Tuesday 28 April 2015

ಮೈಸೂರು

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ 
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಶಾಸಕ ಎಂ.ಕೆ. ಸೋಮಶೇಖರ್ ರಿಂದ ಘನ ತ್ಯಾಜ್ಯ ಘಟಕ ವೀಕ್ಷಣೆ
ಮೈಸೂರು, ಏ. 28- ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಕ ಎಂ.ಕೆ. ಸೋಮಶೇಖರ್ ರವರು ಇಂದು ತಮ್ಮ ಕಷೇತ್ರದ ವೀಕ್ಷಣೆಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರು.
 ನತಂರ ಅವುಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ  ಸೂಚಿಸಿದರು.
 ನಂತರ ಶಾಸಕರು ವಿದ್ಯಾರಣ್ಯಪ್ಮರಂ ವ್ಯಾಪ್ತಿಗೊಳಪಡುವ  ಸೂಯೇಜ್ ಫಾರಂ ಬಳಿಯ ಘನತ್ಯಾಜ್ಯ ಸಂಘ್ರಹ ಘಟಕ್ಕೆ ತೆರಳಿ ಅವಲೋಕಿಸಿದರು.
ದಿನೇ ದಿನೇ ನಗರದಲ್ಲಿ ಕಸ ಉತ್ಪತ್ತಿ ಹೆಚ್ಚುತ್ತಿದ್ದು, ಇದನ್ನು ವಿಲೆವಾರಿ ಮಾಡಲು ಕಷ್ಟಸಾದ್ಯವಾಗಿದೆ ಎಂದು ಬಂದ  ದೂರುಗಳ ಹಿನ್ನೆಲೆಯಲ್ಲಿ ಕಸ ಬೇರ್ಪಡಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಚಿದರ್ಭದಲ್ಲಿ ತಿಳಿಸಿದರು.
 ಕಸ ವಿಂಗಡಿಸಿ   ಇದರಿಂದ ಗೊಬ್ಬರ ಹಾಗೂ ಇಂದ£ ತಯಾರಿಕೆಗೆ  ಸರ್ಕಾರ ಯೋಜನೆ ಹಾಕಿಕೊಂಡಿದೆ  ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇವರೊಂದಿಗೆ ನಗರಪಾಲಿಕೆಯ ಅಧಿಕಾರಿಗಳು ಇದ್ದರು.
ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಪ್ರತಿಭಟನೆ
ಮೈಸೂರು,ಏ.28- ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತಾ ಕಾರ್ಯ ಕೆಲಸ ಮಾಡುತ್ತಿರುವ  ಪೌರಕಾರ್ಮಿಕರ  ಸ್ಥಿತಿ ಅತಂತ್ರವಾಗಿದೆ, ಅವರ ಬದುಕು  ಇನ್ನು ಹಸನಗಿಲ್ಲ ಸರ್ಕಾರದ  ಸೌಲಭ್ಯಗಳಿಂದ ವಚಿಚಿತರಾಗಿದ್ದಾರೆ.
 ಅವರಿಗೆ ಕೆಲಸ ಖಾಯಂ ಇಲ್ಲ, ಸಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ, ಇಎಸ್‍ಐ, ಪಿಎಫ್ ಔಲಭ್ಯಗಳು ಸಿಗಿತ್ತಿಲ್ಲ   ಇನ್ನೂ ಹಲವಾರು ಸವಲತ್ತುಗಳಿಂದ ವಂಚಿತರಾಗಿರುವ  ಇವರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯುವ ಸಲುವಾಗಿ  ನಾಳೆ ಎಲ್ಲಾ ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರೊಡಗೂಡಿ ಜಿಲ್ಲಾಧಿಕಾರಿ ಕಚೇರಿಯಿಂದ  ಜಿಲ್ಲಾ ಪಂಚಾಯಿತಿ ಕಚೇರಿವರೆಗೆ  ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್ಟಿಸ್ಟ್ ನಾಗರಾಜು  ಪತ್ರಿಕಾ ಘೋಷ್ಟಿಯಲ್ಲಿ ತಿಳಿಸಿದರು.
 ಪತ್ರಿಕಾ ಘೋಷ್ಟಿಯಲ್ಲಿ ಪರಮೇಶ್, ರಾಮಮ್ಮ,ಕುಮಾರಯ್ಯ, ಮಹದೇವು, ಮಾಳಿಗಯ್ಯ ಉಪಸ್ಥಿತರಿದ್ದರು.   

No comments:

Post a Comment