Monday 28 July 2014

ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರಕ್ಕೆ ಅಧ್ಯಕ್ಷರು ಮತ್ತು ಮಹಾ ನಿರ್ದೇಶಕರಾದ ವಿ.ಕಣ್ಣನ್ ಭೇಟಿ.

 ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರಗಳಿಗೆ ಭೇಟಿ
     ವಿಜಯಾ ಬ್ಯಾಂಕ್ ಅಧ್ಯಕ್ಷರು ಮತ್ತು ಮಹಾ ನಿರ್ದೇಶಕರಾದ ವಿ.ಕಣ್ಣನ್ ಅವರು ಸ್ಥಳೀಯ ವಿಜಯಾ ಬ್ಯಾಂಕ್ ಶಾಖೆಗಳು, ಲೀಡ್ ಬ್ಯಾಂಕ್, ಆರ್ಥಿ ಸೇರ್ಪಡೆ ಕೇಂದ್ರ, ಆರ್ಥಿಕ ಸೇರ್ಪಡೆ ಸಂಪನ್ಮೂಲ ಕೇಂದ್ರ ಮತ್ತು ವಿಜಯಾ ಬ್ಯಾಂಕ ಸ್ವ ಉದ್ಯೋಗ ತರಬೇತಿ ಕೇಂದ್ರಗಳಿಗೆ ಜುಲೈ 25 ರಂದು ಭೇಟಿ ನೀಡಿ ಸಂಬಂಧಪಟ್ಟ ವ್ಯವಸ್ಥಾಪಕರೊಂದಿಗೆ  ಚರ್ಚಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ರೊಂದಿಗೆ ಸಂಪೂರ್ಣ ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಅನುಷ್ಟಾನ ಕುರಿತು ಚರ್ಚಿಸಿ ಸಲಹೆ ಸಹಕಾರವನ್ನು ಕೋರಿದರು.
    ಈ ಸಂದರ್ಭದಲ್ಲಿ ಎಲ್ಲಾ ಕುಟುಂಬಗಳನ್ನು ಆರ್ಥಿಕ ಸೇರ್ಪಡೆ ಚಟುವಟಿಕೆಗಳಲ್ಲಿ ಬಾಗಿಯಾಗಲು ಸಕಾಲಕ್ಕೆ ಕೇಂದ್ರ ಸರ್ಕಾರದ ನಿಯಮಾವಳಿಯ ಪ್ರಕಾರ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
    ಈ ಸಂದರ್ಭದಲ್ಲಿ ವಿಜಯಾಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್ ಬಲ್ಲಾಳ್, ಪ್ರಾದೇಶಿಕ ವ್ಯವಸ್ಥಾಪಕರಾದ ಉದಯಕುಮಾರ್ ಶೆಟ್ಟಿ, ಮಂಡ್ಯ ಜಿಲ್ಲಾ ನಬಾರ್ಡ್‍ನ ಎಜಿಎಂ ಬಿಂದುಮಾಧವ ವಡವಿ, ಆರ್ಥಿಕ ಸೇರ್ಪಡೆ ಮುಖ್ಯಸ್ಥರಾದ ದಯಾಕರ್ ರೆಡ್ಡಿ, ಮಂಡ್ಯ ಜಿಲ್ಲಾ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಬಸವರಾಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment