Monday 1 September 2014

  ಸಂಸ್ಕøತಿಯಿಂದ ಅನಂತಮೂರ್ತಿಗೆ ಶ್ರದ್ಧಾಂಜಲಿ
         
      ಮಂಡ್ಯ : ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘಟನೆ ‘ಸಂಸ್ಕøತಿ’ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಯು.ಆರ್.ಅಂತಮೂರ್ತಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಸ್ಕøತಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎರಡು ನಿಮಿಷ ಮೌನ ಪ್ರಾರ್ಥನೆಯ ನಂತರ ಮಾತನಾಡಿದ ಸಂಸ್ಕøತಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ವಿ.ಧರಣೇಂದ್ರಯ್ಯ ಮಾತನಾಡಿ ನೇರ ದಿಟ್ಟ ನಡೆಯನ್ನು ಹೊಂದಿದ್ದ ಅನಂತಮೂರ್ತಿಯವರು ವಿವಾದಗಳ ನಡುವೆಯೂ ತಮ್ಮತನ ಬಿಟ್ಟುಕೊಡದೆ ಚಿಂತನಶೀಲ ಮನಸುಗಳಿಗೆ ಸ್ಫೂರ್ತಿದಾಯಕರಾಗಿದ್ದರು.ಹಲವು ಸರ್ಕಾರಗಳಿಗೆ ಮಾರ್ಗದರ್ಶಕರಾಗಿದ್ದಲ್ಲದೆ ಚುನಾವಣೆಗೆ ನಿಲ್ಲುವ ಮೂಲಕ ರಾಜಕೀಯದ ಅನುಭವವನ್ನೂ ಸಹ ಪಡೆದುಕೊಂಡಿದ್ದರು.ಇಂತಹ ರತ್ನವೊಂದನ್ನು ನಮ್ಮ ಸಾಮಾಜಿಕ ಕ್ಷೇತ್ರ ಕಳೆದುಕೊಂಡಿದೆ.ಕೇವಲ ಸಾಹಿತಿಯಾಗಿ ಮಾತ್ರ ಇರದ ಅವರು ಎಲ್ಲಾ ಕ್ಷೇತ್ರಗಳ್ಲೂ ತಮ್ಮ ಛಾಪು ಮೂಡಿಸಿದ್ದರು ಎಂದು ಅವರ ಗುಣಗಾನ ಮಾಡಿದರು.ಸಭೆಯಲ್ಲಿ ಸಂಸ್ಕøತಿ ಅಧ್ಯಕ್ಷ ಕೆ.ಪ್ರಹ್ಲಾದರಾವ್,ಕಾರ್ಯದರ್ಶಿಗಳಾದ ಬಿ.ಜಿ.ಉಮಾŒಷೌಕತ್ ಆಲಿ,ಪತ್ರಿಕಾ ಕಾರ್ಯದರ್ಶಿ ಹೊಳಲು ಶ್ರೀಧರ್,ಪ್ರಮೀಳಾ ಧರಣೇಂದ್ರಯ್ಯ,ಎನ್.ರಮೇಶ್ ಉಪಸ್ಥಿತರಿದ್ದರು.

No comments:

Post a Comment