Tuesday 14 April 2015

ಮಂಡ್ಯ, ಏ.14- ಹಾಲಹಳ್ಳಿ ಸ್ಲಂ ಬೋರ್ಡ್ ನಿವಾಸಿಗಳಿಗೆ ಆರ್‍ಎವೈ ಮಾರ್ಗದರ್ಶಿ ಅನ್ವಯ ನೆಲಮಹಡಿ+1 (ಜಿ+1)  ಮನೆ ನಿರ್ಮಿಸುವುದಾಗಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಸ್ಲಂ ನಿವಾಸಿಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಅಂತ್ಯ ಗೊಂಡಿದೆ.
ಹಾಲಹಳ್ಳಿ ಸ್ಲಂಬೋರ್ಡ್ ನಿವಾಸಿಗಳಿಗೆ ರಾಜೀವ್ ಆವಾಸ್ ಯೋಜನೆಯಡಿ ಜಿ+3 ಮನೆಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದ ಕೊಳಗೇರಿ ಅಭಿವøದ್ಧಿ ಮಂಡಳಿ ನಾಲ್ಕು ದಿನಗಳ ಹಿಂದಷ್ಟೆ ಮನೆ ತೆರವುಗೊ ಳಿಸುವಂತೆ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ನಿನ್ನೆಯಿಂದ ಮಂಡ್ಯ ಸ್ಲಂ ಒಕ್ಕೂಟದ ನೇತøತ್ವದಲ್ಲಿ ಆಹೋರಾತ್ರಿ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿತ್ತು. ಅಂಬೇ ಡ್ಕರ್ ಜನ್ಮದಿನವಾದ ಇಂದು ಸಹಾ ಪ್ರತಿಭಟನೆ ಮುಂದು ವರೆದಿತ್ತು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಆಲಿಸಲು ಸಚಿವ ಅಂಬರೀಶ್ ಪ್ರತಿಭಟನಾ ಸ್ಥಳಕ್ಕೆ ಬಂದರು.
ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಸಂಚಾಲಕ ಡಾ.ವಾಸು, ಹಾಲಹಳ್ಳಿ ಸ್ಲಂ ಬೋರ್ಡ್‍ನಲ್ಲಿ ನಿರ್ಮಿಸಲಾ ಗುವ ಮನೆಗಳನ್ನು ಅಲ್ಲಿರುವ ನಿವಾಸಿಗಳಿಗೆ ಕೊಡಬೇಕು. ಹೊರಗಿನವರಿಗೆ ನೀಡಬಾರದು. ಕೊಳಗೇರಿ ಅಭಿವøದ್ಧಿ ಮಂಡಳಿ ಮನೆ ತೆರುವುಗೊಳಿಸುವಂತೆ ಸ್ಲಂ ನಿವಾಸಿಗಳಿಗೆ ನೀಡಿರುವ ನೋ ಟೀಸ್‍ನ್ನು ಮಾನ್ಯ ಮಾಡ ಬಾರದು. ಅಲ್ಲಿಯೇ ನಿವಾಸಿ ಗಳಿಗೆ ಸ್ಥಳಾವಕಾಶ ಮಾಡಿ ಕೊಡಬೇಕು. ಜಿ+3 ಮನೆ ನಿರ್ಮಿಸುವ ಬದಲು ಈಗಿರು ವಂತೆ ಜಿ+1 ಮನೆಗಳನ್ನೇ ನಿರ್ಮಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಂಬರೀಶ್ ಖಂಙ ಮಾರ್ಗದರ್ಶಿ ಅನ್ವಯ ನಿವಾಸಿಗಳ ಅಭಿಪ್ರಾಯದಂತೆ ಜಿ+1 ಮನೆ ನಿರ್ಮಿಸಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಇಲ್ಲಿ ಮನೆ ಹಂಚಿಕೆ ಮಾಡುವುದಿಲ್ಲ. ಹಾಗೆಯೇ ಮನೆ ನಿರ್ಮಿಸುವ ಸಂದರ್ಭದಲ್ಲಿ ನಿವಾಸಿಗಳಿಗೆ ಪಕ್ಕದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು. ನಿವಾಸಿಗಳ ಆಗ್ರಹದಂತೆ ಅವರ ಸಹಬಾಗಿತ್ವದಲ್ಲಿ ಮನೆ ನಿರ್ಮಿಸುವುದಾಗಿ ಸಚಿವ ಅಂಬರೀಶ್ ಭರವಸೆ ನೀಡಿದ ನಂತರ ಆಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಮಾಜಿ ಸಚಿವ ಆತ್ಮಾನಂದ, ದಸಂಸ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ಮಹದೇವು ಸ್ಲಂ ನಿವಾಸಿಗಳಿಗೆ ಬೆಂಬಲ ಸೂಚಿಸಿ ಮಾತನಾಡಿದರು. ಕರ್ನಾಟಕ ಜನಶಕ್ತಿಯ ಜಿಲ್ಲಾಧ್ಯಕ್ಷ ಕøಷ್ಣಪ್ರಕಾಶ್, ಸಂತೋಷ್, ಮಲ್ಲಿಗೆ, ಕಮಲಾ, ಸ್ಲಂ ಒಕ್ಕೂಟದ ನಾಗೇಶ್,ಸಿದ್ದರಾಜು, ಬಾಬು, ಕøಷ್ಣಪ್ಪ, ಗುಂಡ, ಮಹದೇವ, ಸೋಮಣ್ಣ, ಮುರುಳಿ, ಗವಿ, ಚೆನ್ನಮ್ಮ, ಮಂಜುಳಮ್ಮ, ಪವಿತ್ರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.

No comments:

Post a Comment