Monday 30 November 2015

ನಿರುದ್ಯೋಗಿ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ
ಮೈಸೂರು, ನವೆಂಬರ್ 30 -  ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಯಡಿ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ ಪಾಸ್/ಫೇಲಾದ ನಿರುದ್ಯೋಗಿ ಅಭ್ಯರ್ಥಿಗಳಿಗೆ 6 ತಿಂಗಳ ಸಿ.ಎನ್.ಸಿ. ಮೆಷಿನ್ ಆಪರೇಟರ್ ಹಾಗೂ 12 ತಿಂಗಳ ಟೂಲ್ ರೂಮ್ ಮೆಷಿನಿಸ್ಟ್ ತಾಂತ್ರಿಕ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
  ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಶಿಷ್ಯವೇತನದ ಸೌಲಭ್ಯ ಲಭ್ಯವಿದೆ. 18 ವರ್ಷ ತುಂಬಿದ ನಿರುದ್ಯೋಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅರ್ಜಿಯನ್ನು ಕೂಡಲೇ ಬೆಳಗೊಳ ಕೈಗಾರಿಕಾ ಪ್ರದೇಶದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸಲ್ಲಿಸಬೇಕು.
  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9141629598 ಅಥವಾ 9066710155  ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 6 ರಂದು ಡಾ. ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಸಲ್ಪಿ ಡಾ. ಬಿ.ಆರ್.ಅಂಬೇಡ್ಕರ್  ರವರ 59ನೇ ವರ್ಷದ ಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಬೆಳಿಗ್ಗೆ 9:30 ಗಂಟೆಗೆ ಟೌನ್‍ಹಾಲ್ ಆವರಣದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ  ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾಣೆಯಾದ ವ್ಯಕ್ತಿಗಳ ಪತ್ತೆಗೆ ಮನವಿ
ಮೈಸೂರು, ನವೆಂಬರ್ 30 (ಕರ್ನಾಟಕ ವಾರ್ತೆ):- ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ದಾಖಲಾದ ಕಾಣೆ ಪ್ರಕರಣಗಳಲ್ಲಿ 12 ವ್ಯಕ್ತಿಗಳ ಪತ್ತೆಯಾಗಿರುವುದಿಲ್ಲ.
  ಹೂಟಗಳ್ಳಿ ನಿವಾಸಿಗಳಾದ 40 ವರ್ಷದ ಬಿ.ಭೈರಪ್ಪ ಹಾಗೂ 58 ವರ್ಷದ  ಎಂ.ಪಿ.ಮೊಣ್ಣಪ್ಪ,  ಹೆಬ್ಬಾಳ್ ನಿವಾಸಿ 31 ವರ್ಷದ ಜಿ.ಎನ್.ಬದರಿನಾರಾಯಣ, ಬೆಳವಾಡಿ ನಿವಾಸಿ 41 ವರ್ಷದ ದೇವಪ್ಪನಾಗರಾಜು, ಮಹದೇಶ್ವರ ಬಡಾವಣೆ ನಿವಾಸಿ 75 ವರ್ಷದ ಮಾದಯ್ಯ ಮತ್ತು ಹಿನಕಲ್ ನಿವಾಸಿ 19 ವರ್ಷದ ಮನೋಜ್ .ಆರ್ ಕಾಣೆಯಾಗಿರುವವರು.
  20 ವರ್ಷದ ಮಂಗಳಗೌರಿ, 21 ವರ್ಷದ ಸೌಮ್ಯ ಟಿ.ಕೆ, 23 ವರ್ಷದ ರೀಟಾ, 23 ವರ್ಷದ ಮಂಗಳ ಎನ್ ಮಧುಮಂಗಳ, 19 ವರ್ಷದ ಕಾವ್ಯ, 21 ವರ್ಷದ ಪಿಂಕಿ, 22 ವರ್ಷದ ನಿಶಾ, 21 ವರ್ಷದ ರಾಣಿ ತುಳಸಿ ಇವರುಗಳು ಸ್ತ್ರೀ ಸೇವಾನಿಕೇತನ ಸಂಸ್ಥೆಯಿಂದ ಕಾಣೆಯಾಗಿದ್ದಾರೆ.
  ಕಾಣೆಯಾದ ವ್ಯಕ್ತಿಗಳ ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ವಿಜಯನಗರ ಪೊಲೀಸ್ ಠಾಣೆ. ದೂ.ಸಂ: 0821-2418117, 2418317, 2418517  ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 0821-241833)ಗಾಗಲಿ ತಿಳಿಸುವಂತೆ ವಿಜಯನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಕೋರಿದ್ದಾರೆ.
ಡಿಸೆಂಬರ್ 1 ರಂದು ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆ
ಮೈಸೂರು, ನವೆಂಬರ್ 3೦. ವಿಕಲಚೇತನರÀ ದಿನಾಚರಣೆ ಪ್ರಯುಕ್ತ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಡಿಸೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವಿಧದ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
  ಆಸಕ್ತರು ಸ್ಥಳದಲ್ಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಸ್ಪರ್ಧೆಗಳ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ:0821-2497496, 0821-2494104, 0821-2490111  ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment