Friday 1 August 2014

PIB-ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರೈಲ್ವೆ ಸಚಿವಾಲಯದ ಯೋಜನೆ.

ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರೈಲ್ವೆ ಸಚಿವಾಲಯದ ಯೋಜನೆ
ಆಗಸ್ಟ್ 1,  2014

ರೈಲ್ವೆ ಬಜೆಟ್ 2014-15ರಲ್ಲಿ  ಪವಿತ್ರ ಕ್ಷೇತ್ರಗಳ ಸಂದರ್ಶನಕ್ಕಾಗಿ ಪ್ರಯಾಣಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೈಲ್ವೆ ಸಚಿವಾಲಯ ‘ಪಿಲಿಗ್ರಿಮ್ ಸಕ್ರ್ಯುಟ್ಸ್’ ಆರಂಭಿಸಲಾಗುವುದೆಂದು ಘೊಷಿಸಿದೆ. ಇದರ ಅಂಗವಾಗಿ ‘ದೇವಿ ಸಕ್ರ್ಯುಟ್’ , ‘ಜ್ಯೋರ್ತಿಲಿಂಗ್ ಸಕ್ರ್ಯುಟ್’, ‘ಜೈನ್ ಸಕ್ರ್ಯುಟ್’, ‘ ಕ್ರಿಶ್ಚಿಯನ್ ಸಕ್ರ್ಯುಟ್’, ‘ ಮುಸ್ಲಿಂ ಹಾಗೂ ಸೂಫಿ ಸಕ್ರ್ಯುಟ್‍ಗಳು ’, ‘ ಸಿಖ್ ಸಕ್ರ್ಯುಟ್’, ‘ ಬುದ್ಧಿಷ್ಟ್ ಸಕ್ರ್ಯುಟ್’ , ‘ಹೆಸರಾಂತ ದೇವಾಲಯಗಳ ಸಕ್ರ್ಯುಟ್’  ಗಳನ್ನು ಯೋಜಿಸಲಾಗಿದೆ.
 ‘ಭಾರತ ದರ್ಶನ ರೈಲು’  ಐತಿಹಾಸಿಕ ಮತ್ತು ಧಾರ್ಮಿಕ ತಾಣಗಳ ದರ್ಶನಕ್ಕೆ ಅನುಕೂಲವಾಗಲಿದೆ ಎಂದು ರೈಲ್ವೆ  ಸಚಿವಾಲಯದ ರಾಜ್ಯ ಸಚಿವ ಶ್ರೀ ಮನೋಜ್ ಸಿನ್ಹಾ ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.  



                                                172 ರೈಲು ನಿಲ್ದಾಣಗಳಲ್ಲಿ 400 ಅಧಿಕ ಎಸ್ಕಲೇಟರ್
ಆಗಸ್ಟ್ 1,  2014

ದೇಶದ 172 ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ 400 ಅಧಿಕ ಎಸ್ಕಲೇಟರ್‍ಗಳನ್ನು ನಿರ್ಮಿಸಲು ಉದ್ಧೆಶಿಸಲಾಗಿದೆ ಎಂದು ರೈಲ್ವೆ  ಸಚಿವಾಲಯದ ರಾಜ್ಯ ಸಚಿವ ಶ್ರೀ ಮನೋಜ್ ಸಿನ್ಹಾ ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.


10 ರೈಲ್ವೆ ನಿಲ್ದಾಣಗಳು ಅಂತರಾಷ್ಟ್ರೀಯ ದರ್ಜೆಗೆ
ಆಗಸ್ಟ್ 1,  2014

ದೇಶದ ಮಹಾನಗರಗಳ ಕನಿಷ್ಠ 10 ರೈಲ್ವೆ ನಿಲ್ದಾಣಗಳನ್ನು ಹಾಗೂ ಪ್ರಮುಖ ಜಂಕ್ಷನ್‍ಗಳನ್ನು ಎಲ್ಲಾ ಪ್ರಯಾಣಿಕ ಸೌಲಭ್ಯಗಳ ಜತೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ದರ್ಜೆಗೇರಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ರೈಲ್ವೆ  ಸಚಿವಾಲಯದ ರಾಜ್ಯ ಸಚಿವ  ಶ್ರೀ ಮನೋಜ್ ಸಿನ್ಹಾ ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.


ಪ್ರಧಾನಿಯನ್ನು ಭೇಟಿಯಾದ ಅನಿಲ್ ಕುಂಭ್ಳೆ
ಆಗಸ್ಟ್ 1,  2014
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಶ್ರೀ. ಅನಿಲ್ ಕುಂಬ್ಳೆ ನವದೆಹಲಿಯಲ್ಲಿಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು  ಭೇಟಿ ಮಾಡಿದರು. ಇದೊಂದು ಔಪಚಾರಿಕ ಭೇಟಿಯಾಗಿತ್ತು.


ರಾಷ್ಟ್ರಪತಿಗಳಿಂದ ಕಾಮನ್‍ವೆಲ್ತ್ ಕ್ರೀಡಾಕೂಟ ವಿಜೇತರಿಗೆ ಶುಭಾಶಯ
ಆಗಸ್ಟ್ 1,  2014

ಕಾಮನ್‍ವೆಲ್ತ್ ಕ್ರೀಡಾಕೂಟ 2014ರÀಲ್ಲಿ ವಿಜೇತರಾದ ಭಾರತೀಯ ಕ್ರೀಡಾಪಟುಗಳಿಗೆ  ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿ ಇಂದು ಶುಭಾಶಯ ಕೋರಿದರು. ಅವರು ತಮ್ಮ ಸಂದೇಶದಲ್ಲಿ ‘ನಿಮ್ಮ ಸಾಧನೆಯು ಭಾÀರತೀಯ ಕ್ರೀಡಾಪಟುವೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಕ್ರೀಡೆಯ ಪರಾಕಾಷ್ಠೆಯನ್ನು ತಲುಪಬಹುದೆಂಬುದನ್ನು ತೋರಿಸಿಕೊಡುತ್ತದೆ’ ಎಂದರು.  




No comments:

Post a Comment