Sunday 26 April 2015

ಸಾಮಾಜಿಕ ಮತ್ತುಶೈಕ್ಷಣಿಕ ಸಮೀಕ್ಷೆ: ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಪರಿಶೀಲನೆ
ಮಂಡ್ಯ.ಏ.26.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಲೆಮಾರಿ ಜನಾಂಗದವರನ್ನು ನಿರ್ಲಕ್ಷ ವಹಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ಅಲೆಮಾರಿ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದರು.

  ಗಣತಿದಾರರು ಬಂದು ಮಾಹಿತಿ ಪಡೆದರು ಎಂದು ಅಲೆಮಾರಿಗಳು ಸಚಿವರಿಗೆ ತಿಳಿಸಿದರು. ಬಳಿಕ ಗಣತಿದಾರರಿಗೆ ಸೂಚನೆ ನೀಡಿದ ಸಚಿವರು, ಅಲೆಮಾರಿಗಳು ಯಾವ ಜಾತಿಗೆ ಸೇರಿದವರು ಎಂಬುದನ್ನು ನಿಖರ ಮಾಹಿತಿ ದಾಖಲು ಮಾಡಬೇಕು ಎಂದರು.

   ಅಲೆಮಾರಿ ಮತ್ತು ಹಕ್ಕಿಪಿಕ್ಕಿ ಜನಾಂಗದವರ ಶೈP್ಷÀಣಿಕ ಮಟ್ಟ, ಕುಡಿವ ನೀರಿನ ಸ್ಥಿತಿ ಬಗ್ಗೆ ಮಾಹಿತಿ ಇರಬೇಕು. ರೈಲ್ವೆ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಭಿಕ್ಷೆ ಬೇಡುವವರನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

    . ಗಾಮನಹಳ್ಳಿಯ ಕೆರೆ ದಡದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ಕುಡಿವ ನೀರು ಸೇರಿದಂತೆ ಯಾವೊಂದು ಸೌಲಭ್ಯಗಳಿಲ್ಲದೆ ನೆಲೆಸಿz್ದÁರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಗ್ರಾಮದಲ್ಲಿರುವ 10 ಕುಟುಂಬಗಳಿಗೆ ತP್ಷÀಣವೇ ನಿವೇಶನ ಗುರುತಿಸಿ ನಿರ್ಮಿತಿ ಕೇಂದ್ರ ಅಥವಾ ಭೂ ಸೇನಾ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಿದ್ದರು.

 . ಅಲೆಮಾರಿ ಜನಾಂಗದವರಿಗೆ ಮನೆ ನಿರ್ಮಿಸಲು ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶೇಷ ಅನುದಾನ ನೀಡಲಾಗುತ್ತಿದೆ. ಸಾಮಾನ್ಯ ಬಡವರಿಗೆ 1.20 ಲಕ್ಷ ರೂ ನೀಡಲಾಗುತ್ತದೆ. ಆದರೆ ಅಲೆಮಾರಿ ಜನಾಂಗದವರಿಗೆ ವಿಶೇಷವಾಗಿ 1.50 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದರು.

ಅಲೆಮಾರಿ ಜನಾಂಗದವರು ವ್ಯವಸಾಯ ಮಾಡಲು ಇಚ್ಛಿಸಿದರೆ ಬೇಸಾಯಕ್ಕೆ ಅವಶ್ಯವಿರುವ ಭೂಮಿ ಕೊಡುವಂತೆ, ಅದಕ್ಕೆ ಸೂಕ್ತವಾದ ಭೂಮಿ ಗುರುತಿಸುವ ಕೆಲಸಕ್ಕೆ ಮುಂದಾಗುವಂತೆಯೂ ಸಚಿವ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ, ಜಿಪಂ ಮಾಜಿ ಅಧ್ಯP್ಷÀ ಲಿಂಗಯ್ಯ ಹಾಜರಿದ್ದರು.

No comments:

Post a Comment