Saturday 7 November 2015

ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
 ಮೈಸೂರು,ನ.7- ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ತಮ್ಮ ಮನೆಯ ಬಳಿಯಿರುವ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ತೊಣಚಿಕೊಪ್ಪಲು ಬಡಾವಣೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಬಡಾವಣೆಯ ನಿವಾಸಿ ಗಾರೆಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ ನಂಜುಂಡ(35) ಎಂಬಾತನೇ  ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಈ ತನಿಗೆ ಮದುವೆಯಾಗಿದ್ದರೂ  ಹೆಮಡತಿಯಿಂದ ಬೇರಾಗಿ ತನ್ನ ತಾಯಿಮನೆಯಲ್ಲಿ ವಾಸವಾಗಿದ್ದ, ಕೆಲ ತಿಂಗಳ ಹಿಂದೆ ಬಲಗಾಲಿನಲ್ಲಿ ಗ್ಯಾಂಗರಿನ್ ಆಗಿದ್ದ ಪರಿಣಾಮ ಕೆಲದಿನಗಳ ಹಿಂದೆ ಒಂದು ಕಾಲನ್ನು ತೆಗೆಯಲಾಗಿತ್ತು ಆದರೂ  ಕೃತಕ ಕಾಲು ಹಾಕಿಸಿಕೊಂಡು ಹೇಗೋ ಬದುಕ್ಕಿದ್ದ. ಆದರೆ ಕಾಲು ಇಲ್ಲದೇ ಇರುವುದು, ಹೆಂಡತಿ ಈತನಿಂದ ದೂರಾಗಿರುವುದು ಆತನ ಜೀವನದಲ್ಲಿ ಜಿಗುಪ್ಸೆ ಉಂಟಾಗಿದೆ.
 ಇದರಿಂದ  ಬೇಸತ್ತು ತನ್ನ ಮನೆಯ ಪಕ್ಕದಲ್ಲಿರುವ  ಹೊಂಗೆ ಮರಕ್ಕೆ ನೇಣುಬಿಗಿದು ಕೊಂಡಿದ್ದಾನೆ. ಇಮದು ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ನೋಡಿ ಸರಸ್ವತಿಪುರಂ ಠಾಣೆಗೆ ಮಾಹಿತಿ ನೀಡಿದಾಗ  ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
  ------------------------------------------------
 
 ನಗರದ ಇರ್ವಿನ್ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ಆ ರಸ್ತೆ  ಸೇರಿದಂತೆ ಯಾದವಗಿರಿಯಲ್ಲಿರುವ ರಸ್ತೆ ಹಾಗೂ ಇನ್ನಿತರ ಕಡೆಗಳಲ್ಲಿ ರಸ್ತೆ ಕಾಮಗಾರಿಗಳಿಗಾಗಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‍ರವರು ಗುದ್ದಲಿಪೂಜೆ ನಡೆಸಿದರು.

No comments:

Post a Comment