಾಗಿಲ್ಲ. ಸೇವಾಬದ್ಧತೆ ಹಾಗೂ ಕರ್ತವ್ಯ ದಕ್ಷತೆಯಿಂದ ಕೆಲಸ ಮಾಡಿ ಜನಮೆಚ್ಚುಗೆ ಪಡೆಯುವ ವೈದ್ಯರ ಅವಶ್ಯಕತೆ ನಮ್ಮ ತಾಲೂಕಿಗೆ ಅಗತ್ಯವಾಗಿದೆ. ವೈದ್ಯರನ್ನು ನಮ್ಮ ಗ್ರಾಮೀಣ ಪ್ರದೇಶದ ಜನರು ಸಾಕ್ಷಾತ್ ದೇವರೆಂದೇ ಗೌರವಿಸಿ ನಮಸ್ಕಾರ ಮಾಡುತ್ತಾರೆ. ಬಡ ರೋಗಿಗಳು ವೈದ್ಯರನ್ನು ಹರಸಿ ಆಶೀರ್ವದಿಸುವಾಗ ಸಿಗುವ ಆನಂದವು ಕೋಟಿ ರೂಪಾಯಿ ಹಣ ನೀಡಿದರೂ ದೊರೆಯವುದಿಲ್ಲ. ಆದ್ದರಿಂದ ಇಂದಿನ ದಿನಮಾನದಲ್ಲಿ ಸೇವೆ ಎಂಬ ಪದವು ಅರ್ಥ ಕಳೆದುಕೊಳ್ಳುತ್ತಿದ್ದರೂ ಕೆಲವೇ ಮಂದಿ ವೈದ್ಯರು ಸಲ್ಲಿಸುವ ಪ್ರಾಮಾಣಿಕವಾದ ಸೇವೆಯಿಂದಾಗಿ ಇಂದಿಗೂ ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವನೆಯು ಜೀವಂತವಾಗಿದೆ ಎಂದು ಅಭಿಮಾನದಿಂದ ನುಡಿದ ಶಾಸಕ ನಾರಾಯಣಗೌಡರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯು ಜಾರಿಗೆ ಬಂದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಸೇವೆಯು ಉಚಿತವಾಗಿ ದೊರೆಯುತ್ತಿದೆ. ಆದ್ದರಿಂದ ಗ್ರಾಮೀಣ ಜನರು ಸಾಲಸೋಲ ಮಾಡಿ ಖಾಸಗೀ ನರ್ಸಿಂಗ್ ಹೋಂಗಳಿಗೆ ಹೋಗಿ ಚಿಕಿತ್ಸೆ ಪಡೆದು ಸಾಲಗಾರರಾಗಿ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದೇ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಂಡು ಗ್ರಾಮೀಣ ಪ್ರದೇಶದ ಜನರು ನೆಮ್ಮದಿಯ ಜೀವನ ನಡೆಸಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯು 100ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಅಲ್ಟ್ರಾಸ್ಕ್ಯಾನಿಂಗ್ ಸೇರಿದಂತೆ ಡಯಾಲಿಸೀಸ್ ಯಂತ್ರ, ಅತ್ಯಾಧುನಿಕ ಎಕ್ಸರೇ ಯಂತ್ರವೂ ಸ್ಭೆರಿದಂತೆ ಖಾಸಗೀ ನರ್ಸಿಂಗ್ ಹೋಂಗಳಲ್ಲಿಯೂ ಸಿಗದ ಅತ್ಯಾಧುನಿಕ ಹೈಟೆಕ್ ವಿಶೇಷ ಸೌಲಭ್ಯಗಳು  ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿಯೇ ದೊರೆಯಲಿವೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ವೃತ್ತಿ ಬದುಕಿನಲ್ಲಿ ಶಿಸ್ತು, ಕಾರ್ಯದಕ್ಷತೆ ಹಾಗೂ ಸಮಯ ಪಾಲನೆ ಮಾಡಿ ಒಳ್ಳೆಯ ವ್ಶೆದ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು. ಈ ದಿಕ್ಕಿನಲ್ಲಿ ಆಸ್ಪತ್ರೆಗಳಿಗೆ ಬೇಕಾದ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರಲ್ಲಿ ಕಾಡಿ ಬೇಡಿಯಾದರೂ ದೊರಕಿಸಿಕೊಡುವುದಾಗಿ ನಾರಾಯಣಗೌಡ ಭರವಸೆ ನೀಡಿದರು. ನೀವು ಈ ಹಿಂದೆ ಕೆಲಸ ಮಾಡಿದ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ, ಇನ್ನು ಮುಂದೆ ನೀವು ರೋಗಿಗಳಿಗೆ ನೀಡುವ ಸೇವೆ ಉತ್ತಮವಾಗಿರಬೇಕು. ಬಡ ರೋಗಿಗಳ ಜೊತೆಯಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ನಗುಮೊಗದ ಸೇವೆಯಿಂದ ಬಡರೋಗಿಯ ಖಾಯಿಲೆಯು ಕ್ಷಣ ಮಾತ್ರದಲ್ಲಿ ದೂರಾಗಬೇಕು ಎಂದು ಶಾಸಕರು ವೈದ್ಯರು ಹಾಗೂ ಸಿಬ್ಬಂಧಿಗಳನ್ನು ಕೈಮುಗಿದು ಪ್ರಾರ್ಥಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು ಹಾಗೂ ತಾಲೂಕಿನ ನೋಡೆಲ್ ವೈದ್ಯಾಧಿಕಾರಿಗಳಾದ ಡಾ.ಕೆ.ಮೋಹನ್ ಅವರು ಮಾತನಾಡಿ ಸಿಬ್ಬಂದಿಗಳು ಹಾಗೂ ವೈದ್ಯರ ಕೊರತೆಯ ನಡುವೆಯೂ ಬಡ ರೋಗಿಗಳಿಗೆ ಉತ್ತಮವಾದ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ವೈದ್ಯರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಸಕರ ಮನವಿಯ ಮೇರೆಗೆ ಇನ್ನೂ ಹೆಚ್ಚಿನ ಕಾರ್ಯದಕ್ಷತೆಯನ್ನು ಮೈಗೂಡಿಸಿಕೊಂಡು ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು, ತಾಲೂಕು ಆಡಳಿತ ವೈದ್ಯಾಧಿಕಾರಿ ಚಿಕ್ಕಾಡೆ ಅರವಿಂದ್, ಮುಖಂಡರಾದ ಅಕ್ಕಿಹೆಬ್ಬಾಳು ಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯ ಎಂ.ಸಿ.ರಾಮೇಗೌಡ, ಎಪಿಎಂಸಿ ಮಾಜಿಅಧ್ಯಕ್ಷ ಎಂ.ಸಿ.ಸಣ್ಣಯ್ಯ, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ.ಎಂ.ಜಯಶೇಖರ್ ಮತ್ತಿತರರು ಉಪಸ್ಥಿತರಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು ಸ್ವಾಗತಿಸಿದರು, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್ ವಂದಿಸಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ವೆಂಕಟಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮಹಿಳಾ ಶುಶ್ರೂಷಕಿ ಜಯರತ್ನ ಪ್ರಾರ್ಥಿಸಿದರು. ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಹಾಜರಿದ್ದರು.
ಚಿತ್ರಶೀರ್ಷಿಕೆ: 03-ಏಖPಇಖಿಇ-04  ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂಧಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ನಾರಾಯಣಗೌಡ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಮೋಹನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮಶ್ರೀನಿವಾಸ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿಮೋಹನ್, ಉಪಾಧ್ಯಕ್ಷೆ ನಾಗರತ್ನಮ್ಮ ಮತ್ತಿತರರು ಚಿತ್ರದಲ್ಲಿದ್ದಾರೆ.

Sunday 1 November 2015

ಮೈಸೂರು-ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ. ವಿ.ಶ್ರೀನಿವಾಸ್ ಪ್ರಸಾದ್ ಧ್ವಜಾರೋಹಣ ಮಾಡಿದರು






ಮಂಡ್ಯದ ಸರ್ ಎಂ ವಿ.ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಧ್ವಜಾರೋಹಣ ಮಾಡಿದರು.


ಪತ್ರಕರ್ತ ನಜೀರ್ ಅಹಮದ್‍ಗೆ ರಾಜ್ಯೋತ್ಸವ ಪ್ರಶಸ್ತಿ
ಪಾಂಡವಪುರ : ಕಳೆದ 15 ವರ್ಷಗಳಿಂದ ಇಲ್ಲಿ ಪರ್ತಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ನಜೀರ್ ಅಹಮದ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರಿಗೆ 60ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಾಂಡವಪುರ ತಾಲ್ಲೂಕು ಆಡಳಿತದ ವತಿಯಿಂದ  ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನ.1 ರಂದು ಸಂಜೆ ನಡೆದ ವರ್ಣರಂಜಿತ ಸಾಂಸ್ಕøತಿಕ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ನಜೀರ್ ಅಹಮದ್, ಆಂದೋಲನ ವರದಿಗಾರ ಎಸ್.ನಾಗಸುಂದರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್, ದಸಂಸ ಮುಖಂಡರಾದ ಬಿ.ಪ್ರಕಾಶ್, ಅಂಕಯ್ಯ ಸೇರಿದಂತೆ ಹಲವರನ್ನು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಿ  ತಾಲ್ಲೂಕಿನಲ್ಲಿ ತಮ್ಮದೇ ಆದ ವ್ಯಾಪ್ತಿಯಲ್ಲಿ ವಿಶೇಷವಾಗಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದರ ಮೂಲಕ ತಾಲ್ಲೂಕು ಆಡಳಿತ ಸಾರ್ವಜನಿಕರಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಸೆಯಾಗಿದ್ದು ಮುಂದೆಯೂ ತಾಲ್ಲೂಕು ಆಡಳಿತ ಮುಂದುವರೆಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ಕನ್ನಡದಲ್ಲಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಪೌರಕಾರ್ಮಿಕರಿಗೆ ಉಚಿತ ಸೈಕಲ್ ವಿತರಿಸಲಾಯಿತು.
ನಂತರ ನಟ ನಾಟಕಕಾರ ಮಂಡ್ಯ ರಮೇಶ್ ನಿರ್ದೇಶನದಲ್ಲಿ ಮೈಸೂರಿನ ನಟನಾ ತಂಡದವರಿಂದ ಚಾಮ ಚೆಲುವೆ ಜಾನಪದ ನಾಟಕ ಪ್ರದರ್ಶಿಸಲಾಯಿತು.
ತಹಸಿಲ್ದಾರ್ ಬಿ.ಶಂಕರಯ್ಯ, ಬಿಇಒ ಚಂದ್ರಶೇಖರ್, ಪುರಸಭೆ ಅಧ್ಯಕ್ಷ ಎಂ.ಗಿರೀಶ್, ತಾಲ್ಲೂಕು ಕಸಾಪ ಅಧ್ಯಕ್ಷ ಧನ್ಯಕುಮಾರ್, ಜಿ.ಪಂ.ಸದಸ್ಯ ಎ.ಎಲ್.ಕೆಂಪೂಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.