Friday 6 March 2015

ಮೈಸೂರು ಸುದ್ದಿಗಳು.

ಮರಣ ಕಾರಣ ಮಾಹಿತಿ ಕುರಿತು ವೈದ್ಯಾಧಿಕಾರಿಗಳು ಎಚ್ಚರ ವಹಿಸಬೇಕು: ಫ್ರಭುಸ್ವಾಮಿ
ಮೈಸೂರು,ಮಾ.6.ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಮರಣ ಕಾರಣಗಳ ಬಗ್ಗೆ ವೈಜ್ಞಾನಿಕವಾಗಿ ಸಂಗ್ರಹಿಸುವಂತಹ ಮಾಹಿತಿಯಾಗಿದ್ದು, ಈ ಸಂಬಂಧ ವೈದ್ಯಾಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹೇಳಿದರು.
     ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಭಾರತ ಸರ್ಕಾರದ ಜನಗಣತಿ ನಿರ್ದೇಶನಾಲಯದ ಸಹಯೋಗದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಕುರಿತು ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ವ್ಯಕ್ತಿಯ ಮರಣದ ಕಾರಣ ತಿಳಿಯಲು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಮುಖ್ಯ ದಾಖಲಾತಿಯಾಗಿದೆ. ವ್ಯಕ್ತಿಯ ಮರಣದ ನಂತರ ವೈದ್ಯಕೀಯ ಪರೀಕ್ಷೆ ನಡೆಸುವ ವೈದ್ಯಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಮರಣ ಕಾರಣ ಕುರಿತು ತಪ್ಪು ಮಾಹಿತಿ ನೀಡಿದರೆ ಗೊಂದಲಕ್ಕೆ ಕಾರಣವಾಗುತ್ತದೆ. ಆದುದರಿಂದ ಮಾಹಿತಿ ನೀಡುವ ವೇಳೆ ಮರಣದ ಕಾರಣವನ್ನು ಸರಿಯಾಗಿ ಪರೀಕ್ಷಿಸಿ ಪರಿಶೀಲಿಸಿ ನೀಡಬೇಕಾಗಿದೆ ಎಂದು ತಿಳಿಸಿದರು.
     1969 ಜನನ ಮರಣ ನೋಂದಣಿಯ ಅಧಿನಿಮಯದಡಿಯಲ್ಲಿ ಬರುವ ಪ್ರಕರಣ 10(2) ಮತ್ತು 10(3) ರ ಪ್ರಕಾರ ರೋಗಿಗೆ ಶುಶ್ರೂಷೆ ನೀಡಿದ ವೈದ್ಯರು ರೋಗಿಯ ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಮಾಡಲಾಗಿದೆ. ಮರಣದ ಕಾರಣ ಸಂಗ್ರಹಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ದ್ವಿತೀಯ ಮಾಹಿತಿಗೆ ಪ್ರಾಮುಖ್ಯತೆ ನೀಡಬಾರದು. ಮೊದಲ ಮಾಹಿತಿಯೇ ಯಾವಾಗಲೂ ಸರಿಯಾದ ಮರಣದ ಕಾರಣ ತಿಳಿಯಲು ಸಹಕಾರಿ ಎಂದರು.
    ಸರಿಯಾದ ಮರಣದ ಕಾರಣ ವೈದ್ಯಕೀಯ ಪಮಾಣ ಪತ್ರವು, ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ನಾಗರೀಕ ಮೂಲಭೂತ ಸೌಕರ್ಯಗಳಾದ ವಸತಿ, ಶಿಕ್ಷಣ ಮತ್ತಿತರ ಯೋಜನಾ ಕಾರ್ಯಕ್ರಮವನ್ನು ನಿರೂಪಿಸಲು ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತವೆ. ಅಲ್ಲದೇ ಆರೋಗ್ಯ ಸಂಶೋಧನಾ ಕಾರ್ಯದಲ್ಲಿ ಮಹತ್ವವನ್ನು ಪಡೆದಿದೆ ಎಂದು ಪ್ರಭುಸ್ವಾಮಿ ತಿಳಿಸಿದರು.
     ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ವೈದ್ಯರಿಂದ ದೃಢೀಕರಿಸಲ್ಪಟ್ಟ ಮರಣ ಕಾರಣ ಪ್ರಮಾಣ ಪತ್ರದ ನಿಗಧಿತ ನಮೂನೆಯಲ್ಲಿ ಮರಣ ಕಾರಣಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಪ್ರಮುಖ ಜನಸಂಖ್ಯಾ ಶಾಸ್ತ್ರದ ಸೂಚಿಗಳಾದ ಶಿಶು, ತಾಯಂದಿರ ಹಾಗೂ ಮಕ್ಕಳ ಮರಣ ಪ್ರಮಾಣಗಳನ್ನು ಈ ಮಾಹಿತಿಯಿಂದ ತಯಾರಿಸಬಹುದಾಗಿದೆ ಹಾಗೂ ಆರೋಗ್ಯ ಯೋಜಕರು, ಆಡಳಿತಗಾರರು, ಯೋಜನಾ ತಯಾರಕರು ಹಾಗೂ ಸಂಶೋಧನಾಕಾರರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
      ಭಾರತ ಸರ್ಕಾರ ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ಡಾ. ಮರುಳಸಿದ್ದಯ್ಯ ಮಾತನಾಡಿ ಮೈದ್ಯಾಧಿಕಾರಿಗಳು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನಮೂನೆಯಲ್ಲಿ ಮರಣ ಹೊಂದಿರುವ ವ್ಯಕ್ತಿಯ ಮರಣಕ್ಕೆ ಸಂಬಂಧಸಿದ ತಕ್ಷಣ ಹಾಗೂ ಮೂಲ ಕಾರಣಗಳ ಬಗ್ಗೆ ಸರಿಯಾಗಿ ಮಾಹಿತಿ ನಮೂದಿಸಿರುವುದಿಲ್ಲ. ಇದರಿಂದಾಗಿ ಮರಣ ಕಾರಣಗಳ ಬಗ್ಗೆ ಸಂಕೇತ ನೀಡುವಲ್ಲಿ ತೊಂದರೆಯಾಗುತ್ತಿದೆ. ಮರಣ ಕಾರಣಗಳನ್ನು ನಮೂದಿಸುವಲ್ಲಿ ವೈದ್ಯಾಧಿಕಾರಿಗಳ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಆಯ್ದ ಪತ್ರಿ ಆಸ್ಪತ್ರೆಯಿಂದ ಒಬ್ದ ವೈದ್ಯಾಧಿಕಾರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
    ಭಾರತ ಸರ್ಕಾರ ಜನಗಣತಿ ನಿರ್ದೇಶನಾಲಯದ ಸಾಂಖ್ಯಿಕ ತಪಾಸಣಾ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನಸ್ವಾಮಿ, ಮೈಸೂರು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಆನಂದ್.ಪಿ ರಾಯಮನೆ, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರಾದ ಮಹದೇವಸ್ವಾಮಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ತಿಮ್ಮೇಗೌಡ ಹಾಗೂ ಇತರರು ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.    

ಮಾ. 8 ರಂದು ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ
     ಮೈಸೂರು,ಮಾ.6.-ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಆದರ್ಶ ವಿದ್ಯಾಲಯದ 2015-16 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯು ಮಾರ್ಚ್ 8 ರಂದು ಬೆಳಿಗ್ಗೆ 10-30 ರಿಂದ 12-30 ರವರಗೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರದೊಡನೆ ಮಾರ್ಚ್ 8 ರಂದು ಪರೀಕ್ಷೆಗೆ ತಪ್ಪದೆ ಹಾಜರಾಗುವಂತೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪೋಷಕರು ಕ್ರಮ ವಹಿಸುವಂತೆ ಡಯಟ್ ಪ್ರಾಂಶುಪಾಲ ಬಿ.ಕೆ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 “ಕೃಷಿ ಭಾಗ್ಯ” : ರೈತರಿಂದ ಅರ್ಜಿ ಆಹ್ವಾನ
      ಮೈಸೂರು,ಮಾ.6.೯ಕೃಷಿ ಇಲಾಖೆ ವತಿಯಿಂದ  ಕೃಷಿ ಭಾಗ್ಯ ಯೋಜನೆಯಡಿ ಸಹಾಯಾನುದಾನಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಲ್ಲಿ ಮಳೆ ನೀರಿನ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆ, ಪಶುಸಂಗೋಪನಾ ಚಟುವಟಿಕೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು
       2015-16ನೇ ಸಾಲಿಗೆ ಹುಣಸೂರು ಮತ್ತು ಹೆಚ್.ಡಿ.ಕೋಟೆ ತಾಲ್ಲೂಕುಗಳಿಗೆ ಕೃಷಿ ಭಾಗ್ಯ ಯೋಜನೆ ವಿಸ್ತರಿಸಲಾಗಿದೆ. ಈ ಸೌಲಭ್ಯ ಎಲ್ಲಾ ವರ್ಗದ ರೈತರು ಪಡೆಯಬಹುದಾಗಿದೆ. ಆಸಕ್ತ  ಹುಣಸೂರು ಮತ್ತು ಹೆಚ್.ಡಿ.ಕೋಟೆ  ತಾಲ್ಲೂಕಿನ ರೈತರು ದಿನಾಂಕ 16-03-2015 ರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಪಡೆದು  ಭರ್ತಿ ಮಾಡಿದ ಅರ್ಜಿಯನ್ನು  ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ದಿನಾಂಕ 31-03-2015 ರೊಳಗೆ ಸಲ್ಲಿಸುವುದು.
     ಹೆಚ್ಚಿನ ಮಾಹಿತಿಗೆ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ತಿತಿತಿ.ಡಿಚಿiಣಚಿmiಣಡಿಚಿ.ಞಚಿಡಿ.ಟಿiಛಿ.iಟಿ ಮತ್ತು ಉಚಿತ ಸಹಾಯವಾಣಿ ಸಂಖ್ಯೆ 18004253553 & 18001801551 ಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಫಲಾನುಭವಿಗಳಿಗೆ ಚೆಕ್ ವಿತರಣೆ
 
ಮೈಸೂರು,ಮಾ.6.-ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹೆಚ್ ಆಂಜನೇಯ ಅವರು ಇತ್ತೀಚೆಗೆ  ಹೆಚ್.ಡಿ.ಕೋಟೆ ತಾಲ್ಲೂಕಿನ ಮಾನೀಮೂಲೆ ಹಾಡಿಯಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹೈನುಗಾರಿಕೆಗಾಗಿ ನೀಡಲಾಗುವ ಸಾಲದ ಚೆಕ್‍ನ್ನು ಫಲಾನುಭವಿಗಳಿಗೆ ವಿತರಿಸಿದರು.
        ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ನೂರಲಕುಪ್ಪೆಯ ನಾಗೇಂದ್ರ ಅವರಿಗೆ ರೂ34,000/- , ಹಂಪಾಪುರ ಹೋಬಳಿಯ ಕಂಚಮಳ್ಳಿ ಗ್ರಾಮದ ಶಿವನಂಜಮ್ಮ ಅವರಿಗೆ ರೂ 50,000/-, ಹೆಚ್.ಮಟಕೆರೆಯ ಪುಷ್ಪಾ ಅವರಿಗೆ ರೂ 50,000/- ಹಾಗೂ ಹೈರಿಗೆಯ ಶಶಿರೇಖ ಅವರಿಗೆ ರೂ 50,000/- ಸಾಲದ ಚೆಕ್ ವಿತರಿಸಲಾಯಿತು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 7 ರಂದು ಶಂಕುಸ್ಥಾಪನಾ ಸಮಾರಂಭ
     ಮೈಸೂರು,ಮ೬-ಟಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ 2ನೇ ಹಂತ, ತಲಕಾಡು ಹಾಗೂ ಮೇದಿನಿ ಮಿತ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವು ಮಾರ್ಚ್ 7 ರಂದು ಮಧ್ಯಾಹ್ನ 3 ಗಂಟೆಗೆ ಮುಡುಕುತೊರೆ ಏತ ನೀರಾವರಿ ಯೋಜನೆಯ ಹತ್ತಿರ ನಡೆಯಲಿದೆ.
   ಲೋಕೋಪಯೋಗಿ ಇಲಾಖೆಯ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಶಂಕುಸ್ಥಾಪನೆ ಕಾರ್ಯ ನೆರವೇರಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ವೇದಿಕೆ ಕಾರ್ಯಕ್ರಮದ ಜ್ಯೋತಿ ಬೆಳಗಿಸುವರು.  
    ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್. ತಂಗಡಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಮುಂದೂಡಿಕೆ
     ಮೈಸೂರು,ಮಾ.6.ಚಾಮರಾಜನಗರ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7 ರಂದು ನಡೆಯಬೇಕಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

No comments:

Post a Comment