Thursday 26 November 2015

ನಗರದಲ್ಲಿ ಇಂದು ಸಂವಿದಾನ ದಿನಾ ಆಚರಣೆ
ಮೈಸೂರು,ನ. 26- ನಗರದಲ್ಲಿ ಇಂದು ಜಿಲ್ಲಾಡಳಿತ ಹಾಗೂ ನಾಯಾಲಯದ ವತಿಯಿಂದ ಸಂವಿದಾನ ದಿನಾಚರಣೆಯನ್ನು ಆಚರಿಸುವ ಮೂಲಕ ಸಂವಿದಾನದ ಕರಡು ಪ್ರತಿಗೆ ನಮಸ್ಕರಿಸಲಾಯಿತು.
 ಭಾರರದ ಒಕ್ಕೂಟ ರಾಷ್ಟ್ರದಲ್ಲಿ ಸಂವಿದಾನಾತ್ಮಕ ಆಡಳಿತ ಜಾರಿಗೆ ಬಂದ್ದದ್ದು ಜನವರಿ 26, 1950 ಆದಿನವನ್ನು ದೇಶಾದ್ಯಂತ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ, ಅಂತೆಯೇ ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಎಲ್ಲಾ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಆಚಾರ, ವಿಚಾರ, ಅವರವರ ನಂಬಿಕೆ ಆಚರಣೆ ಗಳಿಗನುಗುಣವಾಗಿ ಡಾ. ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿದಾನದ ಕರಡು ಪ್ರತಿಗಳಿಗೆ ಹಲವಾರು ವಾರಿ ತಿದ್ದುಪಡಿ ತಂದು ಅದರಲ್ಲಿನ ಸರಿ ತಪ್ಪುಗಳನ್ನು ತಿದ್ದಿ ಸರಿಪಡಿಸಿ ಅಂತಿಮವಾಗಿ ಸಂವಿದಾನ ಒಪ್ಪಿಕೊಂಡ ದಿನ ಈ ದನ, ಆದ್ದರಿಂದಲೇ ಇಂದು ಕೇಂದ್ರ ಸರ್ಕಾರದ ವತಿಯಿಂದಲೇ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ನವೆಂಬರ್ 26ರ ಈ ದಿನವನ್ನು ಸಂವಿದಾನ ದಿನವನ್ನಾಗಿ  ಈ ವರ್ಷದಿಂದ ಆಚರಿಸಲಾಗುತ್ತದೆ.
 ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರಮೋದಿಯವರು  ನಮ್ಮ ದೇಶದ ಸಂವಿದಾನಕ್ಕೆ ಸೆಲ್ಯುಟ್ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದ್ದಾರೆ. ಅಂತೆಯೇ ಇಂದು ಮೈಸೂರು ಜಿಲ್ಲಾಧಿಕಾರಿಗಳ  ಕಚೇರಿಯಲ್ಲಿ, ಜಿಲ್ಲಾಧಿಕಾರಿ ಸಿ.ಶಿಖಾ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂವಿದಾನ ದಿನ ಆಚರಿಸಿ ಆಡಳಿತಾತ್ಮಕವಾದ ಸಂವಿದಾನ ಕರಡು ಪ್ರತಿಗೆ ನಮಿಸಿ ಗೌರವ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಮವಿದಾನಕ್ಕೆ ಗೌರವ ಸಲ್ಲಿಸಿದರು.
 ಅದೇರೀತಿ ನಗರದ ಜಿಲ್ಲಾ ನ್ಯಾಯಾಲಯದಲ್ಲೂ ಆವರಣದಲ್ಲೂ, ನ್ಯಾಯಾಧೀಶರುಗಳ ನೇತೃತ್ವದಲ್ಲಿ ವಕೀಲರುಗಳು ಸಂವಿದಾನ ಕರಡು ಪ್ರತಿಗೆ ಗೌರವ ಸಲ್ಲಿಸುವ ಮೂಲಕ ಸಂವಿದಾನ ದಿನಾಚರಣೆ  ಆಚರಿಸಿದರು. ನಂತರ ನ್ಯಾಯಾಧೀಶರು, ನೆರೆದಿದ್ದವರಿಗೆ ನಮ್ಮ ದೇಶದ ಸಂವಿದಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಈ ಸಮಯದಲ್ಲಿ ನೂರಾರು ಮಂದಿ ವಕೀಲರುಗಳು, ಕೋರ್ಟ್ ಕಲಾಪದ ಕೇಸ್‍ಗಳಿಗಾಗಿ ಹಾಜರಾಗಲು ದೂರದ ಊರುಗಳಿಂದ ಆಗಮಿಸಿದ್ದ ಕಕ್ಷಿದಾರರು ಸಾರ್ವಜನಿಕರು, ಅಧಿಕಾರಿಗಳು, ನ್ಯಾಯಾಲದ ನೌಕರರು ಹಾಜರಿದ್ದರು.
     ಕುಡಿಯುವ ನೀರಿಗಾಗಿ ಒತ್ತಾಯಿಸಿ 46ನೇ ವಾರ್ಡ್‍ನಲ್ಲಿ ಪ್ರತಿಭಟನೆ
ಮೈಸೂರು, ನ.26- ಮೈಸೂರು ನಗರದ ಹಳೆ ಕೆಸರೆ ಭಾಗದ 46ನೇ ವಾರ್ಡ್
ನಲ್ಲಿ ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗಾಗಿ ಆಗ್ರಹಿಸಿ, ಜೆಡಿಎಸ್‍ನ ಅಲ್ಪಸಂಖ್ಯಾತ ವಿಭಾಗದ ನಗರಾಧ್ಯಕ್ಷ ಅಜ್ಜು (ಅಜಿಜುಲ್ಲಾ) ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡಸಿದರು.
 ಈ ವಾರ್ಡ್ ಸದಸ್ಯರಾಗಿ ಹಸಿನಾತಾಜ್ ಪ್ರತಿನಿಧಿಸಿದ್ದಾರೆ, ಅವರು ಕಳೆದಬಾರಿ ಮೇಯರ್ ಆಕಾಂಕ್ಷಿಯೂ ಆಗಿದ್ದರು, ಅದು ಕೈ ತಪ್ಪಿದ್ದರಿಂದ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಒಂದು ವರ್ಷ ಯಶಸ್ವಿಯಾಗಿ ಆಡಳಿತ ಪೂರೈಸಿ ಉತ್ತಮ ಬಜೆಟ್ ಅನ್ನೂ ಮಂಡಿಸಿದರು. ಆದರೆ ಅವರ ವಾರ್ಡಿನಲ್ಲೇ  ಸರಿಯಾಗಿ ನೀರು ಬರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ, ಇದರಿಂದಾಗಿ ಆ ವಾರ್ಡಿನ ಪಾಲಿಕೆ ಸದಸ್ಯರು ಸೇರಿದಂತೆ ಜೆಡಿಎಸ್. ಕಾರ್ಯಕರ್ತರು, ಬಡಾವಣೆಯ ನಿವಾಸಿಗಳು ಇಂದು ಕುಡಿಯುವ ನೀರು ಸರಬರಾಜಿಗಾಗಿ ಆಗ್ರಹಿಸಿ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ
 ಇಂದು ಕೆಲಸ ಕಾರ್ಯಗಳಿಗೆ, ಶಾಲಾ-ಕಾಲೇಜುಗಳಿಗೆ, ಹೊರ ಊರುಗಳಿಗೆ ತೆರಳಬೇಕಾದ  ಸಾರ್ವಜನಿಕರು ಅಡಚಣೆ ಜೊತೆಗೆ ತೊಂದರೆ ಅನುಭವಿಸಬೇಕಾಯಿತು.
 ಪ್ರತಿಭಟನೆಯಲ್ಲಿ ಹಸಿನಾತಾಜ್, ಆಯಿಷಾಬಾನು, ಎಂ.ಡಿ. ಸಲೀಂ, ಅಕ್ರಂ, ಆಯಿಸ್‍ಪಾಷ, ಜಾನ್‍ಬಾಸ್ಕೊ, ಸಲ್ಮಾನ್, ಶಿವಣ್ಣ, ಮಂಜುಳಾ, ಸರೋಜಾ, ರೇವತಿ ಸೇರಿದಂತೆ ನೂರಾರು ಮಂದಿ ಆರ್.ಎಸ್.ನಾಯ್ಡು ನಗರದ ಜನತೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

  28 ರಿಂದ ಕನಕ ದಾಸರ ಜಯಂತ್ಯೋತ್ಸ ಆಚರಣೆ
ಮೈಸೂರು,ನ.26-ಇಲ್ಲಿನ ಸಂತ ಶ್ರೀ ಕನಕದಾಸರ ಜಯಂತೋತ್ಸವ ಸಮಿತಿ ವತಿಯಿಂದ ಇದೇ ತಿಂಗಳ 28 ರಿಂದ ಡಿ. 1ರ ವರೆಗೆ ಕನಕ ದಾಸರ 528ನೇ ಜಯಂತೋತ್ಸವ ಕಾರ್ಯಕ್ರಮವನ್ನು ಮೂರುದಿನಗಳ ಕಾಲ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ ಎಂದು ಸಮಿತಿಯ  ಪ್ರಾಧಾನ ಕಾರ್ಯದರ್ಶಿ ಬ್ಯಾಂಕ್ ಪುಟ್ಟಸ್ವಾಮಿ ತಿಳಿಸಿದರು.
 ಇಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ 28ರ ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಅಲಂಕರಿಸಿದ ಕನಕದಾಸದರ ಭಾವಚಿತ್ರವಿರಿಸಿ ಮೆರವಣಿಗೆ ಮಾಡಿಸಲಾಗುತ್ತದೆ, ಇದರ ಉದ್ಘಾಟನೆಯನ್ನು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ನೆರವೇರಿಸಲಿದ್ದಾg,É ಜಗನ್ಮೋಹನರಮನೆಯಲಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದಾರೆ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕನಕದಾಸರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಲಿದ್ದಾರೆ , ಮಾಜಿ ಸಂಸದ ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ, ಯುವ ಕಾಂಗ್ರೆಸ್ ಮುಖಂಡ ರಾಕೇಶ್‍ಸಿದ್ದರಾಮಯ್ಯ, ಮೇಯರ್ ಬಿಎಲ್.ಬೈರಪ್ಪ ಸೇರಿದಂತೆ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನ.29,30, ಡಿ.1 ರಂದು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಜೆ 5 ಗಂಟೆಗೆ ದಾಸರವಾಣಿ ಪದಗಳ ಹಾಡುಗಾರಿಕೆ, ಕಲಾವಿಧ ಶಶಿಧರ ಕೋಟೆ ವೃಂಧದವರಿಂದ ದಾಸರ ಕಿರ್ತನೆಗಳು, ಡಾ. ವಸುಂದರ ದೊರೆಸ್ವಾಮಿ ಅವರಿಂದ ಕನಕ ಕಂಡ ಕೃಷ್ಣ ಎಂಬ ನೃತ್ಯರೂಪಕ ನಡೆಯಲಿದೆ ಎಂದರು.
 ಪತ್ರಿಕಾ ಗೋಷ್ಠಿಯಲ್ಲಿ ಪಾಲಿಕೆಯ ಮಾಜಿ ಸದಸ್ಯ ಎಂ. ಶಿವಣ್ಣ, ಸಿದ್ದನಾಂಗೇಂದ್ರ, ಜೆ. ಮಹದೇವಪ್ಪ, ಎಂ. ನಾಗರಾಜು ಉಪಸ್ಥಿತರಿದ್ದರು.

 ಚೆಲುವಾಂಬ ಆಸ್ಪತ್ರೆಯಲ್ಲಿ ಮತ್ತೊಂದು ಮಗು ಸಾವು
ಮೈಸೂರು,ನ.26-ದೊಡ್ಡಾಸ್ಪತ್ರೆ ಯೆಂದೇ ಪ್ರಸಿದ್ಧಿಹೊಂದಿರುವ ಮೈಸೂರಿನ ಕೆ. ಆರ್. ಆಸ್ಪತ್ರೆಯ ಪಕ್ಕದಲ್ಲಿರುವ ಹೆರಿಗೆಗಳಿಗೆಂದೇ ಮೀಸಲಾಗಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ನಿನ್ನೆ ದಿನ ಮತ್ತೊಂದು ಮಗು ಮೃತಪಟ್ಟಿರುವ ಘಟನೆ  ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲುಕಿನ ಉಲ್ಲಹಳ್ಳಿಯ ಕಲ್ಲೇನಹಳ್ಳಿ ಗ್ರತಾಮವಾಸಿ ಗೀತಾ (24)
ಎಂಬುವರಿಗೆ ಜನಿಸಿದ ನವಜಾಥ ಶಿಶು ಮೃತಪಟ್ಟಿದೆ, ಗೀತಾ ಹೆರಿಗೆಗಾಗಿ ಕಳೆದ ಬಾನುವಾರ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿದ್ದರು, ಸೋಮವಾರ ಇವರನ್ನು ಪರೀಕ್ಷಿಸಿದ ವೈದ್ಯರು, ಮಗು ಅನಾರೋಗ್ಯದಿಂದಿದೆ ಆದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಡಿಸ್ಛಾರ್ಜ್ ಮಾಡಿದ್ದರು.
 ಆದರೆ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗು ಮೃತಪಟ್ಟಿರುತ್ತದೆ,  ಇದರಿಂದ  ಆಕ್ರೋಶಗೊಂಡ ಗೀತಾಳ ಕುಟುಂಬಸ್ತರು, ಸಂಬಧಿಕರು ಇಮದು ಚೆಲುವಾಂಬ ಆಸ್ಪತ್ರೆಮುಂದೆ  ಜಮಾಯಿಸಿ  ಮಗು ಸಾವಿಗೆ ಚೆಲುವಾಂಬ ಆಸ್ಪತ್ರೆಯ ವೈಧ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ, ಇಲ್ಲಿಗೆ ದಾಖಲಿಸಿದಾಗ ನಿಡಿದ ಚಿಕಿತ್ಸೆಗಳ ದಾಖಲಾತಿಗಳನ್ನು ನೀಡಿ ಎಂದು ಒತ್ತಾಯಿಸಿ ಕೆಲಕಾಲ ಗಲಾಟೆ ನಡೆಸಿದರು.
 ನಿನ್ನೆಯಷ್ಟೇ ಶಾಸಕ ವಾಸು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಸಿ ವೈದ್ಯರನನ್ನು ತರಾಟೆಗೆ ತೆಗೆದುಕೊಂಡು ಹೋದ ಕೆಲ ಹೊತ್ತಿನಲ್ಲೇ ಈ ಘಟನೆ ಸಂಭವಿಸಿದೆ. ಇಲ್ಲಿನ ಪರಿಸ್ಥಿತಿ ಸರಿಯಿಲ್ಲ, ಕಳೆದ 15 ದಿನಗಳಲ್ಲೇ 12 ಬಾಣಂತಿಯರು, 13 ಶಿಸುಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.     

No comments:

Post a Comment