Tuesday 17 March 2015

ಮಂಡ್ಯ, ಮಾ.17- ರೈತರಿಗೆ ನೀಡಬೇಕಾದ ಬಾಕಿಹಣವನ್ನು ಪಾವತಿಸುವಂತೆ ರೈತಸಂಘದ ಕಾರ್ಯಕರ್ತರು ಆದೇಶಿಸಿದರು.
 ಜಿಲ್ಲಾಧಿಕಾರಿ ಕಛೇರಿಯಲ್ಲಿ ಆಹಾರಾಧಿಕಾರಿ ಕುಮುದರವರ ನೇತøತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಅಧಿಕಾರಿಗಳು ಹಾಗೂ ರೈತರ ನಡುವೆ ಕರೆದಿದ್ದ ಸಭೆಯಲ್ಲಿ ರೈತರಿಗೆ ನೀಡಬೇಕಾದ 100 ಪೆÇ್ರೀತ್ಸಾಹಧನ ಇದುವರೆಗೂ ನೀಡಿಲ್ಲ ಕೂಡಲೇ ಬಾಕಿ ಕೊಡಿಸಲು ಜಿಲ್ಲಾಧಿಕಾರಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮದ್ದೂರಿನಲ್ಲಿ ತಾಲ್ಲೂಕು ಅಧಿಕಾರಿಯವರ ನೇತøತ್ವದಲ್ಲಿ ನಡೆದ ಸಭೆಯಲ್ಲಿ ಚಾಂಷುಗರ್ ಐಎಸ್‍ಎಲ್ ಕಾರ್ಖಾನೆಯವರು ಈ ತಿಂಗಳ ಹಂತ್ಯದೊಳಗೆ ಬಾಕಿ ಹಣ ನೀಡುವುದಾಗಿ ಹೇಳಿದ್ದಾರೆ ಆ ಮತಿಗೆ ತಪ್ಪಿದರೆ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ರೈತಸಂಘದ ಜಿಲ್ಲಾಧ್ಯಕ್ಷ ರಾಜೇಗೌಡ ಮಾತನಾಡಿ, ಜಿಲ್ಲಾಧಿಕಾರಿ ನೇತøತ್ವದಲ್ಲಿ ಈಗಾಗಲೇ ಅನೇಕ ಸಭೆಗಳು ನಡೆದಿದ್ದು, ಕೂಡಲೇ ಬಾಕಿ ಹಣ ನೀಡುವುದಾಗಿ ಹೇಳಿ ಇದುವರೆಗೂ ನೀಡಿಲ್ಲ. ಮುಂದೆಯೂ ಇವರು ನೀಡುವುದಿಲ್ಲ. ಜಿಲ್ಲಾಧಿಕಾರಿಯವರು ಮಧ್ಯಸ್ಥಿಕೆ ವಹಿಸಿ ಕೊಡುವುದಾದರೆ ನಾವು ತೀರ್ಮಾನಕ್ಕೆ ಬದ್ಧವಾಗುತ್ತೇವೆ. ಇಲ್ಲವಾದರೆ ನಾವು ನಡೆಸುವ ಹೋರಾಟವನ್ನು ತಡೆಯುವ ಬದಲು ನಮಗೆ ಪೆÇ್ರೀತ್ಸಾಹ ನೀಡಬೇಕು ಎಂದು ಹೇಳಿದರು.
ಮೈಷುಗರ್ ಮುಖ್ಯವ್ಯವಸ್ಥಾಪಕ ಪ್ರೇಮ್‍ಕುಮಾರ್ ಮಾತನಾಡಿ, 2.41ಲಕ್ಷ ಟನ್ ಕಬ್ಬು ನುರಿಸಲಾಗಿದೆ. 42.44ಕೋಟಿ ಹಣ ರೈತರಿಗೆ ಬಟವಡೆ ಮಾಡಿದ್ದು, 10.77ಕೋಟಿ ಹಣ ಬಾಕಿ ಇದೆ. ಮೈಷುಗರ್‍ಗೆ ಸಂಬಂಧಿಸಿ 100 ಪೆÇ್ರೀತ್ಸಾಹದನದಲ್ಲಿ ಬಾಕಿ ಇಲ್ಲ ಎಂದು ಹೇಳಿದರು.
ರಾಜೇಗೌಡ ಮಾತನಾಡಿ, ಮೈಷುಗರ್‍ಗೆ ಸಂಬಂಧ ಪಟ್ಟಂತೆ ಕೇವಲ ಕಬ್ಬು ನುರಿಸುವುದು ಮಾತ್ರವಲ್ಲ. ಜನರ ಆರೋಗ್ಯದ ಕಡೆಯು ಸ್ವಲ್ಪ ಗಮನ ಹರಿಸಬೇಕು. ಮೈಷುಗರ್ ಇಟಿಪಿಗೆ ಸಂಬಂಧಿಸಿದಂತೆ ಸುತ್ತಮುತ್ತಲ ಜನತೆಗೆ ಈ ದುರ್ವಾಸನೆಯನ್ನು ತಾಳಲಾರದಂತಾಗಿದ್ದಾರೆ. ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಎನ್‍ಎಸ್‍ಎಲ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಮಾತನಾಡಿ, ಎನ್‍ಎಸ್‍ಎಲ್ ಕಾರ್ಖಾನೆಗೆ ಸಂಬಂಧಿಸಿದೆ 8.52ಲಕ್ಷ ಟನ್ ಕಬ್ಬು ನುರಿಸಲಾಗಿದೆ. 1.2ಲಕ್ಷ ಟನ್ ಕಬ್ಬು ಬಾಕಿ ಇದ್ದು ಏಪ್ರಿಲ್ ಅತ್ಯಂದೊಳಗೆ ಎಲ್ಲಾ ಮುಗಿಸಿಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಗೆ 133ಕೋಟಿ ಹಣ ಪೇಮೆಂಟ್ ಮಾಡಿದ್ದು, 53ಕೋಟಿ ಹಣ ಬಾಕಿ ನೀಡಬೇಕು ಮಾ.31ರೊಳಗೆ ಪೂರ್ಣಗೊಳಿಸಿಕೊಡಲಾಗುವುದು ಎಂದು ಹೇಳಿದರು.
ರೈತಸಂಘದ ನರಸರಾಜು ಮಾತನಾಡಿ, ಈವರೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಯಾವ ತಿಂಗಳಿನವರೆಗೆ ಹಣ ನೀಡಿದ್ದೀರಿ?
ದೀಪಕ್ ಮಾತನಾಡಿ, ಡಿ.15ರವರೆಗೆ ಕಬ್ಬು ಸರಬರಾಜು ಮಾಡಿದ ಪ್ರತಿಯೊಬ್ಬರಿಗೂ ಹಣ ಪಾವತಿಸಲಾಗಿದೆ. ಮಧ್ಯಯಾವುದಾದರೂ ಮದುವೆ ಇನ್ನಿತರ ಸಮಸ್ಯೆಗಳಿಗೆ ಬಂದವರಿಗೆ ಹಣ ನೀಡಲಾಗಿದೆ ಎಂದು ತಿಳಿಸಿದರು.
ನರಸರಾಜು ಮಾತನಾಡಿ, ಕಬ್ಬು ಸರಬರಾಜು ಮಾಡಿ 3ತಿಂಗಳಾದರೂ ಇನ್ನೂ ಹಣ ನೀಡಿಲ್ಲ ಎಂದು ಹೇಳುತ್ತಿದ್ದೀರಿ. ರೈತ ಕಬ್ಬು ಸರಬರಾಜು ಮಾಡಿ ಎಲ್ಲಿಗೆ ಹೋಗಬೇಕು. ಅವನ ಕಷ್ಟ ನಿಮಗೆ ಗೊತ್ತಿದೆಯೇ. ನೀವು ಕಬ್ಬು ಸರಬರಾಜು ಮಾಡಿಕೊಂಡು ಸಕ್ಕರೆ ಮಾರಿ ಉತ್ತಮ ಜೀವನ ನಡೆಸುತ್ತಿದ್ದೀರಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್‍ನಲ್ಲಿ ಲೋನ್‍ಗೆ ಹಾಕಲಾಗಿದೆ ಈ ತಿಂಗಳ 28ರೊಳಗೆ ದೊಡ್ಡ ಮೊತ್ತದ ಹಣ ಬರುತ್ತದೆ ಮಾ.31ರೊಳಗೆ ಎಲ್ಲಾ ಬಾಕಿ ಹಣವನ್ನು ಇತ್ಯಾರ್ಥ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ರೈತರಿಗೆ ನೀಡಬೇಕಾದ ಬಾಕಿ 100 ಪೆÇ್ರೀತ್ಸಾಹ ಧನವನ್ನು ಯಾವ ನೀಡುತ್ತೀರಿ?
ಈ ಸಂಬಂಧ ಸರ್ಕಾರದೊಂದಿಗೆ ದೊಡ್ಡದೊಡ್ಡ ಕಂಪನಿಗಳು ಚರ್ಚಿಸುತ್ತಿದ್ದೆವೇ ಕೂಡಲೇ ಇದರ ಬಗ್ಗೆ ತೀರ್ಮಾನ ಕೈಗೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ನೀವು ಸರ್ಕಾರದಿಂದ ಯಾವಾಗಲಾದರೂ ತೆಗೆದುಕೊಳ್ಳಿ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಶೀಘ್ರ ನೀಡುಂತೆ ಮಾಡಿ ಇಲ್ಲವಾದರೆ ಕಾರ್ಖಾನೆಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಐಸಿಎಲ್ ಕಾರ್ಖಾನೆಯ ಬಾಬುರಾಜ್ ಮಾತನಾಡಿ, 7.15ಲಕ್ಷ ಟನ್ ಕಬ್ಬು ನುರಿಸಿದ್ದು, 1.25ಸಾವಿರ ಟನ್ ಬಾಕಿ ಇದೆ ಈ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಸಂಬಂಧ ಒಟ್ಟು 161ಕೋಟಿ ಹಣವಾಗಿದ್ದು, ಇದರಲ್ಲಿ 127.58 ಕೋಟಿ ಹಣ ಪಾವತಿಸಿದ್ದು 33ಕೋಟಿ ರೈತರಿಗೆ ಬಾಕಿ ನೀಡಬೇಕು ಕೂಡಲೇ ಪೂರ್ಣಗೊಳಿಸಿಕೊಡಲಾಗುವುದು ಎಂದು ತಿಳಿಸಿದರು.
ನಿಮ್ಮ ಕಾರ್ಖಾನೆ ಸಂಬಂಧಿಸಿದಂತೆ ಪೆÇ್ರೀತ್ಸಾಹ ಧನ 100 ರೂ. ಯಾವಾಗ ನೀಡುತ್ತೀರು ಎಂದು ಕೇಳಿದ ಪ್ರಶ್ನೆಗೆ ಬಾಬುರಾಜ್ ಮೌನವಹಿಸಿದರು.
ಪಿಎಸ್‍ಎಸ್‍ಕಾರ್ಖಾನೆ ಅಧ್ಯಕ್ಷ ನಂಜುಂಡೇಗೌಡ ಸೇರಿದಂತೆ ವಿವಿಧ ಕಾರ್ಖಾನೆ ಅಧಿಕಾರಿಗಳು ಪಾಲ್ಗೊಂಡಿದ್ದರು.

No comments:

Post a Comment