Sunday 21 September 2014

ಪ್ರಸ್ತುತ ದಿನಗಳಲ್ಲಿ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ.
 ಪ್ರಸ್ತುತ ದಿನ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ ,ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಕರಣ ಮಾಡಬೇಕು ಎಂದು  ಪಿಇಟಿ ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು. ಅವರ ಅನುಕರಣ ಸಾರ್ವಕಾಲಿಕವಾದದ್ದು. ಅಭಿವೃದ್ಧಿಗೆ ಮತ್ತು ಸಾಧನೆಗೆ ಕೊನೆ ಇಲ್ಲ. ನಿಂತ ನೀರಲ್ಲ. ಇದು ಸದಾ ಹರಿಯುವ ನೀರು. ಪ್ರತಿಯೊಬ್ಬರೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಚೈತನ್ಯ ಬಳಗದ ವತಿಯಿಂದ ನಡೆದ ಇಂಜಿನಿಯರ್ಸ್ ದಿನ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭ ನಡೆಯಿತು.
ಪ್ರಸ್ತುತ ದಿನ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಕರಣ ಮಾಡಬೇಕು. ಅವರ ಅನುಕರಣ ಸಾರ್ವಕಾಲಿಕವಾದದ್ದು. ಅಭಿವೃದ್ಧಿಗೆ ಮತ್ತು ಸಾಧನೆಗೆ ಕೊನೆ ಇಲ್ಲ. ನಿಂತ ನೀರಲ್ಲ. ಇದು ಸದಾ ಹರಿಯುವ ನೀರು. ಪ್ರತಿಯೊಬ್ಬರೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್‍ಗಳಾದ ಲಯನ್ ಜಿ.ಎ. ರಮೇಶ್. ಜಿ.ಪಿ. ಶಿವಶಂಕರ್, ಡಾ. ಬಿ.ಎಸ್. ಶಿವಕುಮಾರ್, ಶಿಕ್ಷಕರಾದ ಕೆ. ಸುನೀಲ್, ಲಿಂಗರಾಜು, ಸರ್ವಮಂಗಳಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಭಿನಂದಿತರನ್ನು ಕುರಿತು ಅಭಿನಂದನಾ ನುಡಿಯನ್ನಾಡಿ, ಇಂದಿನಿಯರುಗಳು ಮತ್ತು ಶಿಕ್ಷಕರು ಇಬ್ಬರು ಮಹನೀಯರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಚೈತನ್ಯ ಬಳಗದ ಅಧ್ಯಕ್ಷ  ಕೆ.ಎನ್. ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಲ್. ಶಿವಪ್ರಸಾದ್, ನಗರಸಭಾ ಸದಸ್ಯ ಎಸ್.ಕೆ. ಶಿವಪ್ರಕಾಶಬಾಬು, ಪತ್ರಕರ್ತ ಗೋವಿಂದಯ್ಯ ಕೋರೇಗಾಲ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ನಗರದ ಯುವಜನ ಮತ್ತು ಕ್ರೀಡಾ ಇಲಾಖೆ ಆವರಣದಲ್ಲಿ ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 17ನೇ ವರ್ಷದ ಸರ್ವ ಸದಸ್ಯರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ವಹಿಸಿ ಮಾತನಾಡಿ, ಸಂಘವು 17 ವರ್ಷಗಳನ್ನು ಪೂರೈಸಿದೆ. ಕಳೆದ ಸಾಲಿನಲ್ಲಿ ಸರ್ವ ಸದಸ್ಯರ ತೀರ್ಮಾನದಂತೆ ನಿವೇಶನ ಹೊಂದಿರುವ ಸದಸ್ಯರು ತಮ್ಮ ತಮ್ಮ ನಿವೇಶನಗಳ ಸ್ವಚ್ಚತೆಯನ್ನು ತಾವೇ ಮಾಡಿಕೊಂಡು ನಿವೇಶನದ ಭದ್ರತೆ ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಸಂಘದ ಕೆಲಸಗಳಿಗೆ ಆಡಳಿತ ಮಂಡಳಿ ಸದಸ್ಯರು ಬೆಂಬಲ ನೀಡುತ್ತಿರುವುದನ್ನು ಸ್ಮರಿಸಿಕೊಂಡು ಇನ್ನು ಮುಂದೆ ಸಂಘದ ಅಭಿವೃದ್ಧಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ಪಿ.ವಿ. ಪರಶುರಾಮ್, ನಿರ್ದೇಶಕರಾದ ಐ. ಬರ್ನಾಡಪ್ಪ, ಸತ್ಯನಾರಾಯಣ, ಎಸ್.ಎಸ್. ಮರೀಗೌಡ, ಎಸ್.ಕೆ. ಚಂದ್ರಶೇಖರ್, ಬಾಲಾಜಿ ಸಿಂಗ್, ರಾಜಮ್ಮ, ಗೀತಾಂಜಲಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ : ಖಾಸಗಿ ಶಾಲಾ ಶಿಕ್ಷಕರು ಒಗ್ಗಟ್ಟಾಗಿ ಸಂಘದ ಹಿತ ಕಾಯಬೇಕು. ಸಂಘ ನಿಮ್ಮ ಹಿತ ಕಾಯುತ್ತದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಖಾಸಗಿ ಶಾಲಾ ನೌಕರರ ಸಂಘದ 2013-14ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಸಮಾಜದ ಅಭಿವೃದ್ಧಿಯಾಗಬೇಕಾದಲ್ಲಿ ಸದಸ್ಯರು ಒಗ್ಗಟ್ಟಾಗಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ಪುರತಿಭಾ ಪುರಸ್ಕಾರ ನೀಡಿ ಪೆÇ್ರೀ
ನೌಕರರ ಸಂಘದ ಅಧ್ಯಕ್ಷ ಆರ್.ಟಿ. ಬಸವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ ಜಯಪ್ರಕಾಶಗೌಡ, ನೌಕರರ ಸಂಘದ ಸ್ವಾಮಿ, ಚಂದ್ರು ಇತರರು ಸಮಾರಭದಲ್ಲಿ ಭಾಗವಹಿಸಿದ್ದರು.

No comments:

Post a Comment