Wednesday 30 July 2014

ಮಂಡ್ಯ- ವಿದ್ಯಾರ್ಥಿಗಳು ವಿಶ್ವದ ಪ್ರಜೆಯಾಗಬೇಕು-ಪ್ರದೀಪ್‍ಕುಮಾರ್

 ವಿದ್ಯಾರ್ಥಿಗಳು ವಿಶ್ವದ ಪ್ರಜೆಯಾಗಬೇಕು-ಪ್ರದೀಪ್‍ಕುಮಾರ್
ಮಂಡ್ಯ-ವಿದ್ಯಾರ್ಥಿಗಳು ವಿಶ್ವದ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಾವೇರಿ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲ ಪ್ರದೀಪ್‍ಕುಮಾರ್ ಅಭಿಪ್ರಾಯಪಟ್ಟರು.
ಶಾಲೆಯ ಆವರಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಆಸ್ತಿ ಆದರೆ ಸಾಲದು, ಜಾಗೃತ ಪ್ರಜೆಗಳಾಗಬೇಕು, ವಿಶ್ವದ ಪ್ರಜೆಗಳಾಗಬೇಕು, ಈ ನಿಟ್ಟಿನಲ್ಲಿ ಶಾಲೆಗಳು ಭೂನಾದಿ ಹಾಕಬೇಕು ಎಂದು ತಿಳಿಸಿದರು.
ಶಿP್ಷÀಣ ಸಂಸ್ಥೆಗಳು ಮೌಲ್ಯಾಧಾರಿತ ಶಿP್ಷÀಣ ನೀಡುವ ಮೂಲಕ ನಮ್ಮ ದೇಶದ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು, ಕೇವಲ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಮನರಂಜನೆಗೆ ಸೀಮಿತರಾಗದೇ ಅವಿಭಕ್ತಕುಟುಂದ ಕಲ್ಪನೆ ಮೂಡಿಸಬೇಕು, ಹಬ್ಬ ಹರಿದಿನಗಳ ಬಗ್ಗೆ ತಿಳಿ ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ನಾರಾಯಣ್, ಡಾ.ವಿಕ್ರಂ, ವಿಶ್ವಾಸ್, ಫಾದರ್ ಸಿಜೂಕರಿಯ ಉಪಸ್ಥಿತರಿದ್ದರು.
ಫೋಟೋ.30ಬಿಟಿಜಿ1- ಭಾರತೀನಗರದ ವೀರಶೈವ ಸಮುದಾಯ ಭವನದಲ್ಲಿ ನಡೆದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗಗುರು ಮಲ್ಲಿಕಾರ್ಜುನಾರವರಿಗೆ ಯೋಗರತ್ನ ಪ್ರಶಸ್ತಿಯನ್ನು ನೀಡಲಾಯಿತು.


ಭಾರತೀನಗರ.ಜು.30-ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ಯಾಂತ್ರಿಕ ಬದುಕು ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರು ಮನಸ್ಸನ್ನು ಗೆಲ್ಲಬೇಕಾದರೆ ಯೋಗ ಅತ್ಯವಶ್ಯಕವಾಗಿದೆ ಎಂದು ಧನಗೂರು ಮಠದ ಷಡಕ್ಷರ ಮುಮ್ಮಡಿ ದೇಶಿಕೇಂದ್ರ ಶಿವಚಾರ್ಯಸ್ವಾಮೀಜಿ ತಿಳಿಸಿದರು.
  ಇಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಪತಾಂಜಲಿ ಯೋಗಾಶ್ರಮ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಯುವಕರು ಸದೃಢರಾಗಿ ದೇಶಕಟ್ಟುವ ಕೆಲಸ ಮಾಡುವ ಬದಲು ಸೋಮಾರಿಗಳಾಗಿ ಜೀವನದ ಗುರಿಯನ್ನೇ ಮರೆತ್ತಿದ್ದಾರೆಂದು ವಿಷಾಧಿಸಿದರು.
  ಎಲ್ಲಾ ರಂಗಗಳು ಕಲುಷಿತಗೊಂಡಿವೆ. ಯೋಗದ ಶಿಬಿರದ ಮೂಲಕ ಜ್ಞಾನದ ಶಕ್ತಿಯನ್ನು ಪಡೆಯುವುದರೊಂದಿಗೆ ಚಂಚಲ ಮನಸ್ಸನ್ನು ತಡೆಹಿಡಿಯ ಬಹುದಾಗಿದೆ ಎಂದು ತಿಳುವಳಿಕೆ ನೀಡಿದರು.
  ತಾಯಿಯೇ ಮೊದಲ ಗುರು ಆಗಿರುವುದರಿಂದ ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬಹುದಾಗಿದೆ. ಆದರೆ ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಗೆ ಮೊರೆಹೋಗಿ ತಮ್ಮ ಕರ್ತವ್ಯವನ್ನೇ ಮರೆತ್ತಿದ್ದಾರೆ ಎಂದರು.
  ಮುಖ್ಯಶಿಕ್ಷಕ ಎಂ.ಮಾಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಗುರು ಮಲ್ಲಿಕಾರ್ಜುನಾಸ್ವಾಮಿ ಕೆ.ಎಂ.ದೊಡ್ಡಿಯಲ್ಲಿ 34 ಶಿಬಿರಗಳನ್ನು ಯಶಸ್ವಿಯಾಗಿ ಪೂರೈಸಿ ಯೋಗದ ಮೂಲಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿದ್ದಾರೆಂದು ಪ್ರಶಂಸಿದರು.
   ವೇಗದ ಜೀವನದಲ್ಲಿ ಮಾನವೀಯ ಸಂಬಂಧಗಳು ಹಾಗೂ ಸದ್ಗುಣಗಳು ಕಡಿಮೆಯಾಗುತ್ತಿವೆ. ನೈತಿಕ ದಿವಾಳಿ ತನ ಹೆಚ್ಚಾಗುತ್ತಾ ಹೋಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಅತ್ಯವಶ್ಯಕ ಎಂದರು.
 ಇದೇ ಸಂದರ್ಭದಲ್ಲಿ ಯೋಗಗುರು ಮಲ್ಲಿಕಾರ್ಜುನಾಸ್ವಾಮಿಗೆ ಭಾರತೀನಗರ ಯೋಗಶಿಬಿರಾರ್ಥಿಗಳಿಂದ ಯೋಗರತ್ನಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
    ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್, ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್, ವೀರಶೈವ ಸಂಘದ ಅಧ್ಯಕ್ಷ ಶಿವಣ್ಣ, ಮಾಯಪ್ಪರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
  ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಕರಾದ ಜನನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಜಗದೀಶ್,  ಬಿದರಹಳ್ಳಿ ಹನುಮೇಗೌಡ, ಯೋಗಪಟು ನಾಗಮ್ಮಮಲ್ಲಿಕಾರ್ಜುನಾಸ್ವಾಮಿ, ಸೌಮ್ಯ, ಶಶಿಕುಮಾರ್, ತಿಪ್ಪೂರು ಕೃಷ್ಣ, ಬಸವರಾಜು,  ಸೇರಿದಂತೆ ಇತರರು ಉಪಸ್ಥಿತರಿದ್ದರು.
========================================

 
 ಭಾರತೀನಗರ.ಜು.30- ದುಷ್ಕರ್ಮಿಗಳು 4 ಅಂಗಡಿಗಳ ಬಾಗಿಲು ಮುರಿದು ಸುಮಾರು 53 ಸಾವಿರ ರೂ ಹಣವನ್ನು  ದೋಚಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಕೆ.ಎಂ.ದೊಡ್ಡಿಯ ಹಲಗೂರು ರಸ್ತೆಯಲ್ಲಿ ನಡೆದಿದೆ.
   ಮಧು ಎಂಬುವವರಿಗೆ ಸೇರಿದ ಸಂತೋಷ್ ಪೀಡ್ಸ್ ಅಂಗಡಿಯಲ್ಲಿ 20 ಸಾವಿರ, ಕೃಷ್ಣಪ್ಪ ಮಾಲೀಕತ್ವದ ಸಂತೋಷ್ ಬಾರ್‍ನಲ್ಲಿ 10 ಮದ್ಯಬಾಟಲ್‍ಗಳು,  ಯೋಗೇಶ್ ಎಂಬುವವರಿಗೆ ಸೇರಿದ ಮಹಾಲಕ್ಷ್ಮಿ ಜನರಲ್‍ಸ್ಟೋರ್‍ನಲ್ಲಿ 30 ಸಾವಿರ ಹಾಗೂ ಬಸವೇಶ್ವರ ಜನರಲ್ ಸ್ಟೋರ್‍ನಲ್ಲಿ 3 ಸಾವಿರ ರೂಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
  ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್ ಆಗಮಿಸಿ ಪರಿಶೀಲನೆ ನಡೆಸಿದರು.


No comments:

Post a Comment