Monday 30 March 2015

ಮೈಸೂರು ಮಹಾನಗರ ಪಾಲಿಕೆ, ಮೈಸೂರು
ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವುದು ತ್ಯಾಜ್ಯ ಬೇರ್ಪಡಿಸುವಿಕೆ, ಮರುಬಳಕೆ ಒಳಗೊಂಡಂತೆ ತ್ಯಾಜ್ಯ ವಿಲೇವಾರಿ ಬಗ್ಗೆ ಪೌರಕಾರ್ಮಿಕರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು
 ಮಂಗಳವಾರ ಮಧ್ಯಾಹ್ನ 12:00 ಗಂಟೆಗೆ ಟೌನ್‍ಹಾಲ್, ದೊಡ್ಡಗಡಿಯಾರ, ಮೈಸೂರು ಇಲ್ಲಿ ಮಹಾನಗರ ಪಾಲಿಕೆ ವ್ಯಾಫ್ತಿಯ ವಲಯ ಕಛೇರಿ-8 ರ ವ್ಯಾಪ್ತಿಗೆ ಬರುವ ಪೌರಕಾರ್ಮಿಕರಿಗೆ ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಹಾಗೂ ತ್ಯಾಜ್ಯ ಬೇರ್ಪಡಿಸಿ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.

ಕಾರ್ಯಾಗಾರದ ಮುಖ್ಯ ಉದ್ದೇಶ
ಮೂಲದಲ್ಲಿಯೇ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವುದು.
ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣಕಸ ಎಂದು ಬೇರ್ಪಡಿಸಿ ಸಾರ್ವಜನಿಕರಿಂದ ಪಡೆಯುವುದು.
ವಿಂಗಡಿಸಿದ ಘನ ತ್ಯಾಜ್ಯವನ್ನು ಸೂಕ್ತರೀತಿಯಲ್ಲಿ ವಿಲೇಮಾಡುವುದು.
ಘನ ತ್ಯಾಜ್ಯ ವಿಂಗಡನೆ ಏಕೆ ಮಾಡಬೇಕು? : ವಿಧದ ಘನತ್ಯಾಜ್ಯ ಮಿಶ್ರವಾದಲ್ಲಿ ಅದರಿಂದ ಉತ್ಪಾದನೆಯಾಗುವ ವಿಷಯುಕ್ತ ಲೀಚೆಟ್ ದ್ರವ ಮತ್ತು ವಿಷಯುಕ್ತ ಗಾಳಿಯು ನಾವು ವಾಸಿಸುವ ಈ ಪರಿಸರಕ್ಕೆ ಅಂದರೆ ಉಸಿರಾಡುವ ಗಾಳಿ, ಕುಡಿಯುವ ನೀರು ಹಾಗೂ ಆಹಾರ ಪದಾರ್ಥಗಳನ್ನು ಬೆಳೆಯುವ ಮಣ್ಣಿನಲ್ಲಿ ವಿಷಕಾರಕ ವಸ್ತುಗಳು ಸೇರಿಕೊಂಡು ಸಮಸ್ತ ಜೀವರಾಶಿಗೆ ಅಪಾಯ ಉಂಟಾಗುತ್ತದೆ.
ಮಿಶ್ರ ಘನತ್ಯಾಜ್ಯದಿಂದ ಸಮಸ್ತ ಜೀವರಾಶಿಗೆ ಅಪಾಯ ಹೇಗೆ ಉಂಟಾಗಿತ್ತದೆ? : ಮಿಶ್ರ ತ್ಯಾಜ್ಯವನ್ನು ಸುಡುವುದರಿಂದಲೂ ಸಹ ಗಾಳಿಯಲ್ಲಿ ವಿಷಯುಕ್ತ ಕಣಗಳು ಸೇರಿ ಉಸಿರಾಟದ ಸಮಸ್ಯೆ ಹಾಗೂ ಚರ್ಮ ರೋಗಗಳು ಉಂಟಾಗುತ್ತದೆ ಮತ್ತು ಗಾಳಿಯ ಮುಖಾಂತರ ಕುಡಿಯುವ ನೀರಿನ ಮೂಲಗಳಾದ ನದಿ, ಕೆರೆ ಮತ್ತು ಭಾವಿಗಳಲ್ಲಿ ಸೇರುತ್ತದೆ ಇದರಿಂದ ಸಮಸ್ತ ಜೀವರಾಶಿಗೆ ಅಪಾಯ  ಉಂಟಾಗುತ್ತಿದೆ.
ಹಸಿ ಕಸ ಮತ್ತು ಅದರ ನಿರ್ವಹಣೆ : ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ, ಕೊಳೆತ ತರಕಾರಿ/ಕೊಳೆತ ಹಣ್ಣು, ಮಾವಿನ ಹಣ್ಣಿನ ಗೊರಟು, ಉಪಯೋಗಿಸಿದ ಚಹದ ಬ್ಯಾಗ್‍ಗಳು, ಕಾಫಿ ಪುಡಿ, ಮೊಟ್ಟೆಯ ಸಿಪ್ಪೆ, ಹೂ/ಎಲೆಗಳು, ಹÁಳಾದ ಸಾಂಬಾರ ಪದಾರ್ಥಗಳು, ಕಸಗುಡಿಸಿದ ನೆಲದ ಧೂಳು, ಕೂದಲು ಮುಂತಾದವುಗಳನ್ನು ನೇರವಾಗಿ ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ನೀಡಿ. ಇವುಗಳಿಂದ ಅತ್ಯುತ್ತಮ ಗೊಬ್ಬರ ತಯಾರಿಸಬಹುದು. ಯಾವುದೇ ಕಾರಣಕ್ಕೂ ಇವುಗಳನ್ನು ಪ್ಲಾಸ್ಟಿಕ್ ಕವರ್‍ಗಳಲ್ಲಿ ಹಾಕಿ ಕಟ್ಟಿ ಇಡಬಾರದು.

ಮಾಂಸ ಮತ್ತು ಉಳಿದ ಮಾಂಸದ ತುಣುಕುಗಳು, ಕೊಳೆತ ಮೊಟ್ಟೆ, ಮೂಳೆ, ಅವಧಿ ಮುಗಿದ ಆಹಾರ ಪದಾರ್ಥಗಳು ( ಬ್ರೆಡ್ ಬಿಸ್ಕೇಟ್ಸ್, ಸಿದ್ಧ ಆಹಾರ), ಬೆರಳಿನ ಉಗುರುಗಳು, ಉಳಿದಿರುವ ಆಹಾರ ಪದಾರ್ಥ ಮುಂತಾದವುಗಳಲ್ಲಿನ ನೀರಿನ ಆಂಶವನ್ನು ಬಸಿದು ನೇರವಾಗಿ ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ನೀಡಿ. ಇವುಗಳಿಂದ ಅತ್ಯುತ್ತಮ ಗೊಬ್ಬರ ತಯಾರಿಸಬಹುದು. ಯಾವುದೇ ಕಾರಣಕ್ಕೂ ಇವುಗಳನ್ನು ಪ್ಲಾಸ್ಟೀಕ್ ಕವರ್‍ಗಳಲ್ಲಿ ಹಾಕಿ ಕಟ್ಟಿ ಇಡಬಾರದು
ತೆಂಗಿನಕಾಯಿಯ ಕರಟ, ತೆಂಗಿನ ನಾರು, ತೆಂಗಿನ ಬುರುಡೆ ಮುಂತಾದವುಗಳನ್ನು ಉರುವಲುಗಳನ್ನಾಗಿ ಉಪಯೋಗಿಸಬಹುದು.
ಮನೆಗಳಲ್ಲಿ ಉತ್ಪಾದನೆಯಾಗುವ ಒಣ ಕಸ ಮತ್ತು ಅದರ ನಿರ್ವಹಣೆ: ನೆಲವರೆಸುವ ಕೋಲು ಮತ್ತು ಬಟ್ಟೆ, ಜೀರ್ಣಾವಸ್ಥೆಗೆ ತಲುಪಿದ ಕಾಲು ವರೆಸುವ ಮ್ಯಾಟ್‍ಗಳು, ಪಾಯಿಕಾನೆ ತೊಳೆಯಲು ಉಯೋಗಿಸಿದ ಬ್ರಶ್‍ಗಳು, ಸ್ಕಬ್ಬರ್‍ಗಳು, ಹಲ್ಲಿನ ಬ್ರಶ್‍ಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ಹಾಲು, ಮೊಸರಿನ ಪ್ಯಾಕ್‍ಗಳು, ಬೆಣ್ಣೆ ಕಟ್ಟಲು ಬಳಸಲಾಗುವ ಪೇಪರ್, ತುಪ್ಪ/ಎಣ್ಣೆ ಪ್ಯಾಕ್‍ಗಳು, ಎಣ್ಣೆ ಕ್ಯಾನುಗಳು, ಸುಂಗಧ ದ್ರವ್ಯದ ಹಾಗೂ ಶಾಂಪು ಬಾಟಲಿಗಳು, ಟೆಟ್ರಾ ಪ್ಯಾಕ್‍ಗಳು, ತುಪ್ಪ, ಜಾಮ್‍ಗಳ ಶೇಖರಿಸಿದ ಅಲ್ಯುಮೀನಿಯಂ ಕವರ್‍ಗಳು ಮುಂತಾದವುಗಳನ್ನು ಚನ್ನಾಗಿ ತೊಳೆದು ಒಣಗಿಸಿ ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ಉಪಯೋಗಿ¸ಸಿದ ಟ್ಯೂಬ್, ಶೇವಿಂಗ್ ಕ್ರೀಮ್ ಕ್ಯಾನ್‍ಗಳು, ಲೇದರ್, ರೇಕ್ಸಿನ್, ರಬ್ಬರ್, ಪೀಠೋಪಕರಣಗಳು, ಥರ್ಮಕೋಲ್ ಒಡೆದ ಆಟಿಕೆಗಳು, ಹಳೆಯ ಪೊರಕೆಗಳು, ಟಿನ್ ಬಾಟಲಿಗಳು, ಪೆಪ್ಸಿ ಕ್ಯಾನ್‍ಗಳು, ಬಿಸ್ಲೇರಿ ಬಾಟಲಿಗಳು, ಶೂ ಗಳು, ಒಳಗೆ ಬೆಳ್ಳಿ ಲೈನಿಂಗ್ ಕವರ್ಸ್ ಲೇ ಪ್ಯಾಕೆಟ್ಸ್ ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.
ಮನೆಗಳಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ಕಸ ಮತ್ತು ಅದರ ನಿರ್ವಹಣೆ : ಕೀಟ ನಾಶಕ ಬಾಟಲಿಗಳು, ಸೋಪ್‍ಗಳ ಹೊರ ಕವಚಗಳು, ರೇಜರ್/ರೇಜರ್ ಬ್ಲೇಡ್, ಕ್ರೇಡಿಟ್/ಡೆಬಿಟ್/ಲೋಯಲ್ಟಿ ಕಾರ್ಡ್, ಮ್ಯಾಗ್ನೇಟಿಕ್ ಸ್ಟ್ರೀಪ್, ಯಾವುದೇ ವೈದ್ಯಕೀಯ ನೈರ್ಮಲ್ಯಗಳಿಗೆ ಬಳಸಲಾಗುವ ಟಿಶ್ಯೂ ಪೆಪರ್‍ಗಳು, ಸೊಳ್ಳೆ ನಿವಾರಕ ದ್ರವ ಬಾಟಲಿಗಳು, ಮ್ಯಾಟ್‍ಗಳು, ಓಡೋನಿಲ್‍ಗಳು, ತುಟಿಗಳಿಗೆ ಹಚ್ಚುವ ಬಣ್ಣಗಳು, ಉಗುರುಗಳಿಗೆ ಹಚ್ಚುವ ಬಣ್ಣಗಳು, ಸೌಂದರ್ಯವರ್ಧಕಗಳು ಅವಧಿ ಮುಗಿದ ಔಷಧಿಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ.

ತಂತಿಗಳ ತುಣುಕುಗಳು, ಹಳೆಯ ಎಲೆಕ್ಟ್ರಾನಿಕ್ ಭಾಗಗಳು, ಹಳೆ ಪೋನ್‍ಗಳು, ಅಡಾಪ್ಟರ್ಸ್, ಬ್ಲೂ ಟೂತ್ ಪರಿವರ್ತಕಗಳು, ಬ್ಯಾಟರಿಗಳು, ಸಿಡಿಗಳು, ಸಿ.ಎಫ್.ಎಲ್. ಟ್ಯೂಬ್ ಲೈಟ್‍ಗಳು, ಮುದ್ರಕ ಕ್ಯಾಟ್ರೀಜ್‍ಗಳು, ಹಾಳಾದ ಗಡಿಯಾರ, ಕೈ ಗಡಿಯಾರ, ಇಲೆಕ್ಟ್ರಾನಿಕ್ ವಸ್ತುಗಳು, ಹಾಳಾದ ಉಷ್ಣ ಮಾಪಕಗಳು ಮುಂತಾದ ಇ-ತ್ಯಾಜ್ಯಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪುರಸಭೆಯ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿ ಒಂದು ಬಾರಿ ನೀಡಿ. ಉಯೋಗಿಸಿದ ಸ್ಯಾನಿಟರಿ ನ್ಯಾಪ್‍ಕಿನ್‍ಗಳು, ಉಪಯೋಗಿಸಿದ ಸಿರೇಂಜ್‍ಗಳು, ಉಪಯೋಗಿಸಿದ ಹತ್ತಿ ಬೈಂಡೇಜ್‍ಗಳು,
ಮನೆಗಳಲ್ಲಿ ಉತ್ಪಾದನೆಯಾಗುವ ಉದ್ಯಾನ ಯಾ ತೋಟದ ಕಸ ಮತ್ತು ಅದರ ನಿರ್ವಹಣೆ : ಮರ ಮತ್ತು ಗಿಡಗಳಿಂದ ಉದುರಿದ ಎಲೆ, ಬಾಳೆಯ ದಿಂಡು, ಮುಂತಾದವುಗಳನ್ನು ಸಣ್ಣಗೆ ಕೊಚ್ಚಿ ರಾಶಿಹಾಕಿ ಅಗಾಗ್ಗೆ ಸಗಣಿ ನೀರನ್ನು ಚಿಮುಕಿಸಿ ಆರು ದಿವಸಗಳಿಗೊಮ್ಮೆ ರಾಶಿಯನ್ನು ಹರವಿ ಮತ್ತೆ ರಾಶಿಯನ್ನಾಗಿ ಮಾಡಿ ನೀರನ್ನು ಚಿಮುಕಿಸಿ ಮಾಡುವುದರಿಂದ ಉತ್ತಮ ಗೊಬ್ಬರ ಉತ್ಪಾದನೆಯಾಗುತ್ತದೆ.

ಪಾಲಿಕೆಯ ಪಾತ್ರ : ನಗರ ಪಾಲಿಕೆ ಅಧಿಕಾರಿಗಳು ಸಮಿತಿಯ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಘನತ್ಯಾಜ್ಯ ವಸ್ತು ನಿರ್ವಹಣೆಯ ನಿಯಮಗಳು, ಸ್ವಸಹಾಯ ಸಂಘಗಳ ಪಾತ್ರ ಹಾಗೂ ಇತ್ಯಾದಿ ಯೋಜನೆಗಳ ಬಗ್ಗೆ ಅರಿವು ನೀಡುವುದು ಮತ್ತು ಇದನ್ನು ಯಶಸ್ಸು ಗೊಳಿಸುವಲ್ಲಿ/ ಅನುಷ್ಠಾನಗೊಳಿಸುವಲ್ಲಿ ಪ್ರೇರೇಪಿಸುವುದು.

ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2000 ರನ್ವಯ ಪಾಲಿಕೆಯು ಹೊರಡಿಸುವ ನೀತಿ ನಿಯಮಗಳನ್ನು ಪಾಲಿಸದೇ ಅಸಹಕಾರ ತೋರುವ ಸಾರ್ವಜನಿಕರಿಗೆ ಮೊದಲ ಹಂತದಲ್ಲಿ ಅರಿವು ಮೂಡಿಸುವುದು ನಂತರ ನಿಯಮ ಪಾಲಿಸದೇ ಇದ್ದಲ್ಲಿ ದಂಡ ವಿಧಿಸುವ ಅಧಿಕಾರವನ್ನು ಪಾಲಿಕೆಯ ಮೇಲ್ವರ್ಗದ ಅಧಿಕಾರಿಯಿಂದ ಕೆಳವರ್ಗದ ನೌಕರರವರೆಗೂ ಪ್ರತ್ಯೋಜಿಸುವುದು.
ಘನ ತ್ಯಾಜ್ಯ ವಸ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಜವಾಬ್ದಾರಿಗಳು: ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಪಾಲಿಕೆಯಿಂದ ನಿಯೋಜಿಸಲ್ವಟ್ಟ ನೌಕರನಿಗೆ ಕಸವನ್ನು ಮೂರು ವಿಧವಾಗಿ ವಿಂಗಡಿಸಿ, ಹಸಿ ಕಸ, ಒಣಕಸವನ್ನು ಮಾತ್ರ ಪ್ರತಿನಿತ್ಯ ನೀಡುವುದು ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ವಾರಕ್ಕೊಮ್ಮೆ ನೀಡಿ ಪಾಲಿಕೆಯೊಂದಿಗೆ ಸಹಕರಿಸುವುದು. ಸಾರ್ವಜನಿಕರು ಮನೆ ಅಂಗಳದಲ್ಲಿ ಉತ್ಪತ್ತಿಯಾಗುವ ಹಸಿ ಕಸ, ಒಣಎಲೆಗಳು ಇತ್ಯಾದಿಗಳಿಂದ ಗೊಬ್ಬರವನ್ನು ಮಾಡಿ ಮನೆ ಅಂಗಳದ ತೋಟದಲ್ಲಿ ಬಳಸುವುದು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಖಾಲಿ ಜಾಗಗಳಲ್ಲಿ / ಮೋರಿಗಳಲ್ಲಿ ರಸ್ತೆಗಳಲ್ಲಿ ಬೀಸಾಡದೇ ಸ್ವಚ್ಚತೆಯನ್ನು ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸುವುದು.


ಉದ್ಘಾಟನೆ - ಶ್ರೀ ಆರ್. ಲಿಂಗಪ್ಪ, ಪೂಜ್ಯ ಮಹಾ ಪೌರರು, ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಪ್ರಸ್ತಾವಿಕ ಭಾಷಣ -ಡಾ|| ಬೆಟಸೂರ ಮಠ ಮಾನ್ಯ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಮುಖ್ಯ ಅತಿಥಿಗಳ ಭಾಷಣ
ಅಧ್ಯಕ್ಷೀಯ ಭಾಷಣ  - ಶ್ರೀ ಎಂ. ಶಿವಣ್ಣ ಮಾನ್ಯ ಅಧ್ಯಕ್ಷರು, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಮೈಸೂರು ಮಹಾನಗರ ಪಾಲಿಕೆ, ಮೈಸೂರು
ತ್ಯಾಜ್ಯ ನಿರ್ವಹಣೆ ಬಗ್ಗೆ ಉಪನ್ಯಾಸ - ಶ್ರೀ ಭಾರಧ್ವಜ್ ರವರು
ಕಾರ್ಯಕ್ರಮ ನಿರೂಪಣೆ : ಶ್ರೀಮತಿ ಭಾರತಿ ಎನ್.ಮಾಡಲಿದ್ದಾರೆ.
ಮುಖ್ಯ ಅತಿಥಿಗಳು

ಶ್ರೀಮತಿ ಮಹದೇವಮ್ಮ,, ಉಪಮಹಾ ಪೌರರು ಮೈಸೂರು ಮಹಾನಗರ ಪಾಲಿಕೆ,ಮೈಸೂರು.
ಶ್ರೀಮತಿ ಹಸೀನಾ ತಾಜ್ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 46 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ಶಂಷಾದ್ ಬೇಗಂ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 47 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ರತ್ನ ಲಕ್ಷ್ಮಣ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 48 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಪುಟ್ಟಲಿಂಗು ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 49 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀಮತಿ ಕಮಲ ಉದಯಕುಮಾರ್ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 50 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಸ್ವಾಮಿ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 51 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಅಯೂಬ್ ಖಾನ್, ಮಾಜಿ ಮಹಾಪೌರರು ಹಾಗೂ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 52 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಫೈರೋಜ್ ಖಾನ್ ಪಾಲಿಕೆ ಸದಸ್ಯರು ವಾರ್ಡ್ ನಂ. 53 ಮೈಸೂರು ಮಹಾನಗರ ಪಾಲಿಕೆ, ಮೈಸೂರು.
ಶ್ರೀ ಅಯಾಜ್ ಪಾಷ ಹಾಲಿ ಪಾಲಿಕೆ ಸದಸ್ಯರು ವಾರ್ಡ್ ನಂ. 54 ಮೈಸೂರು ಮಹಾನಗರ ಪಾಲಿಕೆ, ಮೈಸೂರು.ಭಾಗವಯಿಸಲ್ಲಿದ್ದಾರೆ.



No comments:

Post a Comment