Wednesday 24 September 2014

ಅರ್ಹ ಪೌರಕಾರ್ಮಿಕರಿಗೆ ನಿವೇಶನ
ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ
ಮಂಡ್ಯ-ಅರ್ಹ ಪೌರಕಾರ್ಮಿಕರಿಗೆ ನಿವೇಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರವಿಲ್ಲದೇ ನಗರದ ಸ್ವಚ್ಛತೆ ಕಷ್ಟಸಾಧ್ಯ, ಅಂತೆಯೇ ಸ್ವಚ್ಛತೆಯಲ್ಲಿ ಸಾರ್ವಜನಿಕರು ಜವಾಬ್ದಾರಿಯೂ ಇದ್ದು, ಪೌರಕಾರ್ಮಿಕರಿಗೆ ಸಹಕರಿಸಬೇಕು ಎಂದು ನುಡಿದರು.
ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿದರೆ ಅದೇ ಪೌರಕಾರ್ಮಿಕರಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರು ಹಲವಾರು ವರ್ಷಗಳಿಂದ ನಿವೇಶನಕ್ಕೆ ಮನವಿ ಮಾಡುತ್ತಿದ್ದು, ಹಾಗೆಯೇ ನಗರದ ವಿವೇಕಾನಂದ ಬಡಾವಣೆಯ ಬಳಿ 12 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅರ್ಹ ಪೌರಕಾರ್ಮಿಕರಿಗೆ ನಿವೇಶನ ನೀಡಲು ತಕ್ಕ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಭೂಷಣ್ ರಾವ್ ಬೊರಸೆ ಮಾತನಾಡಿ, ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯ. ಅಂತೆಯೇ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯP್ಷÀತೆಯನ್ನು ನಗರಸಭೆ ಅಧ್ಯP್ಷÀ ಸಿದ್ದರಾಜು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ವೃತ್ತಿ ವ್ಯಕ್ತಿ ಅಳೆಯ ಬೇಡಿ
ಪೌರಕಾರ್ಮಿಕರ ದಿನಾಚರಣೆಯಲ್ಲಿ ನಗರಸಭೆ ಅಧ್ಯP್ಷÀ ಸಿದ್ದರಾಜು
ಮಂಡ್ಯ-ವೃತ್ತಿಯಿಂದ ವ್ಯಕ್ತಿಯನ್ನು ಅಳೆಯಬಾರದು, ವ್ಯಕ್ತಿತ್ವದಿಂದ ವ್ಯಕ್ತಿಯನ್ನು ಅಳೆಯಬೇಕು ಎಂದು ನಗರಸಭೆ ಅಧ್ಯP್ಷÀ ಸಿದ್ದರಾಜು ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ಜರುಗಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯP್ಷÀತೆ ವಹಿಸಿ ಅವರು ಮಾತನಾಡಿದರು.
ಯಾರೇ ಆದರೂ ಅವರ ವೃತ್ತಿಯನ್ನು ಗೌರವಿಸಬೇಕು, ವೃತ್ತಿಯ ಮೂಲಕ ವ್ಯಕ್ತಿಯನ್ನು ಅಳೆಯಬಾರದು ಎಂದು ನುಡಿದರು.
ವೃತ್ತಿಗೆ ತಕ್ಕ ಸೌಲಭ್ಯಗಳನ್ನು ಸರ್ಕಾರ ಮತ್ತು ನಗರಸಭೆ ನೀಡುವಂತಾಗಬೇಕು, ವೃತ್ತಿಗೆ ತಕ್ಕ ಹಾಗೆ ಸಂಬಳ ನೀಡುವುದು ಆಡಳಿತದ ಕರ್ತವ್ಯವಾಗಿದೆ. ಹಾಗಾಗಿ ಅವರವರ ವೃತ್ತಿಗೆ ಗೌರವ ನೀಡಿದಂತಾಗುತ್ತದೆ. ಅಂತೆಯೇ ಸಂವಿಧಾನದ ಪ್ರಕಾರ ಕಾನೂನುಗಳು ಜಾರಿಯಾಗಬೇಕು, ಅಲ್ಲದೇ ಇದು ಪೌರಕಾರ್ಮಿಕರಿಗೆ ತಲುಪಬೇಕು ಎಂದು ಹೇಳಿದರು.
ನಾಗರೀಕರ ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿ ಪೌರಕಾರ್ಮಿಕರ ಮೇಲಿದೆ. ಅವರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ವರ್ಷಕ್ಕೆ ಮೂರು ಭಾರಿ ನಗರಸಭೆ ವತಿಯಿಂದ ಪೌರಕಾರ್ಮಿಕರು ಸೇರಿದಂತೆ ಅವರ ಕುಟುಂಬಗಳಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪೌರಕಾರ್ಮಿಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕೌಶಲ್ಯವನ್ನು ಮೆರೆಯುವಂತಹ ಅವಕಾಶ ಈಗ ಸಿಕ್ಕಿದೆ. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ನೆರವು ಮತ್ತು ಪೆÇ್ರೀತ್ಸಾಹವನ್ನು ನಗರಸಭೆ ವತಿಯಿಂದ ನೀಡಲಾಗುವುದು, ಅಲ್ಲದೇ ಈಗಾಗಲೇ ಪೌರಕಾರ್ಮಿಕರ ಅನಾರೋಗ್ಯದ ಬಗ್ಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆಯಲ್ಲದೇ 120 ಪೌರಕಾರ್ಮಿಕರ ಕುಟುಂಬಗಳಿಗೆ 15,500 ರೂ. ಸಹಾಯ ಧನ ನೀಡಲಾಗಿದೆ ಎಂದು ತಿಳಿಸಿದರು.
ವಸತಿ ಸಚಿವರು 12 ಎಕರೆಯಲ್ಲಿ 500 ಮನೆ ನಿರ್ಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಪೌರಕಾರ್ಮಿಕರಿಗೆ ಆದ್ಯತೆ ನೀಡುವ ಬಗ್ಗೆ ನಿಗಾವಹಿಸಲಾಗುವುದು ಎಂದು ನುಡಿದರು.
ಈಗಾಗಲೇ ಪೌರಕಾರ್ಮಿಕರ ಕಾಲೋನಿಯಲ್ಲಿ ಭವನ ನಿರ್ಮಿಸಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ದುಡಿಯುವ ವರ್ಗ ಗೌರವಿಸುವ ಆಡಳಿತ ಮಂಡಳಿ ಸುಭಿP್ಷÀ
ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ತಿಂಡಿ ವ್ಯವಸ್ಥೆಗೆ ಸೋಮಶೇಖರ್ ಕೆರಗೋಡು ಮನವಿ
ಮಂಡ್ಯ-ದುಡಿಯುವ ವರ್ಗಗಳನ್ನು ಗೌರವಿಸುವಂತಹ ಆಡಳಿತ ಮಂಡಳಿಗಳು ಸುಭಿP್ಷÀವಾಗಿರುತ್ತವೆ ಎಂದು ನಗರಸಭಾ ಸದಸ್ಯ ಸೋಮಶೇಖರ್ ಕೆರಗೋಡು ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿ ಮತ್ತು ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಿಗ್ಗಿನಿಂದಲೂ ನಗರದ ಸ್ವಚ್ಛತೆಯತ್ತ ಗಮನಹರಿಸಿ ಸಮಾಜದ ಆರೋಗ್ಯ ಕಾಪಾಡುತ್ತಿದ್ದಾರೆ. ಆದರೆ ಅವರಿಗೆ ಇಷ್ಟೇ ಗಂಟೆಗೆ ಹೋಗಬೇಕು ಮತ್ತು ಬರಬೇಕು ಎಂಬ ಕಾಲಮಿತಿಯನ್ನು ಹೇರಲಾಗುತ್ತಿದೆ. ಇದರಿಂದ ಪೌರಕಾರ್ಮಿಕರು ಕಾರ್ಯನಿರ್ವಹಿಸುವಲ್ಲಿ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಇಂತಹ ಅವೈಜ್ಞಾನಿಕ ಕ್ರಮವನ್ನು ಕೈ ಬಿಡಬೇಕು ಎಂದು ನುಡಿದರು.
ಹಗಲಿರುಳು ಎನ್ನದೇ ಸಮಾಜಕ್ಕಾಗಿ ದುಡಿಯುವ ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದಲೇ ತಿಂಡಿಯ ವ್ಯವಸ್ಥೆ ಮಾಡಬೇಕು ಇದು ಅವರ ವೃತ್ತಿಗೆ ನೀಡುವ ಗೌರವವಾಗುತ್ತದೆ ಎಂದು ಹೇಳಿದರು.
ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ, ಅವರ ಕುಟುಂಬ ವರ್ಗ ಬೀದಿಪಾಲಾಗುತ್ತದೆ. ಆದ್ದರಿಂದ ಪೌರಕಾರ್ಮಿಕರಿಗೆ 5 ಲP್ಷÀ ರೂ.ವರೆಗೆ ಗುಂಪು ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಇತರ ಇಲಾಖೆಗಳಲ್ಲಿ ಬ್ಯಾಕ್ ಲಾಗ್ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ ನಗರಸಭೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಪೌರಕಾರ್ಮಿಕರ ಹುದ್ದೆ ಮೀಸಲಾಗಿರುತ್ತದೆ. ಅವರಿಗೆ ದಿನಕ್ಕೆ ಕೇವಲ 200 ರೂ. ಸಂಬಳ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಅವರಿಗೆ ಉತ್ತಮ ಸಂಬಳ ನೀಡುವ ಮೂಲಕ ಅವರನ್ನು ಗೌರವಿಸುವ ಕೆಲಸ ಆಗಬೇಕಿದೆ ಎಂದರು.
ಒಮ್ಮೆ ತಮ್ಮ ಮನೆಯ ಶೌಚಾಲಯ ಕೆಟ್ಟಿತ್ತು. ಆ ಸಂದರ್ಭದಲ್ಲಿ ತಾವೇ ತಮ್ಮ ಮಕ್ಕಳು ಮಾಡಿದ್ದ ಮಲ ವಿಸರ್ಜನೆಯನ್ನು ಎತ್ತುವುದರಲ್ಲಿ ತಪ್ಪಿಲ್ಲ ಎಂದು ಕೊಂಡು ಶೌಚಾಲಯಕ್ಕೆ ಕೈ ಹಾಕಿ ಸ್ಚಚ್ಛಗೊಳಿಸಿದ್ದೆ, ಅಂತೆಯೇ ಪೌರಕಾರ್ಮಿಕರು ತಮ್ಮ ಮಕ್ಕಳು ಎಂದುಕೊಂಡು ನಗರದ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ತಂದೆ-ತಾಯಿಗಳನ್ನು ನೆನೆಯುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಮ್ಮ ಅನುಭವವನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉದ್ಘಾಟಿಸಿದರು. ಅಧ್ಯP್ಷÀತೆಯನ್ನು ನಗರಸಭೆ ಅಧ್ಯP್ಷÀ ಸಿದ್ದರಾಜು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಬೇಡಿಕೆ ಈಡೇರಿಕೆಗೆ ಪೌರಕಾರ್ಮಿಕರಿಂದ ಮನವಿ
ಮಂಡ್ಯ-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ ಹಾಗೂ ನಗರಸಭೆ ಅಧ್ಯP್ಷÀ ಸಿದ್ದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮನವಿ ಸಲ್ಲಿಸಿದ ಪೌರಕಾರ್ಮಿಕರಾದ ವಿಷಕಂಠ, ಪಳನಿಸ್ವಾಮಿ ಸೇರಿದಂತೆ ಇತರರು ಪೌರಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ನೀಡಲು ಉತ್ತಮವಾದ ನರ್ಸಿಂಗ್ ಹೋಂ ಗುರುತಿಸಿ ಉಚಿತ ಆರೋಗ್ಯ ಸೌಲಭ್ಯ ಒದಗಿಸಬೇಕು, ಪೌರಕಾರ್ಮಿಕರಿಗೆ ನಿವೇಶನ ನೀಡಬೇಕು, ಪೌರಕಾರ್ಮಿಕರ ಮಕ್ಕಳಿಗೆ ನಗರಸಭೆಯಿಂದ ಕಂಪ್ಯೂಟರ್ ವಿತರಿಸಿ ಶಾಲಾ ಕಾಲೇಜಿನ ವಾರ್ಷಿಕ ಶುಲ್ಕವನ್ನು ಭರಿಸಿಕೊಡಬೇಕು, ಖಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು, ಅಲ್ಲದೇ ವಿಜಯ ಬ್ಯಾಂಕಿನಲ್ಲಿ ವೇತನ ಆಧಾರದ ಮೇಲೆ ಸಾಲ ಪಡೆದು ಮರು ಪಾವತಿ ಮಾಡಿದ ನೌಕರರಿಗೆ ಮತ್ತೆ ಸಾಲ ಪಡೆಯಲು ಪೌರಾಯುಕ್ತರು ಬ್ಯಾಂಕಿಗೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

No comments:

Post a Comment