Monday 1 September 2014


ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಅವರ ಅಧ್ಯಕ್ಷತೆಯಲ್ಲಿ ಎನ್‍ಎಸ್‍ಎಲ್ ಕಂಪನಿಯ ಅಧಿಕಾರಿಗಳು ಮತ್ತು ರೈತಸಂಘದ ಮುಖಂಡರ ಸಭೆ ನಡೆಯಿತು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಕೊಪ್ಪ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಚಂದಗಾಲು ಶಂಕರೇಗೌಡ, ಎಪಿಎಂಸಿ ಸದಸ್ಯರಾದ ಎಂ.ಸಿ.ಕುಮಾರ್, ಸುರೇಶ್, ರೈತ ಮುಖಂಡರಾದ ಕೋಣಸಾಲೆ ನರಸರಾಜು, ರಾಮಕೃಷ್ಣಯ್ಯ, ಚಿಕ್ಕೋನಹಳ್ಳಿ ತಮ್ಮಯ್ಯ, ಕೊಪ್ಪ ಪುಟ್ಟರಾಜು, ಎನ್‍ಎಸ್‍ಎಲ್ ಕಂಪನಿ ಎಜಿಎಂ ಮಂಜುನಾಥ್, ಉಪಾಧ್ಯಕ್ಷ ನಾಯಕ್, ದೀಪಕ್ ಮತ್ತಿತರರಿದ್ದರು.




No comments:

Post a Comment