Monday 1 September 2014

ಮಾವುತರ ಮಕ್ಕಳ ಜ್ಞಾನ ವೃದ್ಧಿಸಲು ಟೆಂಟ್ ಗ್ರಂಥಾಲಯ
ಮೈಸೂರು,ಸೆ.1.ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕಾವಡಿಗರ ಮಕ್ಕಳಿಗೆ  ಎಲ್ಲಾ ಕಥೆ ಪುಸ್ತಕಗಳನ್ನು ಓದುವ ತವಕ. ಇದು ಕಂಡುಬಂದಿದ್ದು ಅರಮನೆ ಆವರಣದಲ್ಲಿ ಇಂದು ಪ್ರಾರಂಭವಾದ ಟೆಂಟ್ ಗ್ರಂಥಾಲಯದಲ್ಲಿ.
ಮಕ್ಕಳ ವಯಸ್ಸೆ ಅಂತಹುದು ಎಲ್ಲವನ್ನು ತಿಳಿದಿಕೊಳ್ಳುವ ಆಸೆ ಹಾಗೂ ಉತ್ಸಹ. ಅವರ ಉತ್ಸಹವನ್ನು ಪ್ರೋತ್ಸಹಿಸಿ ಜ್ಞಾನವನ್ನು ವೃದ್ಧಿಸುವ ನಿಟ್ಟಿನಿಂದ ಜಿಲ್ಲಾಡಳಿತ  ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಮೈಸೂರು ಗ್ರಂಥಪಾಲಕರು ಹಾಗೂ ವಿಜ್ಞಾನಿಗಳ ಸಂಘದ(ಮೈಲಿಸಾ) ಸಹಕಾರದೊಂದಿಗೆ ಟೆಂಟ್ ಗ್ರಂಥಾಲಯವನ್ನು ಮಾವುತರು ಹಾಗೂ ಕಾವಡಿಗರ ಮಕ್ಕಳಿಗೆ ಅನಾವರಣಗೊಳಿಸಿದೆ.
ಟೆಂಟ್ ಶಾಲೆಯನ್ನು ಮೈಸೂರು ಉಪವಿಭಾಗದ ಸಂರಕ್ಷಣಾಧಿಕಾರಿ ಡಾ| ವಿ.ಕರಿಕಾಳನ್ ಉದ್ಘಾಟಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಎನ್.ಎಸ್. ಹರಿನಾರಾಯಣ್ ಅವರು ಮಾತನಾಡಿ ಇದೇ ಮೊದಲ ಬಾರಿಗೆ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಟೆಂಟ್ ಗ್ರಂಥಾಲಯವನ್ನು ತೆರೆಯಲಾಗಿದ್ದು, ಮುಂದಿನ ವರ್ಷಗಳಲ್ಲಿ ಆಚರಿಸುವ ದಸರಾ ಮಹೋತ್ಸವದಲ್ಲೂ ಸಹ ಟೆಂಟ್ ಗ್ರಂಥಾಲಯ ತೆರೆಯಲಾಗುವುದು ಎಂದರು. 
ಮಕ್ಕಳಿಗೆ ಪುಸ್ತಕ ಪ್ರಪಂಚದ ಪರಿಚಯ ಮಾಡಿಸುವುದು,ಕಥೆ ಹೇಳುವುದು, ಪುಸ್ತಕಗಳ ಪರಿಚಯ, ಪುಸ್ತಕಗಳ ಬಳಕೆ, ಪುಸ್ತಕಗಳನ್ನು ಗುರುತಿಸುವುದು, ಪುಸ್ತಕ ಸಂಗ್ರಹಣೆ ಮುಂತಾದ ಹಲವಾರ ವಿಷಯಗಳಲ್ಲಿ ಮಾಹಿತಿ ನೀಡುವುದು ಈ ಟೆಂಟ್ ಗ್ರಂಥಾಲಯದ ಚಟುವಟಿಕೆಯಾಗಿರುತ್ತದೆ. ಟೆಂಟ್ ಗ್ರಂಥಾಲಯದಲ್ಲಿ ತರಬೇತಿ ಹೊಂದಿದ ವೃತ್ತಿಪರ ಗ್ರಂಥಪಾಲಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸೆಪ್ಟೆಂಬರ್ 1 ರಂದು ಕಥೆ ಹೇಳುವುದು, 2 ರಂದು ಪುಸ್ತಕಗಳ ಪರಿಚಯ, 3 ರಂದು ಚಿತ್ರಗಳ ಪುಸ್ತಕಗಳು, 4 ರಂದು ದಿನಪತ್ರಿಕೆಗಳ ಓದು, 5 ರಂದು ಪುಸ್ತಕ ಓದುವ ಕೌಶಲ್ಯ, 6 ರಂದು ಕಾಮಿಕ್ಸ್, 8 ರಂದು ನಿಯತಕಾಲಿಕೆಗಳು(ಪುರವಣಿಗೆ), 9 ರಂದು ಮಕ್ಕಳ ಪುಸ್ತಕಗಳ ವಿವಿಧ ಮಾದರಿಗಳು, 10 ರಂದು ವನ್ಯಜೀವಿ ಕುರಿತ ಪುಸ್ತಕಗಳು, 11 ರಂದು ಡ್ರಾಯಿಂಗ್ (ರೇಖಾ ಚಿತ್ರಗಳು), 12 ರಂದು ನಕ್ಷೆಗಳು ಮತ್ತು ಭೂಪಟಗಳು, 13 ರಂದು ಗಟ್ಟಿಯಾಗಿ ಪುಸ್ತಕ ಓದುವಿಕೆ, 15 ರಂದು ಪುಸ್ತಕಗಳನ್ನು ಗುರುತಿಸುವಿಕೆಯ ಆಟ, 16 ರಂದು ಪುಸ್ತಕಗಳ ನಿರ್ವಹಣೆ, 17 ರಂದು ಕಾಗದವನ್ನು ಮಡಿಸುವ ಜಪಾನೀಯರ ಕಲೆ, 18 ರಂದು ಪುಸ್ತಕಗಳ ಪಟ್ಟಿಯ ಸಿದ್ದತೆ, 19 ರಂದು ಪ್ರಸಿದ್ದ ಜನರ ಕುರಿತ ಜೀವನ ಚರಿತ್ರೆಗಳು, 20 ರಂದು ಚಿತ್ರಗಳ ನಿಘಂಟುಗಳು, 22 ರಂದು ನಾಟಕ ಪುಸ್ತಕಗಳು, 23 ರಂದು ಜೇಡಿಮಣ್ಣು ಕಲೆ, 24 ರಂದು ಮಕ್ಕಳ ಕವಿತೆಗಳು, 25 ರಂದು ಬುಕ್ ಮಾರ್ಕ್ ತಯಾರಿ, 26 ರಂದು ಕುತೂಹಲಕಾರಿ ಪುಸ್ತಕಗಳು, 27 ರಂದು ಗ್ರಂಥಾಲಯ ಪ್ರವಾಸ, 29 ರಂದು ಪುಸ್ತಕಗಳನ್ನು ಆರಿಸಿ-ಮಕ್ಕಳ ಚಟುವಟಿಕೆ, 30 ರಂದು ಮಕ್ಕಳಿಂದ ಕತೆ ಓದುವಿಕೆ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಕಾರ್ಯಕ್ರಮಗಳು
ಸೆಪ್ಟೆಂಬರ್ 2 ರಂದು ಕೌನ್ಸಿಲಿಂಗ್      
ಮೈಸೂರು,ಸೆ.1.ಸೇವಾ ಪುಸ್ತಕ ಪರಿಶೀಲನೆಯಾಗಿರುವ ಶಿಕ್ಷಕರಿಗೆ ಮುಖ್ಯಶಿಕ್ಷಕರ ಹುದ್ದೆಯಿಂದ ಪದವೀಧರೇತರ ಮುಖ್ಯಶಿಕ್ಷಕರ (ಕನ್ನಡ) ಹುದ್ದೆಗೆ ಹಾಗೂ ಉರ್ದು ಸಹಶಿಕ್ಷಕರ ಹುದ್ದೆಯಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಉಪನಿರ್ದೇಶಕರ ಕಛೇರಿ, ಮೈಸೂರು ಇಲ್ಲಿ ದಿನಾಂಕ: 02.09.2014 ರಂದು ಅಪರಾಹ್ನ 2.00 ಗಂಟೆಗೆ ಕೌನ್ಸಿಲಿಂಗ್ ನಡೆಸಲಾಗುವುದು. ಸಂಬಂಧಿಸಿದ ಶಿಕ್ಷಕರು ಬಿ.ಇ.ಒ.ರವರಿಂದ ಸೇವಾ ಮಾಹಿತಿ ಪತ್ರ ಪಡೆದು ತಪ್ಪದೆ ಕೌನ್ಸಿಲಿಂಗ್‍ಗೆ ಹಾಜರಾಗುವುದು. ಅಂತಿಮ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಬಿ.ಇ.ಒ. ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಪ್ರಸನ್ನಕೃಷ್ಣಸ್ವಾಮಿ ಬ್ರಹ್ಮೋತ್ಸವ ಹಾಗೂ  ಕೃಷ್ಣೋತ್ಸವ
   ಮೈಸೂರು.ಸೆ.01.ಮೈಸೂರಿನ ಅರಮನೆ ಕೋಟೆ ಶ್ರೀ ಪ್ರಸನ್ನಕೃಷ್ಣಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್ 5 ರಿಂದ 16 ರವರೆಗೆ ಬ್ರಹ್ಮೋತ್ಸವ ಹಾಗೂ ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 25 ರವರೆಗೆ ಕೃಷ್ಣೋತ್ಸವ ಜರುಗಲಿದೆ.
     ಕಾರ್ಯಕ್ರಮದ ವಿವರ ಇಂತಿದೆ. ಸೆಪ್ಟೆಂಬರ್ 5 ರಂದು ಸಂಜೆ ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, 6 ರಂದು ಸಂಜೆ 4-30 ರಿಂದ 6-30 ಗಂಟೆಯವರೆಗೆ ಅಧಿವಾಸರ, ರಕ್ಷಾಬಂಧನ, ಕಲ್ಯಾಣೋತ್ಸವ, 7 ರಂದು ಬೆಳಿಗ್ಗೆ 5 ಗಂಟೆಗೆÀ ಧ್ವಜಾರೋಹಣ, ಸಂಜೆ 1ನೇ ತಿರುನಾಳ್ ಭೇರಿತಾಡನ, ತಿರುಪ್ಪರೈ, ಹಂಸವಾಹನ ಉತ್ಸವ ಯಾಗಶಾಲಾ ಪ್ರವೇಶ. 8  ರಂದು ಸಂಜೆ 2ನೇ ತಿರುನಾಳ್. ಶೇಷವಾಹನ ಉತ್ಸವ, ಪಡಿಯೇತ್ತ. 9 ರಂದು ಸಂಜೆ 3ನೇ ತಿರುನಾಳ್. ನಾಗವಲ್ಲೀ ಮಹೋತ್ಸವ, ನರಾಂದೋಳಿಕಾರೋಹಣ ಚಂದ್ರಮಂಡಲ ವಾಹನ(ಪಡಿಯೇತ್ತ). 10 ರಂದು ಸಂಜೆ 4ನೇ ತಿರುನಾಳ್. ಮುಡಿ ಉತ್ಸವ. ಪಡಿಯೇತ್ತ, 11 ರಂದು ಸಂಜೆ 5ನೇ ತಿರುನಾಳ್, ಪ್ರಹ್ಲಾದ ಪರಿಪಾಲನೆ, ಬೆಳ್ಳಿಗರುಡೋತ್ಸವ, ವಿಶೇಷ ಪಡಿಯೇತ್ತ, 12 ರಂದು ಸಂಜೆ 6ನೇ ತಿರುನಾಳ್, ಗಜೇಂದ್ರಮೋಕ್ಷ, ಆನೆವಸಂತ, ಕುದುರೆ ವಾಹನ, ಆನೆ ವಾಹನ, ವಿಶೇಷ ಪಡಿಯೇತ್ತ. 13 ರಂದು  7ನೇ ತಿರುನಾಳ್, ಬೆಳಿಗ್ಗೆ ರಥಸ್ನಪನ, ರಥಬಲಿ, ಯಾತ್ರಾದಾನ ಪೂರ್ವಕ ಮಧ್ಯಾಹ್ನ 1-01 ರಿಂದ 1-31 ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಉಭಯನಾಚ್ಚಿಯಾರ್ ಸಹಿತ ಶ್ರೀ ಪ್ರಸನ್ನ ಕೃಷ್ಣಸ್ವಾಮಿಯವರಿಗೆ ಬ್ರಹ್ಮರಥೋತ್ಸವ ಮತ್ತು ಶ್ರೀಪೆರುಂದೇವಿ ಅಮ್ಮನವರಿಗೆ ಪ್ರತ್ಯೇಕವಾಗಿ ರಥೋತ್ಸವ. 14 ರಂದು 8ನೇ ತಿರುನಾಳ್, ರಾತ್ರಿ ತೆಪ್ಪೋತ್ಸವ, ಡೋಲೋತ್ಸವ, ಕುದುರೆ ವಾಹನ, ಕಳ್ಳರಸುಲಿಗೆ ಉತ್ಸವ. 15 ರಂದು 9ನೇ ತಿರುನಾಳ್, ಬೆಳಿಗ್ಗೆ ನಗರ ಶೋಧನೆ, ಸಂಧಾನಸೇವೆ, ಚೂರ್ಣಾಭಿಷೇಕ, ಅವಭೃತ ಸ್ನಾನ, ಸಂಜೆ ಗೋವಿಂದ ಪಟ್ಟಾಭಿಷೇಕ, ಪಡಿಮಾಲೈ, ಪೂರ್ಣಾಹುತಿ, ಮಹಾಕುಂಭ ಪ್ರೋಕ್ಷಣೆ, 16 ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪುಷ್ಪಯಾಗ, ದ್ವಾದಶಾರಾಧನೆ, ಹನುಮಂತ ವಾಹನ, ಧ್ವಜಾವರೋಹಣ, ಉದ್ಯಾಸನ ಪ್ರಬಂಧ, ಶ್ರೀ ಕೃಷ್ಣಜಯಂತಿ, ಮೂಕಬಲಿ.
    ಸೆಪ್ಟೆಂಬರ್ 17 ರಂದು ಶಿಕ್ಯೋತ್ಸವ, 18 ರಂದು ಪೂತನಿ ಸಂಹಾರ, 19 ರಂದು ಶಕಟಾಸುರ ಸಂಹಾರ, 20 ರಂದು ಬಕಾಸುರ ವಧೆ, 21 ರಂದು ಯಮಳಾರ್ಜುನ ಮೋಕ್ಷ, 22 ರಂದು ಮೋಹಿನಿ ಅಲಂಕಾರ, 23 ರಂದು ಮಲ್ಲಯುದ್ಧ,  24 ರಂದು ರಾಸಕ್ರೀಡೆ (ಗೋವಿಗೆ ಕಾಮಧೇನು ಅಲಂಕಾರ), 25 ರಂದು ರುಕ್ಮಿಣೀ ಕಲ್ಯಾಣೋತ್ಸವ (ದೇವಸ್ಥಾನದೊಳಗೆ ನಡೆಯುತ್ತದೆ) ಈ ಕಾರ್ಯಕ್ರಮಗಳು ಸಂಜೆ 6 ಗಂಟೆಗೆ ನಡೆಯಲಿದೆ.
   ಸೆಪ್ಟೆಂಬರ್ 24 ರಂದು ರಾತ್ರಿ 8 ಗಂಟೆಗೆ ಕಂಸವಧೆ (ದೇವಸ್ಥಾನದಲ್ಲಿ) ನಡೆಯಲಿದೆ.
     ಉತ್ಸವಗಳ ಸಂದರ್ಭದಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಬೇಕೆಂದು ಅರಮನೆ ಮುಜರಾಯಿ ಸಂಸ್ಥೆಗಳ ವ್ಯವಸ್ಥಾಪಕ ಗೋವಿಂದರಾಜು ಎಸ್. ಅವರು  ಕೋರಿದ್ದಾರೆ.

ಸೆ. 2 ರಂದು ಸಾಂಸ್ಕøತಿಕ ಸೌರಭ
   ಮೈಸೂರು.ಸೆ.01.ಮೈಸೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಾಂಸ್ಕøತಿಕ ಸೌರಭವನ್ನು ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಚಿಕ್ಕಮಾದು ಅಧ್ಯಕ್ಷತೆ ವಹಿಸುವರು.
ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್, ವಿಧಾನಪರಿಷತ್ ಸದಸ್ಯರಾದ ಎಸ್.ನಾಗರಾಜು, ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ,  ಮರಿತಿಬ್ಬೇಗೌಡ, ಆರ್. ಧರ್ಮಸೇನ, ಹೆಚ್.ಡಿ.ಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಉಮಾಶಂಕರ್, ಉಪಾಧ್ಯಕ್ಷೆ ಸುಹಾಸಿನಿ ಕೆ.ಎಲ್.,  ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಲ್ಲೇಶ್ವರಿ ತಂಗವೇಲು, ಉಪಾಧ್ಯಕ್ಷ ಕೆ.ಎಸ್.ಬಾಲಚಂದ್ರ, ಹೆಚ್.ಡಿ.ಕೋಟೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಕುಮಾರ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ನಿರ್ಮಾಣ: ರಾಜೀವ್ ರಿನ್ ಯೋಜನೆಯಡಿ ಅರ್ಜಿ ಆಹ್ವಾನ
ಮೈಸೂರು.ಸೆ.01.ಟಿ.ನರಸೀಪುರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪಟ್ಟಣದ ಆರ್ಥಿಕವಾಗಿ ದುರ್ಬಲ ವರ್ಗದವರು ಇಡಬ್ಲೂಎಸ್ ಮತ್ತು ಕಡಿಮೆ ಆದಾಯ ಹೊಂದಿರುªವರು ಎಲ್‍ಐಜಿ ಹೊಸಮನೆ ನಿರ್ಮಿಸಿಕೊಳ್ಳಲು, ಖರೀದಿಸಲು ಅಥವಾ ಇರುವ ಮನೆಗೆ ಹೆಚ್ಚುವರಿಯಾಗಿ ಕೊಠಡಿ, ಅಡುಗೆ ಮನೆ, ಶೌಚಾಲಯ, ನಿರ್ಮಿಸಿಕೊಳ್ಳಲು ‘ರಾಜೀವ್ ರಿನ್’ ಯೋಜನೆಯಡಿ ಸೌಲಭ್ಯ ದೊರೆಯಲಿದೆ.
ಈ ಯೋಜನೆ ಸಾಲದ ಮೊತ್ತಕ್ಕೆ ವಿಧಿಸಲಾಗುವ ಬಡ್ಡಿಯ ಮೇಲೆ ಶೇ. 5 ರಷ್ಟು ನಿಗಧಿತ ಬಡ್ಡಿ ಸಹಾಯಧನವನ್ನು ಒದಗಿಸುತ್ತದೆ. ಈ ಸೌಲಬ್ಯ  ನೀಡಿಕೆಯಲ್ಲಿ ಮಹಿಳೆಯರು ಪ.ಜಾತಿ/ಪ.ಪಂ, ಅಲ್ಪಸಂಖ್ಯಾತರು, ವಿಕಲಚೇತನರಿಗೆ ಮೊದಲ ಆದ್ಯತೆ. ವಾರ್ಷಿಕ 1ಲಕ್ಷರೂ. ಆದಾಯ ಹೊಂದಿರುವ ಕುಟುಂಬಗಳಿಗೆ 21ಚ.ಮೀ. ಗಳವರೆಗೆ ಮನೆ ಕಟ್ಟಲು ಗರಿಷ್ಟ 5ಲಕ್ಷ ರೂಗಳ ಸಾಲ ನೀಡಲಿದ್ದು. ಇದರ ಬಡ್ಡಿಯಲ್ಲಿ ಶೇ. 5ರಷ್ಟು ಬಡ್ಡಿ ಸಹಾಯಧನ ದೊರೆಯಲಿದೆ. ಮರುಪಾವತಿಗೆ 15 ರಿಂದ 20ವರ್ಷ ಅವಧಿ ಇರುತ್ತದೆ.
    ವಾರ್ಷಿಕ 1 ರಿಂದ 2 ಲಕ್ಷ ರೂ. ಆದಾಯ ಹೊಂದಿರುವ ಕುಟುಂಬಗಳಿಗೆ 28ಚ.ಮೀ.ಗಳವರೆಗೆ ಮನೆ ನಿರ್ಮಿಸಲು ಗರಿಷ್ಟ 8 ಲಕ್ಷ ರೂ ಸಾಲ ನೀಡಲಾಗುತ್ತದೆ. ಆದರೆ  5 ಲಕ್ಷಕ್ಕಿಂತ ಮೇಲ್ಪಟ್ಟ ಹೆಚ್ಚುವರಿ ಸಾಲಕ್ಕೆ ಯಾವುದೆ. ಬಡ್ಡಿ ಸಹಾಯದನ ದೊರೆಯುವುದಿಲ್ಲ. ಮರುಪಾವತಿಗೆ 15 ರಿಂದ 20 ವರ್ಷಗಳ ಅವಧಿ ಇರುತ್ತದೆ.
    ಫಲಾಭವಿಯ ಹೆಸರಿನಲ್ಲಿ ನಿವೇಶನ ಮಾಲಿಕತ್ವದ ದಾಖಲೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇಂದಿನವರೆವಿಗೂ ಆಸ್ತಿ ತರಿಗೆ ಪಾತಿಸಿರುವ ದಾಖಲೆಗಳು, ಪಡಿತರಚೀಟಿ, ಮತದಾರರ ಗುರುತಿನ ಚೀಟಿ, ಆದಾರ್‍ಕಾರ್ಡ್ ಕಟ್ಟಡ ನಿರ್ಮಾಣದ ಪರವಾನಿಗೆ ಅಂದಾಜು ವೆಚ್ಚ ಮತ್ತು ನಕ್ಷೆ, ಅಂಗವಿಕಲರಾಗಿದ್ದರೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
    ಪ್ರಾಥಮಿಕ ಭದ್ರತೆಗಾಗಿ ಮನೆಯನ್ನು ಅಡಮಾನವಾಗಿ ಪರಿಗಣಿಸಲಾಗುತ್ತದೆ. ಈ ಯೋಜನೆಗೆ ಸರ್ಕಾರದಿಂದ ನೇಮಕ ಮಾಡಲಾದ ಬ್ಯಾಂಕುಗಳ ಮೂಲಕ ಸಾಲ ಮಂಜೂರು ಮಾಡಲಾಗುತ್ತದೆ. ನಿಗದಿತ ಸಾಲದ ಅರ್ಜಿ ನಮೂನೆಯನ್ನು ದಿನಾಂಕ- 10-09-2014 ರವರೆಗೆ ನೀಡಲಾಗುತ್ತದೆ. ಅರ್ಜಿಯನ್ನು ನಿಗದಿಪಡಿಸಿರುವ ದಾಖಲೆಗಳ ಸಮೇತ ಸಲ್ಲಿಸಲು ಕಡೆ ದಿನಾಂಕ 15-09-2014.  ಹೆಚ್ಚಿನ ಮಾಹಿತಿಗಾಗಿ ರಾಜೀವ್ ರಿನ್ ಯೋಜನೆಯ ಶಾಖೆ ಪಟ್ಟಣ ಪಂಚಾಯಿತಿ  ಟಿ. ನರಸೀಪುರ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಕ್ರೀಡಾಕೂಟ ಮುಂದೂಡಿಕೆ
    ಮೈಸೂರು.ಸೆ.01.ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 04-09-2014 ರಂದು ತಾಲ್ಲೂಕು ಕ್ರೀಡಾಂಗಣ, ಪಿರಿಯಾಪಟ್ಟಣ ಇಲ್ಲಿ ಏರ್ಪಡಿಸಲಾಗಿದ್ದ,  ಪಿರಿಯಾಪಟ್ಟಣ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಕ್ರೀಡಾಕೂಟವು ದಿನಾಂಕ 06-09-2014 ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment