Sunday 24 August 2014

ಮೈಸೂರು-ಗೌರಿ ಗಣೇಶ ಹಬ್ಬ-ಪೊಲೀಸ್ ಠಾಣೆಯ ಪೂರ್ವಾನುಮತಿಯನ್ನು ಪಡೆಯ ಬೇಕು.

2014ನೇ ಸಾಲಿನ ಗೌರಿ ಗಣೇಶ ಹಬ್ಬ-ಪೊಲೀಸ್ ಠಾಣೆಯ ಪೂರ್ವಾನುಮತಿಯನ್ನು ಪಡೆಯ ಬೇಕು.
         2014ನೇ ಸಾಲಿನ ಗೌರಿ ಹಬ್ಬ ದಿನಾಂಕ: 28-08-2014 ರಂದು ಮತ್ತು  ಗಣೇಶನ ಹಬ್ಬವು ದಿನಾಂಕ: 29-08-2014 ರಂದು ನಡೆಯಲಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವವರು/ವ್ಯವಸ್ಥಾಪಕರು ಸರಹದ್ದಿನ ಠಾಣೆಗಳಿಗೆ ವಿಷಯ ತಿಳಿಸಿ, ಠಾಣೆಗಳಿಂದ ಮಾಹಿತಿ ಪತ್ರ ಮತ್ತು ನಿಗಧಿತ ನಮೂನೆಯ ಅರ್ಜಿಯನ್ನು ಪಡೆಯಬೇಕು. ಅರ್ಜಿಯನ್ನು ದಿನಾಂಕ 25-08-2014 ರಂದು ಸಂಜೆ 4-00 ಗಂಟೆಯ ಒಳಗಾಗಿ  ಭರ್ತಿ ಮಾಡಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿ, ಪೊಲೀಸ್ ಠಾಣೆಯ ಠಾಣಾಧಿಕಾರಿ ರವರಿಂದ ಪೂರ್ವಾನುಮತಿಯನ್ನು ಪಡೆಯಬೇಕು ಎಂದು ಮೈಸೂರು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಬ್ಬದ ಆಚರಣೆಯ ಸಂದರ್ಭದಲ್ಲಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರುಗಳ ಗಮನಕ್ಕೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.

      1. ಗಣಪತಿ ಪ್ರತಿಷ್ಠಾಪನೆ ಮಾಡುವವರು ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಬಾರದು.  ನಗರಪಾಲಿಕೆ ಸೂಚನೆ ಮೇರೆಗೆ ಸೀಸ ಮುಕ್ತ ಬಣ್ಣವಿರುವ ಗಣಪತಿಯನ್ನು ಪ್ರತಿಷ್ಟಾಪನೆ ಮಾಡುವುದು.
        2. ಗಣಪತಿ ಪ್ರತಿಷ್ಠಾಪನೆ ಮಾಡುವವರು ಬಲವಂತವಾಗಿ ಯಾವುದೇ ರೀತಿಯ ಚಂದಾ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದ್ದು, ಬಲವಂತವಾಗಿ ಚಂದಾ ವಸೂಲಿ ಮಾಡುವುದು ಸುಲಿಗೆ ಮಾಡಿದಂತೆ ಅಗುವುದರಿಂದ  ಸದರಿ ಕೃತ್ಯವು ಕಲಂ: 384 ಐಪಿಸಿ ರೀತ್ಯಾ ಶಿಕ್ಷಾರ್ಹ ಅಪರಾಧವಾಗಿದ್ದು,  ಈ ಅಪರಾಧಕ್ಕೆ ಮೂರು ವರ್ಷಗಳ ಸಜೆ ಅಥವಾ ದಂಡ ಅಥವಾ ಸಜೆ ಹಾಗೂ ದಂಡ ಎರಡನ್ನು ವಿಧಿಸಬಹುದಾಗಿರುತ್ತೆ.   
     3. ಗಣಪತಿ ಪ್ರತಿಷ್ಠಾಪನೆ ಮಾಡುವವರು/ವ್ಯವಸ್ಥಾಪಕರು  ಗಣಪತಿ ಪ್ರತಿಷ್ಠಾಪನಾ ಸ್ಥಳ, ವಿಸರ್ಜಿಸುವ ಸ್ಥಳ, ಮತ್ತು ಮೆರವಣಿಗೆ ಮಾರ್ಗ ಹಾಗೂ ಇತರೆ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯೊಂದಿಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಅರ್ಜಿಗಳನ್ನು ಮುಂಚಿತವಾಗಿ ನೀಡಿ,  ಠಾಣಾಧಿಕಾರಿ ರವರಿಂದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು, ಅನುಮತಿಯನ್ನು ಪಡೆಯದೆ ಪ್ರತಿಷ್ಠಾಪನೆ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.
     
        4. ಗಣಪತಿ ಪ್ರತಿಷ್ಠಾಪನಾ ಸ್ಥಳವನ್ನು ಆಯ್ಕೆ ಮಾಡುವಾಗ ಸಾರ್ವಜನಿಕರ ಹಾಗೂ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಪ್ರತಿಷ್ಠಾಪನಾ ಸ್ಥಳವನ್ನು ಆಯ್ಕೆ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಶಾಮಿಯಾನ ಹಾಕಬಾರದು.
     
        5. ಅರ್ಜಿಯೊಂದಿಗೆ ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಒಪ್ಪಿಗೆ ಪತ್ರವನ್ನು  ಲಗತ್ತಿಸತಕ್ಕದ್ದು. ಸಾರ್ವಜನಿಕ ಸ್ಥಳವಾಗಿದ್ದಲ್ಲಿ ನಗರಪಾಲಿಕೆಯಿಂದ ಪಡೆದಿರುವ ಅನುಮತಿ ಪತ್ರವನ್ನು ಲಗತ್ತಿಸಬೇಕು. ವಿದ್ಯುಚ್ಚಕ್ತಿ ಅಳವಡಿಸುವ ಬಗ್ಗೆ ಚೆಸ್ಕಾಂ ನಿಂದ ಅನುಮತಿ ಪಡೆದಿರಬೇಕು ಹಾಗೂ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು  ಪಡೆಯಬಾರದು.

-2-

        6. ಗಣಪತಿ ಪ್ರತಿಷ್ಠಾಪನೆ ಮಾಡಿ, ಧ್ವನಿವರ್ಧಕವನ್ನು ಅಳವಡಿಸುವವರು ಘನ  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ  ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಧ್ವನಿಯಲ್ಲಿ ಉಪಯೋಗಿಸಬೇಕು.  ಧ್ವನಿವರ್ಧಕದಲ್ಲಿ ಆಶ್ಲೀಲ ಸಾಹಿತ್ಯವುಳ್ಳ ಗೀತೆಗಳನ್ನು ಪ್ರಸಾರ ಮಾಡಬಾರದು.  ಮನರಂಜನಾ ಕಾರ್ಯಕ್ರಮಗಳನ್ನು  ರಾತ್ರಿ 10-00 ಘಂಟೆ ಒಳಗೆ ಮುಗಿಸುವುದು.

      7. ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾವುದೇ ಲಾಟರಿ, ಪ್ರವೇಶ ಶುಲ್ಕ,  ಅಥವಾ ಇನ್ನಿತರೆ ಯಾವುದೇ ಬಹುಮಾನದ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

       8. ವ್ಯವಸ್ಥಾಪಕರು ಗಣಪತಿ ಪ್ರತಿಷ್ಠಾಪನೆ ಮಾಡಿದ ಮೇಲೆ ವಿಸರ್ಜನೆಯಾಗುವವರೆಗೆ ಗಣಪತಿ ಪ್ರತಿಷ್ಠಾಪನೆ ಸ್ಥಳದಲ್ಲಿ ರಕ್ಷಣೆಗಾಗಿ ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವುದಲ್ಲದೇ ವಿಸರ್ಜನಾ ಸ್ಥಳದಲ್ಲಿ ಮುಂಜಾಗ್ರÀತಾ ಕ್ರಮವಾಗಿ ನುರಿತ ಈಜುಗಾರರನ್ನು ಇರುವಂತೆ ವ್ಯವಸ್ಥೆ ಮಾಡಿಕೊಂಡು ಸಾರ್ವಜನಿಕರು ನೀರಿನಲ್ಲಿ ಮುಳುಗಡೆಯಾಗದಂತೆ ಮತ್ತು ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಂಡು ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳತಕ್ಕದ್ದು.

      
     9. ಪ್ರತಿಷ್ಠಾಪನೆ ಸ್ಥಳದಲ್ಲಿ ಗಣಪತಿಯ ಮುಂದೆ ಎಣ್ಣೆ ದೀಪ, ತುಪ್ಪದ ಆರತಿ, ವಿದ್ಯುತ್ ದೀಪ ಮತ್ತು ವಿದ್ಯುತ್ ಸೀರಿಯಲ್ ಸೆಟ್ ಅಳವಡಿಸಿದಾಗ ಇವುಗಳ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಬೆಂಕಿ ನಂದಿಸುವ ಉಪಕರಣಗಳಾದ ನೀರು, ಮರಳು ಸಂಗ್ರಹಣೆ ಮಾಡಿ ಹಾಗೂ ಇತರೆ ಬೆಂಕಿ ನಂದಿಸುವ ಉಪಕರಣಗಳನ್ನು ಇಟ್ಟು ಯಾವುದೇ ಬೆಂಕಿ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವುದು ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ, ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಪ್ರಸಾದ, ತಿಂಡಿ ಹಾಗೂ ಯಾವುದೇ ಹಣ್ಣು ಹಂಪಲುಗಳನ್ನು ಇಟ್ಟ ಸಂದರ್ಭದಲ್ಲಿ ಇಲಿ, ಬೆಕ್ಕು ಅಥವಾ ಇತರೆ ಪ್ರಾಣಿಗಳು ಪ್ರವೇಶಿಸದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಂಡು ಯಾವುದೇ ಅಗ್ನಿ ಆಕಸ್ಮಿಕಗಳು ಅಥವಾ ಇತರೆ ಅಹಿತಕರ ಘಟನೆಗಳಿಗೆ  ಕಾರಣವಾಗದಂತೆ ನೋಡಿಕೊಳ್ಳುವುದು ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ.
    
      10. ಗಣಪತಿ ವಿಸರ್ಜನೆಯನ್ನು ರಾತ್ರಿ 10-00 ಗಂಟೆಯ ಒಳಗೆ ಮಾಡುವುದು, ಗಣಪತಿ ವಿಸರ್ಜನೆ ಮಾಡುವ ಸಮಯದಲ್ಲಿ ನಡೆಸುವ ಮೆರವಣೆಗೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು  ಹಾಗೂ ಮೆರವಣಿಗೆಯು ರಸ್ತೆಯ ಎಡಬದಿಯಲ್ಲಿ ಹೋಗತಕ್ಕದ್ದು. ಯಾವುದೇ ಕಾರಣಕ್ಕೂ ಸಂಚಾರ ವ್ಯವಸ್ಥೆಗೆ ಅಡ್ಡಿಯಾಗದಂತೆ ಎಚ್ಚರದಿಂದ ಮೆರವಣಿಗೆ ಕೊಂಡೊಯ್ಯುವುದು. ಯಾವುದೇ ವ್ಯಕ್ತಿ, ಧರ್ಮ, ಜನಾಂಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಮೆರವಣಿಗೆ ನಡೆಸುವುದು.

11. ಗಣಪತಿ ವಿಸರ್ಜನೆಯನ್ನು ಬಾವಿ, ಕೆರೆ, ನದಿಯಲ್ಲಿ ಮಾಡದೆ ಬಕೇಟ್‍ನಲ್ಲಿ ವಿಸರ್ಜಿಸಿ ಗಣಪತಿ ಪೂರ್ಣವಾಗಿ ಕರಗಿದ ನಂತರ ಗಿಡಗಳಿಗೆ ಕರಗಿದ ನೀರನ್ನು ಹಾಕುವುದು ಹಾಗೂ ಮೈಸೂರು ಮಹಾನಗರ ಪಾಲಿಕೆ ರವರು ಗಣಪತಿ ವಿಸರ್ಜನೆಗಾಗಿ ನಿಗಧಿಪಡಿಸಿರುವ ಸ್ಥಳಗಳ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸುವ ಮಾಹಿತಿಯನ್ನು  ಮುಂಚಿತವಾಗಿ ಪಡೆದುಕೊಂಡು/ತಿಳಿದುಕೊಂಡು ಗಣಪತಿ ವಿಸರ್ಜಿಸಿ, ಪರಿಸರ ಮಾಲಿನ್ಯ ಕಾಪಾಡುವುದು.

-3-
12. ಯಾವುದೇ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುವವರು ಎರಡು ದಿನಗಳ ಮುಂಚಿತವಾಗಿಯೇ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಿ ಅವರ ಪೂರ್ವಾನುಮತಿಯನ್ನು ಪಡೆದು, ಸೂಕ್ತ ಬಂದೋಬಸ್ತ್ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. (ಉದಾ: ವಾದ್ಯಗೋಷ್ಟಿ, ನಾಟಕ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಇನ್ನಿತರೇ)
    
      13. ಪ್ರತಿಯೊಂದು ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ವ್ಯವಸ್ಥಾಪಕರು ಹಾಗೂ ಇತರೇ ಪದಾಧಿಕಾರಿಗಳ ಕನಿಷ್ಠ ಆರು ಜನರ ಪಟ್ಟಿ ಮಾಡಿ, ಈ ಆರು ಜನರು ಗಣಪತಿ ಪ್ರತಿಷ್ಟಾಪನೆಯಾಗಿ ವಿಜರ್ಸನೆಯಾಗುವವರೆವಿಗೂ  ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು, ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೋಡಿಕೊಳ್ಳುವುದು.

      14. ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣಪತಿ ಮತ್ತು ಸೀಸದಿಂದ ತಯಾರಿಸಿದ ಗಣಪತಿ ಮಾರಾಟ ಮಾಡುವುದು, ಪ್ರತಿಷ್ಟಾಪನೆ ಮಾಡುವುದು ಕಂಡು ಬಂದಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿಗಳಿಗೆ ಕÀೂಡಲೆ ಮಾಹಿತಿ ನೀಡುವುದು.

      15. ಗಣಪತಿ ಸ್ಥಾಪಿಸುವ ಪೆಂಡಾಲ್‍ನಲ್ಲಿ ಧ್ವನಿವರ್ಧಕದ ಬಳಕೆಗಾಗಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರ ಅನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

    16. ಗಣಪತಿ ಮೂರ್ತಿಯ ಮೆರವಣಿಗೆಗೆ ಪ್ರತ್ಯೇಕವಾಗಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರ ಅನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.

    17. ಗಣಪತಿ ಪ್ರತಿಷ್ಠಾಪಿಸಿದ ಸಂದರ್ಭಗಳಲ್ಲಿ ಹಾಗೂ ಮೆರವಣಿಗೆ ಸಂದರ್ಭಗಳಲ್ಲಿ ಮದ್ಯಪಾನ ಮಾಡಿ ಅಸಭ್ಯ ವರ್ತನೆ ಮತ್ತು ಅಶ್ಲೀಲವಾದ ವರ್ತನೆಯನ್ನು ತೋರತಕ್ಕದ್ದಲ್ಲ. ಗಣಪತಿ ಪ್ರತಿಷ್ಠಾಪನಾ ಕಮಿಟಿಯ ಆಯೋಜಕರು ಹಾಗೂ ಸ್ವಯಂ ಸೇವಕರು ಮೇಲ್ಕಂಡ ಘಟನೆಗಳು ಯಾವುದೂ ನಡೆಯದಂತೆ ಎಚ್ಚರ ವಹಿಸತಕ್ಕದ್ದು, ಹಾಗೂ ಸಂದರ್ಭಕ್ಕನುಸಾರವಾಗಿ ಆಯಾ ಠಾಣೆಗಳಿಗೆ ಮಾಹಿತಿ ನೀಡತಕ್ಕದ್ದು.

      ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ  ಪೊಲೀಸ್ ಠಾಣೆಗಳಿಗೆ ಅಥವಾ  ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ. 100, 2418139, 2418339 ಗೆ ಮಾಹಿತಿ ನೀಡಲು ಕೋರಲಾಗಿದೆ.

No comments:

Post a Comment