Saturday 25 October 2014

ವಿಜಯನಗರ ಪೊಲೀಸರಿಂದ ಇಬ್ಬರು ಮೊಬೈಲ್ ಕಳ್ಳರ ಬಂಧನ

     
                ವಿಜಯನಗರ ಪೊಲೀಸರಿಂದ ಇಬ್ಬರು ಮೊಬೈಲ್ ಕಳ್ಳರ ಬಂಧನ                     ರೂ: 2,00,000/- ಬೆಲೆ ಬಾಳುವ 07 ವಿವಿಧ ಕಂಪನಿಯ ದುಬಾರಿ ಮೊಬೈಲ್ ಫೋನ್‍ಗಳ ವಶ.
     
         ದಿನಾಂಕ: 19/10/2014 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹೂಟಗಳ್ಳಿಯ ಮಂಜುನಾಥ ರವರ ಮೊಬೈಲ್ ಫೋನ್ ಕಳ್ಳತನವಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಈ ಪ್ರಕರಣದ ಪತ್ತೆಗೆ ಸಂಬಂಧಪಟ್ಟಂತೆ ಬಾತ್ಮಿದಾರರ ಮಾಹಿತಿ ದಿನಾಂಕ: 23/10/2014 ರಂದು ವಿಜಯನಗರದ ತ್ರಿನೇತ್ರ ಸರ್ಕಲ್ ಬಳಿ-

1) ತಮ್ಮಯ್ಯ ಬಿನ್ ತಿಮ್ಮಾಬೋವಿ, 30 ವರ್ಷ, ಲಕ್ಕವಳ್ಳಿ ಭದ್ರವಾತಿ ತಾ. ಶಿವಮೊಗ್ಗ ಜಿಲ್ಲೆ
2) ಹರೀಶ್ ಬಿನ್ ದುರ್ಗಪ್ಪ 21 ವರ್ಷ # 18, ಸುಭಾಷ್‍ನಗರ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ

ಎಂಬುವವರುಗಳನ್ನು  ವಶಕ್ಕೆ ಪಡೆದು  ವಿಚಾರಣೆ ಮಾಡಿದಾಗ ಆರೋಪಿಗಳು ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆ, ದೇವರಾಜ ಪೊಲೀಸ್ ಠಾಣೆ ಹಾಗೂ ಕೆ.ಆರ್ ಪೊಲೀಸ್ ಠಾಣೆ, ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ  ದುಬಾರಿ ಬೆಲೆಯ ವಿವಿಧ ಕಂಪನಿಯ 07 ಮೊಬೈಲ್ ಫೋನ್‍ಗಳನ್ನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳಿಂದ ಒಟ್ಟು 2,00,000/- ಬೆಲೆಯ ಒಟ್ಟು  7 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಮೈಸೂರು ನಗರದ ಪೊಲೀಸ್ ಆಯುಕ್ತರ ಕಛೇರ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಮೇಲ್ಕಂಡ      ಪತ್ತೆ      ಕಾರ್ಯವನ್ನು     ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.   ಎಂ.ಎಂ. ಮಹದೇವಯ್ಯನವರು  ಮತ್ತು ಎ.ಸಿ.ಪಿ. ನರಸಿಂಹರಾಜ ವಿಭಾಗ ರವರಾದ ಎ.ಕೆ. ಸುರೇಶ್‍ರವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ, ಸಬ್‍ಇನ್ಸ್‍ಪೆಕ್ಟರ್ ರಘುಪ್ರಸಾದ್  ಮತ್ತು ಸಿಬ್ಬಂದಿಗಳಾದ  ಕೃಷ್ಣ, ದಿವಾಕರ, ಚನ್ನಬಸವಯ್ಯ, ಸೋಮಶೆಟ್ಟಿ, ಸಾಗರ್, ಸುರೇಶ್, ಈರಣ್ಣ ಮತ್ತು ಮಹೇಶ್ ನೇತೃತ್ವದ ಅಪರಾಧ ವಿಭಾಗದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.   
      ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ: ಎಂ.ಎ. ಸಲೀಂ, ಐ.ಪಿ.ಎಸ್. ರವರು ಶ್ಲಾಫಿಸಿರುತ್ತಾರೆ.


No comments:

Post a Comment