Wednesday 24 September 2014

ಮಾವುತರ ಶೆಡ್ ಗಳಿಗೆ ನೀರು; ಪರದಾಟ
ಮಯಸೂರು,ಸೆ. 23- ದಸರಾ ಆನೆಗಳೊಂದಿಗೆ  ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಮಾವುತರು ಕಾವಾಡಿಗಳ  ಕುಟುಮಬ ತಂಗಲು ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಲಾಗಿದೆ.    
  ಕಳೆದ ಒಂದು ತಿಂಗಳಿನಿಂದಲೂ ಮಾವುತರ ಕುಟುಂಬ ಅಲ್ಲೇ ಕಾಲ ಕಳೆದರು.  ಕಳೆದರಾತ್ರಿ ಮೈಸೂರು ನಗರದಾದ್ಯಂತ ಬಾರಿ ಸುರಿದ ಪರಿಣಾಮ  ಮಾವುತರು  ತಂಗಿದ್ದ ನಾಲ್ಕು ಶೆಡ್‍ಗಳಿಗೆ  ನೀರು ನುಗ್ಗಿ ಮಾವುತರ ಕುಟುಂಬ  ಮಲಗಿ ನಿದ್ರಿಸಲು ಆಗದೆ,  ಅವರ ಬಟ್ಟೆ ಬರೆ ,ವಸ್ತುಗಳೆಲ್ಲಾ  ನೀರಿನಿಂದ ನೆನೆದು ಪರದಾಡುವಂತಾಯಿತು.
  ಇಂದು ಬೆಳಿಗ್ಗೆ ಸಚಿವರು ಮತ್ತು ಅಧಿಕಾರಿಗಳ  ಗಮನಕ್ಕೆ  ತಂದಾಗ ಅವರನ್ನು  ಬೇರೆ ಶೆಡ್‍ಗಳಿಗೆ  ವರ್ಗಾಯಿಸಿ  ತಾತ್ಕಾಲಿಕ  ವ್ಯವಸ್ಥೆ ಮಾಡಿಕೊಡಲಾಯಿತು.

 ಅರಮನೆ ಆವರಣದಲ್ಲಿ ಬ್ಯಾಟ್ರಿ ಚಾಲಿತ ವಾಹನ
ಮೈಸೂರು,sಸೆ.23-ಮೈಸೂರು ಅರಮನೆ ಆವರಣದಲ್ಲಿ ಸುತ್ತಲು ಬ್ಯಾಟ್ರಿ ಚಾಲಿತ  ವಾಗನಳನ್ನು  ತರಿಸಲಾಗಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ  ವಿ. ಶ್ರೀನಿವಾಸಪ್ರಸಾದ್ ರವರು ಚಾಲನೆ ನೀಡಿದರು.
  ಗ್ರೀಂಡ್ಜೈನ್ ಟೆಕ್ನಾಲಜಿ ಕಂಪನಿ ಯವರ ಸಹಯೋಗದೊಂದಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಈ ಸ್ವಯಂ ಚಾಲಿತ ವಾಹನ ಬಿಡುಗಡೆ ಮಾಡಲಾಗಿದ್ದು, ಪ್ರಯೋಗಾರ್ತವಾಗಿ ಇಂದು 5 ವಾಹನಗಳನ್ನು  ಬಿಡಿಗಡೆಮಾಡಲಾಯಿತು. ನಡೆಯಲಾಗದ ವಯಸ್ಕರು ಈ ವಾಹನ ಏರಿ ನಿಂತು  ಕೈ ಭಟನ್  ಒತ್ತುವ ಮೂಲಕ  ಆರಮನೆ ಆವರಣದಲ್ಲಿ ಸುತ್ತಬಹುದಾಗಿದೆ.

No comments:

Post a Comment