Sunday 3 August 2014

ಮೈಸೂರು ಸಿಟಿ ವಿಜಯನಗರ ಪೊಲೀಸರಿಂದ ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ್ದ ಮೂರು ಜನರ ಬಂಧನ.

ಮೈಸೂರು ಸಿಟಿ ವಿಜಯನಗರ ಪೊಲೀಸರಿಂದ ಫ್ಯಾಕ್ಟರಿಯಲ್ಲಿ ಕಳ್ಳತನ ಮಾಡಿದ್ದ ಮೂರು ಜನರ ಬಂಧನ
ರೂ: 2,15,000/- ಬೆಲೆ ಬಾಳುವ ಮೀಟರ್ ಬೋರ್ಡಿಗೆ ಅಳವಡಿಸುವ ಸ್ಕøಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಟೆಂಪೋ ವಶ ಪಡಿಸಿ ಕಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

        ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಎಲ್ & ಟಿ ಫ್ಯಾಕ್ಟರಿಯಲ್ಲಿ ದಿಃ 31-07-2014 ರಂದು ಮೀಟರ್ ಬೋರ್ಡಿಗೆ ಅಳವಡಿಸುವ ಸ್ಕøಗಳು ಕಳ್ಳತನವಾಗಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿಃ 01-08-2014 ರಂದು ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಹುಲಿಕೆರೆ ಗ್ರಾಮದ ವಿವೇಕ್ & ಸರಗೂರಿನ ಅಜಯ್ ಎಂಬುವರನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಆ ಫ್ಯಾಕ್ಟರಿಯಲ್ಲಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದ ರಾಜೇಂದ್ರ ಎಂಬುವನ ಜೊತೆ ಸೇರಿಕೊಂಡು ಫ್ಯಾಕ್ಟರಿಯಿಂದ ಮೀಟರ್ ಬೋರ್ಡಿಗೆ ಅಳವಡಿಸುವ ಸ್ಕøಗಳನ್ನು ಕಳ್ಳತನ ಮಾಡಿದ್ದಾಗಿ ತಿಳಿಸಿದ್ದು ನಂತರ ಬೋರೆ ಆನಂದೂರಿನ ರಾಜೇಂದ್ರ ಎಂಬುವನನ್ನು ಸೂರ್ಯ ಬೇಕರಿ ಬಳಿ ಅವರು ಕಳ್ಳತನ ಮಾಡಲು ಉಪಯೋಗಿಸಿದ್ದ ಟಾಟಾ 407 ಟೆಂಪೋ ಸಮೇತ ಹಿಡಿದು ಅವನಿಂದ ಪ್ರಕರಣಕ್ಕೆ ಸಂಬಂಧಿಸಿದ ಮೀಟರ್ ಬೋರ್ಡಿಗೆ ಅಳವಡಿಸುವ ಸ್ಕøಗಳು ಹಾಗೂ ಅವರು ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಟಾಟಾ 407 ಟೆಂಪೋವನ್ನು ವಶಪಡಿಸಿಕೊಂಡಿದ್ದು ಅವುಗಳ ಮೌಲ್ಯ ರೂಃ 2,15,000/- ಗಳಾಗುತ್ತೆ. 
ಮೈಸೂರು ಸಿಟಿ ವಿಜಯನಗರ ಪೊಲೀಸರಿಂದ ಮೊಬೈಲ್ ಪೋನ್ ಕಳ್ಳರ ಬಂಧನ
ರೂ: 1,00,000/- ಬೆಲೆ ಬಾಳುವ 01 ಸ್ಯಾಮ್‍ಸಂಗ್ ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಬೈಕ್ ವಶ.

        ದಿಃ 02-08-2014 ರಂದು ಹೂಟಗಳ್ಳಿ ಸಂತೆ ನಡೆಯುವ ಸ್ಥಳದ ಬಳಿ ಅನುಮಾನಸ್ಪದವಾಗಿ ನಿಂತಿದ್ದ ಮೈಸೂರು ತಾಲ್ಲೋಕಿನ ನಾಗವಾಲದ ತೌಫಿಕ್ ಮತ್ತು ಬಾಲರಾಜು @ ಕುಂಡ ಎಂಬುವರನ್ನು ಅಪರಾಧ ವಿಭಾಗದ ಸಿಬ್ಬಂದಿಯವರು ಹಿಡಿದು ವಿಚಾರಿಸಿದಾಗ ಆಸಾಮಿಗಳು ಸರಿಯಾದ ಮಾಹಿತಿ ನೀಡದ ಕಾರಣ ಅವರನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ನಂತರ ಆಸಾಮಿಗಳನ್ನು ವಿಚಾರಣೆಗೊಳಪಡಿಸಿದಾಗ ಈಗ್ಗೆ ಒಂದು ವಾರದ ಹಿಂದೆ ಹೂಟಗಳ್ಳಿ ಸಂತೆ ನಡೆಯುವ ಸ್ಥಳದಲ್ಲಿ ಒಬ್ಬ ವ್ಯಕ್ತಿಯಿಂದ ಸ್ಯಾಮ್‍ಸಂಗ ಮೊಬೈಲ್ ಅನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು ಅವರಿಂದ ವಿಜಯನಗರ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ ಒಂದು ಸ್ಯಾಮ್‍ಸಂಗ್ ಮೊಬೈಲ್ ಪೋನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಯಮಹಾ ಎಫ್‍ಜಡ್ ಬೈಕ್ ಅನ್ನು ವಶಪಡಿಸಿಕೊಂಡಿದ್ದು ಅವುಗಳ ಮೌಲ್ಯ ರೂಃ 1,00,000/- ಗಳಾಗುತ್ತೆ. 

      ಮೇಲ್ಕಂಡ ಆರೋಪಿಗಳು ಮತ್ತು ಮಾಲು ಪತ್ತೆಗೆ ಮಾನ್ಯ ಉಪಪೊಲೀಸ್ ಆಯುಕ್ತರಾದ ಶ್ರೀ ಎಂ.ಎಂ. ಮಹದೇವಯ್ಯ ಮತ್ತು ಎ.ಸಿ.ಪಿ. ಶ್ರೀ ಕೆ.ಎನ್. ಮಾದಯ್ಯರವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ, ಸಬ್‍ಇನ್ಸ್‍ಪೆಕ್ಟರ್ ರಘುಪ್ರಸಾದ್ ನೇತೃತ್ವದ ಅಪರಾಧ ವಿಭಾಗದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ ತಿಳಿಸಿದ್ದಾರೆ  

No comments:

Post a Comment