Wednesday 29 October 2014



                 ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
     ಮೈಸೂರು,ಅ.29.ಜಿಲ್ಲಾಡಳಿತ ವತಿಯಿಂದ ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ ಲೋಕಮಣಿ ಭಾಗವಹಿಸುವರು.
     ಅಂದು ಬೆಳಗ್ಗೆ 8-30 ಗಂಟೆಗೆ ಅರಮನೆ ಆರವಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಕೆ ನಂತರ ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ  ಪುಷ್ಪಾರ್ಚನೆ ನಂತರ ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೋರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಹಾದು ವಾಪಸ್ಸು ಪುರಭವನ ತಲುಪುವುದು.
     ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಶಾಲಾ ಕಾಲೇಜು   ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚನೆ
ಮೈಸೂರು,ಅ.29.ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಮೈಸೂರು ನಗರದಲ್ಲಿರುವ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು (ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳು)  ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತೋಟಗಾರಿಕೆ ಇಲಾಖೆಯ ಕರ್ಜನ್ ಪಾರ್ಕ್ ಆವರಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾತ್ಕಾಲಿಕ ಕಚೇರಿಯಲ್ಲಿ ಇರಿಸಲಾಗಿರುವ ಹಾಜರಾತಿ ವಹಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಮತ್ತು ನೌಕರರು ಸಹಿ ಮಾಡುವುದು. ಗೈರು ಹಾಜರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

             ಹೆಣ್ಣು ಮಕ್ಕಳಿಗೆ ಫೇರ್ & ಲವ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
    ಮೈಸೂರು,ಅ.29.ಫೇರ್ & ಲವ್ಲಿ ಫೌಂಡೇಶನ್ ಇವರು ಪದವಿ, ಸ್ನಾತಕೋತ್ತರ ಪದವಿ ಅಥವಾ ಪಿಹೆಚ್.ಡಿ ವ್ಯಾಸಂಗ ಮಾಡುತ್ತಿರುವ ಬಡ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
     ಪದವಿ  ಅಥವಾ ಸ್ನಾತಕೋತ್ತರ ಪದವಿಗಳಿಗೆ ಅಥವಾ ಪಿ.ಹೆಚ್‍ಡಿ ಗೆ ಪ್ರವೇಶ ಪಡೆದಿರಬೇಕು. 10ನೇತರಗತಿ & ಪಿಯುಸಿ ಯಲ್ಲಿ ಶೇ.60 ಅಂಕ ಗಳಿಸಿರಬೇಕು, ಆಂಗ್ಲಭಾಷೆ ತಿಳಿದಿರಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕವಾಗಿದ್ದು, ವೆಬ್ ಸೈಟ್: hಣಣಠಿ://ತಿತಿತಿ.ಜಿಚಿiಡಿಚಿಟಿಜಟoveಟಥಿ.iಟಿ/ಜಿಚಿಟಜಿouಟಿಜಚಿಣioಟಿ/sಛಿhoಟಚಿಡಿshiಠಿ.hಣmಟ  ಇದರಲ್ಲಿ ಮಾಹಿತಿ ಪಡೆದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
    ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ನಮೂನೆಗಾಗಿ ಉಪಮುಖ್ಯಸ್ಥರು,ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ , ಮೈಸೂರು ದೂರವಾಣಿ ಸಂಖ್ಯೆ 0821-2516844, ಮೊಬೈಲ್ 9449686641ನ್ನು ಸಂಪರ್ಕಿಸಬಹುದು.
 ಜಿ.ಟಿ & ಟಿ.ಸಿ ಯಲ್ಲಿ ತಾಂತ್ರಿಕ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
   ಮೈಸೂರು,ಅ.29.ಮೈಸೂರು ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93/94, ಇಲ್ಲಿ “ರಾóಪ್ಟ್ರೀಯ ನಗರ ಜೀವನೋಪಾಯ ಆಬಿಯಾನ” ಅಡಿಯಲ್ಲಿ ಎಸ್.ಎಸ್.ಎಲ್.ಸಿ/ ಐ.ಟಿ.ಐ / ಡಿಪ್ಲೊಮ / ಬಿ.ಇ (ಮೆಕ್ಯಾನಿಕಲ್ ಕ್ಷೇತ್ರ ) ಪಾಸಾಗಿರುವ ಮೈಸೂರು ನಿವಾಸಿಗಳಿಗೆ ಸಿ.ಎನ್.ಸಿ ಮೆಷಿನ್ ಆಪರೇಷನ್, ಕ್ಯಾಡ್ ಕ್ಯಾಮ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ಕೋರ್ಸ್‍ಗಳ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು.
     ಆಸಕ್ತ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮತ್ತು ವಾಸ ಸ್ಥಳ ದಾಖಲೆಗಳೊಂದಿಗೆ   ದಿನಾಂಕ:. 10.11.2014, ಒಳಗೆ ಸದರಿ ವಿಳಾಸದಲ್ಲಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ 9035376071, 8710807963, 0821-2582464ನ್ನು ಸಂಪರ್ಕಿಸಬಹುದು.
                             ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಣಬೆ ಮಾರಾಟ
   ಮೈಸೂರು,ಅ.29.ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿರುವ ಅಣಬೆ ಪ್ರಯೋಗ ಶಾಲೆಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ಉತ್ತಮ ಗುಣಮಟ್ಟದ ಅಣಬೆ ಮಾರಾಟಕ್ಕೆ ಲಭ್ಯವಿರುತ್ತದೆ. ಹಾಗೂ ಅಣಬೆ ಬೀಜಗಳು(ಸ್ಫಾನ್) ಸಹ ದೊರೆಯುತ್ತದೆ.
   ಹೆಚ್ಚಿನ ಮಾಹಿತಿಗೆ ಅಣಬೆ ಪ್ರಯೋಗ ಶಾಲೆ, ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರ, ಮೈಸೂರು. ಮೊಬೈಲ್ ಸಂಖ್ಯೆ 9740596111ನ್ನು ಸಂಪರ್ಕಿಸಬಹುದು.
                       ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ
     ಮೈಸೂರು,ಅ.29.ಉದ್ಯೋಗ ಮಾಹಿತಿ & ಮಾರ್ಗದರ್ಶನ ಕೇಂದ್ರ ,ಮಾನಸ ಗಂಗೋತ್ರಿ,ಮೈಸೂರು. ಸ್ನಾತಕೋತ್ತರ  ಕೇಂದ್ರ ,sಮಹಾರಾಣಿ ಮಹಿಳಾ ಕಲಾ ಕಾಲೇಜು ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 31 ರಂದು ಬೆಳಗ್ಗೆ 11-30 ಗಂಟೆಗೆ ಮೈಸೂರು ಮಹಾರಾಣಿ ಕಲಾ ಕಾಲೇಜು ಆವರಣದಲ್ಲಿ ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ  ನಡೆಯಲಿದೆ.
   ಮೈಸೂರು ಮಹಾನಗರ ಪಾಲಿಕೆ ವಲಯ ಆಯುಕ್ತೆ ಎಂ ಜೆ ರೂಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ:ಪುರುóಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉದ್ಯೋಗಾವಕಾಶಗಳು ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ.
ಪರೀಕ್ಷೆ ಮುಂದೂಡಿಕೆ
    ಮೈಸೂರು,ಅ.29.ಮೈಸೂರು ವಿಶ್ವವಿದ್ಯಾನಿಲಯವು ನವೆಂಬರ್/ಡಿಸೆಂಬರ್ 2014ರಲ್ಲಿ ನಡೆಸಲಿರುವ 1, 3 ಮತ್ತು 5ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ದಿನಾಂಕ 12.11.2014 ರಿಂದ ಪ್ರಾರಂಭವಾಗಬೇಕಿತ್ತು. ಕಾರಣಾಂತರದಿಂದ ಸದರಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಪರೀಕ್ಷೆಯು ದಿನಾಂಕ 18.11.2014ಕ್ಕೆ ಪ್ರಾರಂಭವಾಗಲಿದೆ ಎಂದು ಪರೀಕ್ಷಾ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಪುನರ್ ರಚನೆ
    ಮೈಸೂರು,ಅ.29.ಅನುಸೂಚಿತ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ನಿಯಮ 1995ರ ನಿಯಮ 17ರ ರೀತ್ಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ದಿನಾಂಕ 06-03-2008ರಲ್ಲಿ  ರಚಿಸಲಾಗಿದ್ದು, ಸದರಿ ಸಮಿತಿಯನ್ನು ಪುನರ್ ರಚಿಸಲಾಗಿದೆ.
   ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು/ಪೊಲೀಸ್ ಕಮೀಷನರ್ ಮೈಸೂರು ನಗರ, ಸದಸ್ಯರಾಗಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಜೊತೆಯಲ್ಲಿ ರಾಜ್ಯ ಸರ್ಕಾರ ಸೇವೆಯಲ್ಲಿರುವ 3 ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಮೂಹ ಎ ಪತ್ರಾಂಕಿತ ಅಧಿಕಾರಿಗಳು, ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ 5 ಅಧಿಕಾರೇತರ ಸದಸ್ಯರು ಹಾಗೂ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರದೇ ಇರುವ ಇತರೆ ವರ್ಗದ ಸರ್ಕಾರೇತರ ಸಂಘ-ಸಂಸ್ಥೆಗಳೊಡನೆ ಸಂಪರ್ಕ ಹೊಂದಿರುವ 3  ಅಧಿಕಾರೇತರ ಸದಸ್ಯರು ಈ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
     ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಂಕರರಾಜು, ರೇಷ್ಮೆ ಇಲಾಖೆಯ ಉಪನಿರ್ದೇಶಕ ವೈ.ಎನ್.ಚಿಗರಿ, ಹುಣಸೂರು ತಾಲ್ಲೂಕಿನ ಕಟ್ಟೆಮಲಳವಾಡಿ ನಿಂಗರಾಜು ಮಲ್ಲಾಡಿ, ನಂಜನಗೂಡು ತಾಲ್ಲೂಕಿನ ಗಾಯತ್ರಿ ಮಹೋನ್, ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಸೋಮಶೇಖರ್, ಟಿ.ನರಸೀಪುರ ತಾಲ್ಲೂಕಿನ ಕುಕ್ಕೂರಿನ ಪ್ರಸನ್ನ, ಪಿರಿಯಾಪಟ್ಟಣ ತಾಲ್ಲೂಕಿನ ಎಸ್. ರಾಮು, ಸರಸ್ವತಿಪುರಂ ಮಹಿಳಾ ಸಮುಖ್ಯ ಸಂಸ್ಥೆ, ಹೆಚ್.ಡಿ.ಕೋಟೆಯ ಮೈರಾಡ್ ಸಂಸ್ಥೆ ಮತ್ತು ಮೈಸೂರಿನ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪುನರ್ ರಚನೆಗೊಂಡಿರುವ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.
     ಸಭೆ: ಪುನರ್ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೋಂದಣಿಗೆ ಅವಕಾಶ
     ಮೈಸೂರು,ಅ.29.ಮೈಸೂರು ತಾಲ್ಲೂಕು ಬೀರಿಹುಂಡಿ, ವರುಣ ಹಾಗೂ ಟಿ.ನರಸೀಪುರ ತಾಲ್ಲೂಕಿನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫಿಟರ್ ಹಾಗೂ ಎಲೆಕ್ಟ್ರೀಷಿಯನ್(ಎಸ್‍ಸಿವಿಟಿ)  ವೃತ್ತಿಗಳನ್ನು ಪ್ರಾರಂಭಿಸಲಾಗಿದ್ದು, ಈ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 30 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಅಕ್ಟೋಬರ್ 31 ರಂದು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು.
   ಹೆಚ್ಚಿನ ಮಾಹಿತಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು ಬೀರಿಹುಂಡಿ ದೂರವಾಣಿ ಸಂಖ್ಯೆ 0821-2484001, ಮೊಬೈಲ್ ಸಂಖ್ಯೆ 9845876618, ವರುಣ ಮೊಬೈಲ್ ಸಂಖ್ಯೆ 7411331635 ಹಾಗೂ ಟಿ.ನರಸೀಪುರ  ಮೊಬೈಲ್ ಸಂಖ್ಯೆ 9448402175 ನ್ನು ಸಂಪರ್ಕಿಸಬಹುದು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಮೈಸೂರು,ಅ.29.ದಿನಾಂಕ 01.01.2015 ಕ್ಕೆ ಅಥವಾ ಅದಕ್ಕೂ ಮುಂಚೆ 18 ವರ್ಷ ಪೂರೈಸುವ / ಪೂರೈಸಿರುವ  ಅರ್ಹ ಯುವ ಸಮೂಹದವರು ಹಾಗೂ ಮತದಾರರ ಪಟ್ಟಿಗಳಲ್ಲಿ ಈವರೆಗೆ ಹೆಸರುಗಳನ್ನು ನೋಂದಣಿ ಮಾಡಿಸಿಕೊಳ್ಳದೇ ಇರುವ ಸಾರ್ವಜನಿಕರು ಮತದಾರರ ಪಟ್ಟಿಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ 01-01-2015 ರ ಕಾರ್ಯಕ್ರಮವನ್ನು ದಿನಾಂಕ 30.10.2014 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
      ಪರಿಷ್ಕರಣೆಯ ವೇಳಾಪಟ್ಟಿಯ ವಿವಿರ ಇಂತಿದೆ:  ದಿನಾಂಕ 30-10-2014 ರಂದು ಕರಡು ಮತದಾರರ ಪಟ್ಟಿಯ ಪ್ರಕಟಣೆ,  30-10-2014 ದಿಂದ 25-11-2014 ರÀವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳ ಸಲ್ಲಿಕೆ, 05-11-2014 ರಿಂದ 14-11-2014 ರವರೆಗೆ ಗ್ರಾಮಸಭೆ / ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಸಂಬಂಧಿಸಿದ ಮತದಾರರ ಪಟ್ಟಿಯ ಭಾಗಗಳನ್ನು ಓದಿ ಹೇಳುವುದು ಮತ್ತು ಹೆಸರುಗಳನ್ನು ಪರಿಶೀಲಿಸುವುದು, 09-11-2014 ಮತ್ತು  23-11-2014 ರಂದು ರಾಜಕೀಯ ಪಕ್ಷಗಳ ಬೂತ್ ಲೆವಲ್ ಏಜೆಂಟರುಗಳಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ವಿಶೇಷ ಕಾರ್ಯಾಚರಣೆ ದಿವಸಗಳು, ದಿನಾಂಕ 05-12-2014 ರೊಳಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು, ದಿನಾಂಕ 20-12-2014 ಪೂರಕ ಪಟ್ಟಿಗಳನ್ನು ಸಿದ್ದಪಡಿಸುವುದು ಮತ್ತು ಮುದ್ರಿಸುವುದು ಹಾಗೂ ದಿನಾಂಕ 05-01-2015 ಅಂತಿಮ ಮತದಾರರ ಪಟ್ಟಿಗಳ ಪ್ರಕಟಿಸಲಾಗುವುದು.
 ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಸಂಬಂದಪsÀಟ್ಟ ತಹಶೀಲ್ದಾರ್‍ರವರ ಕಚೇರಿಗಳಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಮೈಸೂರು ಮಹಾನಗರ ಪಾಲಿಕೆಗೆ ಒಳಪಡುವ ವಲಯ ಕಚೇರಿಗಳಲ್ಲಿ ಸಂಬಂಧಿಸಿದ ಕರಡು ಮತದಾರರ ಪಟ್ಟಿಗಳನ್ನು (ಆಡಿಚಿಜಿಣ ಇಟeಛಿಣoಡಿಚಿಟ ಖoಟಟs) ದಿನಾಂಕ 30-10-2014 ರಂದು ಪ್ರಕಟಿಸಲಾಗುವುದು.
ಪ್ರಚುರಪಡಿಸಲಾಗುವ ಮತದಾರರ ಪಟ್ಟಿಗಳಲ್ಲಿ ಹೆಸರು ಇಲ್ಲದಿರುವವರು ನಿಗದಿತ ನಮೂನೆಯಲ್ಲಿ (ಈoಡಿm-6) ಸೇರ್ಪಡೆಗೆ ಅರ್ಜಿಗಳನ್ನು ಅಗತ್ಯ ದಾಖಲಾತಿಗೊಂದಿಗೆ ತಮ್ಮ ಹತ್ತಿರದ ಮತಗಟ್ಟೆಗಳಲ್ಲಿ ದಿನಾಂಕ 25-11-2014 ರವರೆಗೆ ಸಲ್ಲಿಸಬಹುದು. ಮತದಾರರ ಪಟ್ಟಿಗಳಲ್ಲಿ ಹೆಸರಿದ್ದು ವಿವರಗಳಲ್ಲಿ ತಿದ್ದುಪಡಿ ಮಾಡಿಸಲು, ಮತದಾರರ ಪಟ್ಟಿಗಳಿಂದ ಹೆಸರುಗಳನ್ನು ತೆಗೆದುಹಾಕಲು ಹಾಗೂ ವಿಳಾಸಗಳ ಬದಲಾವಣೆಗಳಿಗಾಗಿ ಸಂಬಂಧಿಸಿದ ಅರ್ಜಿಗಳನ್ನು ಸಹ ಸದರಿ ಅವಧಿಯಲ್ಲಿ ಸ್ವೀಕರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದೆ.
ಮತದಾರರು ತಮ್ಮ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಅಥವಾ ತಮ್ಮ ಮತದಾರರ ಗುರುತಿನ ಚೀಟಿ ವಿವರಗಳನ್ನು ಈ ಕೆಳಕಂಡಂತೆ ಟೈಪ್ ಮಾಡಿ 9731979899 ಗೆ ಎಸ್.ಎಂ.ಎಸ್ ಮಾಡಿ ತಿಳಿದುಕೊಳ್ಳಬಹುದಾಗಿದೆ.
ಏಂಇPIಅ <Sಠಿಚಿಛಿe> Iಆ ಅಚಿಡಿಜ ಓumbeಡಿ (ಇxಚಿmಠಿಟe  - ಏಂಇPIಅ  ಘಿಙZ1509201)

ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲಿಚ್ಚಿಸುವವರು ಅರ್ಜಿಗಳನ್ನು ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಮೈಸೂರು ಮಹಾನಗರ ಪಾಲಿಕೆ ಕಚೇರಿ -
0821-2418860
ಉಪ ವಿಭಾಗಾಧಿಕಾರಿಗಳ ಕಚೇರಿ, ಮೈಸೂರು ಉಪ ವಿಭಾಗ, ಮೈಸೂರು    0821-2422100    ಉಪ ವಿಭಾಗಾಧಿಕಾರಿಗಳ ಕಚೇರಿ ಹುಣಸೂರು ಉಪ ವಿಭಾಗ, ಹುಣಸೂರು    08222-252073
ಮೈಸೂರು ತಾಲ್ಲೂಕು ಕಚೇರಿ    0821-2414811    ಪಿರಿಯಾಪಟ್ಟಣ ತಾಲ್ಲೂಕು ಕಚೇರಿ    08223-274175
ನಂಜನಗೂಡು ತಾಲ್ಲೂಕು ಕಚೇರಿ    08221-226002    ಕೆ.ಆರ್.ನಗರ ತಾಲ್ಲೂಕು ಕಚೇರಿ    08223-262371
ಟಿ.ನರಸೀಪುರ ತಾಲ್ಲೂಕು ಕಚೇರಿ    08227-261233    ಹುಣಸೂರು ತಾಲ್ಲೂಕು ಕಚೇರಿ    08222-252040
        ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ    08228-255325

ರಾಜಕೀಯ ಪಕ್ಷಗಳ ಸಭೆ
ಮತದಾರರ ಪಟ್ಟಿಗಳ ನೋಂದಣಿ ಅಭಿಯಾನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಕೋರಿ ಇಂದು (ದಿನಾಂಕ 29.10.2014) ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು.
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬೂತ್ ಲೆವಲ್ ಏಜಂಟರುಗಳನ್ನು ನೇಮಕ ಮಾಡಿ ಬೂತ್ ಮಟ್ಟದಿಂದಲೇ ಮತದಾರರ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೋರಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎನ್.ಸಿ.ಸಿ.  ತರಬೇತಿ ಶಿಬಿರ ಸಮಾರೋಪ ಸಮಾರಂಭ
ಮೈಸೂರು,ಅ.29.13 ಕರ್ನಾಟಕ ಬಿ.ಎನ್. ಎನ್.ಸಿ.ಸಿ. ಇವರು ಇಲವಾಲದ ಅಲೋಕ್ ವಿಹಾರ್ ಪ್ಯಾಲೇಸ್‍ನಲ್ಲಿ ನಡೆಸಿದ 10 ದಿನಗಳ ಕಾಲಾವಾಧಿಯ ಎನ್.ಸಿ.ಸಿ. ತರಬೇತಿ ಶಿಬಿರವು ಇತ್ತಿಚೇಗೆ ಸಮಾರೋಪ ಸಮಾರಂಭದಲ್ಲಿ 13 ಏಚಿಡಿ ಃಟಿ ಓಅಅ ಕಮ್ಯಾಡಿಂಗ್ ಆಫೀಸರ್ ಅಭ್ರಹಂ ಅವರು ಭಾಗವಹಿಸಿ ಎನ್.ಸಿ.ಸಿ. ಶಿಬಿರಾರ್ಥಿಗಳಿಗೆ ಶಿಸ್ತು ಪಾಲನೆಯ ಬಗ್ಗೆ ತಿಳಿಸಿದರು.
 ಶಿಬಿರದಲ್ಲಿ ಮೈಸೂರು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ 500ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಮಾಯಾದೇವಿ ಎನ್. ಅವರಿಗೆ ಪಿಎಚ್.ಡಿ. ಪದವಿ

ಮೈಸೂರು,ಅ.29.-ಮೈಸೂರು ವಿಶ್ವವಿದ್ಯಾಲಯವು ಮಾಯಾದೇವಿ ಎನ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಪ್ರೀತಿಶ್ರೀ ಮಂದಾರಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಮಹಿಳಾ ಸಬಲೀಕರಣದಲ್ಲಿ ಮಹಿಳಾವಾದಿ ಹಾಗೂ ಮಹಿಳಾ ಕೇಂದ್ರಿತ ಕನ್ನಡ ನಿಯತಕಾಲಿಕೆಗಳ ಪಾತ್ರ” ಕುರಿತು ಸಾದರಪಡಿಸಿದ Womeಟಿ’s Sಣuಜies  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಮಾಯಾದೇವಿ ಎನ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಸಿದ್ದಲಿಂಗಮೂರ್ತಿ ಎಸ್. ಅವರಿಗೆ ಪಿಎಚ್.ಡಿ. ಪದವಿ
ಮೈಸೂರು,ಅ.29.ಮೈಸೂರು ವಿಶ್ವವಿದ್ಯಾಲಯವು ಸಿದ್ದಲಿಂಗಮೂರ್ತಿ ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಡಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “Iಟಿಣegಡಿಚಿಣeಜ ಂಠಿಠಿಡಿoಚಿಛಿh ಜಿoಡಿ ಆeಟiಟಿeಚಿಣiಟಿg ಉಡಿouಟಿಜತಿಚಿಣeಡಿ Poಣeಟಿಣiಚಿಟ Zoಟಿes iಟಿ ಅhಚಿmಚಿಡಿಚಿರಿಚಿಟಿಚಿgಚಿಡಿ ಖಿಚಿಟuಞ, ಅhಚಿmಚಿಡಿಚಿರಿಚಿಟಿಚಿgಚಿಡಿ ಆisಣಡಿiಛಿಣ, ಏಚಿಡಿಟಿಚಿಣಚಿಞಚಿ, Iಟಿಜiಚಿ Usiಟಿg ಖemoಣe Seಟಿsiಟಿg & ಉIS” ಕುರಿತು ಸಾದರಪಡಿಸಿದ ಭೂವಿಜ್ಞಾನ  ವಿಷಯದಲ್ಲಿ ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸಿದ್ದಲಿಂಗಮೂರ್ತಿ ಎಸ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಅ.29.ಮೈಸೂರು-ಎಂಎನ್‍ಜಿಟಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀ. ನಂ.135/100-200 ರಲ್ಲಿ  ಅಕ್ಟೋಬರ್  29 ರಂದು   ಸುಮಾರು 25-30 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ವ್ಯಕ್ತಿಯು  ಐದುವೆರೆ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು-ಬಿಳಿ ಕೂದಲು, ಮುಖವು ಸಂಪೂರ್ಣ ಜಜ್ಜಿ ಹೋಗಿರುವುದರಿಂದ. ಬಿಳಿ ಬಣ್ಣದ ಹಸಿರು ಮತ್ತು ಕಪ್ಪು ಚೌಕಳಿಗಳಿರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೃತನ ವಶದಲ್ಲಿ ದಿ:27-10-2014 ರ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣದ ಒಂದು ರೈಲ್ವೆ ಟಿಕೇಟ್ ದೊರೆತಿರುತ್ತದೆ.
ಮೃತ ವ್ಯಕ್ತಿ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.
                   ಬಹಿರಂಗ ಹರಾಜು
    ಮೈಸೂರು,ಅ.29.ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಇಲಾಖಾ ವಾಹನ ಟಾಟಾ ಸುಮೋ ಎಲ್‍ಎಂವಿ ವಾಹನ ಸಂಖ್ಯೆ ಕೆಎ-09-ಜಿ-8888ನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಮೈಸೂರು ಪಶ್ಚಿಮ, ವಾಣಿವಿಲಾಸ ರಸ್ತೆ, ಚಾಮರಾಜಪುರಂ, ಮೈಸೂರು ಇಲ್ಲಿ ನವೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
    ಹೆಚ್ಚಿನ ಮಾಹಿತಿಗೆ ಸದರಿ ಕಚೇರಿಯ ದೂರವಾಣಿ ಸಂಖ್ಯೆ 0821-2330364 ನ್ನು ಸಂಪರ್ಕಿಸಬಹುದು



No comments:

Post a Comment