Monday 30 March 2015

ಮಂಡ್ಯ: ಯುವ ಸಮೂಹ ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ದುಶ್ಚಟದಿಂದ ದೂರ ಇರಬೇಕು ಎಂದು ಸಂಸದ ಸಿ.ಎಸ್. ಪುಟ್ಟರಾಜು ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಶ್ರೀ ಸೋಮೇಶ್ವರ ಕನ್ನಡ ಯುವಕ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವ ಸಮುದಾಯ ಅಪಾಯದ ಹಂಚಿನಲ್ಲಿದ್ದು, ನಿರ್ಧಿಷ್ಟ ಗುರಿ ಇಲ್ಲದೆ ತೊಳಲಾಟದಿಂದ ಬಳಲುತ್ತಿದ್ದು, ಸ್ಪಷ್ಟ ಆಲೋಚನೆ ಮತ್ತು ಗುರಿ ಸಾಧನೆಯೊಂದಿಗೆ ಮುನ್ನಡೆಸುವ ನೈತಿಕ ಶಿಕ್ಷಣ ಅವಶ್ಯಕತೆ ಇದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರುದ್ಯೋಗ ನಿವಾರಣೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇಂದಿನ ಯುವಜನರಲ್ಲಿ ಕೌಶಲ್ಯ ಚಟುವಟಿಕೆಗಳು ವಿರಳವಾಗಿವೆ. ಕುಶಲ ಕರ್ಮಿಗಳಾಗಿ ಬದುಕನ್ನು ಸಾಗಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಗ್ರಾಮೀಣ ಯುವ ಸಂಘಟನೆಗಳ ಗಣನೀಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಮತ್ತು ಭಾವೈಕ್ಯತೆ ನೆಲೆಸಲು ಯುವ ಸಂಘಟನೆ ಕಾರ್ಯಗಳು ಮುಂದಾಗಬೇಕೆಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಯುವಕರ ಮೇಲಿದ್ದು, ಪ್ರಸ್ತುತ ಯುವಕರ ಪಯಣ ಎತ್ತ ಸಾಗುತ್ತದೆ ಎಂದು ಚಿಂತಿಸಬೇಕಾಗಿದೆ ಎಂದರು.
ಎಲ್ಲರಿಗೂ ಮಾದರಿಯಾಗಿ ಸೋಮೇಶ್ವರ ಯುವಕ ಸಂಘವು ಯಾರ ಬಳಿಯೂ ಹಣ ಚಾಚದೆ, ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ನಾನು ವಿಶೇಷ ಆದ್ಯತೆ ನೀಡುತ್ತಿದ್ದೆ. ಗ್ರಾಮಗಳಲ್ಲಿ ನೈರ್ಮಲ್ಯ ಶುಚಿತ್ವ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಮುಂದೆಯೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕನಾಗಿರುತ್ತೇನೆ. ಗ್ರಾಮಗಳಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿಪರ ಯೋಜನೆಗಳನು ಹಮ್ಮಿಕೊಳ್ಳಲು ಸಮಸ್ತ ನಾಗರೀಕರು ಸಹಕರಿಸಬೇಕೆಂದು ಕೋರಿದರು.
ಪಿಎಸ್‍ಎಸ್‍ಕೆ ಅಧ್ಯಕ್ಷ ನಂಜುಂಡೇಗೌಡ ಮಾತನಾಡಿ, ರಚನಾತ್ಮಕ ಯುವಜನ ಚಟುವಟಿಕೆಗಳಿಗೆ ಸದಾ ಮುಂದಾಗಿರುವ ಯುವ ಸಂಘಟನೆಗಳು ಅನ್ಯ ಮಾರ್ಗ ಹಿಡಿಯದೆ ಸುವ್ಯವಸ್ಥಿತವಾದಂತಹ ಮಾದರಿಯಲ್ಲಿ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕ್ರಿಯಾತ್ಮಕ ಯುವಜನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವ ಬೆಳವಣಿಗೆಗೆ ಸಹಕಾರ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಮಂಗಲ ಎಂ. ಯೋಗೇಶ್ ಆದರ್ಶ ಸಂಸದರ ಗ್ರಾಮದಡಿ ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯುವಕ ಸಂಘಗಳ ಮೂಲಕ ಮಾಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ. ಅಧ್ಯಕ್ಷ ಮಹೇಶ್, ಮುಜರಾಯಿ ತಹಸೀಲ್ದಾರ್ ರಂಗನಾಥ್, ಗ್ರಾ.ಪಂ. ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಟಿ.ಎಂ. ದ್ಯಾವೇಗೌಡ, ಲೋಕೇಶ, ಮರೀಗೌಡ, ನಾಗಣ್ಣ, ಪಿ.ಸಿ. ಜಲೇಂದ್ರ, ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಬಸವರಾಜು, ಸಂಘದ ಅಧ್ಯಕ್ಷ ಟಿ.ಆರ್. ಶಂಕರ್, ಪಿ.ಡಿ. ಮಹದೇವ, ಟಿ.ಬಿ. ಅರುಣ, ಟಿ.ಎಲ್. ರಘು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಎಚ್. ಮೀನಾಕ್ಷಿ, ಟಿ.ಎಂ. ನಾಗರಾಜು ಅವ

No comments:

Post a Comment