Monday 27 April 2015

ವೃದ್ದಾಪ್ಯದಲ್ಲಿರುವವರಿಗೆ ಸರ್ಕಾರ ಸವಲತ್ತು ಕಲ್ಪಿಸಬೇಕು- ಪುಷ್ಪ ಮರ್‍ನಾಥ್
ಮೈಸೂರು,ಏ.27- ಮನುಷ್ಯನಿಗೆ 55 ರಿಂದ 60 ವರ್ಷ ವಯಸ್ಸು ಮೀರಿದ ಕೂಡಲೇ  ವೃದ್ಧರು ಎಂಬ ಕಾರಣಕ್ಕೆ ಮಕ್ಕಳಿಮದ, ಸೊಸೆಯಂದಿರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾರೆ ಅಚಿಥ ಸಂದರ್ಭದಲ್ಲಿ  ಅವರಿಗೆ ಒಂಟಿತನ ಕಾಡುತ್ತಿರುತ್ತದೆ, ಯಾರಾದರೂ ಆಶ್ರಯಕ್ಕೆ ಬರಬಹುದೆಂದು ವೃದ್ಧ ಜೀವಗಳು ಹಂಬಲಿಸುತ್ತಿರುತ್ತವೆ ಆದ್ದರಿಂದ ಸರ್ಕಾರ ಇಂಥವರ ನೆರವಿಗೆ ಬರಲು ಸರ್ಕಾರ ಯೋಜೆ ರೂಪಿಸಬೆಕು ಎಂದು  ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ತಿಳಿಸಿದರು.
 ಮೈಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ  ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ, ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಎಂಬ ಕಾರ್ಯಾಗಾರ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತಮ್ಮ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ತಂದೆ ತಾಯಿಗಳು  ಆಶ್ರಯ ಕಾಣದೆ ಪರಿತಪಿಸುವಾಗ ಅವರ ಸಹಾಯಕ್ಕೆ ವ್ಯದ್ಧಾಶ್ರಮಗಳು ಬರುತ್ತವೆ, ಇವುಗಳ ನಿರ್ವಹಣೆಗೆ ದಾನಿಗಳು ಇರುತತಾರೆ ಆದರೆ ಅದು ಶಾಶ್ವತವಗಿರುವುದಿಲ್ಲ, ಆದಕಾರಣ ಸರ್ಕಾರ ಇವರ ನೆರವಿಗೆ ಬರಬೇಕು ಎಂದರು.
 ಸರ್ಕಾರ ಈಗಾಗಲೇ  ಮಕ್ಕಳ ಕಲ್ಯಾಣಕ್ಕೆ , ಮಹಿಳೇಯರ ಹಿತಕಾಯಲು, ವಿಕಲಚೇತನರ,  ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ  ಆದರೆ ಮಕ್ಕಳಿಂದ ಹೊರಹಾಕಿ ಬಂದ  ವೃದ್ಧರ ಏಳಿಗೆಗಾಗಿ  ಸಕಾರ ಯಾವುದೇ  ಯೋಜನೆ ಹಾಕಿಕೊಂಡಿಲ್ಲ ಆದ್ದರಿಂದ  ಇಚಿತಹ ನಿರ್ಗತಿಕರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಅವರಿಗೂ  ಅವರ ಜೀವಿತಾವಧಿವರೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದು  ಹೇಳಿದರು.
   ವೃದ್ಧಾಪ್ಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ, ಆದ್ದರಿಂದ ಅವರ ಆರೋಗ್ಯ ಸುಧಾರಣೆ ಅಗತ್ಯ, ಈ ಬಗ್ಗೆ ತಿಳಿಸಿಕೊಡಲು ಬ್ರಹ್ಮಕುಮಾರಿ ಸಂಸ್ಥೆ ಈ ಕಾರ್ಯಗಾರ ಏರ್ಪಡಿಸಿರುವುದು ಶ್ಲಾಘನೀಯ ಹಾಗೂ ಸ್ಮರಿಸತಕ್ಕದ್ದು  ಎಂದರು.
 ಹಿಂದೆ ಹಿರಿಯರಿಗೆ  ವೃದ್ಧರಿಗೆ ಹೆಚ್ಚು ಗೌರವ ಕೊಡುತ್ತಿದ್ದರು, ಆದರೆ ಈಗಿನ ಯುವಕರು ಹಿರಿಯರನ್ನು ಗೌರವಿಸದೇ ಅಸಗೌರವದಿಮದ ಕಾಣುತ್ತಿದ್ದಾರೆ ಈರೀತಿ ಯಾಕೆ ಆಗುತ್ತಿದೆ  ಎಂದು ಚಿಂತಿಸಿ ಯುವಕರಲ್ಲಿ ಜಾಗೃತಿಮೂಡಿಸಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 ವಿದ್ಯವಚಿತ ಹೆಣುಮಕ್ಕಳು ಕೂಡ ವಯಸ್ಸಾದ ತಮ್ಮ ಅತ್ತೆ ಮಾವಂದಿರ ಬಳಿ ತಮ್ಮ ಮಕ್ಕಳನ್ನು ಸೇರಲು ಬಿಡುವುದಿಲ್ಲ, ಕಾರಣ ಅವರ ಆರೋಗ್ಯದ ಮೇಲಿನ ಪರಿಣಾಮವಾಗಿರುತ್ತದೆ ಆದ್ದರಿಂದ ವೃದ್ಧಾಪ್ಯದಲ್ಲಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯ, ಅಲ್ಲದೇ ಮಕ್ಕಳು ತಾತ ಅಜ್ಜಿಯರೊಂದಿಗೆ  ಬೆರೆತರೆ ಮೊಮ್ಮಕ್ಕಳಿಗೆ ಪ್ರೀತಿಯಿಂದ  ಒಳ್ಳೆಯ ಸಂಸ್ಕøತಿ ಕಲಿಸುತ್ತಾರೆ, ಒಳ್ಳೆತನವನ್ನು ಹೇಳಿಕೊಡುತ್ತಾರೆ ಆದ್ದರಿಂದ ಹಿರಿಯರಿಗೆ ಪೂರಕ ಬೆಂಬಲ ಸ್ರಚಿಸುವುದು ಅಗತ್ಯ ಎಂದರಲ್ಲದೇ, ಆರೋಗ್ಯವಚಿತ ಸಮಾಜ ಪ್ರತೀ ಮನೆಯಲ್ಲೂ ಬರಬೇಕು, ಒಂಟಿತನವನ್ನು ಮೀರಿ ಜೀವನ ನಡೆಸುವುದನ್ನು ಬೆಳೆಸಿಕೊಳ್ಳಬೇಕು, 55 ಆದತಕ್ಷಣ ನನಗೆ ವಯಸ್ಸಾಯಿತು ಎಂದು ಭಾವಿಸಬಾರದು, ಆರೋಗ್ಯದಕಡೆ ಗಮನಹರಿಸಬೇಕು, ಅದಕ್ಕಾಗಿ ಇಂಥಹ ಕಾರ್ಯಗಾರಗಳು ಆಗಾಗ ನಡೆಯುತ್ತಿರಬೇಕು ಸಲಹೆ ನೀಡಿದರು.
 ಕಾರ್ಯಕ್ರಮದಲ್ಲಿ  ಗ್ಲೋಬಲ್ ಆಸ್ಪತ್ರೆಯ ವೃದ್ಧರೋಗ ತಜ್ಞ ಹಾಗೂ ಚಿಕಿತ್ಸಕ ಡಾ. ಮಹೇಶ್ ಹೇಮಾದ್ರಿ, ಬ್ರಹ್ಮಕುಮಾರಿ ವಿವಿಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಲಕ್ಷೀಜಿ, ಕಾರ್ಯದರ್ಶಿ ರಂಗನಾಥ್ ಉಪಸ್ಥಿತರಿದ್ದರು.

No comments:

Post a Comment