Friday 27 March 2015

 ಮೈಸೂರಿನ ಕೊಲಂಬಿಯಾ ಏಷಿಯಾ ಹಾಸ್ಪಿಟಲ್‍ನಲ್ಲಿ  ಆಡಿಯೋಲಜಿ ಸೆಂಟರ್‍ನ ಉದ್ಘಾಟನೆ
ಮೈಸೂರು,ಮಾ.27- ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪಿಟಲ್‍ನಲ್ಲಿ ಆಡಿಯೋಲಜಿ ಸೆಂಟರ್ ಅನ್ನು ತೆರೆಯಲಾಗಿದ್ದು,  ಮೈಸೂರಿನ ಜನತೆಯ ಅನುಕೂಲಕ್ಕಾಗಿ ಸೇವೆಗೆ ಆರಂಭಿಸಿ ಅದನ್ನು ಇತ್ತೀಚೆಗೆ ಪ್ರೊಬೆಷನರಿ ಅಧಿಕಾರಿ ಅಶ್ವತಿಯವರಿಂದ ಉದ್ಘಾಟಿಸಲಾಯಿತು ಎಂದು  ಆಸ್ಪತ್ರೆಯ ಆಡಿಯೋಲಜಿ ಮುಖ್ಯ ವ್ಯವಸ್ಥಾಪಕ ಡಾ. ಪ್ರವೀಣ್ ರಾಯನಗೌಡರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಬಾಹ್ಯವಾಗಿ ಕೇಳಿಬರುವ ಶಬ್ಧದ ತರಂಗಾಂತರವು ದೊಡ್ಡ ಪ್ರಮಾಣದಲ್ಲಿ ಇದ್ದರೆ, ಅದು ಅಲ್ಪ ಅವಧಿಯದ್ದೇ ಆಗಿದ್ದರೂ ಹೆಚ್ಚಿನ ರೀತಿಯಲ್ಲಿ ಸಮಸ್ಯೆಯನ್ನು ತರಬಹುದು. ಇಂಥ ಶಬ್ಧಗಳು ಕಿವಿಯ ಒಳಭಾಗದಲ್ಲಿರುವ ಸೂಕ್ಷ್ಮವಾದ ರಚನೆಯನ್ನು ಜಖಂಗೊಳಿಸಬಹುದು. ಶ್ರವಣದ ದೋಷ ಕಳೆದುಕೊಳ್ಳಬೇಕಾಗಿ ಬರಬಹುದು. ಆದರೆ, ಮಗು ಈಗಾಗಲೇ ಶ್ರವಣ ದೋಷದೊಂದಿಗೆ ಜನಿಸಿದ್ದರೆ ಏನುಮಾಡಬೇಕು? ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ 4-6 ಮಕ್ಕಳು ಹುಟ್ಟುತ್ತಲೇ ಕಿವುಡರಾಗಿರುತ್ತಾರೆ. ಇಂಥ ಮಕ್ಕಳು ವಯೋಸಹಜವಾಗಿ ಮಾತು, ಭಾಷೆ ಕಲಿಯುವುದಿಲ್ಲ. ಹೀಗಾಗಿ, ಶ್ರವಣ ಪರಿಕರದ ರೂಪದಲ್ಲಿ ಸೂಕ್ತ ಪರಿಹಾರ ಕ್ರಮವನ್ನು ಕೈಗೊಳ್ಳುವುದು ಮುಖ್ಯವಾಗಲಿದೆ. ಅಥವಾ ಕೊಚೆಲಿಯರ್ ಇಂಪ್ಲಾಂಟ್ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಈ ಎಲ್ಲ ಅಂಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೊಲಂಬಿಯ ಏಷಿಯಾ ಮೈಸೂರು ನಗರದಲ್ಲಿ ಅತ್ಯಾಧುನಿಕ ಸೌಲಭ್ಯದ ಆಡಿಯೋಲಜಿ ಕೇಂದ್ರವನ್ನು ಕೊಲಂಬಿಯ ಏಷಿಯಾ ಆಸ್ಪತ್ರೆಯು ಮೈಸೂರಿನಲ್ಲಿ ಮಾರ್ಚ್ 22ರ ಭಾನುವಾರ ಆ್ಯಂಪಿಫೋನ್ ಸಹಯೋಗದಲ್ಲಿ ಆರಂಭಿಸಿತು. ಕೊಚೆಲಿಯರ್ ಇಂಪ್ಲಾಂಟ್ ತಂಡದೊಂದಿಗೆ ಕೊಚೆಲಿಯರ್ ಇಂಪ್ಲಾಂಟೇಷನ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಆಯೋಜಿಸಿದ್ದು, ಹಾಗೂ ನ್ಯೂಕ್ಲಿಯಸ್ 6 ಎಂದು ಹೇಳಲಾಗುವ ನೂತನ ಸ್ವಯಂಚಾಲಿತ ಮತ್ತು ನಿಸ್ತಂತು ಕೊಚೆಲಿಯರ್ ಧ್ವನಿ ಸಂಸ್ಕರಣ ವ್ಯವಸ್ಥೆಯನ್ನು ಆರಂಭಿಸಿತು. ಲಲ್ಲದೆ, ಒಂದು ತಿಂಘಳ ಅವಧಿಯ ಶಿಬಿರನ್ನು ಮಕ್ಕಳು ಮತ್ತು ವಯಸ್ಕರಿಗಾಗಿ ಇದೇ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ ಎಂದರು.
 ಚೀಫ್ ಆಟಿಯೋಲಜಿಸ್ಟ್ ಆಗಿರುವ ಪ್ರವೀಣ್ ರಾಯನಗೌಡರ್ ಅವರು  ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ವಿವರಗಳನ್ನು ವಿವರಿಸಿದರು. ಬಳಿಕ ಕೊಚೆಲಿಯರ್ ಇಂಪ್ಲಾಟ್ ಕುಇತು ನೂತನ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರವೀಣ್ ಅವರು ನೂತನ ನ್ಯೂಕ್ಲಿಯಸ್ 6 ಕುರಿತು ಸÀಭಿಕರಿಗೆ ಮಾಹಿತಿಂiÀiನ್ನು ನೀಡಿದ್ದು,  ಇದನ್ನು ಬಳಸಿಕೊಂಡ ಮಕ್ಕಳು ಸ್ಷಪ್ಟವಾಗಿ ಕೇಳಸಿಕೊಳ್ಳಲು ಶಕ್ತರಾಗಿದ್ದಾರೆ ಎಂದು ಮಾಹಿತಿ ನಿಡಿದರು.  ಕೊಲಂಬಿಯ ಏಷಿಯಾ ಹಾಸ್ಪಿಟಲ್, ಮೈಸೂರಿನ ಚೀಫ್ ಕೊಚೆಲಿಯರ್ ಇಂಪ್ಲಾಂಟ್ ಸರ್ಜನ್ ಡಾ. ಎಚ್.ದತ್ತಾತ್ರಿ ಅವರು ಅವರು, ಯಾರಾದರೂ ಶ್ರವಣ ಪರಿಕರ ಹಾಕಿಕೊಳ್ಳಲು ಬಯಸಿದರೆ ಖಂಡಿತವಾಗಿ ಅವರು ಕೊಚೆಲಿಯರ್ ಇಂಪ್ಲಾಂಟ್ ಹೊಂದಬೇಕು ಎಂಧು ಸಲಹೆ ಮಾಡಿದರು. ಕೊಲಂಬಿಯ ಏಷಿಯಾ ಆಸ್ಪತ್ರೆಯ ಆಡಿಯೋಟರಿ ವರ್ಬಲ್ ಥೆರಪಿಸ್ಟ್ ಮಹೇಂದ್ರ ಕುಮಾರ್ ಅವರು, ಸಭಿಕರಿಗೆ ಮಗು ಸಾಮಾನ್ಯವಾಗಿ ಮಾತನಾಡಲು, ಭಾಷೆಯನ್ನು ಗ್ರಹಿಸಲು ವಿಫಲವಾದಲ್ಲಿ ಸೂಕ್ತ ಥೆರಪಿ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್ (ಪಿಎಡಿಸಿ ಮೈಸೂರು) ನಿರ್ವಹಣೆ ಮಾಡುತ್ತಿರುವ ಶಾಲೆಯ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರವಣಶಕ್ತಿಯನ್ನು ಕಳೆದುಕೊಳ್ಳುವುದು ವಯಸ್ಕರು ಮತ್ತು ಹಿರಿಯರಲ್ಲಿ ಕಾಣಿಸುವ ಸಾಮಾನ್ಯ ಸಮಸ್ಯೆ. 65 ರಿಂದ 74ನೇ ವರ್ಷದವರೆಗೆ ಅಂದಾಜು ಮೂರನೇ ಒಂದರಷ್ಟು ಜನರು ಹಾಗೂ 75 ವರ್ಷಕ್ಕೂ ಮೇಲ್ಪಟ್ಟು ಶೇ 50ಕ್ಕೂ ಹೆಚ್ಚಿನವರು ಶ್ರವಣ ಸಮಸ್ಯೆ ಎದುರಿಸುತ್ತಾರೆ. ಇಲ್ಲಿ ಜೋಡಿ ಶ್ರವಣ ಪರಿಕರ ಅಳವಡಿಸಿ ಕೊಂಡರೂ ಧ್ವನಿ, ಶಬ್ಧವನ್ನು ಗ್ರಹಿಸಲು ಕಷ್ಟವಾಗಲಿದೆ. ವೈದ್ಯರ ಸಲಹೆಯನ್ನುಪಾಲಿಸುವುದು, ಎಚ್ಚರಿಕೆಗಳಿಗೆ ಪ್ರತಿಕ್ರಿಯಿಸುವುದು, ಕರೆ ಗಂಟೆಗೆ ಸ್ಪಂದಿಸುವುದು ಕಷ್ಟವಾಗಲಿದೆ. ಜೊತೆಗೆ ಗೆಳೆಯರು, ಕುಟುಂಬ ಸದಸ್ಯರ ಜೊತೆಗೆ ಖುಷಿಯಾಗಿ ಮಾತನಾಡುವುದು ಕಷ್ಟವಾಲಿದೆ. ಈ ಎಲ್ಲವೂ ಬೇಸರ, ಇರಿಸುಮುರಿಸು ತರಲಿದೆ. ಅಪಾಯಕಾರಿ ಕೂಡಾ ಹೌದು ಎಂದು ವಿವರಿಸಿದರು.

No comments:

Post a Comment