Saturday 25 June 2016

 ಮೈಸೂರು,ಜೂ.25.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್ 27 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು  ಸಂಜೆ 6-30 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ರಾತ್ರಿ 7-30 ಗಂಟೆಗೆ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಹಾಗೂ ಲೇಟ್ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ರ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರೀಶಿಕಾ ಕುಮಾರಿ ಇವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9 ಗಂಟೆಗೆ ಮೈಸೂರಿನಿಂದ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ರಾಜ್ಯ ಯುವ ಪ್ರಶಸ್ತಿಗೆ  ಅರ್ಜಿ  ಆಹ್ವಾನ
     ಮೈಸೂರು,ಜೂ.25-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ವತಿಯಿಂದ 2015-16ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಚಟುವಟಿಕೆ ನಿರ್ವಹಿಸಿರುವ ಯುವಜನರಿಗೆ ಮತ್ತು ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ರಾಜ್ಯ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
     ದಿನಾಂಕ 01-04-2015 ರಿಂದ 31-03-2016 ರವರೆಗೆ ಯುವಕ/ಯುವತಿ ಹಾಗೂ ಯುವಕ ಸಂಘ/ಯುವತಿ ಮಂಡಳಿ ಕೈಗೊಂಡಿರುವ ಸಾಧನೆಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು. ಸರ್ಕಾರಿ ನೌಕರರು ಸಲ್ಲಿಸಿದ ಪ್ರಸ್ತಾವನೆಯನ್ನು ಆಯ್ಕೆಗೆ ಪರಿಗಣಿಸುವುದಿಲ್ಲ. ಪ್ರಸ್ತಾವನೆಗಳನ್ನು ದಿನಾಂಕ:                     25-08-2016 ರೊಳಗಾಗಿ ಸಲ್ಲಿಸುವುದು.
    ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಇವರನ್ನು ಸಂಪರ್ಕಿಸುವುದು.
ಗ್ರಾಮೀಣ ಅಂಚೆ ಸೇವಕರ (ಅಂಚೆ ವಿತರಕರ) ಹುದ್ದೆಗಳ ಆಯ್ಕೆ ಬಗ್ಗೆ
  ಮೈಸೂರು,ಜೂ.25.ಮೈಸೂರು ಪಶ್ಚಿಮ ಅಂಚೆ ಉಪ ವಿಭಾಗದ  ಕುವೆಂಪುನಗರ ಉಪ ಅಂಚೆ  ಕಛೇರಿ  ಹಾಗೂ ಬೋಗಾದಿ ಉಪ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಗ್ರಾಮೀಣ  ಅಂಚೆ ಸೇವಕರ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹಾಗೂ ಬೇಸಿಕ್ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಿದೆ.
     ಕುವೆಂಪುನಗರ ಉಪ ಅಂಚೆ ಕಛೇರಿ ಗ್ರಾಮೀಣ ಅಂಚೆ ಸೇವಕರ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 03 ಹಾಗೂ ಬೋಗಾದಿ ಉಪ ಅಂಚೆ ಕಛೇರಿ ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 14 ಕೊನೆಯ ದಿನಾಂಕವಾಗಿರುತ್ತದೆ.
     ಅರ್ಜಿ ಸಲ್ಲಿಸುವವರ ವಯೋಮಿತಿ 18 ರಿಂದ 30 ವರ್ಷದ ಒಳಗಿರಬೇಕು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
     ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗೆ ಸಹಾಯಕ ಅಂಚೆ ಅಧೀಕ್ಷಕರು, ಮೈಸೂರು ಪೂರ್ವ ಪಶ್ಚಿಮ ಉಪ ವಿಭಾಗ, ಮೈಸೂರು- 570023, ದೂರವಾಣಿ ಸಂಖ್ಯೆ : 0821-2417309 ಯನ್ನು ಸಂಪರ್ಕಿಸುವುದು.
ಪ್ರವಾಸ ಕಾರ್ಯಕ್ರಮ
     ಮೈಸೂರು,ಜೂ.25.ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೂನ್ 27 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು  ಸಂಜೆ 6-30 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸುವರು. ರಾತ್ರಿ 7-30 ಗಂಟೆಗೆ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಹಾಗೂ ಲೇಟ್ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪುತ್ರ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರೀಶಿಕಾ ಕುಮಾರಿ ಇವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 9 ಗಂಟೆಗೆ ಮೈಸೂರಿನಿಂದ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ
     ಮೈಸೂರು,ಜೂ.25.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವವರು ಕಾನೂನು ಪದವಿಯಲ್ಲಿ ತೇರ್ಗಡೆಯಾಗಿ 2 ವರ್ಷ ಮೀರಿರಬಾರದು, ವಯೋಮಿತಿ 40 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ಮಿತಿ 2 ಲಕ್ಷ ಮೀರಿರಬಾರದು ಆಸಕ್ತರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 20 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2344661 ನ್ನು ಸಂಪರ್ಕಿಸುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಪಿಎ ಪದವಿ ಪರೀಕ್ಷೆಗೆ ಅರ್ಜಿ ಆಹ್ವಾನ
ಮೈಸೂರು,ಜೂ.25.ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಪಿಯುಸಿ ನಂತರದ ಬಿಪಿಎ ಪದವಿ, ಎಸ್.ಎಸ್.ಎಲ್.ಸಿ. ನಂತರದ ಎರಡು ವರ್ಷ ಅವಧಿಯ ಡಿಪ್ಲೋಮಾ ತರಗತಿ ಹಾಗೂ ಎರಡು ವರ್ಷ ಅವಧಿಯ ಎಂ.ಮ್ಯೂಸಿಕ್ ಹಾಗೂ ಎಂ. ಡಾನ್ಸ್ ಕೋರ್ಸುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
 ಬಿಪಿಎ ಪದವಿ ತರಗತಿಯಲ್ಲಿ ಹಾಡುಗಾರಿಕೆ, ವೀಣಾ, ಕೊಳಲು, ಪಿಟೀಲು, ಮೃದಂಗ, ನೃತ್ಯ, ನಾಟಕಶಾಸ್ತ್ರ, ಗಮಕ ಹಾಗೂ ಕನ್ನಡ, ಸಂಸ್ಕøತ, ಇಂಗ್ಲೀಷ್, ಹಿಂದಿ, ಉರ್ದು ಭಾಷೆಗಳು ಸೌಂದರ್ಯಶಾಸ್ತ್ರ, ದಕ್ಷಿಣ ಭಾರತ ಅಧ್ಯಯನ, ಇತಿಹಾಸ ಐಚ್ಫಿಕ ವಿಷಯಗಳು ಇರುತ್ತದೆ.
ಡಿಪ್ಲೋಮಾ ತರಗತಿಯಲ್ಲಿ ಹಾಡುಗಾರಿಕೆ, ಕೊಳಲು, ವೀಣಾ, ನಾಟಕಶಾಸ್ತ್ರ, ನೃತ್ಯ ವಿಷಯಗಳು ಇರುತ್ತದೆ. ಎಂ.ಮ್ಯೂಸಿಕ್ ನಲ್ಲಿ ಹಾಡುಗಾರಿಕೆ/ವೀಣೆ ಹಾಗೂ ಎಂ.ಡ್ಯಾನ್ಸ್  ನಲ್ಲಿ ಭರತನಾಟ್ಯ ವಿಷಯ ಇರುತ್ತದೆ.
 ಪ್ರವೇಶಾತಿಯನ್ನು ದಂಡಶುಲ್ಕವಿಲ್ಲದೆ ಜುಲೈ 15 ರವರೆಗೆ ರೂ. 300/- ದಂಡಶುಲ್ಕದೊಂದಿಗೆ ಜುಲೈ 25 ರವರೆಗೆ ರೂ. 500/- ದಂಡಶುಲ್ಕದೊಂದಿಗೆ ಜುಲೈ 30 ರವರೆಗೆ ಪಡೆಯಬಹುದಾಗಿದೆ.
ಮಹಿಳಾ/ಪುರುಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2419586, 9448489429 ನ್ನು ಸಂಪರ್ಕಿಸುವುದು.
ಪರೀಕ್ಷಾ ಪೂರ್ವ ತರಬೇತಿ
     ಮೈಸೂರು,ಜೂ.25-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಐಎಎಸ್ ಹಾಗೂ ಕೆಎಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡಲು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.  ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ WWW.bಚಿಛಿಞತಿಚಿಡಿಜಛಿಟಚಿsses.ಞಡಿಚಿ.ಟಿiಛಿ.iಟಿ  ಅಥವಾ ಮೊಬೈಲ್ ಸಂಖ್ಯೆ:9480818013, 9480818010/ ದೂರವಾಣಿ ಸಂಖ್ಯೆ:080-44554444 ನ್ನು ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                        
ದರಪಟ್ಟಿ ಆಹ್ವಾನ
     ಮೈಸೂರು,ಜೂ.25.ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ಉಪಯೋಗಕ್ಕಾಗಿ  05 ಕೆವಿಎ ಯುಪಿಎಸ್-1 ಮತ್ತು ಪ್ರಾದೇಶಿಕ ಆಯುಕ್ತರ ಗೃಹ ಕಚೇರಿ ಉಪಯೋಗಕ್ಕಾಗಿ 05 ಕೆವಿಎ ಯುಪಿಎಸ್ ಹೊಂದಿದ್ದು,  ಒಂದು ವರ್ಷದ ಅವಧಿಯವರೆಗೆ ಕಾರ್ಯನಿರ್ವಹಣೆ ಮಾಡಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
     ದರಪಟ್ಟಿಯನ್ನು ತೆರಿಗೆ ಸಹಿತ ಪ್ರಾದೇಶಿಕ ಆಯುಕ್ತರು ಮೈಸೂರು ವಿಭಾಗ, ಮೈಸೂರು ಇವರಿಗೆ ದಿನಾಂಕ            30-06-2016 ರಂದು ಸಂಜೆ 4 ಗಂಟೆಯೊಳಗಾಗಿ ಶೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2414088 ನ್ನು ಸಂಪರ್ಕಿಸಬಹುದು.
 26 ರಂದು ಮಾದಕ ವಸ್ತು, ಕಳ್ಳ ಸಾಗಣೆ ವಿರುದ್ದ ಅಂತರ ರಾಷ್ಟ್ರೀಯ ದಿನ
ಮೈಸೂರು, ಜೂನ್ 25 , ಮೈಸೂರು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಗೊಳಪಡುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರುಗಳು ಜೂನ್ 26 ರಂದು ಮಾದಕ ವಸ್ತುವಿನ ದುರುಪಯೋಗ ಮತ್ತು ಆಕ್ರಮ ಕಳ್ಳ ಸಾಗಣೆ ವಿರುದ್ದ ಅಂತರ ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಹೆಚ್.ಆರ್.ಬಸಪ್ಪ ತಿಳಿಸಿದ್ದಾರೆ.
  ಜೂನ್ 26 ರಂದು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ, ಮಾದಕ ಔಷಧ ಸೇವನೆ ವಿರುದ್ದ ಮೆರವಣಿಗೆ, ಓಟಗಳು ಹಾಗೂ ಜಾಗೃತಿ ಜಾಥ, ಶಾಲಾ ಪರಿಸರದಲ್ಲಿ ಮಾದಕ ವಸ್ತುವಿನ ಸೇವನೆಯಿಂದ ಅಶಕ್ತ ಮತ್ತು ದುರ್ಬಲರಾಗಿರುವ ಗುಂಪಿನ ಸದಸ್ಯರನ್ನು ಹಾಗೂ ಹೆಚ್.ಐ.ವಿ ಪೀಡಿತರನ್ನು ಗುರುತಿಸಿ ಅವರಲ್ಲಿ ಮಾದಕ ವ್ಯಸನ ದುಷ್ಪರಿಣಾಮದ ಬಗ್ಗೆ ಅರಿವು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕರದೊಂದಿಗೆ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.