Tuesday 30 June 2015

ಮೈಸೂರು ಮಹನಗರ ಪಾಲಿಕೆಯ ಆಯುಕ್ತ ಬೆಟ್ಟಸೂರುಮಠ್ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನ ವೀಕ್ಷಣೆ ಮಾಡುತ್ತಿರುವುದು.

ಮೈಸೂರು ನಗರದ ಬಂಬೂ ಬಜಾರ್, ವಾರ್ಡ್ ನಂ. 34 ರ ವ್ಯಾಪ್ತಿಯಲ್ಲಿ ಬರುವ ಬಹುವಿಸ್ತಾರವಾದ ಜೋಡಿ ತೆಂಗಿನ ಮರದ ಸ್ಮಶಾನದ ಅಭಿವೃದ್ದಿ ಕಾಮಗಾರಿಯು ಪಾಲಿಕೆ ವತಿಯಿಂದ ಭರದಿಂದ ಸಾಗುತ್ತಿದೆ.  ದಿನಾಂಕ : 30-06-2015 ರಂದು ಬೆಳಿಗ್ಗೆ 10-00 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ:ಸಿ.ಜಿ.ಬೆಟಸೂರಮಠ ರವರು ಹಾಗೂ ವಾರ್ಡ್ ನಂ. 34 ರ ಮಾನ್ಯ ಸದಸ್ಯರಾದ ಶ್ರೀ.ಡಿ.ನಾಗಭೂಷಣ್ ರವರು ಸದರಿ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲಿಸಿದರು.  ಈ ಸಂದರ್ಭದಲ್ಲಿ ವಲಯಕಚೇರಿ-06 ರ ಅಭಿವೃದ್ದಿ ಅಧಿಕಾರಿ ಶ್ರೀ.ಕೆ.ಎನ್.ಜಗದೀಶ್ ಹಾಗೂ ಕೊಹಿನೂರು ಇಂಜಿನಿಯರಿಂಗ್ ವಕ್ರ್ಸನ ಪ್ರೊಪ್ರೈಟರ್ ಆದ ಶ್ರೀ.ಸತೀಶ್ ರವರು ಹಾಜರಿದ್ದರು. ಈ ಕಾಮಗಾರಿಯನ್ನು ಎಸ್.ಎಫ್.ಸಿ. ಅನುದಾನದಡಿ ರೂ. 99 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುತ್ತದೆ.  ಈ ಸ್ಮಶಾನವನ್ನು ಉದ್ಯಾನವನದ ರೂಪದಲ್ಲಿ ಅಭಿವೃದ್ದಿ ಪಡಿಸಲಾಗುವುದೆಂದು ಆಯುಕ್ತರು ಬೆಟ್ಟಸೂರ್ ಮಠ್ ತಿಳಿಸಿದರು.

       

Monday 29 June 2015

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಆತ್ಮಹತ್ಯೆ ಕುರಿತು ಸರ್ವಪಕ್ಷದ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು



ಮಂಡ್ಯ-ಇಂದು ಇಬ್ಬರು ರೈತರು ಆತ್ಮ ಹತ್ಯೆ.

ರಾಜ್ಯದಲ್ಲಿ ಮುಂದುವರಿದ ರೈತರ ಆತ್ಮಹತ್ಯೆ ಮಂಡ್ಯ ಜಿಲ್ಲೆಯಲ್ಲಿ ಇಂದು ಇಬ್ಬರು ರೈತರು ಆತ್ಮಹತ್ಯಗೆ ಶರಣಾಗಿದ್ದಾರೆ.ಮಂಡ್ಯ ತಾಲ್ಲೂಕಿನ ಪಣಕನಹಳ್ಳಿಯ ರೈತ ಮಹೇಶ೩೫ ಎಂಬುವರು ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಅಂಡಿದ್ದಾರೆ.ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಾಂಡವಪುರ ತಾಲ್ಲೂಕಿನ ಬನಂಗಾಡಿ ಗ್ರಾಮದಲ್ಲಿ ಬಸವರಾಜು(೫೨)ಎಂಬುವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.ಬಸವರಾಜುಗೆ ೧ಲಕ್ಷ ಸಾಲ ಇತ್ತು ಎಂದು ಹೇಳಲಾಗಿದೆ.ಜಮೀನಿನಲ್ಲಿ ಕೊರೆಸಿದ್ದ ಬೋರ್ ಬೆಲ್ಲದ ಅಂತರಜಲ ಮುಗಿದಿತ್ತು ಎನ್ನಲಾಗಿದೆ.ಕೆಆರ್ ಎಸ್.ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Sunday 28 June 2015

ಮೈಲಾರಪಟ್ಟಣ
ಸಮಾಜದ ಸತ್ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾದರೆ ಪ್ರತಿ ಮಗುವಿನ ಸಾಮಥ್ರ್ಯ, ಆಸಕ್ತಿ ಮತ್ತು ಸ್ವಭಾವಕ್ಕನುಗುಣವಾಗಿ ಚಾರಿತ್ರ್ಯ ನಿರ್ಮಾಣಮಾಡುವ ಶಿಕ್ಷಣ ನೀಡಬೇಕು ಎಂದು ಬೆಂಗಳೂರಿನ ಶ್ರೀ ಭವತಾರಿಣಿ ಆಶ್ರಮದ ಪೂಜ್ಯ ಮಾತಾಜಿ ವಿವೇಕಮಯೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮೈಲಾರಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಎಂಶ್ರೀ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮನಸ್ಸಿನ ಶಕ್ತಿಯನ್ನು ಹೆಚ್ಚಿಸುವ, ಸ್ವಾಭಿಮಾನಯುತ ಬದುಕನ್ನು ನಿರ್ವಹಿಸುವ, ಸ್ವಸಾಮಥ್ರ್ಯದಿಂದ ಜೀವಿಸುವ ಶಿಕ್ಷಣ ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿದೆ. ಅದಕ್ಕಾಗಿ ಮಕ್ಕಳು ಉತ್ತಮ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಸದಾ ಜಾಗೃತರಾಗಿದ್ದು ಒಳ್ಳೆಯ ಕೆಲಸವನ್ನು ಮಾಡುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಗುರಿಯೆಡೆಗೆ ಸಾಗಿ ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿ ಸಮುದಾಯವು ದೇಶದ ಚಿತ್ರಣವನ್ನು ಬದಲಿಸಲು ಸಮರ್ಥರಾಗಿರುತ್ತಾರೆ. ಆದ್ದರಿಂದ ಯುವಜನತೆ ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇರಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತೆ ಶಿಕ್ಷಣ ಸಹಕರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಪಾಂಡವಪುರ ಉಪವಿಭಾಗಾಧಿಕಾರಿ ಡಾ. ಎಚ್.ಎಲ್.ನಾಗರಾಜು ಮಾತನಾಡುತ್ತಾ ಪ್ರಾಥಮಿಕ ಹಂತದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯತ್ತನ್ನು ನಿರ್ಧರಿಸುವ ಬಹು ಮುಖ್ಯವಾದ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳು ಸಾಮಾಜಿಕ ಜೀವನದ ಅರಿವು ಮೂಡಿಸಿಕೊಳ್ಳುವ ಮೂಲಕ ಸಮಾಜದ ಪ್ರಗತಿಗೆ ತನ್ಮೂಲಕ ದೇಶದ ಅಭ್ಯುದಯಕ್ಕೆ ಶ್ರಮಿಸುವ ಮನಸ್ಸನ್ನು ರೂಢಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಶಿಕ್ಷಣದ ಗುರಿಯನ್ನು ತಲುಪಲು ಸಾಧಯವಾಗುತ್ತದೆ ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ಟಿ.ಕೃಷ್ಣ ಹಾಗೂ ಶಿಕ್ಷಕ ಹೆಚ್.ವಿ.ಮಂಜೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. 2014-15ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಾನಿಗಳಾದ ಸೋಮಶೇಖರ್ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಫೈಲ್‍ಗಳನ್ನು ಪಿ.ರಮೇಶ್ ವಿತರಿಸಿದರು. ಶಾಲಾ ಹಿರಿಯ ಶಿಕ್ಷಕ ಎಂ.ಎನ್.ಮಂಜುನಾಥ್,  ಬಿಎಂಶ್ರೀ ಹಿರಿಯ ವಿದ್ಯಾರ್ಥಿ ಸಂಘದ ರಾಜಣ್ಣ, ನಿಂಗಣ್ಣ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಸಿ.ಮೋಹನ್‍ಕುಮಾರ್, ಶಾಲಾ ಕಾಲೇಜಿನ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.


ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ತೆರೆದ ಬಾವಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ದೂರವಾಣಿ ಕೇಂದ್ರ ಸಮೀಪದಲ್ಲಿ ನಡೆದಿದೆ.
ಪಟ್ಟಣಕ್ಕೆ ಹೊಂದಿಕೊಂಡತ್ತಿರುವ ಸಾರೆಮೇಗಲಕೋಪ್ಪಲು ಗ್ರಾಮದ ನಾಗರಾಜು ಎಂಬುವರ ಮಗ ಎನ್.ಚಂದ್ರು (16) ಮೃತ ವ್ಯಕ್ತಿ. ಭಾನುವಾರ ಬಾವಿಯಲ್ಲಿ ಈಜಲು ಹೊದ ವ್ಯಕ್ತಿಗಳು ಚಂದ್ರು ಶವ ತೇಲುತ್ತಿರುವುದನ್ನು ಕಂಡು ಪಟ್ಟಣದ ಪೋಲಿಸರಿಗೆ ವಿಷಯ ತಿಳಿಸಿ, ಶವವನ್ನು ಮೇಲೆತ್ತಲಾಯಿತು. ಈತನ ಸಾವಿಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ, ಬಾವಿಯಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ ಧರಿಸಿದ್ದ ಸ್ಥಿತಿಯಲ್ಲೇ ಶವ ತೇಲುತ್ತಿದ್ದದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬಾವಿಯಲ್ಲಿ ಈತ ಈಜಲು ಹೊಗಿದ್ದರೇ ಬಟ್ಟೆ ಕಳಚಿ ಹೊಗಬೇಕಾಗಿತ್ತು ಎಂಬುದೇ ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ಉತೀರ್ಣನಾಗಿದ್ದ ಚಂದ್ರ ತಾಲೂಕಿನ ಬಿ.ಜಿ ನಗರದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಜೂ.26 ರಂದು ಮನೆಯಿಂದ ಗೆಳೆಯನ ಹತ್ತಿರ ನೋಟ್ ಬುಕ್ ತರಲು ಹೋದವನ್ನು ಮನೆಗೆ ಹಿಂದಿರುಗದ ಕಾರಣ ನಾಗಮಂಗಲ ಪಟ್ಟಣ ಪೋಲಿಸ್ ಠಾಣೆಗೆ ಈತನ ಪೋಷಕರು ಕಾಣಿಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ ಚಂದ್ರು ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಪಟ್ಟಣದ ಸಾರ್ವಜಿಕ ಆಸ್ಪತ್ರೆಗೆ ತಂದು ಶವ ಪರೀಕ್ಷೆ ಮಾಡಿ ವಾರಸುದಾರರಿಗೆ ಅಸ್ತಾಂತರಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್‍ಐ ಹರೀಶ್ ಸ್ಥಳ ತನಿಖೆ ಮಾಡಿ, ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಮುಖ್ಯಮಂತ್ರಿಯವರಿಂದ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಮೈಸೂರು, ಜೂನ್ 28. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ 10 ಗಂಟೆ 28 ನಿಮಿಷಕ್ಕೆ  ಬಾಗಿನ ಅರ್ಪಿಸಿದರು.
  ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಕಳೆದ 12 ವರ್ಷಗಳಲ್ಲಿ ಕಬಿನಿ ಜಲಾಶಯವು ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಭರ್ತಿಯಾದ ಮೊದಲ ಜಲಾಶಯ ಇದಾಗಿದೆ. ಪ್ರತಿ ದಿನ ಕಬಿನಿ ಜಲಾಶಯಕ್ಕೆ 35 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವು ಇದ್ದು, 19.5 ಟಿ.ಎಂ.ಸಿ ನೀರಿನ ಸಾರ್ಮಥ್ಯ ಜಲಾಶಯ ಹೊಂದಿದೆ. ಕೃಷ್ಣರಾಜ ಸಾಗರ ಜಲಾಶಯಕ್ಕೂ  ಉತ್ತಮ ಒಳಹರಿವು ಇದ್ದು, ನೀರಿನ ಮಟ್ಟ 101 ಅಡಿಗೆ ಏರಿದೆ ಎಂದು ಹೇಳಿದರು.
 ಕಬಿನಿ ಜಲಾಶಯದ ಅವರಣದಲ್ಲಿರುವ 254 ಎಕರೆ ಪ್ರದೇಶವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕೃಷ್ಣರಾಜ ಸಾಗರ ಜಲಾಶಯದ ಪ್ರದೇಶದಲ್ಲಿರುವ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಬಜೆಟ್‍ನಲ್ಲಿ ಇದ್ದಕ್ಕಾಗಿಯೇ 24 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಕಬಿನಿ ಹಾಗೂ ಕಾವೇರಿ ಜಲಾನಯನದಲ್ಲಿರುವ ನಾಲೆಗಳ ಆಧುನೀಕರಣ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿದ್ದು, ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ವೈಫಲ್ಯ ಕಂಡುಬಂದಲ್ಲಿ ನಿರ್ದಾಕ್ಷೀಣ್ಯ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
  ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್‍ಪ್ರಸಾದ್, ಸಹಕಾರ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್, ಲೋಕಸಭಾ ಸದಸ್ಯರುಗಳಾದ ಪ್ರತಾಪ್‍ಸಿಂಹ, ಧ್ರುವನಾರಾಯಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ ಬಿ.ಪುಷ್ಪಾ ಅಮರನಾಥ್, ಶಾಸಕರುಗಳಾದ ಚಿಕ್ಕಮಾದು, ತನ್ವೀರ್ ಸೇಠ್, ಪುಟ್ಟರಂಗಶೆಟ್ಟಿ, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಿ. ದಾಸೇಗೌಡ,  ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ರೀಹಾನಬಾನು, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹಾಗೂ ಇತರೆ ಗಣ್ಯರು ಭಾಗವಹಿಸಿದರು.

Saturday 27 June 2015

ಪೊಲೀಸರಿಂದ ಒಬ್ಬ ಮನೆ ಕಳ್ಳ ಹಾಗೂ ಒಬ್ಬ ದಿಚಕ್ರ ವಾಹನ ಕಳ್ಳನ ಬಂಧನ.

 ಪೊಲೀಸರಿಂದ ಒಬ್ಬ ಮನೆ ಕಳ್ಳ ಹಾಗೂ ಒಬ್ಬ ದಿಚಕ್ರ ವಾಹನ ಕಳ್ಳನ ಬಂಧನ.
ಒಟ್ಟು 90,000/- ಬೆಲೆಯ  ಚಿನ್ನಾಭರಣ, ಗ್ಯಾಸ್ ಸಿಲಿಂಡರ್, ಸ್ವೌವ್, ದ್ವಿ ಚಕ್ರ ವಾಹನ ವಶ.
 ದಿನಾಂಕ: ಜೂ 20ರಂದು ಮಂಡಿ ಪೊಲೀಸರು

   ಸಾಧಿಕ್ @ ಮೆಂಟಲ್ ಬಿನ್ ಲೇಟ್ ಡ್ರಮ್ ವಜೀರ್, 33 ವರ್ಷ, ಐದೂರು,
   ರಾಮನಗರ ಜಿಲ್ಲೆ.

ಎಂಬಾತನನ್ನು ದಸ್ತಗಿರಿ ಮಾಡಿ ಮಂಡಿ ಪೊಲೀಸ್ ಠಾಣೆಯ ಮನೆ ಕನ್ನ ಕಳುವು  ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 60,000/- ಬೆಲೆಯ ಚಿನ್ನಾಭರಣ, ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ವೌವ್ ವಶಪಡಿಸಿಕೊಂಡಿರುತ್ತಾರೆ ಎಂದು ಪೋಲೀಸ್ ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮತೊಬ್ಬ ಆರೋಪಿ    ಮುಸ್ತಾಕ್ ಅಹಮದ್ ಬಿನ್ ಲೇ|| ಅಬ್ದುಲ್ ರಜಾಕ್, 55 ವರ್ಷ, ಕಲಾಸಿಪಾಳ್ಯ, ಬೆಂಗಳೂರು
ಎಂಬಾತನನ್ನು ೨೦ರಂದು ಮಂಡಿ ಪೋಲೀಸರು ಬಂಧಿಸಿ ಆತನು ಕಳ್ಳತನ ಮಾಡಿದ್ದ  ರೂ. 30,000/- ಬೆಲೆಯ ಒಂದು ಹೊಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.  ಈ ವಾಹನದ ಮಾಲೀಕರು ಪತ್ತೆಯಾಗಬೇಕಾಗಿದೆ.
        ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.  ಎನ್.ಡಿ.ಬಿರ್ಜೆ ಮತ್ತು    ಎ.ಸಿ.ಪಿ. ನರಸಿಂಹರಾಜ ವಿಭಾಗ ರವರಾದ  ಉಮೇಶ್ ಜಿ.ಸೇಠ್‍ರವರ ಮಾರ್ಗದರ್ಶನದಲ್ಲಿ ಮಂಡಿ ಠಾಣಾ ಇನ್ಸ್‍ಪೆಕ್ಟರ್  ಲಕ್ಷ್ಮಿಕಾಂತ ಕೆ.ತಳವಾರ್, ಪಿಎಸ್‍ಐರವರಾದ ಶ್ರೀಮತಿ ಯಾಸ್ಮೀನ್ ತಾಜ್,  ಎ.ಎಸ್.ಐ, ರಾಮಕೃಷ್ಣ,  ಸಿಬ್ಬಂದಿಯವರುಗಳಾದ  ಅನಂತರಾಜೇ ಅರಸ್,  ಚಂದ್ರೇಗೌಡ, ರಾಜೇಂದ್ರ, ರವಿಕುಮಾರ್ ರವರುಗಳು ಶ್ರಮವಹಿಸಿರುತ್ತಾರೆ.
     ಈ ಪತ್ತೆ ಕಾರ್ಯವನ್ನು  ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ ಬಿ.ದಯಾನಂದ್, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.

ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ: ಮುಖ್ಯಮಂತ್ರಿ ಸಿದ್ದರಾಮಯ್ಯ.


ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ: ಮುಖ್ಯಮಂತ್ರಿ
ಮೈಸೂರು, ಜೂನ್ 27. ಯುವಜನರು ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಅವರ ಪ್ರೋತ್ಸಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
  ಇಂದು ಜೆ.ಕೆ.ಕ್ರೀಡಾಂಗಣದ ಆವರಣದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2012 ಹಾಗೂ 2013ನೇ ಸಾಲಿನಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಹಮ್ಮಿಕೊಳ್ಳಲಾದ ನಗದು ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಯುವಕರನ್ನು ಸದೃಢ ಹಾಗೂ ಸಬಲೀಕರಿಸಲು ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ.  ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕಗಳಿಸಿದವರಿಗೆ ರೂ 1 ಲಕ್ಷದಿಂದ ರೂ 5 ಲಕ್ಷಕ್ಕೆ, ಬೆಳ್ಳಿ ಪದಕ ವಿಜೇತರಿಗೆ  ರೂ 50,000 ರಿಂದ ರೂ 3ಲಕ್ಷ, ಕಂಚು ಪದಕ ವಿಜೇತರಿಗೆ ರೂ 25,000 ರಿಂದ ರೂ 2 ಲಕ್ಷ   ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕಗಳಿಸಿದವರಿಗೆ ರೂ 10 ಲಕ್ಷದಿಂದ ರೂ 25 ಲಕ್ಷಕ್ಕೆ ನಗದು ಬಹುಮಾನವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
  ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಬೇಕಾದರೆ ಉತ್ತಮ ಗುಣಮಟ್ಟದ ಸೌಲಭ್ಯ ಹಾಗೂ ತರಬೇತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಕ್ರೀಡಾ ಹಾಸ್ಟಲ್ ಹಾಗೂ ಟ್ರ್ಯಾಕ್‍ಗಳನ್ನು ನಿರ್ಮಿಸಿದೆÉ. ದೇಶದಲ್ಲಿ ಕರ್ನಾಟಕ ಅತೀ ಹೆಚ್ಚು ಸಿಂಥೆಟಿಕ್ ಟ್ರ್ಯಾಕ್‍ಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
   ಪಾಠ ಪ್ರವಚನದ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕ್ರೀಡಾಪಟುಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ 100 ಇಂಜಿನಿಯರಿಂಗ್ ಸೀಟ್ ಗಳನ್ನು ನೀಡಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಹಾಗೂ ಇತರೆ ಕ್ಷೇತ್ರದಲ್ಲಿ ಕೆಲಸ ಸಿಗಲಿದೆÉ. ತಂದೆ ತಾಯಂದಿರ ಪ್ರೋತ್ಸಹ ಕ್ರೀಡಾಪಟುಗಳಿಗೆ ಅಗತ್ಯ. ಆದ್ದರಿಂದ ತಂದೆ ತಾಯಂದಿರು ತಮ್ಮ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅಗತ್ಯ ಪ್ರೋತ್ಸಹ ನೀಡಲು ಮುಂದಾಗಬೇಕು ಎಂದರು.
   ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರಾಷ್ಟ್ರೀಯತೆ ಹಾಗೂ ಜಾತ್ಯಾತೀತ ಮನೂಭಾವ ಹೆಚ್ಚುತ್ತದೆ. ಕ್ರೀಡೆಯಲ್ಲಿ ಜಾತಿ ಧರ್ಮವೆಂಬ ಭೇದಭಾವ ಇರುವುದಿಲ್ಲ. ಕ್ರೀಡೆ ಮಹತ್ವದ ಕ್ಷೇತ್ರವಾಗಿದ್ದು, ಬದುಕಿನಲ್ಲಿ ಕ್ರೀಡಾಮನೂಭಾವ ಬೆಳಸಲು ಮುಖ್ಯಪಾತ್ರವಹಿಸುತ್ತದ್ದೆ. ಕ್ರೀಡಾ ಕ್ಷೇತ್ರದಲ್ಲಿ ಸಮಾನತೆ ತರಲು ವಿಕಲಚೇತನ ಹಾಗೂ ಇತರೆ ಕ್ರೀಡಾಪಟುಗಳಿಗೆ ನಗದು ಬಹುಮಾನದ ಮೊತ್ತ ಹಾಗೂ ಪ್ರೋತ್ಸಹವನ್ನು ಸಮಾನವಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
  2012 ಮತ್ತು 2013ನೇ ಸಾಲಿನಲ್ಲಿ ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ 557 ಜನರಿಗೆ ನಗದು ಬಹುಮಾನವನ್ನು ಇಂದು ನೀಡಲಾಗುತ್ತಿದೆ. 117 ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ರಾಷ್ಟ್ರೀಯ ಮಟ್ಟದ 440 ಕ್ರೀಡಾಪಟುಗಳು ಸೇರಿದ್ದು,  ರೂ. 4,40,13,127 ನಗದು ಬಹುಮಾನವನ್ನು ನೀಡಲಾಗುತ್ತಿದೆ. ಇದರಲ್ಲಿ ಅಂತರಾಷ್ಟ್ರೀಯ ಮಟ್ಟದ 5 ಜನ ವಿಕಲಚೇತನ ಕ್ರೀಡಾಪಟುಗಳು ಹಾಗೂ 33 ರಾಷ್ಟ್ರೀಯ ಮಟ್ಟದ ವಿಕಲಚೇತನ ಕ್ರೀಡಾಪಟುಗಳು ಒಳಗೊಂಡಿದ್ದಾರೆ ಎಂದು ತಿಳಿಸಿದರು.
  ಕ್ರೀಡಾಪಟುಗಳಿಗೆ ತರಬೇತಿದಾರರ ಅವಶ್ಯವಿದೆ. ತರಬೇತಿದಾರರಿಲ್ಲದೆ ಯಾವ ಕ್ರೀಡಾಪಟು ಕ್ರೀಡಾಕ್ಷೇತ್ರÀದಲ್ಲಿ ಸಾಧನೆ ಮಾಡುವುದು ಅಸಾಧ್ಯ. ತರಬೇತಿದಾರರು ಕ್ರೀಡಾಪಟುಗಳ ಭವಿಷ್ಯ ನಿರ್ಮಾಣ ಮಾಡುವುದರಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಕ್ರೀಡಾ ಇಲಾಖೆಯಿಂದ ಹೆಚ್ಚಿನ ಪ್ರಸ್ತಾವನೆಗಳು ಬಂದಲ್ಲಿ ಸರ್ಕಾರದಿಂದ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ತಿ ಸಿದ್ದರಾಮಯ್ಯ ತಿಳಿಸಿದರು.
  ಕಾರ್ಯಕ್ರಮದಲ್ಲಿ ಯುವಜನ ಸೇವಾ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಕೆ. ಅಭಯಚಂದ್ರ, ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಬಿ. ಪುಷ್ಪ ಅಮರನಾಥ್, ವಿಧಾನಸಭಾ ಸದಸ್ಯ ವಾಸು, ಎಂ.ಕೆ. ಸೋಮಶೇಖರ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ  ನಾಗಾಂಬಿಕಾ ದೇವಿ, ನಿರ್ದೇಶಕರಾದ ಹೆಚ್.ಎಸ್. ವೆಂಕಟೇಶ್ ಹಾಗೂ ಇತರೆ ಗಣ್ಯರು ಭಾಗವಹಿಸಿದರು.                  
   
        
ಮಂಡ್ಯ : ಸರ್ಕಾರಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದು, ರೈತ ನಿರಾಸೆ, ಹತಾಶೆ ಹಾಗೂ ನೋವಿಗೆ ಒಳಗಾಗಿದ್ದಾನೆ. ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಟ್ಟಾಗಿ ರೈತರ ಬೆಂಬಲಕ್ಕೆ ನಿಲ್ಲಬೇಕೆಂದು ಶಾಸಕ ಪುಟ್ಟಣ್ಣಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಸಂಕಷ್ಟ ಕುರಿತು ಆತ್ಮವಲೋಕನ ಮಾಡಬೇಕು. ರೈತ ಶ್ರಮಕ್ಕೆ ತಕ್ಕ ಬೆಲೆ ನೀಡಬೇಕು. ರೈತರ ಸಂಕಷ್ಟ ನಿವಾರಣೆ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಬ್ಯಾಂಕ್‍ಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದು. ರೈತರ ಚಿನ್ನಾಭರಣಗಳ ಹರಾಜು ಮಾಡಬಾರದೆಂದು ಬ್ಯಾಂಕುಗಳಿಗೆ ಸಾರ್ಕರ ಸೂಚಿಸಬೇಕು. ರಾಜಕಾರಣಿಗೆಳು ರೈತರಿಗೆ ದೈರ್ಯ ತುಂಬಬೇಕು. ಅವರ ಪರ ಯೋಜನೆ ರೂಪಿಸಲು ಪಕ್ಷಾತೀತವಾಗಿ ಮುಂದಾಗಬೇಕೆಂದು ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ರೈತರು ಹಾಗೂ ಅವರ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಗೆ ಅವಕಾಶ ನೀಡಬೇಕು. ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಅಧಿವೇಶನ ಬಳಸಿಕೊಳ್ಳದೆ ರೈತರ ಸಮಸ್ಯೆಗಳ ಬಗೆಹರಿಸಲು ಒಗ್ಗಟ್ಟಾಗಬೇಕು ಎಂದರು.
ಸದನದ ಹೊರಗೆ ಸಾವಿರಾರು ರೈತರ ಪ್ರತಿಭಟಿಸಿ ಧರಣಿ ಕೂರಲಿದ್ದು, ನಾನು ಸದನದ ಒಳಗೆ ರೈತಪರ ವಿಷಯಗಳನ್ನು ಮಾತನಾಡುವುದುಗಾಗಿ ತಿಳಿಸಿದರು.
ನನಗೆ ಯಾರ, ಯಾವ ಸರ್ಟಿಫಿಕೆಟ್ ಬೇಡ : ರೈತ ಸಂಘದಲ್ಲಿ ನಾನು 33 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ರೈತಸಂಘದ ಪ್ರತಿಭಟನೆಗಳಿಂದ ಸಾಲ ಮನ್ನಾವಾಗಿದೆ. ರೈತರ ಮನೆ ಹಾಗೂ ಆಸ್ತಿ ಜಪ್ತಿ ಕೈಬಿಡಲಾಗಿದೆ. ರೈತ ಸಂಘದ ಶಕ್ತಿ ಕುಂದಿಲ್ಲ. ನಮಗೆ ಯಾರ, ಯಾವ ಸರ್ಟಿಫಿಕೆಟ್ ಬೇಕಿಲ್ಲ ಎಂದು ಪುಟ್ಟಣ್ಣಯ್ಯ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರೈತ ಸಂಘ ವಿಬ್ಭಾಗವಾಗಿದೆ. ಹೋರಾಟಗಳ ಶಕ್ತಿ ಕುಂದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಅವರು, ರೈತ ಸಂಘದ ಪ್ರತಿಭಟನೆಗಳ ಸಂಖ್ಯೆ ಕಡಿಮೆಯಾಗಿದೆ ಹೊರತು ಪ್ರತಿಭಟನೆಯ ಶಕ್ತಿ ಕುಂದಿಲ್ಲ. ಗಂಬೀರವಾಗಿ ನಾವು ಕೆಲಸ ನಿರ್ವಹಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರೈತಮುಖಂಡರಾದ ಶಂಭುನಹಳ್ಳಿ ಸುರೇಶ್, ಮರಿದೇವೇಗೌಡ, ಬೊಮ್ಮೇಗೌಡ ಹನಿಯಂಬಾಡಿ ನಾಗರಾಜು ಉಪಸ್ಥಿತರಿದ್ದರು.

ರೈತರು ಆತ್ಮಹತ್ಯೆಮಾಡಿ ಕೊಳ್ಳಬಾರದು -ಮುಖ್ಯಮಂತ್ರಿ ಸಿದ್ದರಾಮಯ್ಯ










ಮೈಸೂರು, ಜೂ. 27- ರಾಜ್ಯದಲ್ಲಿ ರೈತರು ಆತ್ಮಹತ್ಯೆ ಕಡೆ ಮುಖ ಮಾಡಬಾರದು ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದ ಹೂರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಅವರು ಮಾತನಾಡಿದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನÀಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಅದಕ್ಕೆ ಹಾರಿ ಸಾವನ್ನಪ್ಪಿದ ರೈತ ನಿಂಗೆಗೌಡರ ಆತ್ಮಹತ್ಯೆಗೆ ರಾಜ್ಯ ಸರಕಾರ ಕಾರಣವಾಗಿದೆ ಎಂದು ಹೇಳಿ ರೈತ ಸಂಘದ ಕಾರ್ಯಕರ್ತರು ನಿಮ್ಮ ವಿರುದ್ಧ ದೂರನ್ನು ದಾಖಲಿಸಿದ್ದಾರಲ್ಲ ಎಂದಾಗ, ಮೇಲಿನಂತೆ ಸಿಎಂ ಉತ್ತರಿಸಿ ದೂರಿನ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಸಿದ್ದರಾಮಯ್ಯ ಹೇಳಿದರು.ಕೇಂದ್ರ ಸರಕಾರ 2300 ರೂ.ಗಳನ್ನು ಕಬ್ಬು ಬೆಲೆಗೆ ನಿಗಧಿ ಮಾಡಿದೆ. ಈ ಪೈಕಿ 400 ರೂ. ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ ಎಂದವರು ಹೇಳಿ, ಈ ಬಗ್ಗೆ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರೊಂದಿಗೆ ಮಾತನಾಡಿದ್ದು, ಈ ಹಣವನ್ನು ಕೇಂದ್ರ ಸರಕಾರವೇ ಪಾವತಿಸುವಂತೆ ಮನವಿ ಮಾಡಲಾಗಿದೆ ಎಂದರು.ರೈತರು ಯಾವುದೇ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದು ಹೇಳಿದ ಸಿಎಂ, ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೇಳಿದರು.ಪ್ರಕೃತಿ ವಿಕೋಪದಿಂದ ಈ ರೀತಿಯ ನಷ್ಟ ಉಂಟಾಗಲಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಬಗ್ಗೆಯೂ ತಿಳಿದಿದ್ದಾರೆ ಹಿಗಿದ್ದೂ ರೈತರು ಆತ್ಮಹತ್ಯಗೆ ಮುಂದಾಗುವುದು ಸರಿಯಲ್ಲವೆಂದರು.ಅತಿವೃಷ್ಠಿ ಅನಾವೃಷ್ಠಿಯಿಂದ ನಷ್ಟ ಸಂಭವಿಸುತ್ತದೆ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೇಳಿದರು.ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಲಿದೆ ಎಂದರು.ಕಬ್ಬು ಬೆಳೆಗಾರರ ಬಾಕಿಗೆ ಸರಕಾರ ಮುಂದಾಗಿ ಕೆಲ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಕಬಿನಿ ಜಯಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಾಳೆ (ಜೂ. 28) ಬಾಗಿನ ಅರ್ಪಿಸುವುದಾಗಿ ಸಿಎಂ ಹೇಳಿದರು.ಕಬಿನಿ ಜಲಾಶಯ ತುಂಬಲು ಇನ್ನು 3 ಅಡಿ ಮಾತ್ರ ಬಾಕಿ ಇದೆ. ಇಂದು ಅಥವಾ ನಾಳೆ ವೇಳೆಗೆ ತುಂಬಲಿದೆ ಎಂದರು.ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿ ಆಗುತ್ತಿದೆ. ಇದರಿಂದ ತಮಿಳುನಾಡಿಗೆ ನೀರನ್ನು ಹರಿಸಲು ತೊಂದರೆ ಇಲ್ಲ ಎಂದರು. ನೆರೆ ರಾಜ್ಯವಾದ ತಮಿಳುನಾಡಿನೊಂದಿಗೆ ನೀರಿಗೆ ಸಂಬಂಧಿಸಿದ ತಕರಾರು ಉದ್ಭವಿಸುವುದಿಲ್ಲವೆಂದರು.ನಗರದ ಮಾನಸಗಂಗೋತ್ರಿಯಲ್ಲಿರುವ ಸೆನೆಟ್‍ಭವನದಲ್ಲಿ ಜನಮನ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಿದ್ದರಾಮಯ್ಯನವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಬೆಂಗಳೂರಿನಿಂದ ಮೈಸೂರಿಗೆ ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಮುಖ್ಯಮಂತ್ರಿಗಳೊಂದಿಗೆ ಸಚಿವ ರೋಷನ್ ಬೇಗ್ ಇದ್ದರು.
ಜೂ. 28 ರಂದು ಎಸ್‍ಸಿ, ಎಸ್‍ಟಿ ಕುಂದುಕೊರತೆ ಸಭೆ
      ಮಂಡ್ಯ ಜೂ.27. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯ ಎಸ್.ಸಿ., ಎಸ್.ಟಿ., ಜನಾಂಗದವರ ಕುಂದು ಕೊರತೆಗಳ ಕುರಿತು 2015ರ ಜೂನ್ 28 ರಂದು ಭಾನುವಾರ ಮಧ್ಯಾಹ್ನ 12 ರಿಂದ 1ರ ವರೆಗೆ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಕುಂದು ಕೊರತೆ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ. ಬೊರಸೆ ಅವರು ಕೋರಿದ್ದಾರೆ.

ವಿಕಲಚೇತನರಿಗೆ ಉನ್ನತ, ತಾಂತ್ರಿಕ ಶಿಕ್ಷಣದ ಶುಲ್ಕ ಮರುಪಾವತಿಗೆ ಅರ್ಜಿ
ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ನಂತರ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗಧಿ  ಪಡಿಸಿರುವ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ,ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳನ್ನು ಜಿಲ್ಲಾಅಂಗವಿಕಲರ ಕಲ್ಯಾಣಾಧಿಕಾರಿಗಳು, ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಕಛೇರಿ ಆವರಣ, ಮಂಡ್ಯ ಇಲ್ಲಿ ಪಡೆಯಲು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಕೆ.ಎಚ್. ರೇವಣೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*****

ಕೆ.ಆರ್.ಪೇಟೆ,ಜೂ.27. ಸಾಲದ ಬಾದೆಯಿಂದ ಆತ್ಮಹತ್ಯೆಗೆ ಶರಣಾಗಿರುವ ರೈತರ ಕುಟುಂಬಗಳಿಗೆ ತಲಾ 10ಲಕ್ಷ ರೂಗಳನ್ನು ನೀಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ಕಾರ್ಯಕರ್ತರು ಮತ್ತು ಕರವೇ ಕಾರ್ಯಕರ್ತರು  ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದಾಧ್ಯಂತ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬನ್ನು ಸರಬರಾಜು ಮಾಡಿ ವರ್ಷಗಳು ಕಳೆಯುತ್ತಿದ್ದರೂ ಜಡ್ಡುಗಟ್ಟಿ ಕುಳಿತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣವನ್ನು ನೀಡದೇ ಶೋಷಣೆ ಮಾಡುತ್ತಿರುವುದರಿಂದ ಸಾಲದ ಭಾದೆಯಿಂದ ಬೇಸತ್ತು ರೈತರು ಆತ್ಮಹತ್ಯೆಗೆ ಶರಣಗುತ್ತಿದ್ದಾರೆ. ಕೂಡಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರಿಂದ ರೈತರಿಗೆ ನ್ಯಾಯಬದ್ಧವಾಗಿ ಬರಬೇಕಾದ ಬಾಕಿ ಹಣವನ್ನು ಕೊಡಿಸಿಕೊಡುವ ಧಿಟ್ಟತನವನ್ನು ರಾಜ್ಯ ಸರ್ಕಾರವು ಪ್ರದರ್ಶನ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ರಾಜ್ಯ ಉಪಾಧ್ಯಕ್ಷ ಕೆ.ಆರ್.ಜಯರಾಮ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಘಟಕದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ, ಕಾರಿಗನಹಳ್ಳಿ ಪುಟ್ಟೇಗೌಡ, ಬೂಕನಕೆರೆ ನಾಗರಾಜು, ಕುಮಾರ್,  ಮುದ್ದುಕುಮಾರ್, ಚೌಡೇನಹಳ್ಳಿ ನಾರಾಯಣಸ್ವಾಮಿ,  ನಗರೂರುಕುಮಾರ್,  ಬಂಡಿಹೊಳೆ ನಾಗರಾಜು, ಎಲ್.ಬಿ.ಜಗದೀಶ್, ಕರವೇ ತಾಲೂಕು ಘಟಕದ ಅಧ್ಯಕ್ಷ ಎ.ಸಿ.ಕಾಂತರಾಜು, ಸಮೀರ್, ನಂದನ್, ಬೋರೇಗೌಡ ಮತ್ತಿತರರು ಭಾಗವಹಿಸಿದ್ದರು.
======================
ಕೆ.ಆರ್.ಪೇಟೆ,ಜೂ.27- ರಾಜ್ಯಾದ್ಯಂತ 1ಲಕ್ಷ ಸಸಿಗಳನ್ನು ನೆಡುವ “ವೃಕ್ಷ ಸಂರಕ್ಷಣಾ ಪೃಥ್ವಿಯೋಗ” ಆಂದೋಲನಕ್ಕೆ ನಾಡಿನ ಖ್ಯಾತ ಚಿಂತಕ, ಅಂಕಣಕಾರ ಹಾಗೂ ಯುವಬ್ರಿಗೇಡ್ ರಾಜ್ಯ ಸಂಚಾಲಕರಾದ ಚಕ್ರವರ್ತಿಸೂಲಿಬೆಲೆ ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತೆಂಗು ಮತ್ತು ಆಲದ ಸಸಿಯನ್ನು ನೆಡುವ ಮೂಲಕ ಚಾಲನೆ ನೀಡಿದರು.
ಮಾನವನು ದುರಾಸೆಯಿಂದ ಪರಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ನಡೆಸಿ ಮರಗಳನ್ನು ಕಡಿದು, ಕಾಡನ್ನು ನಾಶಮಾಡಿ ಕಾಂಕ್ರೀಟ್ ಕಾಡನ್ನು ನಿರ್ಮಿಸುತ್ತಿದ್ದಾನೆ. ಪರಿಣಾಮ ನಮಗೆ ಅಗತ್ಯವಾಗಿ ಬೇಕಾದ ಗಾಳಿ, ನೀರು, ಆಹಾರ ಪದಾರ್ಥಗಳು ಕಲುಷಿತವಾಗಿ ಹಲವಾರು ರೋಗರುಜಿನಗಳಿಗೆ ಮನುಷ್ಯನು ತುತ್ತಾಗಿ ತನ್ನ ಜೀವಿತವನ್ನು ಅರ್ಧ ಆಯಸ್ಸಿಗೇ ಕಳೆದುಕೊಳ್ಳುತ್ತಿದ್ದಾನೆ. ಪರಿಸರದ ಜೊತೆ ನಾವು ಇದೇ ರೀತಿಯಲ್ಲಿ ಚೆಲ್ಲಾಟವಾಡುತ್ತಾ ದೌರ್ಜನ್ಯವನ್ನು ನಡೆಸುತ್ತಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಆದ್ದರಿಂದ ನಾಡಿನಾಧ್ಯಂತ ಯುವ ಬ್ರಿಗೇಡ್ ಶಾಲಾ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿ ಜನಾಂದೋಲನವನ್ನು ಮಾಡುತ್ತಿದೆ.
ಒಂದು ಮರವು ತನ್ನ ಜೀವಿತಾವಧಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ವಾತಾರಣವನ್ನು ಶುದ್ಧಮಾಡುವ ಜೊತೆಗೆ 1ಕೋಟಿ ರೂಪಾಯಿ ಮೌಲ್ಯದ ಆಮ್ಲಜನಕವನ್ನು ಮಾನವನಿಗೆ ಕೊಡುಗೆಯಾಗಿ ನೀಡುತ್ತಿದೆ. ಪಶು-ಪಕ್ಷಿಗಳು ಗೂಡಿ ಕಟ್ಟಿ ಸಂತಾನೋತ್ಪತ್ತಿ ಮಾಡಲು ಆಶ್ರಯ ನೀಡುತ್ತಿದೆ. ಬಿಸಿಲಿನಿಂದ ಆಯಾಸಗೊಂಡು ಬಂದ ಮಾನವನಿಗೆ ತನ್ನ ನೆರಳಿನಲ್ಲಿ ರಕ್ಷಣೆ ನೀಡಿ ಸಾಕಿ ಸಲಹುತ್ತಿದೆ. ಆದರೆ ಪರಿಸರದ ಬಗ್ಗೆ ಕೃತಜ್ಞತೆಯಿಲ್ಲದ ಮಾನವರಾದ ನಾವು ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ನಮ್ಮ ಅಂತ್ಯವನ್ನು ನಾವೇ ತಂದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ಸೂಲಿಬೆಲೆ ವಿಷಾಧಿಸಿದರು.
ತಾಲೂಕಿನ ಹಾದನೂರು, ಗವೀಮಠ, ಭಾರತೀಫುರ, ಅಘಲಯ, ಸಂತೇಬಾಚಹಳ್ಳಿ, ಹೊಸಹೊಳಲು, ತೆಂಡೇಕೆರೆ, ಬೂಕನಕೆರೆ, ಹರಿಯಾಲದಮ್ಮ ದೇವಸ್ಥಾನ, ತ್ರಿವೇಣಿ ಸಂಗಮ, ಕಿಕ್ಕೇರಿ, ಮಾದಾಪುರ, ಹೊಸಹೊಳಲು ಗ್ರಾಮದ ಸಾರ್ವಜನಿಕ ಸ್ಥಳಗಳು ಮತ್ತು ಶಾಲಾ ಆವರಣದಲ್ಲಿ ವಿಶ್ವಗುರು ಅರಳಿಮರ ಸೇರಿದಂತೆ ವಿವಿಧ ಜಾತಿಯ ಕಾಡು ಮರಗಳನ್ನು ನೆಟ್ಟು ನೀರೆರೆಯಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ ಮತ್ತು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ, ಸಮಾಜ ಸೇವಕ ಗೋಪಾಲಕೃಷ್ಣ ಅವಧಾನಿಗಳು,  ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ನಿತ್ಯಾನಂದ ವಿವೇಕವಂಶಿ, ರೋಹಿತ್, ನಂದಿ ಮೆಡಿಕಲ್ಸ್ ಸತೀಶ್, ಕೆ.ಟಿ. ನಟರಾಜ್, ನಾಗೇಂದ್ರ, ವಿಕ್ರಮ್ ಸೂರ್ಯವಂಶಿ ಮತ್ತಿತರರು ಭಾಗವಹಿಸಿದ್ದರು.

ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ.
      ಮೈಸೂರು,ಜೂ.27-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 27 ರಂದು ಮೈಸೂರಿನಲ್ಲಿ ವಾಸ್ತವ್ಯ ಹೂಡಿ  ಜೂನ್ 28 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಜೂನ್ 28 ರಂದು ಬೆಳಿಗ್ಗೆ 10 ಗಂಟೆಗೆ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಯಶಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.  ಬೆಳಿಗ್ಗೆ 11-30ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

                ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ
    ಮೈಸೂರು,27.ಕಾವೇರಿ ನೀರಾವರಿ ನಿಗಮದ ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟವು 2284 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟವು 2279.50 ಅಡಿಗಳಷ್ಟು ತಲುಪಿರುತ್ತದೆ. ಹಾಲಿ 30000 ಕ್ಯೂಸೆಕ್ಸ್ (ಮೂವತ್ತು ಸಾವಿರ ಕ್ಯೂಸೆಕ್ಸ್) ಇದ್ದು, ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಈಗಾಗಲೇ 15000 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಒಳಹರಿವಿನ ಪ್ರಮಾಣ ಹೆಚ್ಚಾಗುವ ಸಂಭವವಿರುವುದರಿಂದ, ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಬೇಕಾಗಿರುವುದರಿಂದ, ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಡನೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಕಬಿನಿ ಮತ್ತು ವರುಣಾ ನಾಲಾ ವೃತ್ತ ಹಾಗೂ ನೀರಾವರಿ ಅಧೀಕ್ಷಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
     ಮೈಸೂರು,ಜೂ.27. ತಿ. ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದ 06 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 02 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ               ದಿನಾಂಕ:30-04-2015 ರಂದು ನಡೆದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಆಯ್ಕೆ ಸಮಿತಿಯು ಆಯ್ಕೆ ಮಾಡಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಛೇರಿಯಲ್ಲಿ ಪ್ರಕಟಿಸಲಾಗಿದೆ.  ಪ್ರಕಟಿಸಿರುವ ಸಂಭವನೀಯ ಆಯ್ಕೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:04-07-2015 ರೊಳಗಾಗಿ  ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ತಿ. ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಜೂ.27.ಮೈಸೂರು ನಗರದಲ್ಲಿ ದಿನಾಂಕ 28-06-2015 ರಂದು ಯು.ಜಿ.ಸಿ.ನೆಟ್ ಪರೀಕ್ಷೆ ನಡೆಯಲಿದ್ದು,  ಈ  ಪರೀಕ್ಷೆ ನಡೆಯುವ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಪರೀಕ್ಷೆ ಸುಗಮವಾಗಿ ನಡೆಸಲು ಮೈಸೂರು ನಗರದ 20 ಪರೀಕ್ಷಾ ಕೇಂದ್ರಗಳ ಬಳಿ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ  ಪರೀಕ್ಷೆ ನಡೆಯುವ  200 ಮೀಟರ್ ವ್ಯಾಪ್ತಿ ಪ್ರದೇಶವನ್ನು  ನಿಷೇಧಿತ ಪ್ರದೇಶವೆಂದು ಘೋಷಿಸಿ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
1973ರ ಸಿ.ಆರ್.ಪಿ.ಸಿ. ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಬಳಿ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Friday 26 June 2015

ಮಂಡ್ಯ: ಮಂಡ್ಯ ತಾಲೂಕು ತಗ್ಗಹಳ್ಳಿಯಲ್ಲಿ ಮೈತ್ರಿ ಯೋಜನೆಯಡಿ ಸಹಾಯಧನದ ಆದೇಶ ಪತ್ರವನ್ನು ಮಂಗಳಮುಖಿ ಶೋಭಾರವರಿಗೆ ಉಪ ತಹಸೀಲ್ದಾರ್ ಶಂಕರೇಗೌಡರವರು ವಿತರಿಸಿದರು.
ನಂತರ ಮಾತನಾಡಿದ ಅವರು, ಕೊತ್ತತ್ತಿ ಹೋಬಳಿಯಲ್ಲಿ ಮೊದಲ ಬಾರಿಗೆ ಮಂಗಳಮುಖಿಯರಿಗೆ ಸಹಾಯಧನ ವಿತರಿಸಲಾಗುತ್ತಿದೆ. ಇಂತಹ ಯೋಜನೆಗಳ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಅರ್ಹರಿಗೆ ಕೊಡಿಸಲು ಮುಂದಾಗಬೇಕು ಎಂದರು.
ಈ ಯೋಜನೆಗಳ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ. ಮೈತ್ರಿ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದೆ. ಫಲಾನುಭವಿಗಳು ಲಂಚ ನೀಡದೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಯುವ ಪರಿಷತ್ತು ಅಧ್ಯP್ಷ ಮಂಗಲ ಎಂ.ಯೋಗೇಶ್ ಮಾತನಾಡಿ, ಸರ್ಕಾರಗಳು ಜನರ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಲು ಹಲವು ಮಾರ್ಗೋಪಾಯಗಳನ್ನು ಕಂಡು ಹಿಡಿದಿದೆ. ಪಾರದರ್ಶಕ ನಿಯಮದಡಿಯಲ್ಲಿ ಸರ್ಕಾರಿ ಸವಲತ್ತುಗಳು ಗ್ರಾಮೀಣ ಜನರಿಗೆ ತಲುಪಿಸಬೇಕು ಎಂದರು.
ಸರ್ಕಾರ ದುರ್ಬಲ ವರ್ಗ ಹಾಗೂ ವಿಕಲ ಚೇತನರಿಗೆ ಹಲವು ಸೇವಾ ಸೌಲಭ್ಯಗಲನ್ನು ಒದಗಿಸುತ್ತಿದೆ. ಪ್ರತಿಯೊಬ್ಬರು ಕಂದಾಯ ಸಾP್ಷರತೆ ಹೊಂದಿ ಕಂದಾಯ ಇಲಾಖೆ ಮತ್ತು ಜನಸಮುದಾಯ ಒಗ್ಗಟ್ಟಿನಿಂದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಂದಾಯ ನಿರೀP್ಷಕರಾದ ತಮ್ಮಣ್ಣ,ಸತ್ಯಾನಾರಾಯಣ, ಗ್ರಾಮ ಲೆಕ್ಕಾಧಿಕಾರಿ ಗುಣಶೇಖರ್ ಉಪಸ್ಥಿತರಿದ್ದರು.

ಮಂಡ್ಯ :ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಾದ ರಾಜೇಂದ್ರ ಮತ್ತು ನಿಂಗೇಗೌಡರವರ ಕುಟುಂಬಗಳಿಗೆ ತಲಾ 20 ಲP್ಷ ಪರಿಹಾರ ನೀಡುವಂತೆ ರೈತಸಂಘದ ಸಂಚಾಲನ ಸಮಿತಿ ಅಧಕ್ಷ ಶಂಕರೇಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತರ ಆತ್ಮಹತ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆಯಾಗಿವೆ. ಕೂಡಲೇ ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಎಂದರು.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಕಬ್ಬಿನ ಬಾಕಿಯನ್ನು ಸರ್ಕಾರವೇ ಭರಿಸಬೇಕು. ಎಲ್ಲಾ ಬೆಳೆಗಳ ನೆರವಿಗೆ ಸರ್ಕಾರ ತP್ಷಣವೇ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸರ್ಕಾರಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಕೃಷಿ ಉತ್ಪನ್ನಗಳಿಗೆ ವೈe್ಞÁನಿಕ ಬೆಲೆ ನಿಗದಿ ಮಾಡುವುದು ಹಾಗೂ ಸಕಾಲಕ್ಕೆ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ಮೂರು ಸಾವಿರ ರುಪಾಯಿ ದರ ನಿಗದಿ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್ 29ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
2015-16ನೇ ಸಾಲಿಗೆ ಕೇಂದ್ರ ಸರ್ಕಾರ 2300 ರುಪಾಯಿ ಎಫ್ ಆರ್ ಪಿ ದರ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಕಬ್ಬು ಅರೆಯುವಿಕೆ ಪ್ರಾರಂಭಿಸುವುದಕ್ಕೂ ಮುನ್ನವೇ ಕನಿಷ್ಠ 3 ಸಾವಿರ ರುಪಾಯಿ ಸಲಹಾ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
2014-15ನೇ ಸಾಲಿನಲ್ಲಿ ಕಬ್ಬು ಅರೆದಿರುವ ಐದು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ 200 ಕೋಟಿ ರು.ಗಳನ್ನು  ಕೂಡಲೇ ಪಾವತಿ¸ಬೇಕು. ಪ್ರತಿ ಟನ್ ಗೆ 2200 ರು. ಮಾತ್ರ ಪಾವತಿ ಮಾಡುತ್ತಿದ್ದು, ಸರ್ಕಾರ ಹೇಳಿದಂತೆ 300 ರು. ಬಾಕಿ ಪಾವತಿಗೂ ಕ್ರಮಕೈಗೊಳ್ಲಬೇಕು ಎಂದರು.
ರೇಷ್ಮೆ ಬೆಲೆ ದಿನೇ ದಿನೇ ಕುಸಿಯುತ್ತಿದ್ದು, ಕೆ.ಜಿ.ರೇಷ್ಮೆ ಬೆಲೆ 400 ರುಗಳಿಂದ 150 ರು.ಗಳಿಗೆ ಕುಸಿದಿದೆ. ಇದರಿಂದ ರೈತ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೂಡಲೇ ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಶೇ.10ರಿಂದ ಶೇ.30ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರ ಬೆಲೆ ಟನ್ ಗೆ 9 ಸಾವಿರದಿಂದ 12 ಸಾವಿರ ರುಪಾಯಿಗಳಿಗೆ ಹೆಚ್ಚಳವಾಗಿದೆ. ಇದರಿಂದ ರೈತರಿಗೆ ವ್ಯವಸಾಯದ ಖರ್ಚು ದ್ವಿಗುಣವಾಗಿದ್ದು, ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಸರ್ಕಾರ ರಸಗೊಬ್ಬರ ದರ ಕಡಮೆ ಮಾಡಬೇಕು.
ಬತ್ತಕ್ಕೆ 1410 ರಿಂದ 1450 ರು. ಬೆಲೆ ನಿಗದಿ ಮಾಡಿರುವುದು ಅವೈe್ಞÁನಿಕವಾಗಿದೆ. ಕನಿಷ್ಠ 1800 ರು.ಗಳ ಬೆಲೆ ನಿಗದಿ ಮಾಡಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಲು ಸಹಕಾರ ಸಂಘಗಳಲ್ಲಿ ಬತ್ತ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉz್ದÉೀಶಿಸಿರುವ ಭೂ ಸ್ವಾಧೀನ ಕಾಯ್ದೆ ರೈತರ ಮರಣ ಶಾಸನವಾಗಿದೆ. ಕೃಷಿ ಭೂಮಿಯನ್ನು ಕಸಿದು ಕಾಪೆರ್Çರೇಟ್ ವಲಯಗಳಿಗೆ ನೀಡಲು ತುದಿಗಾಲಲ್ಲಿ ನಿಂತಿದೆ. ಕೂಡಲೇ ಈ ಕಾಯ್ದೆಯನ್ನು ಕೈಬಿಡಬೇಕು ಎಂದು ಶಂಕರೇಗೌಡ ಆಗ್ರಹ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ  ಕೆ.ಎಂ.ಉಮೇಶ್ , ಕೆ.ರಾಮಲಿಂಗೇಗೌಡ, ಕೆ.ಎಸ್ .ಸುಧೀರ್ ಕುಮಾರ್ ಇದ್ದರು.

ಮಂಡ್ಯ. : ಮೈಸೂರು ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಜು. 5ರಂದು 26 ಜೂನ್ 1975ರ ತುರ್ತುಸ್ಥಿತಿ - 40 ವರ್ಷಗಳು - ಒಂದು ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತುಪರಿಸ್ಥಿತಿಯ ದಿನಗಳಲ್ಲಿ ಜನಜಾಗೃತಿ ಮೂಡಿಸಿದವರ ಶ್ರಮ, ತ್ಯಾಗ ಮಾಡಿದವರನ್ನು ಕೃತಜ್ಞತೆಯಿಂದ ಸ್ಮರಿಸಲು ಹಾಗೂ ಸನ್ಮಾನಿಸಲು ಕರಾಳ ದಿನದ ನೆನಪು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಚ್ .ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಡಿ.ಎಚ್ .ಶಂಕರಮೂರ್ತಿ ಕರಾಳ ದಿನದ ನೆನಪನ್ನು ಹಂಚಿಕೊಳ್ಳಲಿದ್ದಾರೆ.
ಶಾಸಕ ಎಸ್ .ಸುರೇಶ್ ಕುಮಾರ್ ರವರು ಅಟಲ್ ಜೀ - ಅಡ್ವಾಣಿ ಜತೆ ಸೆರೆವಾಸದ ನೆನಪು ಹಾಗೂ ರಾಷ್ಟ್ರೀಯ ಸ್ವಯಂ ಸಂಘದ ಸು.ರಾಮಣ್ಣ ಹೋರಾಟದ ಹಿನ್ನೆಲೆ - ತಯಾರಿ ಭೂಗತ ಚಟುವಟಿಕೆ ಕುರಿತು ಮಾತನಾಡುವರು. ನಂತರ ಸೆರೆಮನೆ ವಾಸ ಅನುಭವಿಸಿದ ಸತ್ಯಾಗ್ರಹಿಗಳನ್ನು ಸನ್ಮಾನಿಸಲಾಗುವುದು ಎಂದು ತೋಂಟದಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ರಾಮಲಿಂಗಯ್ಯ, ಬಿ.ಟಿ.ಶ್ರೀನಿವಾಸಗೌಡ, ಶಂಕರರಾವ್ , ರಾಮಚಂದ್ರ, ಚಂದ್ರು ಇದ್ದರು.

Thursday 25 June 2015

 27ರಂದು ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಪ್ರದಾನ ಸಮಾರಂಭ



     ಯುವಜನತೆಯಲ್ಲಿರುವ ಅಪಾರ ಶಕ್ತಿಯನ್ನು ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಲು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುತ್ತಾ ಬಂದಿದೆ. 2012 ಹಾಗೂ 2013 ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಸರ್ಕಾರವು ಕ್ರೀಡಾಪಟುಗಳ ಕಲ್ಯಾಣಕ್ಕಾಗಿ ಕ್ರೀಡಾ ಸಂಜೀವಿನಿ ಎಂಬ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.  ಕಷ್ಟದಲ್ಲಿರುವ ಹಿರಿಯ ಕ್ರೀಡಾಪಟುಗಳಿಗೆ ಮಾಸಿಕ ಪಿಂಚಣಿಯನ್ನು ಸಹ ಜಾರಿಗೆ ತಂದಿದೆ.  ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರ ಕ್ರೀಡಾ ಬೆಳವಣಿಗೆಗೆ ಪೂರಕವಾಗಿ ತರಬೇತಿ ವ್ಯವಸ್ಥೆಯನ್ನು ರೂಪಿಸಿದೆ.. ಒಳಾಂಗಣ ಕ್ರೀಡಾಂಗಣ, ಈಜುಕೊಳಗಳು, ಗರಡಿಮನೆಗಳ ಜೊತೆಯಲ್ಲಿಯೇ ಕ್ರೀಡಾಶಾಲೆ, ಕ್ರೀಡಾ ನಿಲಯಗಳನ್ನು ಸ್ಥಾಪಿಸಲಾಗಿದೆ.
     ಯುವಜನರೇ ಪ್ರಗತಿಯ ಬೆನ್ನೆಲುಬು ಎಂದು ದೃಢವಾಗಿ ನಂಬಿರುವ ಸರ್ಕಾರ ಅವರನ್ನು ಸಬಲೀಕರಿಸಲು ಅನೇಕ ಕ್ರೀಡಾ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ದೇಶಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಜೊತೆಗೆ ಸದೃಢ ಯುವಜನರನ್ನು ನೀಡುವ ಮೂಲಕ ಸರ್ಕಾರವು ಬದ್ಧವಾಗಿರುತ್ತದೆ.
     2012 ಹಾಗೂ 2013ನೇ ಸಾಲಿನಲ್ಲಿ ಸುಮಾರು 557 ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದ್ದು ಇವರಲ್ಲಿ 38 ವಿಕಲಚೇತನ ಕ್ರೀಡಾಪಟುಗಳಿಗೂ ಸಹ ಪುರಸ್ಕಾರ ಮಾಡಲಾಗುತ್ತಿದೆ.

ನಿರ್ದೇಶಕರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
           

Wednesday 24 June 2015

    23ನೇ ಜೂನ್ 2015

ಜಿಲ್ಲೆಯಲ್ಲಿ 9  ಲಕ್ಷ ಲೀಟರ್ ಹಾಲು ಉತ್ಪಾದಿಸುವ ನಿರೀಕ್ಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ
     ಮೈಸೂರು,ಜೂ.24-ಮೈಸೂರು ಜಿಲ್ಲೆಯಲ್ಲಿ 2019 -20 ನೇ ಸಾಲಿನ ವೇಳೆಗೆ 9 ಲಕ್ಷ ಲೀಟರ್ ಹಾಲು ಉತ್ಪಾದಿಸುವ ನಿರೀಕ್ಷೆ ಇದ್ದು,  ಉತ್ಪಾದಿಸುವ ಹಾಲನ್ನು ಸಂಸ್ಕರಿಸಲು ಅನುಕೂಲವಾಗುವಂತೆ ಮೈಸೂರು ಜಿಲ್ಲೆಯಲ್ಲಿ ಮೆಗಾ ಹಾಲಿನ ಡೈರಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಿಳಿಸಿದರು.
       ಅವರು ಇಂದು ನಗರದ ಆಲನಹಳ್ಳಿನಲ್ಲಿ 183 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಮೆಗಾ ಡೇರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮೈಸೂರು ಜಿಲ್ಲೆಯ 7 ತಾಲ್ಲೂಕುಗಳಿಂದ ಪ್ರತಿದಿನ 5 ಲಕ್ಷ ಲೀಟರ್‍ಗೂ ಹೆಚ್ಚಿನ  ಹಾಲು ಉತ್ಪಾದನೆಯಾಗುತ್ತಿದ್ದು, ಈ ಹಾಲನ್ನು ಸಂಸ್ಕರಿಸಿ, ಮಾರಾಟ ಮಾಡುವುದು, ಹಾಲಿನ ಪುಡಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಬೇಕು. ಹಾಲಿ ಇರುವಂತಹ ಡೇರಿಯಲ್ಲಿ 3 ಲಕ್ಷ ಲೀಟರ್ ಹಾಲನ್ನು ಮಾತ್ರ ಸಂಸ್ಕರಿಸಲು ಸಾಧ್ಯವಾಗುತ್ತಿತ್ತು. ಈಗ ನಿರ್ಮಾಣಗೊಳ್ಳಲಿರುವ ಮೆಗಾ ಡೇರಿಯಲ್ಲಿ  ಪ್ರಾರಂಭದಲ್ಲಿ  6 ಲಕ್ಷ ಲೀಟರ್ ಸಂಸ್ಕರಿಸಬಹುದು 1 ಲಕ್ಷ ಕೆಜಿ ಮೊಸರು ತಯಾರಿಕೆ ಸಾಮಥ್ರ್ಯವನ್ನು ಹೊಂದಿರುತ್ತದೆ. ಮುಂದೆ  ಅತ್ಯಾಧುನಿಕ ತಂತ್ರಾಜ್ಞಾನ ಬಳಸಿ 9 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಬಹುದು ಇದಲ್ಲದೆ 30 ಮೆಟ್ರಿಕ್ ಟನ್ ಹಾಲಿನ ಪುಡಿ ಘಟಕವು ಸಹ ಇಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
       ಮೆಗಾ ಡೇರಿಯಲ್ಲಿ ಪ್ರತಿ ದಿನ 50000 ಲೀಟರ್‍ಗಳಷ್ಟು ಕ್ರೀಂನ್ನು ಬೇರ್ಪಡಿಸಿ 20000+25000 ಕೆಜಿ ಬೆಣ್ಣೆಯನ್ನು ತಯಾರಿಸುವ ಸಾಮಥ್ರ್ಯವಿದ್ದು, ಮಾರಾಟಕ್ಕೆ ಅವಶ್ಯವಿರುವ 5.0 ಲಕ್ಷಗಳಷ್ಟು ಹಾಲನ್ನು ವಿವಿಧ ಮಾದರಿಯ ಮತ್ತು ಅಳತೆಯ ಪ್ಯಾಕೆಟ್‍ಗಳಲ್ಲಿ ಪ್ಯಾಕ್ ಮಾಡಿ. ಗುಣಮಟ್ಟ ಕಾಪಾಡಲು ಕೋಲ್ಡ್ ಸ್ಟೋರ್ಸ್‍ನಲ್ಲಿ ಸಂಗ್ರಹಿಸಿಡಬಹುದಾಗಿರುತ್ತದೆ. ಹಾಗೂ ಉತ್ಪಾದಿಸಿದ ಬೆಣ್ಣೆಯನ್ನು ಸಂಗ್ರಹಿಸಿಡಲು ಅತಿ ಕಡಿಮೆ ಉಷ್ಣತೆಯ ಶೈತ್ಯಾಗಾರ ಸಹ ಇರುತ್ತದೆ ಎಂದರು.
     ಪ್ರತಿ ದಿನ ರಾಜ್ಯದಲ್ಲಿ 72 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ಸಾಲಿನಲ್ಲಿ ಈ ಉತ್ಪಾದನೆ ಶೇ. 15  ರಿಂದ 20 ರವರೆಗೆ ಏರಿಕೆಯಾಗಲಿದೆ. ಹಾಲು ಉತ್ಪಾದನೆ ಹೆಚ್ಚುತ್ತಿದ್ದು,  ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳು ಉತ್ಪಾದನೆಯಾಗುವ ಹಾಲನ್ನು ಮಾರಾಟ ಮಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.
    ಗ್ರಾಮೀಣ ಭಾಗದ ಜನರು ಹಾಲು ಉತ್ಪಾದಿಸಿ ಅವರು ಬಳಸಿಕೊಂಡು ಉಳಿದ  ಹಾಲನ್ನು ಪಾರದರ್ಶಕವಾಗಿ ಖರೀದಿಸುವ ಉದ್ದೇಶದಿಂದ ಹಾಲು ಉತ್ಪಾದಾಕರ ಸಂಘಗಳನ್ನು ಪ್ರಾರಂಭಿಸಲಾಯಿತು. ಗ್ರಾಮೀಣ ಭಾಗದಲ್ಲಿ ಜನರು ಇಂದು ಉತ್ಪಾದಿಸುವ ಹಾಲನ್ನು ಪೂರ್ಣವಾಗಿ ತಾವು ಕೂಡ ಬಳಸದೇ ಮಾರಾಟ ಮಾಡುತ್ತಿದ್ದರೆ. ಹಾಲು ಪೌಷ್ಠಿಕಾಂಶವುಳ್ಳ ಪೂರ್ಣ ಆಹಾರವಾಗಿದ್ದು, ಉತ್ಪಾದಿಸುವ ಹಾಲನ್ನು ಗ್ರಾಮೀಣ ಜನರು ಬಳಸುವಂತೆ ಸಲಹೆ ನೀಡಿದರು.
    ಪ್ರತಿ ದಿನ ಉತ್ಪಾದನೆಯಾಗುತ್ತಿರುವ 72 ಲಕ್ಷ ಲೀಟರ್ ಹಾಲಿಗೆ ಪ್ರತಿ ಲೀಟರ್ ಹಾಲಿಗೆ ರೂ 4/- ರಂತೆ ಸಹಾಯಧನ ನೀಡಲಾಗುತ್ತಿದ್ದು, ಸರ್ಕಾರದಿಂದ 2 ಕೋಟಿ 88 ಲಕ್ಷ ರೂ. ಹಣವನ್ನು ಕೆ.ಎಂ.ಎಫ್‍ಗೆ ಬಿಡುಗಡೆ ಮಾಡಲಾಗುತ್ತಿದೆ. 7 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ನೀಡಲಾಗುತ್ತಿದೆ ಎಂದರು.
     ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 945 ಹಾಲು ಉತಾದಕರ ಸಹಕಾರ ಸಂಘಗಳು ಕಾರ್ಯಚರಣೆಯಲಿದ್ದು, ಇದರಲ್ಲಿ 595 ಸಾಮಾನ್ಯ ಸಂಘಗಳು ಹಾಗೂ 350 ಮಹಿಳಾ ಸಂಘಗಳು ಇರುತ್ತದೆ. ಒಟ್ಟು 1,95,000 ಸದಸ್ಯರಿರುತ್ತಾರೆ. ರೈತನಿಗೆ ಪ್ರತಿ ವಾರ ವರಮಾನ ನೀಡುವಂತ ಉದ್ಯೋಗವಾಗಿದೆ. ರಾಜ್ಯದ್ಯಂತ ಹಾಲು ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಹಾಲು ಪರೀಕ್ಷಕರಿಗೆ ಹಣ ನೀಡಲು 48 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ ಎಂದರು.
    ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಕಾನೂನು ಮತ್ತು ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಕೆ. ಸೋಮಶೇಖರ್, ಹೆಚ್.ಪಿ. ಮಂಜುನಾಥ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರೋತ್ಸಾಹ ಧನ ಅರ್ಜಿ ಆಹ್ವಾನ
      ಮೈಸೂರು,ಜೂ.2೪.-ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2014-15ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ  ಉತ್ತೇಜನ ಯೋಜನೆಯಡಿ ಪ್ರೋತ್ಸಾಹಧನ ವಿತರಿಸಲು ಅರ್ಜಿ ಆಹ್ವಾನಿಸಿದೆ.
     ಆಸಕ್ತರು ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರುವ ಪರೀಕ್ಷೆ ಅಂಕ ಪಟ್ಟಿ ಪ್ರತಿ, ಜಾತಿ, ಆದಾಯ, ವಾಸಸ್ಥಳ, ಆಧಾರ್ ಕಾರ್ಡ್ ಪ್ರಮಾಣ ಪತ್ರದ ಪ್ರತಿಯೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಪರ್ಕಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವುದು.   ಪದವಿ ಪೂರ್ವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 30 ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ.
     ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422088ನ್ನು ಸಂಪರ್ಕಿಸಬಹುದು.

ನ್ಯಾಷನಲ್ ಡಿಫೆನ್ಸ್ ಮತ್ತು ನಾವೆಲ್ ಅಕಾಡೆಮಿ ಪರೀಕ್ಷೆ
      ಮೈಸೂರು,ಜೂ.2೪.ಕೇಂದ್ರ ಲೋಕ ಸೇವಾ ಆಯೋಗ ಆರ್ಮಿ, ನೇವಿ  & ಏರ್ ಫೋರ್ಸ್ ಗಳಲ್ಲಿ ಖಾಲಿ ಇರುವ 375  ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಆರ್ಮಿಗೆ  ಯಾವುದೇ ವಿಭಾಗದಲ್ಲಿ  ಪಿ.ಯು.ಸಿ., ಪಾಸಾಗಿರಬೇಕು. ನೇವಿ  & ಏರ್ ಫೋರ್ಸ್ ಗೆ ವಿಜಾÐನ (ಪಿಜಿಕ್ಸ್ & ಮ್ಯಾತ್ಸ್) ವಿಷಯಗಳಲ್ಲಿ ಪಿ.ಯು.ಸಿ. ಪಾಸಾಗಿರಬೇಕು.ವಯೋಮಿತಿ ದಿನಾಂಕ: 02-01-1997 ರಿಂದ 01-01-2000 ರೊಳಗೆ ಜನಿಸಿರಬೇಕು
ತಿತಿತಿ.uಠಿsಛಿoಟಿಟiಟಿe.ಟಿiಛಿ.iಟಿ  ವೆಬ್ ಸೈಟ್ ನಲ್ಲಿ   ಆನ್‍ಲೈನ್ ಮೂಲಕ ಜುಲೈ 17 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ವೆಬ್ ಸೈಟ್: hಣಣಠಿ://ತಿತಿತಿ.uಠಿsಛಿ.gov.iಟಿ   ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ದೂರವಾಣಿ: 0821-2516844 ,9449686641 ಇವರನ್ನು ಸಂಪರ್ಕಿಸುವುದು.
ಸಭೆ ಮುಂದೂಡಿಕೆ
      ಮೈಸೂರು,ಜೂ.23.(ಕ.ವಾ):-ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜೂನ್ 30 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಸಭೆಯು ಜುಲೈ 4 ರಂದು ಬೆಳಿಗ್ಗೆ 10-30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದರೆ.
 

Saturday 20 June 2015

ಪಠ್ಯಕ್ರಮದಲ್ಲಿ ‘ಯೋಗ’ ಸೇರ್ಪಡೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಠ್ಯಕ್ರಮದಲ್ಲಿ ‘ಯೋಗ’ ಸೇರ್ಪಡೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಜೂನ್ 21.
ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ, ಯಾವುದೇ ಪ್ರತಿಕೂಲ ಪ್ರಭಾವಗಳಿಲ್ಲದ, ಔಷಧಿರಹಿತ ನೈಸರ್ಗಿಕ ಚಿಕಿತ್ಸಾವಿಧಾನವಾದ ಯೋಗಾಭ್ಯಾಸವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರ ಚಿಂತಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಮುಂಜಾನೆ ವಿಧಾನಸೌಧದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನೂರಾರು ಎನ್‍ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು, ಎಲ್ಲ ವಯೋಮಾನದವರು ಅಭ್ಯಾಸ ಮಾಡಬಹುದಾದ ಯೋಗದಿಂದ ಬಹಳಷ್ಟು ರೋಗಗಳನ್ನು ನಿಯಂತ್ರಿಸಬಹುದಲ್ಲದೇ ಕಿರಿಯ ವಯಸ್ಸಿನಲ್ಲೇ ಪ್ರಾರಂಭಿಸಿದಲ್ಲಿ ಯೋಗಾಭ್ಯಾಸದಿಂದ ಹಲವು ರೋಗಗಳನ್ನು ಬಾರದಂತೆ ತಡೆಯಬಹುದು ಎಂದು ಅಭಿಪ್ರಾಯ ಪಟ್ಟರು. ಆದ್ದರಿಂದ, ಮಕ್ಕಳಿಗೆ ಯೋಗದ ಕುರಿತು ಶಾಲಾ ಪಠ್ಯಕ್ರಮದಲ್ಲಿ ಯೋಗ ಅಳವಡಿಸಲು ಸರ್ಕಾರ ಚಿಂತಿಸಿದೆ ಎಂದು ಅವರು ಹೇಳಿದರು. ಅಲ್ಲದೇ, ಶಾಲಾ ಮಕ್ಕಳಿಗೆ ಯೋಗ ಕಲಿಸಲು ಆಯುಶ್ ಇಲಾಖೆಯ ವತಿಯಿಂದ ಈಗಾಗಲೇ ಸುಮಾರು 12 ಸಾವಿರ ಉಪಾಧ್ಯಾಯರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನೇಕ ಮಾನಸಿಕ ಹಾಗೂ ದೈಹಿಕ ಒತ್ತಡಗಳಿಗೆ ಪ್ರತಿನಿತ್ಯ ನಾವು ಗುರಿಯಾಗುತ್ತರುತ್ತೇವೆ. ಆರೋಗ್ಯಕ್ಕೆ ಬಹುಪಾಲು ಕೆಡಕು ಮಾಡುವ ಈ ಒತ್ತಡಗಳಿಂದ ಮುಕ್ತಗೊಳ್ಳಲು ಯೋಗವೊಂದೇ ರಾಮಬಾಣ ಎಂದ ಅವರು, ದಿನವೂ ಕನಿಷ್ಠ ಒಂದು ತಾಸು ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು ಎಂದರು. ನಾವೆಲ್ಲರೂ ಆರೋಗ್ಯವಾಗಿದ್ದರೆ, ದೇಶವು ಸದೃಢವಾಗಿರುತ್ತದೆ, ಸಮಾಜ ಆರೋಗ್ಯವಂತವಾಗುತ್ತದೆ. ಯೋಗದ ಮೂಲಕ ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಇಂದು ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯವು ಯೋಗ ಹಾಗೂ ನ್ಯಾಚುರೋಪತಿ ಕಾಲೇಜು ನಡೆಸುತ್ತಿರುವ ಏಕೈಕ ರಾಜ್ಯವಾಗಿದೆ. ಮೈಸೂರಿನಲ್ಲಿರುವ ಈ ಮಹಾವಿದ್ಯಾಲಯವು ಯೋಗದಲ್ಲಿ ಪದವಿ ನೀಡುತ್ತಿರುವ ಮೊಟ್ಟಮೊದಲನೆಯ ಸಂಸ್ಥೆಯಾಗಿದೆ. ಅಲ್ಲದೇ, ನಮ್ಮ ರಾಜ್ಯದ ಅನೇಕ ಮಹನೀಯರು ಯೋಗಕ್ಕೆ ವಿಶ್ವಮಾನ್ಯತೆ ನೀಡುವಲ್ಲಿ ಕೊಡುಗೆ ನೀಡಿದ್ದಾರೆ ಎಂದ ಮುಖ್ಯಮಂತ್ರಿಗಳು ಬಿ ಕೆ ಎಸ್ ಅಯ್ಯಂಗಾರ್, ಮೈಸೂರಿನ ಪಟ್ಟಾಭಿ ಜೋಯಿಸ್, ಕೃಷ್ಣಮಾಚಾರ್ ಅವರುಗಳನ್ನು ಸ್ಮರಿಸಿದರು.
ಭಾರತ ದೇಶದ ಸಂಸ್ಕøತಿಯ ಅಂಗವಾಗಿರುವ ಯೋಗ ಧರ್ಮಾತೀತ ಹಾಗೂ ಜಾತ್ಯಾತೀತ ಎಂದ ಮುಖ್ಯಮಂತ್ರಿಗಳು ಯೋಗವನ್ನು ಜಗತ್ತಿನಾದ್ಯಂತ ಒಪ್ಪಿಕೊಂಡು ಸುಮಾರು 177 ದೇಶಗಳು ಇಂದು ಯೋಗ ದಿನವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಯುಶ್ ಇಲಾಖೆಯಿಂದ ಇಂದು ಯೋಗ ದಿನ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಅವರು ರಾಜ್ಯ ಸರ್ಕಾರವು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಪಠ್ಯಕ್ರಮದಲ್ಲಿ ಯೋಗವನ್ನು ಅಳವಡಿಸಲಿ ಎಂದು ಮನವಿ ಮಾಡಿದರು.
ಜೀವನಶೈಲಿ ಸಂಬಧಿತ ಹಲವಾರು ರೋಗಗಳಿಗೆ ಭಾರತ ದೇಶವು ಕೇಂದ್ರವಾಗಿ ಪರಿರ್ವತನೆಗೊಳ್ಳುತ್ತಿದೆ. ಹಾಗಾಗಿ, ಯೋಗದೊಂದಿಗೆ ಜೀವನಶೈಲಿ ಸುಧಾರಣೆ ಹಾಗೂ ಉತ್ತಮ ಅಭ್ಯಾಸಗಳ ಬಗ್ಗೆಯೂ ಪಠ್ಯಕ್ರಮ ತಯಾರಾಗಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸಚಿವ ಯು ಟಿ ಖಾದರ್ ಅವರು ಮಾತನಾಡಿ ಸತತ ಯೋಗ ಅಭ್ಯಾಸದಿಂದ ಮನಸ್ಸಿನ ಮೇಲೆ ಹಿಡಿತ ಸಾದಿಸಬಹುದು. ಹಾಗಾಗಿ ಯೋಗ ಎಲ್ಲರ ಜೀವನದ ಮೊದಲ ಗುರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಸಚಿವರಾದ ಆರ್ ವಿ ದೇಶಪಾಂಡೆ, ಉಮಾಶ್ರೀ, ಎಸ್ ಆರ್ ಪಾಟೀಲ್, ರಾಮಲಿಂಗಾ ರೆಡ್ಡಿ, ಶಾಸಕ ಪಿ ಸಿ ಮೋಹನ್, ತಾರಾ ಅನುರಾದ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ವಿಶ್ವ ಯೋಗ ದಿನಾಚರಣೆ

ಕೆ.ಆರ್.ಪೇಟೆ.ಜೂ.21- ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಮೈದಾನದಲ್ಲಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು  ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಣೆ  ಮಾಡಿದರು.
ತಾಲೂಕು ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್, ಭಜರಂಗದಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ,  ತಾಲೂಕು ಕುವೆಂಪು ಸಾಂಸ್ಕøತಿಕ ಕಲಾ ಬಳಗ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಯೋಗ ದಿನ ನಡೆಯಿತು.
ಕಾರ್ಯಕ್ರಮಕ್ಕೆ ಮುನ್ನ  ಯೋಗದ ಮಹತ್ವವನ್ನು ತಿಳಿಸಿದ ತಾಲೂಕು ಆರ್.ಎಸ್.ಎಸ್. ಸಂಘಟನೆಯ ಮುಖಂಡ ಮುರುಗೇಶ್  ಅವರು ಯೋಗವು ಆಧ್ಯಾತ್ಮಿಕ ಪರಿಕಲ್ಪನೆಯಾಗಿರಬಹುದು ಆದರೆ ಅದರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಅಡಗಿದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಯೋಗ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿದೆ.  ಯೋಗದ ಮಹತ್ವವನ್ನು ಅರಿತ ವಿಶ್ವದ ಜನ ಯೋಗವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯದ ದೃಷ್ಠಿಯಿಂದ ಒಳ್ಳೆಯ ಬೆಳೆವಣಿಗೆಯಾಗಿದೆ. ದೇಹದ ಸಬಲತೆಗೆ ಯೋಗ ತುಂಬು ಸಹಕಾರಿ.  ರಕ್ತದ ಒತ್ತಡ, ಮಧುಮೇಹ, ಅಸ್ತಮಾ ಮುಂತಾದ ಕಾಯಿಲೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಧರ್ಮಕ್ಕೂ ಯೋಗಾಚರಣೆಗೂ ಯಾವುದೇ ಸಂಬಂಧವಿಲ್ಲ. ಎಲ್ಲ ಧರ್ಮಿಯರೂ ಮನುಷ್ಯರೇ ಆಗಿರುವುದರಿಂದ ಮನುಷ್ಯನ ಸರ್ವರೋಗ ನಿಯಂತ್ರಣಕ್ಕೆ ಎಲ್ಲರೂ ನಿತ್ಯ ಕನಿಷ್ಠ ಅರ್ಧ ಗಂಟೆಯ ಕಾಲ ಯೋಗಾಭ್ಯಾಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಕಂದಾಸನ, ಬಕಾಸನ, ಪದ್ಮಾಸನ, ವಜ್ರಾಸನ, ಅರ್ಧಚಕ್ರಾಸನ, ಶಶಾಂಕಾಸನ, ಮಕರಾಸನ, ಶವಾಸನ, ತ್ರಿಕೋನಾಸನ, ತಾಡಾಸನ ಮುಂತಾದ ಯೋಗಸನಗಳನ್ನು ಮಾಡಿದರು. ಸೂರ್ಯ ನಮಸ್ಕಾರದೊಂದಿಗೆ ಯೋಗ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಮತ್ತು ಆರ್.ಎಸ್.ಎಸ್. ತಾಲೂಕು ಕಾರ್ಯವಾಹ ಗಣೇಶ್, ಮುಖಂಡರಾದ ಮುರುಗೇಶ್, ಹೆಚ್.ಬಿ.ಮಂಜುನಾಥ್, ಪರಮೇಶ್,  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಲವಕುಮಾರ್, ನಿಂಗಪ್ಪ ಅಗಸರ್, ಕೆ.ಎಸ್.ಆರ್.ಟಿ.ಸಿ. ನಾರಾಯಣ ಮತ್ತಿತರರು ಭಾಗವಹಿಸಿ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಉಪನ್ಯಾಸಕಿ ಗಾಯಿತ್ರಮ್ಮ ಅವರ ನೇತೃತ್ವದಲ್ಲಿ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿನಿಯರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ಯೋಗದಿಂದ ದೂರವುಳಿದ ತಾಲೂಕು ಆಡಳಿತ: ದೇಶದಾದ್ಯಂತ ಇಂದು ಯೋಗ ದಿನಾಚರಣೆ ನಡೆಯುತ್ತಿದ್ದರೆ ತಾಲೂಕು ಆಡಳಿತದ ವತಿಯಿಂದ ಯಾವುದೇ ಯೋಗ ಕಾರ್ಯಕ್ರಮ ನಡೆಯಲಿಲ್ಲ. ಖುದ್ದು ಜಿಲ್ಲಾಧಿಕಾರಿಗಳೆ ಯೋಗದಿನಾಚರಣೆ ಮಾಡಬೇಕು ಎಂದು ತಾಲೂಕು ಆಡಳಿತಗಳಿಗೆ ತಿಳಿಹೇಳಿದ್ದರೂ ಸಹ ತಾಲೂಕು ಆಡಳಿತದ ಯಾವುದೇ ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸದೇ ಇರುವುದು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಯಿತು.

ಮೈಸೂರು ಸುದ್ದಿಗಳು.


ವಸ್ತುಪ್ರದರ್ಶನ ಆವರಣದಲ್ಲಿ ಮೃಗಾಲಯ ಪಾರ್ಕಿಂಗ್
       ಮೈಸೂರು,ಜೂನ್.20.ಮೃಗಾಲಯದ ಮುಂಭಾಗದ ನಗರಪಾಲಿಕೆಯ ತ್ರಿಕೋನಾಕಾರ ಪಾರ್ಕಿಂಗ್ ಪ್ರದೇಶದಲ್ಲಿ ಬಸ್, ಟೆಂಪೋಗಳು ಹಾಗೂ 10 ಜನ ಸಾಮಥ್ರ್ಯದ ಕಾರು, ದ್ವಿಚಕ್ರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಿ ಇನ್ನುಳಿದ ವಾಹನಗಳಿಗೆ ಮೃಗಾಲಯದಿಂದ ಸುಮಾರು 400 ಮೀ ದೂರವಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಒಟ್ಟು 12 ಎಕರೆ ಸ್ಥಳದಲ್ಲಿ ಮೃಗಾಲಯ ವೀಕ್ಷಕರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದ್ದು ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು  ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದರು.
      ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೃಗಾಲಯ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿ ಈ ಉದ್ದೇಶಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 1.6 ಕೋಟಿ ರೂ. ಬಿಡುಗೆಯಾಗಿದ್ದು ನಿರ್ಮಿತಿ ಕೇಂದ್ರದಿಂದ ಈ ಕೆಲಸವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
     ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಪ್ರಮುಖವಾಗಿ ಮೃಗಾಲಯದ ಬಳಿ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಅಡಚಣೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಬೇಕಾಗಿದೆ ಅಲ್ಲದೆ ಪ್ರವಾಸಿಗರಿಗೆ ಒಂದೇ ಕಡೆ ವಿವಿಧ ಪ್ರವಾಸಿ ಸ್ಥಳಗಳ ಟಿಕೆಟ್ ನೀಡುವ ವ್ಯವಸ್ಥೆಯನ್ನು ದಸರಾ ವೇಳೆಯಲ್ಲಿ ಮಾತ್ರ ಮಾಡುತ್ತಿದ್ದು ವರ್ಷಪೂರ್ತಿ ಈ ವ್ಯವಸ್ಥೆ ಮುಂದುವರಿಸಬೇಕಾಗಿದೆ ಎಂದರು.
     ಮೈಸೂರು ಮೃಗಾಲಯಕ್ಕೆ ಪ್ರತಿ ವರ್ಷ ಅಂದಾಜು 33 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, 201-11ರಲ್ಲಿ 26.07 ಲಕ್ಷ, 2011-12ರಲ್ಲಿ 30.34 ಲಕ್ಷ, 2012-13ರಲ್ಲಿ 30.26 ಲಕ್ಷ, 2013-14ರಲ್ಲಿ 30.49 ಲಕ್ಷ ಹಾಗೂ 2014-15ರಲ್ಲಿ 31.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಗಮಿಸುವ ಪ್ರವಾಸಿಗರಿಗೆ ವಾಹನ ನಿಲ್ಲುಗಡೆಗಾಗಿ ಮೃಗಾಲಯದ ಪಾರ್ಕಿಂಗ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇದೆ ಎಂದು ಮೈಸೂರು  ಮೃಗಾಲಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಪಿ. ರವಿ ವಿವರ ನೀಡಿದರು.
    ಮೃಗಾಲಯ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರು ವಾರ್ಷಿಕ ಅಂದಾಜು 12 ಸಾವಿರ ಬಸ್, 15,500 ಟೆಂಪೋ, 2 ಲಕ್ಷ ಕಾರು/ಜೀಪ್ 80 ಸಾವಿರ ದ್ವಿಚಕ್ರವಾಹನ ಹಾಗೂ 100 ಬೈಸಿಕಲ್ ನಲ್ಲಿ ಆಗಮಿಸುತ್ತಿದ್ದು, 2014-15ರಲ್ಲಿ 8041 ಬಸ್, 13041 ಟೆಂಪೋ, 139360 ಕಾರು/ಜೀಪ್, 46196 ದ್ವಿಚಕ್ರವಾಹನ ಹಾಗೂ 47 ಬೈಸಿಕಲ್‍ಗಳಿಗೆ ಮಾತ್ರ ಮೃಗಾಲಯ ಪಾರ್ಕಿಂಗ್ ಆವರಣದಲ್ಲಿ ವಾಹನ ನಿಲುಗಡೆ ಮಾಡಲು ಸಾಧ್ಯವಾಗಿದ್ದು, ಇನ್ನುಳಿದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆಯಾಗಿರುತ್ತದೆ ಎಂದರು.
    ವಾಹನ ನಿಲುಗಡೆಯ ಸಮಸ್ಯೆ ಪರಿಹರಿಸಲು ಬಹು ಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದ್ದು, ಬಹು ಮಹಡಿ ಪಾರ್ಕಿಂಗ್ ನಿರ್ಮಾಣ ಕಟ್ಟಡ ಪಾರಂಪರಿಕ ಕಟ್ಟಡಕ್ಕಿಂತ ಹೆಚ್ಚು ಎತ್ತರವಾಗಿರುವುದರಿಂದ ನಿರ್ಮಾಣವನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.
       ವಸ್ತುಪ್ರದರ್ಶನ ಪ್ರಾಧಿಕಾರದ ಪ್ರದೇಶದಲ್ಲಿ ಗುರುತಿಸಿರುವ 12 ಎಕರೆ ಪ್ರದೇಶದಲ್ಲಿ ನುರಿತ ವಾಸ್ತುಶಿಲ್ಪಿಗಳಿಂದ  ನಕ್ಷೆ ಮಾಡಿಸಿ, ಪಾರ್ಕಿಂಗ್ ಪ್ರದೇಶವನ್ನು ಅಭಿವೃದ್ಧಿಪಡಿಸಿ 1000 ಸಾವಿರ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಯ ವೆಚ್ಚವನ್ನು ವಸ್ತುಪ್ರದರ್ಶನ ಪ್ರಾಧಿಕಾರವೇ ಭರಿಸಿ ನಿರ್ವಹಣೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬಹುದಾಗಿದೆ ಎಂದರು.
    ಮೃಗಾಲಯ ಹಾಗೂ ವಸ್ತುಪ್ರದರ್ಶನ ಪ್ರಾಧಿಕಾರದೊಂದಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಬಹುದಾಗಿದೆ.    ಒಂದೇ ಪ್ರದೇಶದಲ್ಲಿ ಸಮೂಹ ವಾಹನ ನಿಲುಗಡೆ ಮಾಡಬಹುದಾಗಿದೆ. ಈ ಪ್ರದೇಶದಿಂದ ಪ್ರವಾಸಿಗರು ಮೃಗಾಲಯ ಹಾಗೂ ಅರಮನೆಗೆ ಭೇಟಿ ನೀಡಲು ಉಚಿತ ಮಿನಿ ಬಸ್ ಸಾರಿಗೆ ವ್ಯವಸ್ಥೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲು ಕೆ.ಎಸ್.ಆರ್.ಟಿ.ಸಿ. ಸಹಯೋಗದೊಂದಿಗೆ ಸಮಗ್ರ ಸಾರಿಗೆ ಸೌಲಭ್ಯ ಪಡೆಯಬಹುದಾಗಿದೆ. ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ 3 ಪ್ರವಾಸಿ ತಾಣಗಳಲ್ಲಿ ವಾಹನ ನಿಲುಗಡೆಯಲ್ಲಿ ಪದೇಪದೇ ಉದ್ಬವಾಗಿರುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗೂ 3 ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ತಗ್ಗಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ರೊಪ್ ವೇ ಸೌಲಭ್ಯ ಕೂಡ ಕಲ್ಪಿಸಬಹುದಾಗಿದೆ ಎಂದರು.
     ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಶಾಸಕ ವಾಸು, ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಜಿ. ಬೆಟಸೂರ ಮಠ್ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ



ಮೈಸೂರು,ಜೂನ್.20.ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಸ್ನೇಹಿ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪ ಅಮರನಾಥ್ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಕಷ್ಟು ಅನುದಾನವು ಸರ್ಕಾರದಿಂದ ಮಂಜೂರಾದರೂ ಜಿಲ್ಲೆಯ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದರ ಬದಲು  ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಶುದ್ಧ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆರೋಗ್ಯಕರ ವಾತಾವರಣ ಕಾಪಾಡದಿರುವುದು ಮುಖ್ಯ ಕಾರಣಗಳಾಗಿವೆ ಎಂದರು.
     ಆರೋಗ್ಯ ರಕ್ಷಾ ನಿಧಿಯಡಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಹಿಂದೆ ಮೀಸಲಿದ್ದ 2 ಲಕ್ಷ ರೂ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಹೆಚ್ಚಿನ ಹಣವನ್ನು ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ಒತ್ತು ನೀಡಬೇಕು. ಆಸ್ಪತ್ರೆ ಆವರಣದಲ್ಲಿ ಅರೋಗ್ಯ ಸ್ನೇಹಿ ಸಸಿಗಳನ್ನು ನೆಡಬೇಕು ಮತ್ತು ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅನುಕೂಲಕ್ಕಾಗಿ ಕ್ಯಾಂಟೀನ್‍ಗಳನ್ನು ತೆರೆಯಬೇಕು ಎಂದು ತಿಳಿಸಿದರು.
    ಜಿಲ್ಲೆಯಲ್ಲಿರುವ 108 ವಾಹನ ಸೇವೆಯ ಬಗ್ಗೆ ಬಹಳಷ್ಟು ದೂರಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬಂದಿದ್ದು, ಆರೋಗ್ಯ ತುರ್ತು ವಾಹನದ ಸೇವೆಯ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮವಹಿಸಬೇಕು ಎಂದರು.
    ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಸೌಲಭ್ಯ ಅರ್ಹರ ಪಾಲಾಗುತ್ತಿಲ್ಲದಿರುವುದರ ಬಗ್ಗೆ ಅನೇಕ ಘಟನೆಗಳು  ಸಾಕ್ಷಿಕರಿಸಿದೆ. ಈ ಯೋಜನೆಗೆ ಸೇರಿದ ಹಾಲು ಪುಡಿಯ ಪ್ಯಾಕೆಟ್‍ಗಳು ಹೋಟೆಲ್‍ಗಳಲ್ಲಿ ಲಭ್ಯವಾಗಿವೆ. ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕ್ಷೀರ ಭಾಗ್ಯ ಯೋಜನೆಯಲ್ಲಿ ನಡೆಯುವ ಅವ್ಯವಹಾರವನ್ನು ತಡೆಗಟ್ಟಲು ನಿರಂತರ ದಾಳಿಗಳು ನಡೆಯಬೇಕು ಎಂದು ಅಧ್ಯಕ್ಷರು ಸೂಚಿಸಿದರು.
   ರೈತರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಹೆಚ್ಚು ಮಾಹಿತಿಗಳನ್ನು ನೀಡುವ ವ್ಯವಸ್ಥೆಯಾಗಬೇಕು. ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿವೆ. ರಸಗೊಬ್ಬರ, ಬಿತ್ತನೆ ಬೀಜ ಹಾಗೂ ರೈತರಿಗೆ ಬೇಕಾಗುವ ಅಗತ್ಯ ಸೌಲಭ್ಯ ನೀಡುವುದರಲ್ಲಿ ಕೃಷಿ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ರೈತರು ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
    ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರತ್ಯೇಕವಾಗಿ ಎರಡು ಹಂತಗಳಲ್ಲಿ ತರಬೇತಿಯನ್ನು ನೀಡಲಾಗುವುದು. ಆದರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಲಾಖೆಗಳ ಮಾಹಿತಿಯು ಅಷ್ಟೇ ಮಹತ್ವ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
    ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗಬಾರದು. ಸಾರ್ವಜನಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಬಹುತೇಕ ವಿದ್ಯಾರ್ಥಿನಿಲಯಗಳು ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆಯುತ್ತ ಬಂದರೂ ತೆರೆದಿರುವುದಿಲ್ಲ. ಶೀಘ್ರ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳಿಗೆ ಈ ಸಂಬಂಧ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿ ಬೆಳವಣಿಗೆಗಾಗಿ ಮುಂದಾಗಬೇಕು ಎಂದು ಸೂಚಿಸಿದರು.
      ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಆರೋಗ್ಯವನ್ನು ಬಲಪಡಿಸುವ ಹಣ್ಣು ತರಕಾರಿ ಗಿಡಗಳನ್ನು ನಡಲು ಕ್ರಮಕೈಗೊಳ್ಳಬೇಕು. ಸಾಮಾಜಿ ಅರಣ್ಯವನ್ನು ಹೆಚ್ಚಿಸಲು ಶಾಲಾ, ಸರ್ಕಾರಿ ಕಚೇರಿ ಹಾಗೂ ಪ್ರಮುಖ ಸ್ಥಳಗಳ ಆವರಣವನ್ನು ಬಳಸಿಕೊಳ್ಳಬೇಕು ಎಂದು ಬಿ.ಪುಷ್ಪ ಅಮರನಾಥ್ ತಿಳಿಸಿದರು.
     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಉಪಾಧ್ಯಕ್ಷರಾದ ಎಲ್ ಮಾದಪ್ಪ, ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ರಾಜಣ್ಣ, ರಾಜಯ್ಯ, ಜವರೇ ಗೌಡ್ರು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.  

ರೇಷ್ಮೆ ಬೋರ್ಡ್ ಸದಸ್ಯ ಕಾರ್ಯದರ್ಶಿಯಾಗಿ ಡಾ. ಹೆಚ್. ನಾಗೇಶ್ ಪ್ರಭು
 

   ಮೈಸೂರು,ಜೂನ್.20.ಕೇಂದ್ರೀಯ ರೇಷ್ಮೆ ಬೋರ್ಡ್ ಸದಸ್ಯ
ಕಾರ್ಯದರ್ಶಿಯಾಗಿ ಡಾ. ಹೆಚ್. ನಾಗೇಶ್ ಪ್ರಭು ಐ.ಎಫ್.ಎಸ್ ಇವರು ಬೆಂಗಳೂರಿನಲ್ಲಿ ಇತ್ತೇಚಿಗೆ ಅಧಿಕಾರ ಸ್ವೀಕರಿಸಿದರು.
    ಇವರು 1984ನೇ ಸಾಲಿನ ಎ.ಎಫ್.ಎಸ್ ಅಧಿಕಾರಿಯಾಗಿದ್ದು ಧಾರವಾಡದ ಕೃಷಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಈ ಹಿಂದೆ ಇವರು ಭಾರತ ಸರ್ಕಾರದ ಆರೋಗ್ಯ ಸಂಶೋಧನೆ ಇಲಾಖೆಯಲ್ಲಿ ಜಂಟಿಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಜೂನ್ 23 ರಂದು ನೂತನ ಮೆಗಾ ಡೇರಿ ಶಂಕುಸ್ಥಾಪನೆ
     ಮೈಸೂರು,ಜೂನ್.20.ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ನೂತನ ಮೆಗಾ ಡೇರಿ ಶಂಕುಸ್ಥಾಪನಾ ಸಮಾರಂಭ ಜೂನ್ 23 ರಂದು ಮಧ್ಯಾಹ್ನ 2-45 ಗಂಟೆಗೆ ಮೈಸೂರಿನ ಆಲನಹಳ್ಳಿಯಲ್ಲಿ ನಡೆಯಲಿದೆ.
     ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ ನೆರವೇರಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು ಮೆಗಾ ಡೇರಿ ನಕ್ಷೆ ಅನಾವರಣಗೊಳಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
     ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಡಾ|| ಎಸ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ಬೆಂಗಳೂರಿನ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಅಧ್ಯಕ್ಷ ಪಿ. ನಾಗರಾಜು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಡಾ. ಹರ್ಷಕುಮಾರ್ ಭನವಾಲ, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ವಾಸು, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, , ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಡಿ.ಸುಂದರ ದಾಸ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು, ನಗರಪಾಲಿಕೆ ಸದಸ್ಯೆ ಸಿ.ಎಸ್. ರಜಿನಿ ಅಣ್ಣಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  

                            ಧನಸಹಾಯಕ್ಕೆ ಅರ್ಜಿ ಆಹ್ವಾನ
ಮೈಸೂರು,ಜೂ.20.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ  ಸೃಜನಶೀಲಾ ಕಲಾಪ್ರಕಾರಗಳಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿರುವ ಸಂಘ ಸಂಸ್ಥೆ ಹಾಗೂ ಅಸಂಘಟಿತ ಕಲಾವಿದರಿಗೆ ವಾದ್ಯಪರಿಕರ, ವೇಷಭೂಷಣಕ್ಕೆ ಸಹಾಯಧನ ನೀಡಲಾಗುವುದು. ಚಿತ್ರಕಲಾ/ಶಿಲ್ಪಕಲಾವಿದರಿಗೆ ಕಲಾಕೃತಿ ಪ್ರದರ್ಶನಕ್ಕಾಗಿ ಪ್ರೋತ್ಸಾಹ ಧನ ನೀಡಲಾಗುವುದು.
ಆಸಕ್ತ ಕಲಾವಿದರು/ ಸಂಘ ಸಂಸ್ಥೆಗಳು ತಿತಿತಿ.ಞಚಿಟಿಟಿಚಿಜಚಿsiಡಿi.ಛಿo.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಜುಲೈ 15 ರೊಳಗಾಗಿ  ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸುವಾಗ ದಾಖಲೆಗಳ ಮೂಲ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಸಲ್ಲಿಸಬೇಕು. ಧನಸಹಾಯ ಪಡೆದ ಸಂಸ್ಥೆಗಳು ಸಾಮಾಜಿಕ ತಪಾಸಣೆಗೆ ಒಳಪಡುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ಮೊಬೈಲ್ ಸಂಖ್ಯೆ 9844980291 ನ್ನು ಸಂಪರ್ಕಿಸುವುದು.

ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನ
      ಮೈಸೂರು,ಜೂನ್.20.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏಪ್ರಿಲ್ 2015ರಲ್ಲಿ ನಡೆದ ಎಸ್.ಎಸ್.ಎಲ್.ಸಿ/ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ``ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ’’ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವ ಪ್ರವರ್ಗ-1ರ ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ 2.50 ಲಕ್ಷ, 2ಎ, 3ಎ ಹಾಗೂ 3ಬಿಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 1.00 ಲಕ್ಷ ದೊಳಗೆ ಇರಬೇಕು.
     ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ದೂರವಾಣಿ ಸಂಖ್ಯೆ: 080-44554444 ಹಾಗೂ ಮೊಬೈಲ್ ಸಂಖ್ಯೆ: 9480818013, 9480818010 ಸಂಪರ್ಕಿಸಬಹುದು.
ಸಾಂಕ್ರಮಿಕ ರೋಗ ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಮನವಿ
     ಮೈಸೂರು,ಜೂನ್.20.ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದಳುಜ್ವರ, ಇತರೆ ಸೊಳ್ಳೆ, ಮತ್ತು ಇತರೆ ಕೀಟಗಳಿಂದ ಹರಡುವ ರೋಗ ಪ್ರಕರಣಗಳು ವರದಿಯಾಗುತ್ತಿದ್ದು, ಈ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯೊನ್ಮುಕವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರ್ ಎಸ್.  ಅವರು ತಿಳಿಸಿದ್ದಾರೆ.
    ಜೂನ್-2015 ಮಾಹೆಯನ್ನು ಮಲೇರಿಯಾ ವಿರೋಧಿ ಮಾಹೆಯಾಗಿ ಆಚರಿಸಲಾಗುತ್ತಿದೆ. ಸಾಂಕ್ರಮಿಕ ರೋಗ ನಿಯಂತ್ರಿಸಲು  ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿರುತ್ತದೆ.
        ಮಲೇರಿಯಾ ಹರಡುವ ಅನಾಫಿಲಿಸ್ ಸೊಳ್ಳೆ ಹಾಗೂ ಡೆಂಗ್ಯು, ಚಿಕುಂಗುನ್ಯ ಹರಡುವ ಈಡಿಸ್ ಸೊಳ್ಳೆ ಉತ್ಪತ್ತಿ ತಡೆಗಟ್ಟಲು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಮಾಡಿರಿ. ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್ಮುಗಳನ್ನು ಸದಾಕಾಲ ಮುಚ್ಚಿಡಿ. ಮನೆಯ ಸುತ್ತಮುತ್ತ ಬಿಸಾಡಿದ ಹಳೆಯ ಟೈರು, ಎಳನೀರ ಚಿಪ್ಪು, ಇತರೆ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡುವುದು. ಸಾರ್ವಜನಿಕರು ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಸೊಳ್ಳೆ ನಿರೋಧಕ ಬಳಸುವುದು
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಹಾಗೂ ರೋಗ ಹರಡದಂತೆ ವಹಿಸಬೇಕಾದ ಎಚ್ಚರಿಕೆ ಬಗ್ಗೆ ತಿಳುವಳಿಕೆ ನೀಡಲಿದ್ದಾರೆ. ಸಾರ್ವಜನಿಕರು ಆರೋಗ್ಯ ಕಾಯಕರ್ತರೊಂದಿಗೆ ಸಹಕಾರ ನೀಡಿ, ಸೊಳ್ಳೆ ಮತ್ತು ಸೊಳ್ಳೆ ಲಾರ್ವ ಮೂಲೋತ್ಪಾಟನೆ ಮಾಡುವುದರ ಮೂಲಕ ರೋಗಗಳ ನಿಯಂತ್ರಣಕ್ಕೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತÀ ಹೆಂಗಸಿನ ಶವÀ ಪತ್ತೆಗಾಗಿ ಮನವಿ
ಮೈಸೂರು,ಜೂನ್.20.ಪಾಂಡವಪುರ-ಶ್ರೀರಂಗಪಟ್ಟಣ  ಮೈಸೂರು ರೈಲು ನಿಲ್ದಾಣಗಳ ಮಧ್ಯ ರೈಲ್ವೆ ಕಿ.ಮೀ.ನಂ. 120/100ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ರೈಲು ಮಾರ್ಗದಲ್ಲಿ ಜೂನ್ 19 ರಂದು   ಸುಮಾರು 25 ವರ್ಷ ಅಪರಿಚಿತ ಹೆಂಗಸನ್ನು ಕೊಲೆ ಮಾಡಿ ಮೃತ ದೇಹವನ್ನು ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಳಿಯ ಮೇಲೆ ತಂದು ಮಲಗಿಸಿದ್ದುದರಿಂದ ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ಮಹಿಳೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 1 ಅಡಿ ಉದ್ದದ ಕಪ್ಪು ಕೂದಲು ಬಲಗೈ ಮೇಲೆ ಆದರ್ಶ  ಎಂಬ ಹಚ್ಚೆ ಗುರುತು ಇರುತ್ತದೆ. ಕಪ್ಪು-ಬಿಳಿ ಬಣ್ಣದ ಮಿಶ್ರಿತ ಹೂಗಳ ಚಿತ್ರವಿರುವ ತುಂಬು ತೋಳಿನ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್, ಪಾಚಿ ಮತ್ತು ಕಪ್ಪು ಬಣ್ಣದ ಚೂಡುದಾರ್ ಪಾಲಿಸ್ಟಾರ್ ವೇಲ್, ಬಗೈಲೆಯಲ್ಲಿ ಹಸಿರು ಗಾಜಿನ ಬಳೆಗಳು, ಎಡ ಮೂಗಿನಲ್ಲಿ ಹಿತ್ತಾಳೆ ಮಾದರಿಯ ಸಣ್ಣ ಮೂಗುತಿ, ಕಿವಿಯಲ್ಲಿ ಬಿಳಿ ಹರಳಿನ ಫ್ಯಾನ್ಸಿ ಓಲೆ ಜುಮುಕಿ  ಧರಿಸಿರುತ್ತಾರೆ.
ಮೃತ ಹೆಂಗಸಿನ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.



    ಕುಡಿಯುವ ನೀರು ಸಮಸ್ಯೆ: ಕೈ ಪಂಪು ದುರಸ್ತಿ ಕ್ರಮ ಕೈಗೊಳ್ಳುವಂತೆ ಸೂಚನೆ
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ, ಕೈಪಂಪು ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ತಿಳಿಸಿದರು.
 ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕುಡಿಯುವ ನೀರು ಸಮಸ್ಯೆ ಆಗದಂತೆ ಸರ್ಕಾರದಿಂದ ಬಿಡುಗಡೆಗೊಂಡ ಅನುದಾನವಾದ ಕ್ಯಾಪ್ ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಕುಡಿಯುವ ನೀರಿಗೆ ತೊಂದರೆ ಇರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದ ಅವರು ವಸತಿ ನಿಲಯಕ್ಕೆ ಪಡೆದಿರುವ ಬಾಡಿಗೆ ಕಟ್ಟಡದ ಪ್ರಸ್ತಾವನೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜೇಗೌಡ ಮಾತನಾಡಿ, ವೈದ್ಯಾಧಿಕಾರಿಗಳ ಕೊರತೆ ಬಗ್ಗೆ ಸಭೆಯಲ್ಲಿ ಸದಸ್ಯರು ಮಾಹಿತಿ ನೀಡಿದ್ದು ಖಾಲಿ ಇರುವ ಕಡೆ ವೈದ್ಯರನ್ನು ನೀಡಲು ಅಗತ್ಯ ಕ್ರಮ ವಹಿಸುವಂತೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜೇಗೌಡ ಅವರು ಹೊಸದಾಗಿ ನೇಮಕಾತಿಯಾಗಿರುವ ವೈದ್ಯಾಧಿಕಾರಿಗಳನ್ನು, ವೈದ್ಯಾಧಿಕಾರಿಗಳ ಕೊರತೆ ಇರುವ ಸ್ಥಳಕ್ಕೆ ನಿಯೋಜಿಸಲಾಗುತ್ತಿದೆ ಹಾಗೂ ಅಗತ್ಯವಿರುವ ಕಡೆ ವೈದ್ಯರನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲಲತಾ ಪ್ರಕಾಶ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ
ನೆಹರು ಯುವ ಕೇಂದ್ರ, ಮಂಡ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಡ್ಯ, ಅನನ್ಯ ಹಾರ್ಟ್ ಟ್ರಸ್ಟ್, ಮಂಡ್ಯ ಜಾಗೃತಿ ಯುವತಿ ಮತ್ತು ಮಹಿಳಾ ಮಂಡ,ಗುತ್ತಲು ಹಾಗೂ ಜಿಲ್ಲಾ ಕಾರಾಗೃಹ ಇವರ ಸಹಯೋಗದೊಂದಿಗೆ ಜೂನ್21 ರಂದು ಬೆಳಿಗ್ಗೆ 8 ಗಂಟೆಗೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯನ್ನು ಏರ್ಪಡಿಸಲಾಗಿದೆ.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಪಿ.ಎಂ. ಸೋಮಶೇಖರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಎಸ್.ಬಿ. ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕರಾದ ಬಿ.ಶಿವಲಿಂಗಯ್ಯರವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Sunday 14 June 2015

ವರುಷ ಒಂದುಆರಂಭ ಅನೇಕ " - ಛಾಯಾಚಿತ್ರಪ್ರದರ್ಶನ .
                                  ***
"ವರುಷ ಒಂದುಆರಂಭ ಅನೇಕ " -  ಹೆಸರಿನ    ಡಿ  ವಿ ಪಿ    ಛಾಯಾಚಿತ್ರ ಪ್ರದರ್ಶನ ವನ್ನು  ಕೇಂದ್ರ ಸಂಸದೀಯವ್ಯವಹಾರ   ಮತ್ತು ನಗರಾಭಿವೃದ್ದಿ ಖಾತೆ ಸಚಿವ ಶ್ರೀವೆಂಕಯ್ಯ ನಾಯ್ದು ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಂದು  ಶುಭಾರಂಭ  ಗೊಳಿಸಿದರು .

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು  ಸರ್ಕಾರ ಒಂದು ವರ್ಷದ ಅವಧಿಯಲ್ಲಿ ನಡೆಸಿದ  ಹಲವಾರು ಕಾರ್ಯಗಳವರದಿಯನ್ನು ಜನರಿಗೆ ನೀದುತ್ತಿದ್ದೇವೆಯೇ ಹೊರತುಸಾಧನೆಗಳ  ಸಮಾರಂಭ ವಲ್ಲ ಯಂದು ಸ್ಪಸ್ತ ಪಡಿಸಿದರು .ಯಾವುದೇ ಹಗರಣ ಗಳಿಲ್ಲದ ಎನ್ ಡಿ   ಸರ್ಕಾರದಒಂದು ವರ್ಷವಿದು , ಇದು ಕೇವಲ ಆರಂಭ , ಇನ್ನೂಹಲವಾರು ಕಾರ್ಯಕ್ರಮಗಳು ಬರಲಿವೆ  ಯಂದು ತಿಳಿಸಿದರುಕಳೆದ ೫೮ ವರ್ಷಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆಸಾಮಾಜಿಕ ಭದ್ರತಾ ಯೋಜನೆಗಳು ಜಾರಿಗೆ ಬಂದಿವೆ,ಹಿಂದೆಲ್ಲ ಇದ್ದದ್ದು ಕೇವಲ ಸಾಮಾಜಿಕ ಕ್ಷೇತ್ರದಯೋಜನೆಗಳಷ್ಟೇ  ಎಂದು ಹೇಳಿದರು.  ಭಾರತವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಗಮನವನ್ನು ಸೆಳೆದಿದೆ ,ದೇಶದಲ್ಲಿ ಕಳೆದ ೫೮ ವರ್ಷಗಳಲ್ಲಿ ಇದ್ದುದ್ದು ಕೇವಲ ಕೋಟಿ  ಬ್ಯಾಂಕ್ ಅಕೌಂಟು ಗಳು , ಆದರೆ ಶ್ರೀ ಮೋದಿಅವರ ಮಾರ್ಗದರ್ಶನದಲ್ಲಿ  ಕೇವಲ ನಾಲ್ಕು ತಿಂಗಳಿನಲ್ಲಿ ೧೫ಕೋಟಿ ಬ್ಯಾಂಕ್ ಅಕೌಂಟು ಗಳನ್ನು ತೆರೆಯಲಾಗಿದೆ ಎಂದುತಿಳಿಸಿದರು .

ಕೇಂದ್ರ ರಾಸಾಯನಿಕ ಹಾಗು ರಸಗೊಬ್ಬರ ಖಾತೆ ಸಚಿವ ಶ್ರೀ ಅನಂತ್ ಕುಮಾರ್ ಅವರು ಮಾತನಾಡಿ , ರೈತರಿಗೆಸಕಾಲದಲ್ಲಿ ರಸಗೊಬ್ಬರ ಪೂರೈಸಲು  ಎಲ್ಲ ರೀತಿಯಮುಂಜಾಗ್ರತ ಕ್ರಮ ಕೈಗೊಂಡಿದ್ದು ಇದರಿಂದ ರೈತರು ಹೆಚ್ಚಿನಬೆಳೆ ತೆಗೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು .

ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಖಾತೆ ಸಚಿನ ಶ್ರೀ ಡಿ.ವಿ .ಸದಾನಂದ ಗೌಡ , ಬೆಂಗಳೂರು ಕೇಂದ್ರ  ಲೋಕ ಸಭಾಸದಸ್ಯ ಶ್ರೀ ಪಿ .ಸಿ . ಮೋಹನ್  ಹಾಗೂ ಸಾರ್ವಜನಿಕರುಅಧಿಕ ಸಂಖೆಯಲ್ಲಿ ಹಾಜರಿದ್ದರು . ನಂತರ ಕೇಂದ್ರ ಸಂಗೀತಮತ್ತು ನಾಟಕ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳುನಡೆದವು .

ಇಸ್ರೋ , ಹಲವಾರು ಬ್ಯಾಂಕು ಗಳು ಹಾಗೂ ವಿಮಾಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ . ಕೇಂದ್ರಜಾಹೀರಾತು ಮತ್ತು ದೃಶ್ಯ ಪ್ರಚಾರ ಸಚಿವಾಲಯದ ಕ್ಷೇತ್ರಪ್ರದರ್ಶನ ವಿಭಾಗವು (davp )  ಪ್ರದರ್ಶನವನ್ನುಏರ್ಪಡಿಸಿದ್ದು ,  ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ತಿಂಗಳ ೧೯  ವರೆಗೆ ಬೆಳೆಗ್ಗೆ  ರಿಂದ ಸಂಜೆ   ವರೆಗೆಪ್ರದರ್ಶನ ಸಾವಜನಿಕರಿಗೆ ತೆರೆದಿರುತ್ತದೆ .

Saturday 13 June 2015

ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲೂ ಭ್ರಷ್ಠಾಚಾರ ತಾಂಡವವಾಡುತ್ತಿದೆ-ಎಸ್.ಆರ್.ಹೀರೆಮಠ್
ಮೈಸೂರು, ಜೂ. 13- ಪ್ರಜಾಪ್ರಭುತ್ವದ ಆಧಾರಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗÀಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವವಾಡುತ್ತಿದೆ ಎಂದು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷ ಎಸ್.ಆರ್. ಹೀರೇಮಠ್ ಆರೋಪಿಸಿದರು.
  ಇಂದು ಮೈಸೂರಿನ ಪತ್ರಕತ್ರ ಭವನದಲ್ಲಿ  ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟರನ್ನು ರಕ್ಷಣೆ ಮಾಡುವ ಕೆಲಸ  ನಡೆಯುತ್ತಿದೆ, ರಾಜ್ಯದ ಲೋಕಾಯುಕ್ತ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗೂ ಕಾರ್ಯಾಂಗಗಳಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಇದನ್ನು ಮಟ್ಟ ಹಾಕಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
   ಅಕ್ರಮ ಗಣಿಗಾರಿಕೆಗಿಂತಲೂ ಮಿಗಿಲಾಗಿ  ಭೂಮಾಫಿಯಾ ದಂಧೆ ನಡೆಯುತ್ತಿದೆ ಎಂದ ಅವರು ಗೃಹಸಚಿವ ಜಾರ್ಜ್ ಹಾಗೂ ಇಂಧನ ಸಚಿವ  ಡಿ.ಕೆ. ಶಿವಕುಮಾರ್ ಅವರುಗಳು ಭ್ರಷ್ಟಾಚಾರದ ಕೂಪಗಳಾಗಿದ್ದಾರೆ  ಎಂದು ಗಂಭೀರ ಆರೋಪ ಮಾಡಿದರು.
  ಇವರುಗಳ ವಿರುದ್ಧ ಅಗೆದಷ್ಟು  ಭ್ರಷ್ಟಾಚಾರ ಕಂಡುಬರುತ್ತಿದೆ ಎಂದರು.  ಈ ಹಿಂದೆ ಜಾಯ್ ಐಸ್‍ಕ್ರಿಮ್ ಸಂಸ್ಥೆಗೆ ಗೋಮಾಳದ ಭೂಮಿಯನ್ನು ನೀಡುವಾಗಲೇ ಆ ಸಂಸ್ಥೆಯಿಂದ  ಜಾರ್ಜ್ ಪತ್ರವನ್ನು ಬರೆಸಿಕೊಂಡಿದ್ದರು. ಅದರಂತೆ ಈಗ ಆ ಸ್ಥಳವನ್ನು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.
ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಅದೇ ಸಂಸ್ಥೆಗೆ ನೀಡಬಾರದೆಂದು ಅವರು  ಆಗ್ರಹಿಸಿದರು.
 ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಹರಿಸಿ ಸರ್ಕಾರ  ವಶಪಡಿಸಿಕೊಂಡಿರುವ ಭೂಮಿ ಪ್ರೆಸ್ಟೀಜ್ ಸಂಸ್ಥೆಯ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
 ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಶೇ. 30ರಷ್ಟು ಭ್ರಷ್ಟಾಚಾರ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಆವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರ ಹಿಂಬಾಲಕರು  ಅಕ್ರಮಗಳನ್ನು ನಡೆಸುತ್ತಿದ್ದು ಅದು  ಸಿದ್ದರಾಮಯ್ಯ ಅವರನ್ನು ಸಂಕಟಕ್ಕೆ ಸಿಲುಕಿಸಿದೆ,  ಹಾಗಾಗಿ ಸಿ.ಎಂ. ರವರು  ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಹೇಳಿದರು.
 ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಸ್‍ಪಿ ಸೋನಿಯಾ ನಾರಂಗ್ ಈಗ ಬಹಿರಂಗಪಡಿಸಿದ್ದಾರೆ. ನಾನು ಈ ಹಿಂದೆಯೇ ಲೋಕಾಯುಕ್ತರಾದ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ ತಮ್ಮ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡಯುತ್ತಿದೆ ಕಡಿವಾಣ ಹಾಕಿ ಎಂದು ತಿಳಿಸಿದ್ದೆ.
ಆದರೆ ಅವರು ಯಾವುದೇ ಕ್ರಮ ಜರುಗಿಸಿಲ್ಲ. ಆರಂಭದಲ್ಲೇ ಚಿವುಟಿ ಹಾಕಿದ್ದರೆ ಇಂದು ಬೃಹತ್ ಅಗಿ ಬೆಳೆಯುತ್ತಿರಲಿಲ್ಲ ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಸಚಿವರುಗಳಾದ ಡಿಕೆ ಶಿವಕುಮಾರ್, ಜಾರ್ಜ್ ಮತ್ತು ದಿನೇಶ್ ಗುಂಡುರಾವ್ ಅವರು ಭ್ರಷ್ಟಾಚಾರ ಮಾಡಿ ರಾಜ್ಯವನ್ನು ವಿನಾಶದತ್ತ ಕೊಂಡೂಯ್ಯುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಮುಂದಾಗದೆ ಕುರ್ಚಿ ಬಳಸಿಕೊಂಡು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ನಾನು ಭ್ರಷ್ಟಾಚಾರ ಆರೋಪ  ಮಾಡಿರುವ ವ್ಯಕ್ತಿಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹಿರೇಮಠ್ ಸವಾಲು ಹಾಕಿದರು.
 _