Tuesday 31 March 2015

ಮೈಸೂರು ಸುದ್ದಿಗಳು.

ಸೊಳ್ಳೆ ಉತ್ಪತ್ತಿ ತಡೆಗಟ್ಟಿ; ಡಾ: ಚಿದಂಬರ್ ಎಸ್
     ಮೈಸೂರು,ಮಾ.31.ಡೆಂಗ್ಯು, ಚಿಕುಂಗುನ್ಯ ಹರಡುವ ಈಡಿಸ್ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು ಸಾರ್ವಜನಿಕರು ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್‍ಗಳನ್ನು ಸದಾಕಾಲ ಮುಚ್ಚಿಡುವಂತೆ
     ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ :ಚಿದಂಬರ ಎಸ್. ಅವರು ಮನವಿ ಮಾಡಿದ್ದಾರೆ. ಮನೆಯ ಸುತ್ತಮುತ್ತ ಬಿಸಾಡಿದ ಹಳೆಯ ಟೈರು, ಎಳನೀರ ಚಿಪ್ಪು, ಇತರೆ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡಿ. ಸಾರ್ವಜನಿಕರು ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    
ಏಪ್ರಿಲ್ 1 ರಂದು ಸಾಮಾನ್ಯ ಸಭೆ
     ಮೈಸೂರು,ಮಾ.31.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 10 ರಂದು ಜಿ.ಪಂ. ವಿಶೇಷ ಸಭೆ
     ಮೈಸೂರು,ಮಾ.31-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2015-16ನೇ ಸಾಲಿನ ಆಯವ್ಯಯ (ಬಜೆಟ್) ಮಂಡನೆ ಕುರಿತಂತೆ ವಿಶೇಷ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಬು ಜಗಜೀವನ ರಾಂ ಅವರ 108ನೇ ಜನ್ಮ ದಿನಾಚರಣೆಗೆ ಸಿದ್ದತೆ
     ಮೈಸೂರು,ಮಾ.31.ಜಿಲ್ಲಾಡಳಿತದ ವತಿಯಿಂದ ಏಪ್ರಿಲ್ 5 ರಂದು ಹಸಿರು ಕ್ರಾಂತಿ ಹರಿಕಾರ, ಭಾರತ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ ರಾಂ ಅವರ 108ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು.
    ಅಂದು ಬೆಳಿಗ್ಗೆ 9-30 ಗಂಟೆಗೆ ರೈಲ್ವೆ ನಿಲ್ದಾಣದ ಬಳಿ ಇರುವ  ಡಾ|| ಬಾಬು ಜಗಜೀವನ ರಾಂ ಅವರ    ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ 10 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ ಅವರು ಮೆರವಣಿಗೆ ಚಾಲನೆ ನೀಡುವರು. ಮೆರವಣಿಗೆಯು ರೈಲ್ವೆ ನಿಲ್ದಾಣದಿಂದ ಹೊರಟು ಮೆಟ್ರೋಪೋಲ್ ವೃತ್ತದ ಮೂಲಕ ಹುಣಸೂರು ರಸ್ತೆ ಮಾರ್ಗವಾಗಿ ಕಲಾಮಂದಿರ ತಲುಪಲಿದೆ.
     ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.  ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ|| ಲಕ್ಷ್ಮಿನಾರಾಯಣ ಅರೋರಾ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
     ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್,  ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಸಿ.ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ಎಂ.ಕೆ. ಸೋಮಶೇಖರ್, ವಾಸು, ವಿಧಾನ ಪರಿಷತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಲೋಕಾಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.

ವಾರ್ತಾ ವಿಶೇಷ
ಬಿ.ಮಟಕೆರೆ ಗ್ರಾಮವಾಗಲಿದೆ ಆದರ್ಶ ಗ್ರಾಮ
     ಮೈಸೂರು ಜಿಲ್ಲೆಯಲ್ಲಿ ಸಂಸದ್ ಆದರ್ಶ ಗ್ರಾಮ ಯೋಜನೆಗೆ ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್ ಅವರ ವ್ಯಾಪ್ತಿಯಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆ ಗ್ರಾಮಪಂಚಾಯಿತಿ            ಆಯ್ಕೆಯಾಗಿದೆ. ಈ ಗ್ರಾಮವನ್ನು ಆದರ್ಶ ಗ್ರಾಮವಾಗಿ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಎಲ್ಲಾ ಇಲಾಖೆಗಳು ಈ ಗ್ರಾಮಗಳ ಪರಿಶೀಲನೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಿವೆ. ಒಟ್ಟಾರೆ ಈ  ಗ್ರಾಮ ಸಂಪೂರ್ಣವಾಗಿ  ಅಭಿವೃದ್ಧಿಗೊಂಡು ಆದರ್ಶ ಗ್ರಾಮವಾಗಲಿದೆ.
     ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ 14.10 ಲಕ್ಷ ರೂ. ವೆಚ್ಚದಲ್ಲಿ 15,600 ಸಸಿಗಳನ್ನು ನೆಡಲು ಯೋಜಿಸಲಾಗಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಒಟ್ಟು 85.37 ಲಕ್ಷ ರೂ. ಗಳ ವೆಚ್ಚದಲ್ಲಿ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆ, ಎರೆಹುಳುಗೊಬ್ಬರ/ ಜೀವಸಾರ ಘಟಕ ತಯಾರಿಕಾ ಘಟಕ, ಹಸಿರು ಮನೆ ನಿರ್ಮಾಣ, ಕೃಷಿ ಉಪಕರಣಗಳಿಗೆ ಸಹಾಯಧನ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ, ಕೃಷಿ ಉಪಕರಣಗಳಿಗೆ ಸಹಾಯಧನ, ಅಂಗಾಂಶ ಕೃಷಿ ಬಾಳೆಗೆ ಹನಿ ನೀರಾವರಿ ಉಪಕರಣಗಳ ಅಳವಡಿಕೆಗೆ ಸಹಾಯಧನ, ನೀರಿನ ಕೊರತೆಯಿಂದ ಮತ್ತು ಕೀಟ/ ರೋಗಗಳಿಂದ ಹಾನಿಗೊಳಗಾದ ತೆಂಗಿನ ತೋಟಗಳ ಪುನಶ್ಚೇತನಕ್ಕೆ ಸಹಾಯಧನ, ಆಧುನಿಕ ಬೇಸಾಯ ಕ್ರಮಗಳನ್ನುಅಳವಡಿಸಿ ಅಂಗಾಂಶ ಕೃಷಿ ಬಾಳೆಯನ್ನು ಅಭಿವೃದ್ಧಿ ಪಡಿಸಲು ಸಹಾಯಧನ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮನೆಗಳ ಮುಂದೆ ಹಾಗೂ ಶೌಚಾಲಯದ ಸುತ್ತ ಗಿಡ ನೆಡಲು ಕ್ರಿಯಾ ಯೋಜನೆ ಸಿದ್ದವಾಗಿದೆ.
     ಸಮಗ್ರ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಿಂದ ಬಾಕಿ ಇರುವ 62 ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗುವುದು. 32 ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ರೂ 5000 ದಂತೆ ಸುತ್ತು ನಿಧಿ ವಿತರಣೆ. ವಿಪರೀತ ತೂಕ ಕಡಿಮೆ ಇರುವ 7 ಮಕ್ಕಳಿಗೆ ಹಾಲು ಮೊಟ್ಟೆ ಔಷಧಿಯನ್ನು ನೀಡಲಾಗುತ್ತಿದೆ.
     ಪಂಚಾಯತ್ ರಾಜ್ ತಾಂತ್ರಿಕ ವಿಭಾಗ ಕೆ.ಆರ್.ನಗರ ಹಾಗೂ ಹೆಚ್.ಡಿ.ಕೋಟೆ ವತಿಯಿಂದ ನೀರು ಸರಬರಾಜು ಯೋಜನೆ ಹಾಗೂ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿ.ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  778 ಲಕ್ಷ ರೂ. ವೆಚ್ಚದಲ್ಲಿ ಗ್ರಾಮಗಳ ವಿವಿಧ ಭಾಗದ ಒಟ್ಟು 38900 ಮೀಟರ್ ಉದ್ದದ ಕಾಂಕ್ರೀಟ್ ಚರಂಡಿ ಹಾಗೂ 1561 ಲಕ್ಷ ರೂ.ಗಳಲ್ಲಿ ಗ್ರಾಮಗಳ ವಿವಿಧ ಭಾಗದ 22300 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಗಾಗಿ ಯೋಜನೆ ರೂಪಿಸಲಾಗಿದೆ.
     ಇಲಾಖೆ ವತಿಯಿಂದ ಈಗಾಗಲೇ ವಿವಿಧ ಲೆಕ್ಕ ಶೀರ್ಷಿಕೆ ಯೋಜನೆಯಡಿ 2014-15 ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು, ಜಿಲ್ಲಾ ಪಂಚಾಯತ್ ಕಾರ್ಯಕ್ರಮ, ಶಾಸಕರ ಹಾಗೂ ಸಂಸದ್ ಸದಸ್ಯರ ಅನುದಾನ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾಗೂ ತಾಲ್ಲೂಕು ಪಂಚಾಯಿತಿ ಯೋಜನೆಯಡಿ 55 ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದು 140.83 ಲಕ್ಷ ರೂ. ವೆಚ್ಚಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಯೋಜನೆಯಡಿ 6.33 ಲಕ್ಷ ರೂ. ಗಿರಿಜನ ಉಪಯೋಜನೆಯಡಿ 17.50 ಲಕ್ಷ ರೂ., ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 30.27 ಲಕ್ಷ ರೂ., ವಿಧಾನ ಪರಿಷತ್ ಸದಸ್ಯರ ಯೋಜನೆಯಡಿ 8.66 ಲಕ್ಷ ರೂ., ಸ್ಥಳೀಯ ಲೋಕಸಭಾ ಸದಸ್ಯರ ಅನುದಾನದಲ್ಲಿ 11.50 ಲಕ್ಷರೂ., ತಾಲ್ಲೂಕು ಪಂಚಾಯಿತಿ  ಅನುದಾನದಲ್ಲಿ 16.14 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
     ಬಿ.ಮಟಕೆರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3137 ಪರಿಶಿಷ್ಟ ಜಾತಿ ಹಾಗೂ 2299 ಪರಿಶಿಷ್ಟ ವರ್ಗದ ಜನ ಸಂಖ್ಯೆ ಇದ್ದು, 2 ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ.
     441 ಜೇನು ಕುರುಬ, 188 ಕಾಡು ಕುರುಬ ಹಾಗೂ 63 ಸೋಲಿಗ ಕುಟುಂಬಗಳಿದ್ದು, ಇವರಿಗೆ 2014-15 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ನಾಡಹಾಡಿ ಹಾಗೂ ಕಬ್ಬೆಪುರ ಹಾಡಿಯ ರಸ್ತೆ ಸಂಪರ್ಕ, ಚರಂಡಿ ಹಾಗೂ ಕುಡಿಯವ ನೀರಿಗಾಗಿ ತಲಾ 15 ಲಕ್ಷ ರೂ. ನಿಗಧಿಪಡಿಸಲಾಗಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ.
     ಖಾದಿ ಗ್ರಾಮೋದ್ಯೋಗ ಇಲಾಖೆಯಿಂದ 2.50 ಲಕ್ಷ ರೂ. ಗಳಲ್ಲಿ ವೃತ್ತಿ ನಿರತ ಕುಶಲಕರ್ಮಿಗಳೀಗೆ ಉಪಕರಣಗಳ ಖರೀದಿ, 3 ಲಕ್ಷ ರೂ. ವೆಚ್ಚದಲ್ಲಿ ವೃತ್ತಿನಿರತ ಕುಶಲ ಕರ್ಮಿಗಳಿಗೆ ವೃತ್ತಿ ಮುಂದುರೆಸಲು ಯೋಜನಾ ವೆಚ್ಚದ ಮೇಲೆ ಶೇ 60 ರಷ್ಟು ಅಥವಾ ರೂ 10,000/- ಸಹಾಯಧನ, 15 ಲಕ್ಷ ರೂ. ವೆಚ್ಚದಲ್ಲಿ ಕೈಗಾರಿಕಾ ಸೇವಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. 15 ಲಕ್ಷ ರೂ. ವೆಚ್ಚದಲ್ಲಿ ಸೇವಾ ಚಟುವಟಿಕೆ ಪ್ರೋತ್ಸಾಹ, ರೂ. 2.50 ಲಕ್ಷದಲ್ಲಿ ಆಧುನಿಕ/ ತಾಂತ್ರಿಕ ತರಬೇತಿ, ರೂ 45 ಲಕ್ಷದಲ್ಲಿ ಕುಶಲಕರ್ಮಿಗಳಿಗೆ ವಸತಿ ಕಾರ್ಯಗಾರ ಕೈಗೊಳ್ಳಲು ಯೋಜನೆ ರೂಪಿಸಿದೆ.
     ಪಶು ಸಂಗೋಪನಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಒಟ್ಟು 200 ಮಿಶ್ರತಳಿ ಹಸುಗಳನ್ನು ಒದಗಿಸಲಾಗುವುದು. ಘಟಕದ ಒಟ್ಟು ವೆಚ್ಚ 1.40 ಕೋಟಿ ರೂಗಳಾಗಿರುತ್ತದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ರೈತರಿಗೆ ಒಟ್ಟು 200 ಮಿಶ್ರ ತಳಿ ಹಸುಗಳನ್ನು ನೀಡುವುದು, ಘಟಕದ ಒಟ್ಟು ವೆಚ್ಚ 70 ಲಕ್ಷ ರೂಗಳಾಗಿರುತ್ತದೆ. 1 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಕುರಿ ಸಾಕಾಣಿಕೆಗೆ ನೆರವು, 50 ಲಕ್ಷ ರೂ. ವೆಚ್ಚದಲ್ಲಿ ಹಿಂದುಳಿದ ವರ್ಗದ ರೈತರಿಗೆ ಕುರಿ ಸಾಕಾಣಿಕೆಗೆ ನೆರವು, 50 ಸಾವಿರ ರೂ ವೆಚ್ಚದಲ್ಲಿ ಗಿರಿರಾಜ ಕೋಳಿ ಸಾಕಾಣಿಕೆಗೆ ನೆರವು, 20 ಲಕ್ಷ ರೂ ವೆಚ್ಚದಲ್ಲಿ ಮೇವಿನ ತಾಕುಗಳ ನಿರ್ಮಾಣ ಹಾಗೂ 30 ಸಾವಿರ ರೂ. ವೆಚ್ಚದಲ್ಲಿ ಹೈನುಗಾರಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡಲು ವಿವಿಧ ಇಲಾಖೆಯೊಂದಿಗೆ ಯೋಜನೆ ರೂಪಿಸಿದೆ.
     ಇದೇ ರೀತಿ ಕೃಷಿ ಹಾಗೂ ಶಿಕ್ಷಣ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸಿದ್ಧತೆ ನಡೆಸುತ್ತಿದ್ದು, ಬಿ.ಮಟಕೆರೆಯಾಗಲಿದೆ ಆದರ್ಶ ಗ್ರಾಮ.

                          
                                     
ಪೊಲೀಸ್ ಠಾಣೆಯಲ್ಲಿರುವ ವಾಹನಗಳನ್ನು ಪಡೆದುಕೊಳ್ಳಲು ಮಾಲೀಕರಿಗೆ ಮನವಿ
ಮಂಡ್ಯ, ಮಾ. ನಾಗಮಂಗಲ
ಟೌನ್ ಪೊಲೀಸ್ ಠಾಣೆಯಲ್ಲಿ ವಿವಿಧ ಮಾದರಿ 18 ದ್ವಿಚಕ್ರ ವಾಹನಗಳಿದ್ದು, ಮಾಲೀಕರು ಪತ್ತೆ ಆಗದಿರುವುದರಿಂದ ವಿಲೇವಾರಿಯಾಗದೆ ನಿಂತಿವೆ. ಈ ವಾಹನಗಳ ಮಾಲೀಕರು ವಾಹನಗಳ ಆರ್.ಸಿ. ದಾಖಲಾತಿಗಳನ್ನು ವಾಹನ ಪಡೆದುಕೊಳ್ಳಬಹುದು ಎಂದು ನಾಗಮಂಗಲ ಟೌನ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನಗಳ ವಿವರ ಇಂತಿದೆ.
ಸಿಕೆಎನ್ 8291 ಟಿವಿಎಸ್ 50, ಕೆಎ 09 ಆರ್ 2671 ಕಿನೆಟಿಕ್, ಕೆಎ02 ಆರ್ 5375 ಟಿವಿಎಸ್ ಎಕ್ಸ್‍ಎಲ್ 50, ಕೆಎ 03 ಇ 4859 ಟಿವಿಎಸ್ ಎಕ್ಸ್‍ಎಲ್ 50, ಕೆಎ09 ಇ 3047 ಕಿನೆಟಿಕ್ ಲೂನಾ ಸೂಪರ್, ಕೆಎ 05 ಇಬಿ 6624 ಟಿವಿಎಸ್ ವಿಕ್ಟರ್ ಜಿ.ಎಲ್, ಕೆಎ 02 ವಿ 8340 ಟಿವಿಎಸ್ ಚಾಂಪ್, ಸಿಕೆಡಿ 6381 ಟಿವಿಎಸ್ ಎಕ್ಸ್‍ಎಲ್, ಕೆಎ 01 ಇಜೆ 9181 ಟಿವಿಎಸ್ ಎಕ್ಸ್‍ಎಲ್ ಹೆವಿಡ್ಯೂಟಿ, ಕೆಎ 14 ಜೆ 897 ಹೀರೋ ಹೊಂಡಾ ಸಿಡಿ100, ಕೆಎ 02 ಇವಿ 9427 ಬಜಾಜ್ ಸಿಟಿ 100, ಕೆಎ 02 ಜೆ 4202 ಹೀರೋ ಹೊಂಡಾ ಸಿಡಿ 100 ಡಿಲೆಕ್ಸ್, ಕೆಎ 45 ಕೆ 7641 ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್, ಕೆಎ 02 ಇಯು 886 ಟಿವಿಎಸ್ ವಿಕ್ಟರ್ ಜಿ.ಎಕ್ಸ್, ಕೆಎ 51 ಎಲ್ 8115 ಬಜಾಬ್ ಪಲ್ಸರ್ 150, ಕೆಎ 41 ಹೆಚ್ 1624 ಟಿವಿಎಸ್ ಸ್ಟಾರ್‍ಸಿಟಿ ಡಿಎಲ್‍ಎಕ್ಸ್, ಕೆಎ 20 ಡಬ್ಲ್ಯು 5149 ಹೊಂಡಾ ಆಕ್ಟೀವಾ, ರಿಜಿಸ್ಟ್ರೇಷನ್ ಇಲ್ಲದ ಒಂದು ಟಿವಿಎಸ್ ಚಾಂಪ್.
ಈ ವಾಹನಗಳ ಮಾಲೀಕರು ಹೆಚ್ಚಿನ ಮಾಹಿತಿಗಾಗಿ ನಾಗಮಂಗಲ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ತರಬೇತಿ
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ‘ಕರಾಮುವಿ’ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮುಂದಿನ ಮೇ ತಿಂಗಳ ಕೊನೆಯ ವಾರದಲ್ಲಿ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ ನೀಡಲು ನಿರ್ಧರಿಸಲಾಗಿದೆ.
ತರಬೇತಿಯಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಸಾಮಾನ್ಯ ಅಧ್ಯಯನ ವಿಷಯಗಳಿಗೆ ಆದ್ಯತೆ ನೀಡಲಾಗುವುದು. ದಾಖಲಾತಿ ಅವಧಿಯನ್ನು ದಿನಾಂಕ: 10.04.2015ರ ವರೆÀಗೆ ವಿಸ್ತರಿಸಲಾಗಿದ್ದು,ಆಸಕ್ತರು ಈ ದಿನಾಂಕಗೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆ ಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 0821-2515944 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.
*****
ಕರ್ನಾಟಕದಲ್ಲಿ ಹತ್ತು ಸಾವಿರ ಕೋಟಿ ವೆಚ್ಚದ ರಸ್ತೆ ಯೋಜನೆಗಳು ಶೀಘ್ರ ಆರಂಭ : ನಿತಿನ್ ಗಡ್ಕರಿ

ಬೆಂಗಳೂರು.

ಕರ್ನಾಟಕದಲ್ಲಿ ಸುಮಾರು ಹತ್ತು ಸಾವಿರ ಕೋಟಿ ವೆಚ್ಚದ ಪ್ರಸ್ತಾವಿತ ಹತ್ತು ರಸ್ತೆ ಯೋಜನೆಗಳು ಡಿಸೆಂಬರ್ 2015 ಒಳಗೆ ಆರಂಭಗೊಳ್ಳಲಿವೆ. ಇದುವರೆಗೆ ರಸ್ತೆ ಸಾರಿಗೆ ಸಚಿವಾಲಯ ರಾಜ್ಯದಲ್ಲಿ 8263 ಕೋಟಿ ರೂಪಾಯಿ ವೆಚ್ಚದ 1196.47 ಕಿ.ಮಿ ವಿಸ್ತೀರ್ಣದ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿಗಳುಮತ್ತು ನೌಕಾಯಾನ ಸಚಿವ ಶ್ರೀ ನಿತಿನ ಗಡ್ಕರಿ ಹೇಳಿದ್ದಾರೆ .                 

ಅವರು ಬೆಂಗಳೂರಿನಲ್ಲಿ ಇಂದು ಬಿಜಾಪುರ-ಗುಲ್ಬರ್ಗಾ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ವಿಭಾಗ-218 (ನೂತನ ಎನ್ ಹೆಚ್ 50) ರ ಅಗಲೀಕರಣ ಮತ್ತು ಅಭಿವೃದ್ಧಿ  ಹಾಗೂ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಪುರ-ಚಿಂತಾಮಣಿ- ಮುಳುಬಾಗಲು ರಾಷ್ಟ್ರೀಯ ಹೆದ್ದಾರಿ ವಿಭಾಗ-234 (ನೂತನ ಎನ್ ಹೆಚ್ 69) ರ ಅಗಲೀಕರಣ ಮತ್ತು ಪುರ್ನವಸತಿ ಯೋಜನೆಗಳಿಗೆ ಶಂಕುಸ್ಥಾಪನೆಗೈದು ಮಾತನಾಡಿದರು.

ಹೊಸಪೇಟೆ-ಚಿತ್ರದುರ್ಗಾ-ಎನ್‍ಹೆಚ್-13, ಹೊಪೇಟೆ-ಬಳ್ಳಾರಿ-ಕರ್ನಾಟಕ-ಆಂಧ್ರಪ್ರದೇಶ ಗಡಿ- ಎನ್‍ಹೆಚ್-63, ಹಾಸನ-ಬಿಸಿರೋಡ್ ಎನ್‍ಹೆಚ್-48, ಶಿವಮೊಗ್ಗ-ಮಂಗಳೂರು- ಎನ್‍ಹೆಚ್-13, ಅಂಕೋಲ-ಹುಬ್ಬಳ್ಳಿ- ಎನ್‍ಹೆಚ್-64, ಹುಬ್ಬಳ್ಳಿ-ಹೊಸಪೇಟೆ- ಎನ್‍ಹೆಚ್—63, ಬಿಜಾಪುರ-ಗುಲ್ಬರ್ಗಾ-ಹೋಮ್ನಾಬಾದ್- ಎನ್‍ಹೆಚ್-218, ತಮಿಳುನಾಡು ಗಡಿ/ದಿಂಡಿಕಲ್-ಬೆಂಗಳೂರು- ಎನ್‍ಹೆಚ್-209, ನೆಲಮಂಗಲ-ತುಮಕೂರು( 6ಲೇನ್) ಎನ್‍ಹೆಚ್—4, ಚಿತ್ರದುರ್ಗ-ಹಾವೇರಿ(6 ಲೇನ್) - ಎನ್‍ಹೆಚ್-4 ಇವು ಕರ್ನಾಟಕದ ಹತ್ತು ಪ್ರಸ್ತಾವಿತ ರಸ್ತೆ ಯೋಜನೆಗಳಾಗಿವೆ. ಬೆಂಗಳೂರು ಮತ್ತು ಚೆನ್ನೈ ಎರಡು ಮೆಟ್ರೋ ನಗರಗಳನ್ನು ಜೋಡಿಸುವ ಎಕ್ಸೆಪ್ರೆಸ್ ಹೈವೆಯೊಂದನ್ನು ಆರಂಭಿಸುವ ಯೋಚನೆ ಸಚಿವಾಲಯಕ್ಕಿದೆ ಎಂದು ಸಚಿವರು ಹೇಳಿದರು.

ದೇಶದಲ್ಲಿ ಒಳನಾಡು ಜಲಮಾರ್ಗಗಳನ್ನು ಆರಂಭಿಸುವಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸುಮಾರು 101 ನದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ‘ಸ್ವಚ್ಛ ಭಾರತ- ಹೊಗೆ ಮುಕ್ತ ಭಾರತ’ದ ಗುರಿ ಸಾಧನೆಗಾಗಿ ಬಸ್ಸುಗಳಲ್ಲಿ ಜೈವಿಕ ಡಿಸೇಲ್ ಬಳಕೆಯನ್ನು ಕಡ್ಡಾಯಗೊಳಿಸುವ ಕುರಿತು ಸಚಿವಾಲಯ ಯೋಚಿಸುತ್ತದೆ ಎಂದು ಸಚಿವರು  ತಿಳಿಸಿದರು.

ಕೇಂದ್ರ ಕಾನೂನು ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಮಾತನಾಡಿ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಎಲ್ಲ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದರು.

ಶ್ರೀ. ಜಿ.ಎಮ್ ಸಿದ್ದೇಶ್ವರ, ರಾಜ್ಯ ಸಚಿವರು, ಬೃಹತ್, ಉದ್ದಿಮೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು, ಶ್ರೀ. ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕರು, ಶ್ರೀ. ಎನ್ .ಹೆಚ್ ಶಿವಶಂಕರ ರೆಡ್ಡಿ, ಉಪ ಸಭಾಪತಿ, ಕರ್ನಾಟಕ ವಿಧಾನಸಭೆ, ಡಾ. ಹೆಚ್.ಸಿ ಮಹದೇವಪ್ಪ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ, ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲುಕೊಪ್ಪಲು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಕುಟುಂಬದ ಮೇಲೆ ಹೆಜ್ಜೇನು ದಾಲಿ ನಡೆಸಿದ ಪರಿಣಾಮವಾಗಿ ರೈತ ಚಿಕ್ಕೇಗೌಡರ ಮಗನಾದ ಸ್ವಾಮೀಗೌಡ(38) ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡಿರುವ ಸ್ವಾಮೀಗೌಡರ ಪತ್ನಿ ಮೀನಾಕ್ಷಿ ಮತ್ತು ಪುತ್ರ ಚಂದ್ರಶೇಖರ್ ಚನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೆ 5ಗಂಟೆಯ ಸಮಯದಲ್ಲಿ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸ್ವಾಮೀಗೌಡರ ಕುಟುಂಬದ ಮೇಲೆ ಏಕಾಏಕಿ ಹೆಜ್ಜೇನಿನ ಹಿಂಡು ದಾಳಿ ನಡೆಸಿತು. ತೀವ್ರವಾಗಿ ಗಾಯಗೊಂಡಿದ್ದ ಸ್ವಾಮೀಗೌಡರು ಸಮೀಪದ ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಮೃತರಾದರೆ ಮೀನಾಕ್ಷಿ(28) ಮತ್ತು ಚಂದ್ರಶೇಖರ್(12) ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಗ್ಗೆ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಬಡರೈತ ಕುಟುಂಬಕ್ಕೆ ಸೇರಿದ ಸ್ವಾಮೀಗೌಡ ಅವರ ಅಕಾಲಿಕ ಸಾವಿನಿಂದ ಇಡೀ ಕುಟುಂಬವು ಕಂಗಾಲಾಗಿದೆ. ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿ ಸ್ವಾಮೀಗೌಡರ ಕುಟುಂಬಕ್ಕೆ 5ಲಕ್ಷರೂ ಪರಿಹಾರ ನೀಡಬೇಕು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಾಸಲು ಈರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೃಷ್ಣರಾಜಪೇಟೆ. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕಲ್‍ನ ಸಿವಿಲ್’ಎಂಜಿನಿಯರಿಂಗ್  ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ  ತಾಲೂಕಿನ ರಾಜಘಟ್ಟದ ಕೆಂಪೇಗೌಡರ ಪುತ್ರ ಪುನೀತ್ ತೊಣ್ಣೂರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾನೆ.
ನಿನ್ನೆ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಪಾಲಿಟೆಕ್ನಿಕಲ್‍ಗೆ ಸಾಂದರ್ಭಿಕ ರಜೆಯನ್ನು ನೀಡಲಾಗಿತ್ತು. ರಜೆಯ ಮಜೆಯನ್ನು ಸವಿಯಲು ತನ್ನ ಸ್ನೇಹಿತರೊಂದಿಗೆ ತೊಣ್ಣೂರು ಕೆರೆಗೆ ಹೋದ ಪುನೀತ್ ತನ್ನ ಸ್ನೇಹಿತರ ಗುಂಪಿನೊಂದಿಗೆ ಈಜಲು ಕೆರೆಗೆ ಇಳಿದಿದ್ದಾಗ ಕೈಗೆ ಸಿಕ್ಕ ಹಗ್ಗದ ತುಂಡನ್ನು ಹಿಡಿದುಕೊಂಡು ಗಾಬರಿಗೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತನ್ನ ಸಹಪಾಟಿಗಳು ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾದ ಪುನೀತ್ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಈಜುಗಾರರು ಮತ್ತು ಅಗ್ನಿಶಾಮಕ ಠಾಣೆಯ ನೆರವಿನಿಂದ ಶವವನ್ನು ನೀರಿನಿಂದ ಹೊರಕ್ಕೆ ತೆಗೆಯಲಾಯಿತು. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತರ ತಂದೆ-ತಾಯಿಗಳಿಗೆ ಶವವನ್ನು ಹಸ್ತಾಂತರ ಮಾಡಲಾಯಿತು.
ಸಂಸದ ಸಿ.ಎಸ್.ಪುಟ್ಟರಾಜು, ಸರ್ಕಾರಿ ಪಾಲಿಟೆಕ್ನಿಕಲ್ ಪ್ರಾಂಶುಪಾಲ ಎನ್.ಡಿ.ವಿವೇಕಾನಂದ, ಸಿವಿಲ್ ವಿಭಾಗದ ಮುಖ್ಯಸ್ಥರಾದ ನಾಗೇಶ್, ಎನ್.ಎಸ್.ಎಸ್ ಅಧಿಕಾರಿ ವಿಶ್ವರಾಜು ಮೃತನ ತಂದೆತಾಯಿಗಳಿಗೆ ಸಾಂತ್ವನ ಹೇಳಿದರು.

Monday 30 March 2015

ಕೃಷ್ಣರಾಜಪೇಟೆ. ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರವು ನಿರ್ಣಾಯಕವಾಗಿದೆ. ಸಾಮಾಜಿಕ ಅಪರಾಧೀಕರಣವನ್ನು ತಡೆಯಲು, ಜನಸಾಮಾನ್ಯರಲ್ಲಿ ಅರಿವಿನ ಜಾಗೃತಿಯ ಹಣತೆಯನ್ನು ಬೆಳಗಲು ಮಾಧ್ಯಮಗಳು ಮತ್ತು ಪತ್ರಿಕೆಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿವೆ. ಯುವ ಪತ್ರಕರ್ತರು ಸಮಾಜಮುಖಿ ಕಾಳಜಿಯನ್ನು ಇಟ್ಟುಕೊಂಡು ಸಮಸ್ಯೆಗಳ ಅನಾವರಣಕ್ಕೆ ಕೆಲಸ ಮಾಡಿ ಪತ್ರಿಕಾ ಧರ್ಮವನ್ನು ಎತ್ತಿಹಿಡಿಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅಪರಾಧಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಆನಂದ್ ಹೇಳಿದರು.
ಅವರು ಇಂದು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (ಸಿಪಿಜೆ) ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆಗೆ ಮಾನಸಿಕ ಅರಿವು ಪ್ರಚಾರಕ್ಕೆ ಮಾಧ್ಯಮಗಳ ಪಾತ್ರ ಕುರಿತು ಆಯೋಜಿಸಿದ್ದ ವಿಭಾಗ ಮಟ್ಟದ ವಿಚಾರಸಂಕಿರಣದಲ್ಲಿ ತಮಗೆ ನೀಡಿದ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾ ಪ್ರಪಂಚದ ಜಾಗತಿಕ ಜಗತ್ತಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪತ್ರಿಕೋದ್ಯಮವು ಮಾತ್ರ ತನ್ನ ಗಟ್ಟಿತನವನ್ನು ಬಿಟ್ಟುಕೊಟ್ಟಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಜನರು ಪತ್ರಿಕೆಗಳನ್ನು ಓದಿ ವಿಧ್ಯಮಾನಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ತಮ್ಮ ದಿನಚರಿಯೇ ಆರಂಭವಾಗುವುದಿಲ್ಲ. ಪತ್ರಿಕೆಗಳು ಸಮಸ್ಯೆಗಳ ಮೇಲೆ ಬೆಳಕನ್ನು ಚೆಲ್ಲಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಹಾಗೂ ಸರ್ಕಾರದ ಯೋಜನೆಗಳ ಫಲವು ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ ನ್ಯಾಯದ ಪರವಾಗಿ ಕೆಲಸ ಮಾಡುತ್ತಿವೆ. ಯುವ ಪತ್ರಕರ್ತರು ಸಮಾಜಮುಖಿಯಾಗಿ ಹೆಜ್ಜೆಯನ್ನು ಹಾಕಿ, ಪತ್ರಿಕಾಧರ್ಮವನ್ನು ಉಳಿಸಿ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ನಡೆಸಲು ಸಿದ್ಧರಾಗಬೇಕು. ಲೇಖಲಿಯು ಖಡ್ಗಕ್ಕಿಂತಲೂ ಹರಿತ ಎಂಬ ಹಿರಿಯರ ಮಾತನ್ನು ಸತ್ಯವನ್ನಾಗಿಸುವ ನಿಟ್ಟಿನಲ್ಲಿ ವೃತ್ತಿಧರ್ಮವನ್ನು ಕಾಪಾಡಬೇಕು ಎಂದು ಕಿವಿಮಾತು ಹೇಳಿದ ಆನಂದ್ ಇಂದಿನ ದಿನಮಾನದಲ್ಲಿ ಅಪರಾಧಗಳನ್ನು ನಿಯಂತ್ರಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಿ ಮಾನಸಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಪ್ರಭಾವಶಾಲಿಯಾಗಿವೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ ಸರಿ-ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನ್ಯಾಯ, ನೀತಿ ಹಾಗೂ ಧರ್ಮದ ಹಾದಿಯಲ್ಲಿ ಸಾಗಿ ಆರೋಗ್ಯವಂತ ಸಮಾಜವನ್ನು  ಸಧೃಡವಾಗಿ ಕಟ್ಟುವ ದಾರಿಯಲ್ಲಿ ಸಾಗಲು ಯುವಜನಾಂಗವನ್ನು ಮಾಧ್ಯಮಗಳು ಹಾಗೂ ಪತ್ರಿಕೆಗಳು ದಾರಿ ದೀಪವಾಗಿವೆ ಎಂದು ಆನಂದ್ ಅಭಿಮಾನದಿಂದ ಹೇಳಿದರು.
ಇಂದಿನ ಯುವಜನಾಂಗವು ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ದಿಕ್ಕು ತಪ್ಪುತ್ತಿದೆ. ಹಾದಿ ತಪ್ಪುತ್ತಿರುವ ಯುವಜನಾಂಗವನ್ನು ಸರಿದಾರಿಯಲ್ಲಿ ಮುನ್ನಡೆಸಲು, ಸರಿ-ತಪ್ಪುಗಳನ್ನು ಮಾನಸಿಕವಾಗಿ ವಿಮರ್ಷೆ ಮಾಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲು ಸಮೂಹ ಮಾಧ್ಯಮಗಳು ಕೈಮಾರವಾಗಿವೆ. ಯುವಜನಾಂಗವು ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಗಳನ್ನು ಉಳಿಸಿ, ನ್ಯಾಯವನ್ನು ಕಾಪಾಡಲು ಪಣತೊಡಬೇಕು. ಗುರು-ಹಿರಿಯರಲ್ಲಿ ಭಕ್ತಿಭಾವವನ್ನು ಪ್ರದರ್ಶಿಸಬೇಕು. ನುಡಿದಂತೆ ನಡೆಯಬೇಕು, ನಡೆ-ನುಡಿಗಳೆರಡೂ ಒಂದೇ ಆಗಿರಬೇಕು. ನುಡಿದಂತೆ ನಡೆಯುವುದನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಗತಿಯ ದಕ್ಕಿನತ್ತ ಸಾಗಬೇಕು. ಸೋಲಿಗೆ ಹೆದರದೇ ಆತ್ಮವಿಶ್ವಾಸದಿಂದ ಮುನ್ನಡೆದು ಗೆಲುವು ಸಾಧಿಸಬೇಕು ಎಂದು ಆನಂದ್ ಕರೆ ನೀಡಿದರು.
ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಬಿ.ಆರ್.ಪಲ್ಲವಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಂತರೀಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಗಾಯಿತ್ರಮ್ಮ,  ಮತ್ತು ಕಾಲೇಜಿನ ಅಧೀಕ್ಷಕ ಬಿ.ಎ.ಮಂಜುನಾಥ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಗ್ನಿಶಾಮಕ ಠಾಣೆಯ ಅಧಿಕಾರಿ ನಿಂಗೇಗೌಡ, ಹಿರಿಯ ಪ್ರಾಧ್ಯಾಪಕರಾದ ಡಾ.ಟಿ.ಎಂ.ದೇವರಾಜು, ಗ್ರಂಥಪಾಲಕಿ ಪ್ರಮೋದಿನಿ, ಉಪನ್ಯಾಸಕರಾದ ಎನ್.ಪ್ರಕಾಶ್, ನಂಜುಂಡಯ್ಯ.ಡಿ,  ಕೆ.ರಾಘವೇಂದ್ರಗೌಡ, ಎಂ.ಆರ್.ಬಸವಲಿಂಗಪ್ಪ, ವಿಜಯಕುಮಾರ್, ಸಿಂಧೂಶ್ರೀ ಭಾಗವಹಿಸಿದ್ದರು.
ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಎಸ್.ನರೇಂದ್ರಪ್ರಸಾದ್ ಸ್ವಾಗತಿಸಿದರು, ಉಪನ್ಯಾಸಕರಾದ ಮಂಟ್ಯಾಸ್ವಾಮಿ ವಂದಿಸಿದರು, ಕುಮಾರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು.

ಮಂಡ್ಯ: ಯುವ ಸಮೂಹ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದುಶ್ಚಟದಿಂದ ದೂರ ಇರಬೇಕು ಎಂದು ಸಂಸದ ಸಿ.ಎಸ್. ಪುಟ್ಟರಾಜು ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಶ್ರೀ ಸೋಮೇಶ್ವರ ಕನ್ನಡ ಯುವಕ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವ ಸಮುದಾಯ ಅಪಾಯದ ಹಂಚಿನಲ್ಲಿದ್ದು, ನಿರ್ಧಿಷ್ಟ ಗುರಿ ಇಲ್ಲದೆ ತೊಳಲಾಟದಿಂದ ಬಳಲುತ್ತಿದ್ದು, ಸ್ಪಷ್ಟ ಆಲೋಚನೆ ಮತ್ತು ಗುರಿ ಸಾಧನೆಯೊಂದಿಗೆ ಮುನ್ನಡೆಸುವ ನೈತಿಕ ಶಿಕ್ಷಣ ಅವಶ್ಯಕತೆ ಇದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರುದ್ಯೋಗ ನಿವಾರಣೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇಂದಿನ ಯುವಜನರಲ್ಲಿ ಕೌಶಲ್ಯ ಚಟುವಟಿಕೆಗಳು ವಿರಳವಾಗಿವೆ. ಕುಶಲ ಕರ್ಮಿಗಳಾಗಿ ಬದುಕನ್ನು ಸಾಗಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಗ್ರಾಮೀಣ ಯುವ ಸಂಘಟನೆಗಳ ಗಣನೀಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಮತ್ತು ಭಾವೈಕ್ಯತೆ ನೆಲೆಸಲು ಯುವ ಸಂಘಟನೆ ಕಾರ್ಯಗಳು ಮುಂದಾಗಬೇಕೆಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಯುವಕರ ಮೇಲಿದ್ದು, ಪ್ರಸ್ತುತ ಯುವಕರ ಪಯಣ ಎತ್ತ ಸಾಗುತ್ತದೆ ಎಂದು ಚಿಂತಿಸಬೇಕಾಗಿದೆ ಎಂದರು.
ಎಲ್ಲರಿಗೂ ಮಾದರಿಯಾಗಿ ಸೋಮೇಶ್ವರ ಯುವಕ ಸಂಘವು ಯಾರ ಬಳಿಯೂ ಹಣ ಚಾಚದೆ, ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ನಾನು ವಿಶೇಷ ಆದ್ಯತೆ ನೀಡುತ್ತಿದ್ದೆ. ಗ್ರಾಮಗಳಲ್ಲಿ ನೈರ್ಮಲ್ಯ ಶುಚಿತ್ವ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಮುಂದೆಯೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕನಾಗಿರುತ್ತೇನೆ. ಗ್ರಾಮಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಪರ ಯೋಜನೆಗಳನು ಹಮ್ಮಿಕೊಳ್ಳಲು ಸಮಸ್ತ ನಾಗರೀಕರು ಸಹಕರಿಸಬೇಕೆಂದು ಕೋರಿದರು.
ಪಿಎಸ್‍ಎಸ್‍ಕೆ ಅಧ್ಯಕ್ಷ ನಂಜುಂಡೇಗೌಡ ಮಾತನಾಡಿ, ರಚನಾತ್ಮಕ ಯುವಜನ ಚಟುವಟಿಕೆಗಳಿಗೆ ಸದಾ ಮುಂದಾಗಿರುವ ಯುವ ಸಂಘಟನೆಗಳು ಅನ್ಯ ಮಾರ್ಗ ಹಿಡಿಯದೆ ಸುವ್ಯವಸ್ಥಿತವಾದಂತಹ ಮಾದರಿಯಲ್ಲಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ರಿಯಾತ್ಮಕ ಯುವಜನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವ ಬೆಳವಣಿಗೆಗೆ ಸಹಕಾರ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಮಂಗಲ ಎಂ. ಯೋಗೇಶ್ ಆದರ್ಶ ಸಂಸದರ ಗ್ರಾಮದಡಿ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯುವಕ ಸಂಘಗಳ ಮೂಲಕ ಮಾಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಅಧ್ಯಕ್ಷ ಮಹೇಶ್, ಮುಜರಾಯಿ ತಹಸೀಲ್ದಾರ್ ರಂಗನಾಥ್, ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಟಿ.ಎಂ. ದ್ಯಾವೇಗೌಡ, ಲೋಕೇಶ, ಮರೀಗೌಡ, ನಾಗಣ್ಣ, ಪಿ.ಸಿ. ಜಲೇಂದ್ರ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು, ಸಂಘದ ಅಧ್ಯಕ್ಷ ಟಿ.ಆರ್. ಶಂಕರ್, ಪಿ.ಡಿ. ಮಹದೇವ, ಟಿ.ಬಿ. ಅರುಣ, ಟಿ.ಎಲ್. ರಘು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಎಚ್. ಮೀನಾಕ್ಷಿ, ಟಿ.ಎಂ. ನಾಗರಾಜು ಅವ
ಮಂಡ್ಯ: ಮೈಷುಗರ್ ಬಾಯ್ಲರ್ ಬಳಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರನಿಗೆ ಬಿಸಿ ಹಬೆ ತಗುಲಿ ತೀವ್ರ ಸುಟ್ಟಗಾಯಗಳಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಗರದ ಎತ್ತಗದಹಳ್ಳಿ ಬೋರೆ ಬಡಾವಣೆಯ ತಿಮ್ಮೇಗೌಡ (42) ಎಂಬಾತನೇ ತೀವ್ರವಾಗಿ ಗಾಯಗೊಂಡಿರುವ ಗುತ್ತಿಗೆ ನೌಕರ.
ಕಳೆದ ಹಲವಾರು ವರ್ಷಗಳಿಂದ ಮೈಷುಗರ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೋರೇಗೌಡ ನಿನ್ನೆ ರಾತ್ರಿ ಬಾಯ್ಲರ್ ಬಳಿ ಕೆಲಸ ನಿರ್ವಹಿಸುವಾಗ ಆಕಸ್ಮಿಕವಾಗಿ ಬಿಸಿ ಹಬೆ ತಗುಲಿ ತೀವ್ರವಾಗಿ ಸುಟ್ಟಗಾಯಗಳಿಗೊಳಗಾದ. ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೈಷುಗರ್‍ನಲ್ಲಿ  ಕೂಲಿ ಕೆಲಸದಾಳುಗಳನ್ನು ಒದಗಿಸುವ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಬೋರೇಗೌಡ ಗಾಯಗೊಂಡ ಕಾರ್ಮಿಕ ತಿಮ್ಮೇಗೌಡನನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿ ನಂತರ ನಾಪತ್ತೆಯಾಗಿದ್ದಾರೆ. ಈವರೆವಿಗೂ ಅವರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿಲ್ಲ ಎಂದು ತಿಮ್ಮೇಗೌಡನ ಕಡೆಯವರು ಆರೋಪಿಸಿದ್ದಾರೆ.
ಕಾರ್ಖಾನೆ ಅಧಿಕಾರಿಗಳೂ ಸಹ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಸೌಜನ್ಯ ತೋರಿಲ್ಲ. ತೀವ್ರವಾಗಿ ಗಾಯಗೊಂಡಿರುವ ತಿಮ್ಮೇಗೌಡ ಕುಟುಂಬ ತೀರಾ ಬಡತನದಲ್ಲಿ ಬದುಕು ಸಾಗಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ.


ಮಂಡ್ಯದ ವಿಬ್‍ಸೆಟಿ ಸಭಾಂಗಣದಲ್ಲಿ ಸೋಮವಾರ 2015-16ನೇ ಸಾಲಿನ ‘ಮಂಡ್ಯ ಜಿಲ್ಲಾ ಕ್ರೆಡಿಟ್ ಪ್ಲಾನ್’ ಅನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದರು. ಆರ್.ಬಿ.ಐ. ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಸುಜಾತಾ ಶ್ರೀಕಂಠಯ್ಯ, ಮಂಡ್ಯ ಜಿಲ್ಲಾ ಮಾರ್ಗದರ್ಶಿ ಮ್ಯಾನೇಜರ್ ಜಿ. ಬಸವರಾಜಪ್ಪ, ನಬಾರ್ಡ್‍ನ ಬಿಂಧು ಮಾಧವ ವಡವಿ, ವಿಜಯಾ ಬ್ಯಾಂಕ್‍ನ ರೀಜನಲ್ ಮ್ಯಾನೇಜರ್ ದಯಾಕರಶೆಟ್ಟಿ ಇದ್ದಾರೆ.

ಮುಖ್ಯಾಂಶಗಳು:
- ಒಟ್ಟು ರೂ. 3353.29 ಕೋಟಿ ಸಾಲ ಯೋಜನೆ ಬಿಡುಗಡೆ
- ಆದ್ಯತಾ ವಲಯಕ್ಕೆ ರೂ. 3111.25 ಕೋಟಿ
- 2014g-15ನೇ ಸಾಲಿನ ಡಿಸೆಂಬರ್ ತಿಂಗಳಾಂತ್ಯಕ್ಕೆ ಶೇ 98ರಷ್ಟು ಸಾಧನೆ

2015-16ನೇ ಸಾಲು
ಒಟ್ಟು ರೂ. 3353.29 ಕೋಟಿ ಸಾಲ ಯೋಜನೆ ಬಿಡುಗಡೆ
ಮಂಡ್ಯ: 2015-16ನೇ ಸಾಲಿನ ‘ಮಂಡ್ಯ ಜಿಲ್ಲಾ ಸಾಲ ಯೋಜನೆ’ (ಮಂಡ್ಯ ಜಿಲ್ಲಾ ಕ್ರೆಡಿಟ್ ಪ್ಲಾನ್) ಅನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದರು.
ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್‍ನ ನಗರದ ವಿಬ್‍ಸೆಟಿ ಸಭಾಂಗಣದಲ್ಲಿ ಸೋಮವಾರ ಬ್ಯಾಂಕ್‍ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಒಟ್ಟು 3353.29 ಕೋಟಿ ರೂಪಾಯಿಯ ಸಾಲ ಯೋಜನೆಯನ್ನು ಅವರು ಬಿಡುಗಡೆಗೊಳಿಸಿದರು.
ಒಟ್ಟು ಸಾಲ ಯೋಜನೆಯಲ್ಲಿ ಆದ್ಯತಾ ವಲಯಕ್ಕೆ 3111.25 ಕೋಟಿ ರೂಪಾಯಿ ಹಾಗೂ ಇತರೆ ವಲಯಕ್ಕೆ ಒಟ್ಟು 242.04 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದರು.
ಆದ್ಯತಾ ವಲಯದ ಕೃಷಿ ಕ್ಷೇತ್ರಕ್ಕೆ ರೂ. 2069.95 ಕೋಟಿ ಒದಗಿಸಲಾಗಿದೆ. ಇದರಲ್ಲಿ ಬೆಳೆ ಸಾಲಕ್ಕೆ ರೂ. 1511.59 ಕೋಟಿ ಹಾಗೂ ಹೂಡಿಕೆ ಸಾಲಕ್ಕೆ ರೂ. 558.39 ಕೋಟಿ ಕಲ್ಪಿಸಲಾಗಿದೆ. ಇನ್ನು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಲಯಕ್ಕೆ ರೂ. 175.54 ಕೋಟಿ, ಇತರೆ ವಲಯಕ್ಕೆ ರೂ. 865.76 ಕೋಟಿ ಒದಗಿಸಲಾಗಿದೆ ಎಂದು ಹೇಳಿದರು.
ಈ ಒಂದು ಯೋಜನೆ ಸಂಪೂರ್ಣವಾಗಿ ಯಶಸ್ಸು ಕಾಣಬೇಕೆಂದರೆ ಬ್ಯಾಂಕ್‍ಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸಾಲ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ನಬಾರ್ಡ್‍ನ ಬಿಂಧು ಮಾಧವ ವಡವಿ ಮಾತನಾಡಿ, 2014-15ನೇ ಸಾಲಿನ ಡಿಸೆಂಬರ್ ತಿಂಗಳಾಂತ್ಯಕ್ಕೆ ಆದ್ಯತಾ ವಲಯದಲ್ಲಿ ಶೇ 98ರಷ್ಟು ಸಾಧನೆ ಆಗಿದೆ ಎಂದರು.
ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಶೇ 35, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಯಲಕ್ಕೆ ಶೇ 4 ಹಾಗೂ ಇತರೆ ವಲಯಕ್ಕೆ ಶೇ 25ರಷ್ಟು ಹೆಚ್ಚಿನ ಹಣ್ಣವನ್ನು ಕಲ್ಪಿಸಲಾಗಿದೆ. ಒಟ್ಟಾರೆ, ಆದ್ಯತಾ ವಲಯಕ್ಕೆ ಶೇ 25ರಷ್ಟು ಹೆಚ್ಚಿನ ಹಣ ನೀಡಲಾಗಿದೆ ಎಂದು ಹೇಳಿದರು.
ಆದ್ಯತಾ ವಲಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಶೇ 61, ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಶೇ 13, ಸಹಕಾರ ಕ್ಷೇತ್ರದ ಬ್ಯಾಂಕ್‍ಗಳಿಗೆ ಶೇ 25 ಹಾಗೂ ಕೆ.ಎಸ್.ಎಫ್.ಸಿ.ಗೆ ಶೇ 1ರಷ್ಟು ಹಣವನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಜೀವ್‍ಗಾಂಧಿ ಚೈತನ್ಯ ಯೋಜನೆ, ನ್ಯಾಷನಲ್ ಲೈವ್ಲಿವುಡ್ ಮಿಷನ್ (ಎನ್.ಆರ್.ಎಲ್.ಎಂ) ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ 549.12 ಕೋಟಿ ರೂಪಾಯಿ ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳಿಂದ ಪ್ರಧಾನಮಂತ್ರಿ ಜನ್-ಧನ್ ಯೋಜನೆಯಡಿ ಶೇ 100ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಯನ್ನು ಹೊಂದಿವೆ ಎಂದರು.
ಹಣ ಹೊಂದಾಣಿಕೆ ಮಾಡದಂತೆ ಸೂಚನೆ:  ಸ್ವಚ್ಛ ಭಾರತ್ ಮಿಷನ್ (ಎಸ್‍ಬಿಎಂ) ಅಡಿಯಲ್ಲಿ ಶೌಚಾಲಯ ನಿಮಿಸಿಕೊಂಡ ಫಲಾನುಭವಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ಇತರೆ ಯಾವುದೇ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಸಿಇಒ ರೋಹಿಣಿ ಸಿಂಧೂರಿ ಸೂಚಿಸಿದರು.
ಆರ್.ಬಿ.ಐ. ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಸುಜಾತಾ ಶ್ರೀಕಂಠಯ್ಯ, ವಿಜಯಾ ಬ್ಯಾಂಕ್‍ನ ರೀಜನಲ್ ಮ್ಯಾನೇಜರ್ ದಯಾಕರಶೆಟ್ಟಿ, ಮಂಡ್ಯ ಜಿಲ್ಲಾ ಮಾರ್ಗದರ್ಶಿ ಮ್ಯಾನೇಜರ್ ಜಿ. ಬಸವರಾಜಪ್ಪ ಮತ್ತಿತರರು ಹಾಜರಿದ್ದರು.

ಮೈಸೂರು ಮಹಾನಗರ ಪಾಲಿಕೆ, ಮೈಸೂರು
ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವುದು ತ್ಯಾಜ್ಯ ಬೇರ್ಪಡಿಸುವಿಕೆ, ಮರುಬಳಕೆ ಒಳಗೊಂಡಂತೆ ತ್ಯಾಜ್ಯ ವಿಲೇವಾರಿ ಬಗ್ಗೆ ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು
 ಮಂಗಳವಾರ ಮಧ್ಯಾಹ್ನ 12:00 ಗಂಟೆಗೆ ಟೌನ್‍ಹಾಲ್, ದೊಡ್ಡಗಡಿಯಾರ, ಮೈಸೂರು ಇಲ್ಲಿ ಮಹಾನಗರ ಪಾಲಿಕೆ ವ್ಯಾಫ್ತಿಯ ವಲಯ ಕಛೇರಿ-8 ರ ವ್ಯಾಪ್ತಿಗೆ ಬರುವ ಪೌರಕಾರ್ಮಿಕರಿಗೆ ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಹಾಗೂ ತ್ಯಾಜ್ಯ ಬೇರ್ಪಡಿಸಿ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಕಾರ್ಯಾಗಾರದ ಮುಖ್ಯ ಉದ್ದೇಶ
ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವುದು.
ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣಕಸ ಎಂದು ಬೇರ್ಪಡಿಸಿ ಸಾರ್ವಜನಿಕರಿಂದ ಪಡೆಯುವುದು.
ವಿಂಗಡಿಸಿದ ಘನ ತ್ಯಾಜ್ಯವನ್ನು ಸೂಕ್ತರೀತಿಯಲ್ಲಿ ವಿಲೇಮಾಡುವುದು.
ಘನ ತ್ಯಾಜ್ಯ ವಿಂಗಡನೆ ಏಕೆ ಮಾಡಬೇಕು? : ವಿಧದ ಘನತ್ಯಾಜ್ಯ ಮಿಶ್ರವಾದಲ್ಲಿ ಅದರಿಂದ ಉತ್ಪಾದನೆಯಾಗುವ ವಿಷಯುಕ್ತ ಲೀಚೆಟ್ ದ್ರವ ಮತ್ತು ವಿಷಯುಕ್ತ ಗಾಳಿಯು ನಾವು ವಾಸಿಸುವ ಈ ಪರಿಸರಕ್ಕೆ ಅಂದರೆ ಉಸಿರಾಡುವ ಗಾಳಿ, ಕುಡಿಯುವ ನೀರು ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯುವ ಮಣ್ಣಿನಲ್ಲಿ ವಿಷಕಾರಕ ವಸ್ತುಗಳು ಸೇರಿಕೊಂಡು ಸಮಸ್ತ ಜೀವರಾಶಿಗೆ ಅಪಾಯ ಉಂಟಾಗುತ್ತದೆ.
ಮಿಶ್ರ ಘನತ್ಯಾಜ್ಯದಿಂದ ಸಮಸ್ತ ಜೀವರಾಶಿಗೆ ಅಪಾಯ ಹೇಗೆ ಉಂಟಾಗಿತ್ತದೆ? : ಮಿಶ್ರ ತ್ಯಾಜ್ಯವನ್ನು ಸುಡುವುದರಿಂದಲೂ ಸಹ ಗಾಳಿಯಲ್ಲಿ ವಿಷಯುಕ್ತ ಕಣಗಳು ಸೇರಿ ಉಸಿರಾಟದ ಸಮಸ್ಯೆ ಹಾಗೂ ಚರ್ಮ ರೋಗಗಳು ಉಂಟಾಗುತ್ತದೆ ಮತ್ತು ಗಾಳಿಯ ಮುಖಾಂತರ ಕುಡಿಯುವ ನೀರಿನ ಮೂಲಗಳಾದ ನದಿ, ಕೆರೆ ಮತ್ತು ಭಾವಿಗಳಲ್ಲಿ ಸೇರುತ್ತದೆ ಇದರಿಂದ ಸಮಸ್ತ ಜೀವರಾಶಿಗೆ ಅಪಾಯ  ಉಂಟಾಗುತ್ತಿದೆ.
ಹಸಿ ಕಸ ಮತ್ತು ಅದರ ನಿರ್ವಹಣೆ : ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ, ಕೊಳೆತ ತರಕಾರಿ/ಕೊಳೆತ ಹಣ್ಣು, ಮಾವಿನ ಹಣ್ಣಿನ ಗೊರಟು, ಉಪಯೋಗಿಸಿದ ಚಹದ ಬ್ಯಾಗ್‍ಗಳು, ಕಾಫಿ ಪುಡಿ, ಮೊಟ್ಟೆಯ ಸಿಪ್ಪೆ, ಹೂ/ಎಲೆಗಳು, ಹÁಳಾದ ಸಾಂಬಾರ ಪದಾರ್ಥಗಳು, ಕಸಗುಡಿಸಿದ ನೆಲದ ಧೂಳು, ಕೂದಲು ಮುಂತಾದವುಗಳನ್ನು ನೇರವಾಗಿ ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ನೀಡಿ. ಇವುಗಳಿಂದ ಅತ್ಯುತ್ತಮ ಗೊಬ್ಬರ ತಯಾರಿಸಬಹುದು. ಯಾವುದೇ ಕಾರಣಕ್ಕೂ ಇವುಗಳನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಹಾಕಿ ಕಟ್ಟಿ ಇಡಬಾರದು.

ಮಾಂಸ ಮತ್ತು ಉಳಿದ ಮಾಂಸದ ತುಣುಕುಗಳು, ಕೊಳೆತ ಮೊಟ್ಟೆ, ಮೂಳೆ, ಅವಧಿ ಮುಗಿದ ಆಹಾರ ಪದಾರ್ಥಗಳು ( ಬ್ರೆಡ್ ಬಿಸ್ಕೇಟ್ಸ್, ಸಿದ್ಧ ಆಹಾರ), ಬೆರಳಿನ ಉಗುರುಗಳು, ಉಳಿದಿರುವ ಆಹಾರ ಪದಾರ್ಥ ಮುಂತಾದವುಗಳಲ್ಲಿನ ನೀರಿನ ಆಂಶವನ್ನು ಬಸಿದು ನೇರವಾಗಿ ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ನೀಡಿ. ಇವುಗಳಿಂದ ಅತ್ಯುತ್ತಮ ಗೊಬ್ಬರ ತಯಾರಿಸಬಹುದು. ಯಾವುದೇ ಕಾರಣಕ್ಕೂ ಇವುಗಳನ್ನು ಪ್ಲಾಸ್ಟೀಕ್ ಕವರ್‍ಗಳಲ್ಲಿ ಹಾಕಿ ಕಟ್ಟಿ ಇಡಬಾರದು
ತೆಂಗಿನಕಾಯಿಯ ಕರಟ, ತೆಂಗಿನ ನಾರು, ತೆಂಗಿನ ಬುರುಡೆ ಮುಂತಾದವುಗಳನ್ನು ಉರುವಲುಗಳನ್ನಾಗಿ ಉಪಯೋಗಿಸಬಹುದು.
ಮನೆಗಳಲ್ಲಿ ಉತ್ಪಾದನೆಯಾಗುವ ಒಣ ಕಸ ಮತ್ತು ಅದರ ನಿರ್ವಹಣೆ: ನೆಲವರೆಸುವ ಕೋಲು ಮತ್ತು ಬಟ್ಟೆ, ಜೀರ್ಣಾವಸ್ಥೆಗೆ ತಲುಪಿದ ಕಾಲು ವರೆಸುವ ಮ್ಯಾಟ್‍ಗಳು, ಪಾಯಿಕಾನೆ ತೊಳೆಯಲು ಉಯೋಗಿಸಿದ ಬ್ರಶ್‍ಗಳು, ಸ್ಕಬ್ಬರ್‍ಗಳು, ಹಲ್ಲಿನ ಬ್ರಶ್‍ಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ಹಾಲು, ಮೊಸರಿನ ಪ್ಯಾಕ್‍ಗಳು, ಬೆಣ್ಣೆ ಕಟ್ಟಲು ಬಳಸಲಾಗುವ ಪೇಪರ್, ತುಪ್ಪ/ಎಣ್ಣೆ ಪ್ಯಾಕ್‍ಗಳು, ಎಣ್ಣೆ ಕ್ಯಾನುಗಳು, ಸುಂಗಧ ದ್ರವ್ಯದ ಹಾಗೂ ಶಾಂಪು ಬಾಟಲಿಗಳು, ಟೆಟ್ರಾ ಪ್ಯಾಕ್‍ಗಳು, ತುಪ್ಪ, ಜಾಮ್‍ಗಳ ಶೇಖರಿಸಿದ ಅಲ್ಯುಮೀನಿಯಂ ಕವರ್‍ಗಳು ಮುಂತಾದವುಗಳನ್ನು ಚನ್ನಾಗಿ ತೊಳೆದು ಒಣಗಿಸಿ ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ಉಪಯೋಗಿ¸ಸಿದ ಟ್ಯೂಬ್, ಶೇವಿಂಗ್ ಕ್ರೀಮ್ ಕ್ಯಾನ್‍ಗಳು, ಲೇದರ್, ರೇಕ್ಸಿನ್, ರಬ್ಬರ್, ಪೀಠೋಪಕರಣಗಳು, ಥರ್ಮಕೋಲ್ ಒಡೆದ ಆಟಿಕೆಗಳು, ಹಳೆಯ ಪೊರಕೆಗಳು, ಟಿನ್ ಬಾಟಲಿಗಳು, ಪೆಪ್ಸಿ ಕ್ಯಾನ್‍ಗಳು, ಬಿಸ್ಲೇರಿ ಬಾಟಲಿಗಳು, ಶೂ ಗಳು, ಒಳಗೆ ಬೆಳ್ಳಿ ಲೈನಿಂಗ್ ಕವರ್ಸ್ ಲೇ ಪ್ಯಾಕೆಟ್ಸ್ ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.
ಮನೆಗಳಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ಕಸ ಮತ್ತು ಅದರ ನಿರ್ವಹಣೆ : ಕೀಟ ನಾಶಕ ಬಾಟಲಿಗಳು, ಸೋಪ್‍ಗಳ ಹೊರ ಕವಚಗಳು, ರೇಜರ್/ರೇಜರ್ ಬ್ಲೇಡ್, ಕ್ರೇಡಿಟ್/ಡೆಬಿಟ್/ಲೋಯಲ್ಟಿ ಕಾರ್ಡ್, ಮ್ಯಾಗ್ನೇಟಿಕ್ ಸ್ಟ್ರೀಪ್, ಯಾವುದೇ ವೈದ್ಯಕೀಯ ನೈರ್ಮಲ್ಯಗಳಿಗೆ ಬಳಸಲಾಗುವ ಟಿಶ್ಯೂ ಪೆಪರ್‍ಗಳು, ಸೊಳ್ಳೆ ನಿವಾರಕ ದ್ರವ ಬಾಟಲಿಗಳು, ಮ್ಯಾಟ್‍ಗಳು, ಓಡೋನಿಲ್‍ಗಳು, ತುಟಿಗಳಿಗೆ ಹಚ್ಚುವ ಬಣ್ಣಗಳು, ಉಗುರುಗಳಿಗೆ ಹಚ್ಚುವ ಬಣ್ಣಗಳು, ಸೌಂದರ್ಯವರ್ಧಕಗಳು ಅವಧಿ ಮುಗಿದ ಔಷಧಿಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ತಂತಿಗಳ ತುಣುಕುಗಳು, ಹಳೆಯ ಎಲೆಕ್ಟ್ರಾನಿಕ್ ಭಾಗಗಳು, ಹಳೆ ಪೋನ್‍ಗಳು, ಅಡಾಪ್ಟರ್ಸ್, ಬ್ಲೂ ಟೂತ್ ಪರಿವರ್ತಕಗಳು, ಬ್ಯಾಟರಿಗಳು, ಸಿಡಿಗಳು, ಸಿ.ಎಫ್.ಎಲ್. ಟ್ಯೂಬ್ ಲೈಟ್‍ಗಳು, ಮುದ್ರಕ ಕ್ಯಾಟ್ರೀಜ್‍ಗಳು, ಹಾಳಾದ ಗಡಿಯಾರ, ಕೈ ಗಡಿಯಾರ, ಇಲೆಕ್ಟ್ರಾನಿಕ್ ವಸ್ತುಗಳು, ಹಾಳಾದ ಉಷ್ಣ ಮಾಪಕಗಳು ಮುಂತಾದ ಇ-ತ್ಯಾಜ್ಯಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ. ಉಯೋಗಿಸಿದ ಸ್ಯಾನಿಟರಿ ನ್ಯಾಪ್‍ಕಿನ್‍ಗಳು, ಉಪಯೋಗಿಸಿದ ಸಿರೇಂಜ್‍ಗಳು, ಉಪಯೋಗಿಸಿದ ಹತ್ತಿ ಬೈಂಡೇಜ್‍ಗಳು,
ಮನೆಗಳಲ್ಲಿ ಉತ್ಪಾದನೆಯಾಗುವ ಉದ್ಯಾನ ಯಾ ತೋಟದ ಕಸ ಮತ್ತು ಅದರ ನಿರ್ವಹಣೆ : ಮರ ಮತ್ತು ಗಿಡಗಳಿಂದ ಉದುರಿದ ಎಲೆ, ಬಾಳೆಯ ದಿಂಡು, ಮುಂತಾದವುಗಳನ್ನು ಸಣ್ಣಗೆ ಕೊಚ್ಚಿ ರಾಶಿಹಾಕಿ ಅಗಾಗ್ಗೆ ಸಗಣಿ ನೀರನ್ನು ಚಿಮುಕಿಸಿ ಆರು ದಿವಸಗಳಿಗೊಮ್ಮೆ ರಾಶಿಯನ್ನು ಹರವಿ ಮತ್ತೆ ರಾಶಿಯನ್ನಾಗಿ ಮಾಡಿ ನೀರನ್ನು ಚಿಮುಕಿಸಿ ಮಾಡುವುದರಿಂದ ಉತ್ತಮ ಗೊಬ್ಬರ ಉತ್ಪಾದನೆಯಾಗುತ್ತದೆ.

ಪಾಲಿಕೆಯ ಪಾತ್ರ : ನಗರ ಪಾಲಿಕೆ ಅಧಿಕಾರಿಗಳು ಸಮಿತಿಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆಯ ನಿಯಮಗಳು, ಸ್ವಸಹಾಯ ಸಂಘಗಳ ಪಾತ್ರ ಹಾಗೂ ಇತ್ಯಾದಿ ಯೋಜನೆಗಳ ಬಗ್ಗೆ ಅರಿವು ನೀಡುವುದು ಮತ್ತು ಇದನ್ನು ಯಶಸ್ಸು ಗೊಳಿಸುವಲ್ಲಿ/ ಅನುಷ್ಠಾನಗೊಳಿಸುವಲ್ಲಿ ಪ್ರೇರೇಪಿಸುವುದು.

ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2000 ರನ್ವಯ ಪಾಲಿಕೆಯು ಹೊರಡಿಸುವ ನೀತಿ ನಿಯಮಗಳನ್ನು ಪಾಲಿಸದೇ ಅಸಹಕಾರ ತೋರುವ ಸಾರ್ವಜನಿಕರಿಗೆ ಮೊದಲ ಹಂತದಲ್ಲಿ ಅರಿವು ಮೂಡಿಸುವುದು ನಂತರ ನಿಯಮ ಪಾಲಿಸದೇ ಇದ್ದಲ್ಲಿ ದಂಡ ವಿಧಿಸುವ ಅಧಿಕಾರವನ್ನು ಪಾಲಿಕೆಯ ಮೇಲ್ವರ್ಗದ ಅಧಿಕಾರಿಯಿಂದ ಕೆಳವರ್ಗದ ನೌಕರರವರೆಗೂ ಪ್ರತ್ಯೋಜಿಸುವುದು.
ಘನ ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಜವಾಬ್ದಾರಿಗಳು: ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಪಾಲಿಕೆಯಿಂದ ನಿಯೋಜಿಸಲ್ವಟ್ಟ ನೌಕರನಿಗೆ ಕಸವನ್ನು ಮೂರು ವಿಧವಾಗಿ ವಿಂಗಡಿಸಿ, ಹಸಿ ಕಸ, ಒಣಕಸವನ್ನು ಮಾತ್ರ ಪ್ರತಿನಿತ್ಯ ನೀಡುವುದು ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ವಾರಕ್ಕೊಮ್ಮೆ ನೀಡಿ ಪಾಲಿಕೆಯೊಂದಿಗೆ ಸಹಕರಿಸುವುದು. ಸಾರ್ವಜನಿಕರು ಮನೆ ಅಂಗಳದಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣಎಲೆಗಳು ಇತ್ಯಾದಿಗಳಿಂದ ಗೊಬ್ಬರವನ್ನು ಮಾಡಿ ಮನೆ ಅಂಗಳದ ತೋಟದಲ್ಲಿ ಬಳಸುವುದು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಖಾಲಿ ಜಾಗಗಳಲ್ಲಿ / ಮೋರಿಗಳಲ್ಲಿ ರಸ್ತೆಗಳಲ್ಲಿ ಬೀಸಾಡದೇ ಸ್ವಚ್ಚತೆಯನ್ನು ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸುವುದು.


ಉದ್ಘಾಟನೆ - ಶ್ರೀ ಆರ್. ಲಿಂಗಪ್ಪ, ಪೂಜ್ಯ ಮಹಾ ಪೌರರು, ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಪ್ರಸ್ತಾವಿಕ ಭಾಷಣ -ಡಾ|| ಬೆಟಸೂರ ಮಠ ಮಾನ್ಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಮುಖ್ಯ ಅತಿಥಿಗಳ ಭಾಷಣ
ಅಧ್ಯಕ್ಷೀಯ ಭಾಷಣ  - ಶ್ರೀ ಎಂ. ಶಿವಣ್ಣ ಮಾನ್ಯ ಅಧ್ಯಕ್ಷರು, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಮೈಸೂರು ಮಹಾನಗರ ಪಾಲಿಕೆ, ಮೈಸೂರು
ತ್ಯಾಜ್ಯ ನಿರ್ವಹಣೆ ಬಗ್ಗೆ ಉಪನ್ಯಾಸ - ಶ್ರೀ ಭಾರಧ್ವಜ್ ರವರು
ಕಾರ್ಯಕ್ರಮ ನಿರೂಪಣೆ : ಶ್ರೀಮತಿ ಭಾರತಿ ಎನ್.ಮಾಡಲಿದ್ದಾರೆ.
ಮುಖ್ಯ ಅತಿಥಿಗಳು

ಶ್ರೀಮತಿ ಮಹದೇವಮ್ಮ,, ಉಪಮಹಾ ಪೌರರು ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಶ್ರೀಮತಿ ಹಸೀನಾ ತಾಜ್ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 46 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ಶಂಷಾದ್ ಬೇಗಂ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 47 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ರತ್ನ ಲಕ್ಷ್ಮಣ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 48 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಪುಟ್ಟಲಿಂಗು ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 49 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ಕಮಲ ಉದಯಕುಮಾರ್ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 50 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಸ್ವಾಮಿ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 51 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಅಯೂಬ್ ಖಾನ್, ಮಾಜಿ ಮಹಾಪೌರರು ಹಾಗೂ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 52 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಫೈರೋಜ್ ಖಾನ್ ಪಾಲಿಕೆ ಸದಸ್ಯರು ವಾರ್ಡ್ ನಂ. 53 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಅಯಾಜ್ ಪಾಷ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 54 ಮೈಸೂರು ಮಹಾನಗರ ಪಾಲಿಕೆ, ಮೈಸೂರು.ಭಾಗವಯಿಸಲ್ಲಿದ್ದಾರೆ.



Sunday 29 March 2015


ಎಸ್ ಎಸ್ ಎಲ್ ಸಿ =ಪರೀಕ್ಷಾ ಕೇಂದ್ರಗಳ ಸುತ್ತ ನಿಶೇದಾಜ್ಝೆ.

ವಿಷಯ:- ಮೈಸೂರು ನಗರದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ
                     ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳ ಬಳಿ ಕಲಂ 144 ಸಿ.ಆರ್.ಪಿ.ಸಿ.
                     ರೀತ್ಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
 ಮೈಸೂರು ನಗರದಲ್ಲಿ ದಿನಾಂಕ:30/03/2015 ರಿಂದ 13/04/2015 ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯಲಿದ್ದು, ಈ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಮೈಸೂರು ನಗರದ 54 ಪರೀಕ್ಷಾ ಕೇಂದ್ರಗಳ ಬಳಿ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇದಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆಯನ್ನು ಜಾರಿ ಮಾಡಬೇಕೆಂದು ಉಪ ನಿರ್ದೇಶಕರು(ಆಡಳಿತ), ಸಾರ್ವಜಿಕ ಶಿಕ್ಷಣ ಇಲಾಖೆ ಹಾಗೂ ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ರವರು ಉಲ್ಲೇಖಿತ ಪತ್ರಗಳಲ್ಲಿ ಕೋರಿರುತ್ತಾರೆ.
  ಉಲ್ಲೇಖಿತ ಪತ್ರಗಳನ್ನು ಪರಿಶೀಲಿಸಲಾಯಿತು, ಪರೀಕ್ಷಾ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತವಾತಾವರಣದಲ್ಲಿ ನಡೆಸಲು ಕಲಂ 144 ಸಿ.ಆರ್.ಪಿ.ಸಿ. ರೀತ್ಯಾ ಮೈಸೂರು ನಗರದ 54 ಪರೀಕ್ಷಾ ಕೇಂದ್ರಗಳ ಬಳಿ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇದಾಜ್ಞೆ ಅವಶ್ಯವೆಂದು ಮನಗಂಡು ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಡಾ||ಎಂ.ಎ.ಸಲೀಂ ಪೊಲೀಸ್ ಕಮೀಷನರ್, ಮೈಸೂರು ನಗರ ಆದ ನಾನು ಕಲಂ 144 ಸಿ.ಆರ್.ಪಿ.ಸಿ. ರೀತ್ಯಾ ನನಗೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ದಿನಾಂಕ:30/03/2015 ರಿಂದ 13/04/2015 ರವರೆಗೆ ಬೆಳಿಗ್ಗೆ 6-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ನಗರದ 54 ಪರೀಕ್ಷಾ ಕೇಂದ್ರಗಳ ಬಳಿ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಿರುತ್ತೇನೆ ಹಾಗೂ ಪರೀಕ್ಷಾ ಕೇಂದ್ರಗಳ ಬಳಿಯಿರುವ ಜೆರಾಕ್ಸ್ ಹಾಗೂ ಲೇಖನ ಸಾಮಗ್ರಿ ಅಂಗಡಿಗಳನ್ನು ಸಹ ಮುಚ್ಚಲು ಆದೇಶಿಸಿರುತ್ತೇನೆ. ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು.


ಮಂಡ್ಯ ಸುದ್ದಿಗಳು.


ನೆರೆಹೊರೆ ಯುವ ಸಂಸತ್ತು – ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಟಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಕುರಿತು ಮಾ. 30 ರಂದು ತರಬೇತಿ
      ಮಂಡ್ಯ, ಮಾ.  ನೆಹರು ಯುವ ಕೇಂದ್ರ, ಮಂಡ್ಯ, ಕಲ್ಪತರು ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಜಿಲ್ಲಾ ಯುವ ಪರಿಷತ್, ಮಂಡ್ಯ, ಪ್ರತಿಭಾ ಮಹಿಳಾ ಮಂಡಳಿ (ರಿ) ಹೊಸಹೊಳಲು, ಡಾ|| ಬಿ.ಆರ್.ಅಂಬೇಡ್ಕರ್ ಯುವಕ ಸಂಘ (ರಿ), ಚಿಕ್ಕಗಾಡಿಗನಹಳ್ಳಿ ಇವರ ಸಹಯೋಗದಲ್ಲಿ ಮಾರ್ಚ್ 30 ರಂದು ಬೆಳಿಗ್ಗೆ 10.00 ಗಂಟೆಗೆ ಕೃಷ್ಣರಾಜಪೇಟೆ ಕಲ್ಪತರು ಪ್ರಥಮ ದರ್ಜೆ ಕಾಲೇಜು,  ಆವರಣದಲ್ಲಿ “ “ನೆರೆಹೊರೆ ಯುವ ಸಂಸತ್ತು-ಕೇಂದ್ರ ಪುರಸ್ಕøತ ಯೋಜನೆಗಳು ಹಾಗೂ ಅನುಷ್ಟಾನದಲ್ಲಿ ಸಮುದಾಯ ಸಂಘಟನೆಗಳ ಪಾತ್ರ ಕುರಿತು ತರಬೇತಿಯನ್ನು ಏರ್ಪಡಿಸಲಾಗಿದೆ.
   

ವಿಶ್ವಕಪ್೨೦೧೫. ಆಸ್ಟ್ರೇಲಿಯಾ ಮಡಿಗೆ

 ವಿಶ್ವಕಪ್೨೦೧೫. ಆಸ್ಟ್ರೇಲಿಯಾ ಮಡಿಗೆ

ಐದನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದ ಕಾಂಗರೂ ಪಡೆ, ಫೈನಲ್ ನಲ್ಲಿ ಸರಣಾದ ಕೀವೀಸ್.
                  ಆಸ್ಟ್ರೇಲಿಯಾ-ನ್ಯೂಜಿಲೆಂಡ್
ಮೆಲ್ಬೋರ್ನ್: ಅತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿ 2015ನೇ ಸಾಲಿನ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿಹಿಡಿದೆ.


ನ್ಯೂಜಿಲೆಂಡ್ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ನಿರಾಯಾಸವಾಗಿ ಚೇಸ್ ಮಾಡಿದ ಕ್ಲಾರ್ಕ್ ಬಳಗ 32 ಓವರ್ ಗಳಲ್ಲಿಯೇ 3 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (45 ರನ್) ಸ್ಮಿತ್ (49 ರನ್) ಮತ್ತು ಆಸೀಸ್ ನಾಯಕ ಮೈಕೆಲ್ ಕ್ಲಾರ್ಕ್ ಅವರ ಆಕರ್ಷಕ ಅರ್ಧ ಶತಕ (74 ರನ್)ದ ನೆರವಿನಿಂದ ಆಸ್ಟ್ರೇಲಿಯಾ ತಂಡ 183 ರನ್ ಗಳನ್ನು ಗಳಿಸಿ ಗುರಿ ಮುಟ್ಟಿತು. ಆ ಮೂಲಕ ಐದನೇ ಬಾರಿಗೆ ಆಸಿಸ್ ಪಡೆ ವಿಶ್ವಕಪ್ ಅನ್ನು ತನ್ನ ಪಾಲಾಗಿಸಿಕೊಂಡಿದೆ.  ಇನ್ನು ನ್ಯೂಜಿಲೆಂಡ್ ಪರ ಹೆನ್ರಿ 2 ವಿಕೆಟ್ ಪಡೆದರೆ, ಬೌಲ್ಟ್ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಕೇವಲ 45 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿದರೆ  ಯಾವೊಬ್ಬ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಬರೋಬ್ಬರಿ 4 ಮಂದಿ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು, ನ್ಯೂಜಿಲೆಂಡ್ ಹಿನ್ನಗೆ ಕಾರಣವಾಯಿತು.  ಈಡೀ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿ ನಾಯಕ ಮೆಕ್ಕಲಮ್ ಸೇರಿದಂತೆ ಉಳಿದ ಯಾವ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ.

ನ್ಯೂಜಿಲೆಂಡ್ ಪರ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (15ರನ್), ಮೆಕ್ಕಲಮ್ (0) ಮತ್ತು ವಿಲಿಯಮ್ಸನ್ (12) ಬೇಗನೇ ಔಟಾದರು. ಆ ಬಳಿಕ ಬಂದ ಟೇಲರ್ (40 ರನ್) ಮತ್ತು ಇಲಿಯಟ್ (83 ರನ್) ಉತ್ತಮ ಜೊತೆಯಾಟ ಆಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ ಪಂದ್ಯದ 36ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ, ಟೇಲರ್ ಹಡ್ಡಿನ್ ವಿಕೆಟ್ ಒಪ್ಪಿಸಿ ಔಟಾದರು.  ಆ ಬಳಿಕ  ಬಂದ ಆ್ಯಂಡರ್ ಸನ್ ಮತ್ತು ರೋಂಚಿ ಶೂನ್ಯಕ್ಕೆ ಔಟಾದರು.  ಬಳಿಕ ಕ್ರೀಸ್ ಗೆ ಆಗಮಿಸಿದ ವೆಟ್ಟೋರಿ, ಎಲಿಯಟ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು. ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವೆಟ್ಟೋರಿ 23 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಜಾನ್ಸನ್ ಬೌಲಿಂಗ್ ನಲ್ಲಿ ಔಟಾದರು. ಆಗ ನ್ಯೂಜಿಲೆಂಡ್ ತಂಡದ ಮೊತ್ತ ಕೇವಲ 171 ರನ್ ಗಳಾಗಿತ್ತು.

ವೆಟ್ಟೋರಿ ಅವರ ಹಿಂದೆಯೇ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಎಲಿಯಟ್ ಕೂಡ ಇಲ್ಲದ ಹೊಡೆತಕ್ಕೆ ಮುಂದಾಗಿ ಫಾಲ್ಕ್ ನರ್ ಎಸೆತದಲ್ಲಿ ಹಡ್ಡಿನ್ ಗೆ ಕ್ಯಾಚ್ ನೀಡಿ ಹೊರನಡೆದರು. ಎಲಿಯಟ್ ಔಟ್ ಆಗುವುದರರೊಂದಿಗೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಕೂಡ ಬಹುತೇಕ ಅಂತ್ಯಗೊಂಡಿತ್ತು. ಏಕೆಂದರೆ ಎಲಿಯಟ್ ನಂತರ ಬಂದ ಬಾಲಂಗೋಚಿ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ಮಾಡುವುದರೊಂದಿಗೆ 183 ರನ್ ಗಳಿಗೆ ಆಲ್ ಔಟ್ ಆಯಿತು.

ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್, ಫಾಲ್ಕ್ ನರ್ 3 ವಿಕೆಟ್, ಮಿಚೆಲ್ ಜಾನ್ಸನ್ 3 ವಿಕೆಟ್ ಮತ್ತು ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡದ ಪತನಕ್ಕೆ ಕಾರಣವಾದರು.

Friday 27 March 2015


ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯಿಂದ  25,638 ವಿದ್ಯಾರ್ಥಿಗಳು
      ಮಂಡ್ಯ, ಮಾ. 27 ಜಿಲ್ಲೆಯಲ್ಲಿ ಮಾರ್ಚ್ 30 ರಿಂದ 13 ರವರಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು ಜಿಲ್ಲೆಯ 432 ಪ್ರೌಢಶಾಲೆಗಳಿಂದ 13462 ಗಂಡು ಮಕ್ಕಳು, 12176 ಹೆಣ್ಣು ಮಕ್ಕಳು, 595 ಪುನರಾವರ್ತಿತ  ವಿದ್ಯಾರ್ಥಿಗಳು 690 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 25,638  ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು  ತಿಳಿಸಿದ್ದಾರೆ.
      14181 ಸರ್ಕಾರಿ ಶಾಲೆ, 5839 ಅನುದಾನಿತ ಹಾಗೂ 5618 ಅನುದಾನ ರಹಿತ ಶಾಲೆಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಕೆ.ಆರ್.ಪೇಟೆ – 11, ಮದ್ದೂರು – 19, ಮಳವಳ್ಳಿ – 15, ಮಂಡ್ಯ ಉತ್ತರ – 06, ಮಂಡ್ಯ ದಕ್ಷಿಣ – 18, ನಾಗಮಂಗಲ - 12, ಪಾಂಡವಪುರ – 07 ಹಾಗೂ ಶ್ರೀರಂಗಪಟ್ಟಣ – 08 ಒಟ್ಟು 96 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು,  ಅವುಗಳಲ್ಲಿ   ಸೆಂಟ್ ಜಾನ್ ಪ್ರೌಢಶಾಲೆ, ಮಂಡ್ಯ, ರೋಟರಿ ಪ್ರೌಢಶಾಲೆ, ಮಂಡ್ಯ ಹಾಗೂ ಅರ್ಕೇಶ್ವರನಗರದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಮೂರು ಕೇಂದ್ರಗಳನ್ನು ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ.
      ಮಾರ್ಚ್ 30 ರಂದು ಪ್ರಥಮ ಭಾಷೆ, ಏಪ್ರಿಲ್ 1 ರಂದು ವಿಜ್ಞಾನ, 6 ರಂದು ಗಣಿತ, 8 ರಂದು ದ್ವಿತೀಯ ಭಾಷೆ, 10 ರಂದು ತೃತೀಯ ಭಾಷೆ ಹಾಗೂ 13 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ಬೆಳಿಗ್ಗೆ 9-30 ಗಂಟೆಗೆ ಆರಂಭವಾಗಲಿದೆ.
      ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಸ್ಥಾನಿಕ ಜಾಗೃತ ದಳದ ಸದಸ್ಯರು ಪಾಳಿ ಪದ್ಧತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯು ಶೇ. 89.10 ಫಲಿತಾಂಶ ಪಡೆದು 4ನೇ ಸ್ಥಾನ ಗಳಿಸಿದ್ದು, ಈ ಬಾರಿ ಪ್ರಥಮ ಸ್ಥಾನವನ್ನು ಪಡೆಯಲು ಶಾಲೆ, ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಹಲವಾರು ಶೈಕ್ಷಣಿಕ ಸಬಲೀಕರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ತಿಳಿಸಿದ್ದಾರೆ.

ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಲಿಖಿತ ಪರೀಕ್ಷೆ: ಮೊದಲನೇ
ತಾತ್ಕಾಲಿಕ ಅರ್ಹತಾ ಪಟ್ಟಿ ಪ್ರಕಟ
ಮಂಡ್ಯ ಜಿಲ್ಲೆಯಲ್ಲಿ ಖಾಲಿ ಇರುವ 150 ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್(ಪುರಷ) ಮತ್ತು 38 ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಮೇ 07 ರಿಂದ ಜೂನ್ 13 ರವರೆಗೆ ಸಹಿಷ್ಣುತೆ ಮತ್ತು ದೇಹಧಾಢ್ರ್ಯತೆ ಪರೀಕ್ಷೆಯನ್ನು ಮಂಡ್ಯ ಜಿಲ್ಲೆಯ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಸಲಾಗಿರುತ್ತದೆ. ಹಾಗೂ ಮಂಡ್ಯ ನಗರದ ವಿವಿಧ ಶಾಲಾ/ಕಾಲೇಜುಗಳಲ್ಲಿ ದಿನಾಂಕ: 18-01-2015 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಮೊದಲನೇ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ದಿನಾಂಕ: 26-03-2015 ರಂದು ಜಿಲ್ಲಾ ಪೊಲೀಸ್ ಕಚೇರಿ ಮಂಡ್ಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 29 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ
      ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ    2015-16ನೇ ಸಾಲಿನ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಯು ಮಾರ್ಚ್ 29 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ  ನಡೆಯಲಿದೆ.
ಮಂಡ್ಯ - ಸರ್ಕಾರಿ ಪದವಿಪೂರ್ವ ಕಾಲೇಜು, ಕಲ್ಲು ಕಟ್ಟಡ ಹಾಗೂ ಡಯಟ್, ಮಂಡ್ಯ,  ನಾಗಮಂಗಲ - ಸರ್ಕಾರಿ ಪದವಿಪೂರ್ವ ಕಾಲೇಜು, ನಾಗಮಂಗಲ, ಪಾಂಡವಪುರ – ವಿಜಯ ಪಿ.ಯು.ಕಾಲೇಜು, ಪಾಂಡವಪುರ, ಶ್ರೀರಂಗಪಟ್ಟಣ - ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣ, ಮಳವಳ್ಳಿ – ರೋಟರಿ ಪ್ರೌಢಶಾಲೆ, ತ್ಯಾಗರಾಜ ರಸ್ತೆ, ಕೋಟೆ, ಮಳವಳ್ಳಿ ಟೌನ್, ಕೆ.ಆರ್.ಪೇಟೆ - ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸಹೊಳಲು ರಸ್ತೆ ಮತ್ತು ಆರ್ಶೀವಾದ ಪ್ರೌಢಶಾಲೆ, ಕೋರ್ಟ್ ಪಕ್ಕ, ಕೆ.ಆರ್.ಪೇಟೆ ಹಾಗೂ ಮದ್ದೂರು - ಪದವಿ ಪೂರ್ವ ಕಾಲೇಜು ಮತ್ತು ಸೆಂಟ್ ಆನ್ಸ್ ವಿದ್ಯಾ ಸಂಸ್ಥೆ, ಮದ್ದೂರು ಈ ತಾಲ್ಲೂಕು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಯು ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷೆಗೆ ತಪ್ಪದೇ ಹಾಜರಾಗಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಎಲ್ಲರೂ
ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆಸೂಚನೆ

ಡಾ|| ಬಾಬು ಜಗಜೀವನರಾಂ ಜಯಂತಿ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ  ಡಾ|| ಬಾಬು ಜಗಜೀವನರಾಂ ಜಯಂತಿ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಜಯಂತಿಯ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು   ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ದಿನದಂದು ಮೆರವಣಿಗೆಯು ಜಿಲ್ಲಾ ಕಚೇರಿಯ ಮುಂಭಾಗದಲ್ಲಿರುವ  ಡಾ|| ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾಗಿ  ಜಿಲ್ಲಾ ಕ್ರೀಡಾಂಗಣದಲ್ಲಿ ಹಬ್ಬದ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಂದು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸಿದ ವಾರ್ಡನ್ ಹಾಗೂ ಅಡುಗೆಯವರಿಗೆ ಸನ್ಮಾನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅಣ್ಣೇಗೌಡ ಹಾಗೂ ಸಮುದಾಯದ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ವೆಂಕಟಗಿರಿಯಯ್ಯ ಹಾಗೂ ಮತ್ತಿತರರು ಭಾಗವಹಿಸಿದ್ದರು.
*******





         
 ಮೈಸೂರಿನ ಕೊಲಂಬಿಯಾ ಏಷಿಯಾ ಹಾಸ್ಪಿಟಲ್‍ನಲ್ಲಿ  ಆಡಿಯೋಲಜಿ ಸೆಂಟರ್‍ನ ಉದ್ಘಾಟನೆ
ಮೈಸೂರು,ಮಾ.27- ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪಿಟಲ್‍ನಲ್ಲಿ ಆಡಿಯೋಲಜಿ ಸೆಂಟರ್ ಅನ್ನು ತೆರೆಯಲಾಗಿದ್ದು,  ಮೈಸೂರಿನ ಜನತೆಯ ಅನುಕೂಲಕ್ಕಾಗಿ ಸೇವೆಗೆ ಆರಂಭಿಸಿ ಅದನ್ನು ಇತ್ತೀಚೆಗೆ ಪ್ರೊಬೆಷನರಿ ಅಧಿಕಾರಿ ಅಶ್ವತಿಯವರಿಂದ ಉದ್ಘಾಟಿಸಲಾಯಿತು ಎಂದು  ಆಸ್ಪತ್ರೆಯ ಆಡಿಯೋಲಜಿ ಮುಖ್ಯ ವ್ಯವಸ್ಥಾಪಕ ಡಾ. ಪ್ರವೀಣ್ ರಾಯನಗೌಡರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಬಾಹ್ಯವಾಗಿ ಕೇಳಿಬರುವ ಶಬ್ಧದ ತರಂಗಾಂತರವು ದೊಡ್ಡ ಪ್ರಮಾಣದಲ್ಲಿ ಇದ್ದರೆ, ಅದು ಅಲ್ಪ ಅವಧಿಯದ್ದೇ ಆಗಿದ್ದರೂ ಹೆಚ್ಚಿನ ರೀತಿಯಲ್ಲಿ ಸಮಸ್ಯೆಯನ್ನು ತರಬಹುದು. ಇಂಥ ಶಬ್ಧಗಳು ಕಿವಿಯ ಒಳಭಾಗದಲ್ಲಿರುವ ಸೂಕ್ಷ್ಮವಾದ ರಚನೆಯನ್ನು ಜಖಂಗೊಳಿಸಬಹುದು. ಶ್ರವಣದ ದೋಷ ಕಳೆದುಕೊಳ್ಳಬೇಕಾಗಿ ಬರಬಹುದು. ಆದರೆ, ಮಗು ಈಗಾಗಲೇ ಶ್ರವಣ ದೋಷದೊಂದಿಗೆ ಜನಿಸಿದ್ದರೆ ಏನುಮಾಡಬೇಕು? ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ 4-6 ಮಕ್ಕಳು ಹುಟ್ಟುತ್ತಲೇ ಕಿವುಡರಾಗಿರುತ್ತಾರೆ. ಇಂಥ ಮಕ್ಕಳು ವಯೋಸಹಜವಾಗಿ ಮಾತು, ಭಾಷೆ ಕಲಿಯುವುದಿಲ್ಲ. ಹೀಗಾಗಿ, ಶ್ರವಣ ಪರಿಕರದ ರೂಪದಲ್ಲಿ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳುವುದು ಮುಖ್ಯವಾಗಲಿದೆ. ಅಥವಾ ಕೊಚೆಲಿಯರ್ ಇಂಪ್ಲಾಂಟ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಈ ಎಲ್ಲ ಅಂಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೊಲಂಬಿಯ ಏಷಿಯಾ ಮೈಸೂರು ನಗರದಲ್ಲಿ ಅತ್ಯಾಧುನಿಕ ಸೌಲಭ್ಯದ ಆಡಿಯೋಲಜಿ ಕೇಂದ್ರವನ್ನು ಕೊಲಂಬಿಯ ಏಷಿಯಾ ಆಸ್ಪತ್ರೆಯು ಮೈಸೂರಿನಲ್ಲಿ ಮಾರ್ಚ್ 22ರ ಭಾನುವಾರ ಆ್ಯಂಪಿಫೋನ್ ಸಹಯೋಗದಲ್ಲಿ ಆರಂಭಿಸಿತು. ಕೊಚೆಲಿಯರ್ ಇಂಪ್ಲಾಂಟ್ ತಂಡದೊಂದಿಗೆ ಕೊಚೆಲಿಯರ್ ಇಂಪ್ಲಾಂಟೇಷನ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಿದ್ದು, ಹಾಗೂ ನ್ಯೂಕ್ಲಿಯಸ್ 6 ಎಂದು ಹೇಳಲಾಗುವ ನೂತನ ಸ್ವಯಂಚಾಲಿತ ಮತ್ತು ನಿಸ್ತಂತು ಕೊಚೆಲಿಯರ್ ಧ್ವನಿ ಸಂಸ್ಕರಣ ವ್ಯವಸ್ಥೆಯನ್ನು ಆರಂಭಿಸಿತು. ಲಲ್ಲದೆ, ಒಂದು ತಿಂಘಳ ಅವಧಿಯ ಶಿಬಿರನ್ನು ಮಕ್ಕಳು ಮತ್ತು ವಯಸ್ಕರಿಗಾಗಿ ಇದೇ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ ಎಂದರು.
 ಚೀಫ್ ಆಟಿಯೋಲಜಿಸ್ಟ್ ಆಗಿರುವ ಪ್ರವೀಣ್ ರಾಯನಗೌಡರ್ ಅವರು  ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು ವಿವರಿಸಿದರು. ಬಳಿಕ ಕೊಚೆಲಿಯರ್ ಇಂಪ್ಲಾಟ್ ಕುಇತು ನೂತನ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರವೀಣ್ ಅವರು ನೂತನ ನ್ಯೂಕ್ಲಿಯಸ್ 6 ಕುರಿತು ಸÀಭಿಕರಿಗೆ ಮಾಹಿತಿಂiÀiನ್ನು ನೀಡಿದ್ದು,  ಇದನ್ನು ಬಳಸಿಕೊಂಡ ಮಕ್ಕಳು ಸ್ಷಪ್ಟವಾಗಿ ಕೇಳಸಿಕೊಳ್ಳಲು ಶಕ್ತರಾಗಿದ್ದಾರೆ ಎಂದು ಮಾಹಿತಿ ನಿಡಿದರು.  ಕೊಲಂಬಿಯ ಏಷಿಯಾ ಹಾಸ್ಪಿಟಲ್, ಮೈಸೂರಿನ ಚೀಫ್ ಕೊಚೆಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಎಚ್.ದತ್ತಾತ್ರಿ ಅವರು ಅವರು, ಯಾರಾದರೂ ಶ್ರವಣ ಪರಿಕರ ಹಾಕಿಕೊಳ್ಳಲು ಬಯಸಿದರೆ ಖಂಡಿತವಾಗಿ ಅವರು ಕೊಚೆಲಿಯರ್ ಇಂಪ್ಲಾಂಟ್ ಹೊಂದಬೇಕು ಎಂಧು ಸಲಹೆ ಮಾಡಿದರು. ಕೊಲಂಬಿಯ ಏಷಿಯಾ ಆಸ್ಪತ್ರೆಯ ಆಡಿಯೋಟರಿ ವರ್ಬಲ್ ಥೆರಪಿಸ್ಟ್ ಮಹೇಂದ್ರ ಕುಮಾರ್ ಅವರು, ಸಭಿಕರಿಗೆ ಮಗು ಸಾಮಾನ್ಯವಾಗಿ ಮಾತನಾಡಲು, ಭಾಷೆಯನ್ನು ಗ್ರಹಿಸಲು ವಿಫಲವಾದಲ್ಲಿ ಸೂಕ್ತ ಥೆರಪಿ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ (ಪಿಎಡಿಸಿ ಮೈಸೂರು) ನಿರ್ವಹಣೆ ಮಾಡುತ್ತಿರುವ ಶಾಲೆಯ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರವಣಶಕ್ತಿಯನ್ನು ಕಳೆದುಕೊಳ್ಳುವುದು ವಯಸ್ಕರು ಮತ್ತು ಹಿರಿಯರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆ. 65 ರಿಂದ 74ನೇ ವರ್ಷದವರೆಗೆ ಅಂದಾಜು ಮೂರನೇ ಒಂದರಷ್ಟು ಜನರು ಹಾಗೂ 75 ವರ್ಷಕ್ಕೂ ಮೇಲ್ಪಟ್ಟು ಶೇ 50ಕ್ಕೂ ಹೆಚ್ಚಿನವರು ಶ್ರವಣ ಸಮಸ್ಯೆ ಎದುರಿಸುತ್ತಾರೆ. ಇಲ್ಲಿ ಜೋಡಿ ಶ್ರವಣ ಪರಿಕರ ಅಳವಡಿಸಿ ಕೊಂಡರೂ ಧ್ವನಿ, ಶಬ್ಧವನ್ನು ಗ್ರಹಿಸಲು ಕಷ್ಟವಾಗಲಿದೆ. ವೈದ್ಯರ ಸಲಹೆಯನ್ನುಪಾಲಿಸುವುದು, ಎಚ್ಚರಿಕೆಗಳಿಗೆ ಪ್ರತಿಕ್ರಿಯಿಸುವುದು, ಕರೆ ಗಂಟೆಗೆ ಸ್ಪಂದಿಸುವುದು ಕಷ್ಟವಾಗಲಿದೆ. ಜೊತೆಗೆ ಗೆಳೆಯರು, ಕುಟುಂಬ ಸದಸ್ಯರ ಜೊತೆಗೆ ಖುಷಿಯಾಗಿ ಮಾತನಾಡುವುದು ಕಷ್ಟವಾಲಿದೆ. ಈ ಎಲ್ಲವೂ ಬೇಸರ, ಇರಿಸುಮುರಿಸು ತರಲಿದೆ. ಅಪಾಯಕಾರಿ ಕೂಡಾ ಹೌದು ಎಂದು ವಿವರಿಸಿದರು.


ಮೈಸೂರಲ್ಲಿ ಆಟೋಬಂದ್: ಗಲಾಟೆ, ನ್ಯಾನೋ ಟ್ಯಾಕ್ಷಿಗೆ ಕಲ್ಲುತೂರಾಟ; ಪ್ರಕ್ಷುಬ್ದ
ಮೈಸೂರು,ಮಾ.27- ನ್ಯಾನೋ ಮತ್ತು ಓಲೋ ಟ್ಯಾಕ್ಷಿಗಳನ್ನು ನಗರದೊಳಗೆ  ಓಡಿಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ  ಇಂದು ನಗರದಾದ್ಯಮತ ಆಟೋ ಬಮದ್‍ಗೆ ಕರೆ ನೀಡಲಾಗಿತ್ತು, ಬಹುತೇಕ ಆಟೋಬಮದ್ ಯಶಸ್ವಿಯಾಗಿದೆ.
 ಆಟೋ ಚಾಲಕರಲ್ಲೇ  ಎರಡು ಬಣಗಳಿದ್ದು, ಬಸ್ ನಿಲ್ಲಧಣ ಸೇರಿದಂತೆ ಕೆಲವುಕಡೆ ಆಟೋಗಳು  ಸಂಚರಿಸುತ್ತಿದ್ದರಿಂದ  ಆಟೋಚಾಲಕರ ಸಂಘದವರಲ್ಲೇ  ಗಲಾಟೆ ನಡೆದು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತು.್ತ ಕೆಲವು ಆಟೋಚಾಲಕರು ಕದ್ದುಮುಚ್ಚಿ  ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದರಿಂದ   ಒಮದು ಬಣದ ಆಟೋ ಚಾಲಕರು ಗುಂಪುಗೂಡಿ  ಸಬರ್‍ಬನ್ ಮುಕ್ಯ ಬಸ್ ನಿಲ್ಲದಾಣದ ಬಳಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ  ಎರಡು ಬನಗಲ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು, ಪೊಲೀಸರ ಮದ್ಯ ಪ್ರವೇಶದಿಂದಾಗಿ   ಆಟೋಚಾಲಕರು ಸಮಾದಾನಗೊಮಡರು.
 ನಗರದ  ಬಸ್ ನಿಲ್ದಾಣದ ಬಳಿ ಇರುವ  ಪ್ರೀ ಪೇಯಿಡ್ ಆಟೋ ಮಲೀಗೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದರು. ಕೆಲ ಪ್ರಯಾಣಿಕರು ಟಾಂಗಾ ಗಾಡಿಗಳನ್ನು ಹಿಡಿದು ಪ್ರಯಾಣಿಸಿದರೆ, ಇನ್ನೂ ಕೆಲವರು ನಗರ ಸಮಚಾರಿ ಬಸ್‍ಗಳಿಗಾಗಿ ಕಾಯುತ್ತಾ ನಿಂತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್ ನಿಲ್ದಾಣಗಳ ಬಳಿ ಬಿಗುವಿನ ವಾತಾವರಣ ಕೂಡಿದ್ದರಿಂದ  ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
 ನಗರದ  ಸೆಮಟ್ ಫಿಲೋಮಿನಾ  ಚರ್ಚ್  ಬಳಿ ಇರುವ ಲೂರ್ದು ನಗರದಲ್ಲಿ ನ್ಯಾನೋಟಾಕ್ಸಿವೊಂದಕ್ಕೆ  ಕೆಲ ಆಟೋ ಚಾಲಕರು ಕಲ್ಲುತೂರಿ  ಅದರ ಗಾಜುಗಳನ್ನು ಒಡೆದು ನಾಶಪಡೆಸಿದ ಘಟನೆಯೂ ನಡೆದಿದ್ದರಿಂದ ಪರಿಸ್ಥಿತಿ ಪ್ರಕ್ಷುಬ್ದ ವಾತಾವರಣಕ್ಕೆ ತಿರುಗಿತು ಇದನ್ನರಿತ ಪೊಲೀಸರು ಎಚ್ಚೆತ್ತುಕೊಂಡು ಆ ಸ್ಥಳದಲ್ಲಿ  ಲಾಠಿ ಪ್ರಹಾರಕ್ಕೆ ಮುಂದಾಗಿ ಗುಂಪ-ನ್ನು ಚದುರಿಸಿದರು.
ಇದೇ ಅಲ್ಲದೆ ನಗರಬಸ್ ನಿಲ್ದಾಣ, ಕುವೆಮಪುನಗರ, ವಿಜಯನಗರ  ಮೋಡಿಮೊಹಲ್ಲಾ, ಕೆ.ಆರ್. ಆಸ್ಪತ್ರೆ, ರೈಲು ನಿಲ್ದಾಣ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ  ಆಟೋಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.
 ಒಟ್ಟಿನಲ್ಲಿ ನ್ಯಾನೋಟ್ಯಾಕ್ಷಿ ವಿರುದ್ಧದ ಇಮದಿ ಆಟೋಬಂದ್ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಬಿಸಿ ಮುಟ್ಟಿಸಿದೆ ಎಮದು ಹೇಳಿದರೆ ತಪ್ಪಾಗಲಾರದು.

ಮಾದಿಗ ಜನಾಂಗಕ್ಕೆ  ಸವಲತ್ತು ನೀಡುವಲ್ಲಿ ಸಿದ್ದು ಸರ್ಕಾರ ವಿಫಲ-ಆರೋಪ
ಮೈಸೂರು, ಮ.27- ರಾಜ್ಯದಲ್ಲಿ ಮಾದಿಗರು, ಪರಿಶಿಷ್ಟರಿಗೆ  ಸಿಗಬೇಕಾದ ಮೀಸಲಾತಿಯನ್ನು ತಪಿಸಿ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದು ವಿದಾನ ಪರಿಷತ್‍ನ ಮಾಜಿ ಸದಸ್ಯ ಸಿ. ರಮೇಶ್ ಹಾಗೂ ಮಾಜಿ ಮೇಯರ್ ಕೃಷ್ಣ ಆರೋಪಿಸಿದರು.
 ಪತ್ರಕರ್ತರ ಭವನದಲ್ಲಿ ಸುದ್ಧಿಘೋಷ್ಟಿಯಲ್ಲಿ ಮಾತನಾಡಿದ ಅವರು  ಸಿದ್ದರಾಮಯ್ಯ ಆವರು ಈ ಹಿಂದೆ ರಚನೆಯಾಗಿರುವ  ಸದಾಶಿವ ಆಯೋಗದ ವರದಿಯನ್ನು ಅನುಷ್ಠನಕ್ಕೆ ತರುವ ಬದಲು, ಅದನ್ನು ಮರೆಮಾಚಿ ಹೊಸದಾಗಿ ಕಾಂತರಾಜು ಆಯೋಗದ ವರದಿಯನ್ನು  ಜಾರಿಗೆ ತಂದು ಆ ಮೂಲಕ ಜಾತಿಗಣತಿ ನಡೆಸಲು ಆದೇಶಿಸಿದ್ದಾರೆ, ಇದರಿಮದ  ನಿಜವಾದ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ, ಕೆನೆಪದರ  ಮೀಸಲಾತಿ ತಪ್ಪಿದಂತಾಗುತ್ತದೆ, ಆಗ ನಿಜವಾಗಿಯೂ  ಮಾದಿಗ ಜನಾಂಗದವರಿ ಅನ್ಯಾಯಕ್ಕೆ ಒಳಗಾಗುತ್ತಾರೆ  ಆದ್ದರಿಮದ ಮೊದಲು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಆನಂತರ ಕಾಂತರಾಜು ಆಯೋಗದ ವರದಿಯನ್ನು ಅನುಷ್ಠಾನಗೊಲಿಸಿ ಎಮದು ಒತ್ತಾಯಿಸಿದರು.
  ಜನಗಣತಿಗೆ ಮನೆಮುಂದೆ ಬಂದಾಗ  ಮಾದಿಗ ಸಮುದಾಯದವರು  ಮಾದಿಗ ಎಂದೆ ನಮೂದಿಸಬೇಕೆಂದು ತಮ್ಮ ಸಮುದಾಯದವರಿಗೆ ಕರೆ ನೀಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಕೃಷ್ಣಮೂರ್ತಿ, ಪ್ರಸನ್ನ ಉಪಸ್ಥಿತರಿದ್ದರು.

ಮಂಡ್ಯ : ದೇಶದ ವಿಮೋಚನಾ ಚಳುವಳಿ ಇತಿಹಾಸದಲ್ಲಿ ಮಿಂಚಂತೆ ಬಂದು ಅತ್ಯಂತ ಚಿಕ್ಕವಯಸ್ಸಿಗೆ ಚರಿತ್ರೆ ನಿಮಿಸಿದ ಸಹೀದ್ ಭಗತ್‍ಸಿಂಗ್ ಒಬ್ಬ ಅಪ್ಪಟ ದೇಶ ಪ್ರೇಮಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿಂದು ಎಸ್.ಎಫ್.ಐ ವತಿಯಿಂದ ಆಯೋಜಿಸಲಾಗಿದ್ದ ‘ಮರೆಯಲಾಗದ ಭಗತ್‍ಸಿಂಗ್’ ಕುರಿತ ವಿಚಾರ ಸಂಕಿರಣ ಮತ್ತು ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಗತ್‍ಸಿಂಗ್ ಅವರ ಹೋರಾಟದಿನಗಳ ಅವಧಿ ಕೇವಲ 10-12 ವರ್ಷ ಮಾತ್ರ. ಆದರೆ, ಈ ಅವದಿಯಲ್ಲಿ ದೇಶದಲ್ಲಿ ಅವರು ಮೂಡಿಸಿದ ಸ್ವಾತಂತ್ಯದ ಕಿಚ್ಚು ಅಸಾಧಾರಣ. ಸ್ವಾತಂತ್ರ ಹೋರಾಟದಲ್ಲಿ ಧೈರ್ಯ ಮತ್ತು ತ್ಯಾಗ ಅತ್ಯಂತ ಅಗತ್ಯ ಎಂದು ಭಾಗಿಸಿದ್ದರು.
ಭಗಸಿಂಗ್ ಮತ್ತು ಆತನ ಸಂಗಡಿಗರು ತಮ್ಮ 23ನೇ ವಯಸ್ಸಿನಲ್ಲಿ ಗಲ್ಲಿಗೇರಲು ತೋರಿದ ಧೀರೋದ್ದಾತ ಮನೋಭಾವವನ್ನು ವಿಶ್ವದ ಯಾವುದೇ ದೇಶದ ವಿಮೋಚನಾ ಚಳುವಳಿಯ ಇತಿಹಾಸದಲ್ಲಿ ಕಾಣಲಾಗದು ಎಂದರು.
ಭಗತ್‍ಸಿಂಗ್ ಸ್ವಾತಂತ್ಯವೆಂದರೆ ಬ್ರಿಟೀಷರನ್ನು ಓಡಿಸುವುದು ಮಾತ್ರವಲ್ಲ. ಪೂರ್ಣ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ದೇಶಕ್ಕೆ ಮೊಟ್ಟಮೊದಲು ನೀಡಿದವರು. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡದು ಹಾಕಿ ಹೊಸ ವ್ಯವಸ್ಥೆಯನ್ನು ತರಬಲ್ಲ ಕ್ರಾಂತಿಯಿಂದಲೇ ಭಾರತದ ಹೊಸ ಹುಟ್ಟು ಸಾಧ್ಯ ಎಂದು ನಮ್ಮಿದ್ದವರು ಎಂದು ಹೇಳಿದರು.
ವೇದಿಕೆಯಲ್ಲಿ ಎಸ್‍ಎಫ್‍ಐನ ಜಿಲ್ಲಾ ಉಪಾಧ್ಯಕ್ಷೆ ಇ.ರಂಚಿತಾ, ಎಂ.ಪುಟ್ಟಮಾದು, ಮಹೇಶ್‍ಕುಮಾರ್, ರಾಜೇಂದ್ರಶಿಂಗ್‍ಬಾಬು, ಬಿ.ಎ.ಮಧುಕುಮಾರ್, ಸುದರ್ಶನ್ ಜಿ.ಕೆ., ಜ್ಯೋತಿ ಉಪಸ್ಥಿತರಿದ್ದರು.

ಮೈಸೂರು ಸುದ್ದಿಗಳು

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

Thursday 26 March 2015

ಮೈಸೂರು ಸುದ್ದಿಗಳು

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

ಮೈಸೂರು ಸುದ್ದಿಗಳು

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

ಮೈಸೂರು ಸುದ್ದಿಗಳು

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.