Friday 24 April 2015

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ನವದೆಹಲಿ.24 ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ  ವಿಶೇಷ ಸಾಧನೆಗೈದ ಕರ್ನಾಟಕ ರಾಜ್ಯದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ     ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಪಂಚಾಯತ್ ದಿನಾಚಣೆಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಂದ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀಹೆಚ್ಕೆ.ಪಾಟೀಲ್  ಅವರು ಪ್ರಶಸ್ತಿಯನ್ನು  ಸ್ವೀಕರಿಸಿದ ನಂತರಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿಮತ್ತು  ಪಂಚಾಯತ್ ರಾಜ್ ಇಲಾಖೆಯು ಹಣಕಾಸು ನಿರ್ವಹಣೆ ವಿಭಾಗದಲ್ಲಿ ಪ್ರಥಮ ಸ್ಥಾನ,   ಪಾಲಿಸಿ ಡೆವಲೂಷನ್ ಸೂಚ್ಯಾಂಕ ವಿಭಾಗದಲ್ಲಿ   2 ನೇಸ್ಥಾನವನ್ನು ಪಡೆದಿದೆ.  ಎಲ್ಲಾ ಕ್ಷೇತ್ರಗಳ ಸರಾಸರಿ ವಿಭಾಗದಲ್ಲಿ  3 ನೇ ಸ್ಥಾನಪಡೆದಿದೆ.  ವಿಕೇಂದ್ರಿಕಣದ ಮೂಲಕ  ಯೋಜನೆಗಳ ಅನುಷ್ಠಾನ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದೆ.  ಕೇರಳ ರಾಜ್ಯವು ಪ್ರಥಮ ಸ್ಥಾನದಲ್ಲಿದೆಪ್ರಧಾನ ಮಂತ್ರಿಗಳು ರಾಜ್ಯದ ಸಾಧನೆಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಪಂಚಾಯತ್ ಸಂಸ್ಥೆಗಳು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಯುಸಂದಿದೆ.  ಎಲ್ಲಾ ಪಂಚಾಯತ್ ಸಂಸ್ಥೆಗಳ ಅಧ್ಯಕ್ಷರುಪದಾಧಿಕಾರಿಗಳನ್ನು ಅಭಿನಂದಿಸಿದರು
ರಾಜ್ಯದ ಆರ್ಡಿಪಿಆರ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,ಕುಡಿಯುವ ನೀರುನೈರ್ಮಲ್ಯರಸ್ತೆ ನಿರ್ಮಾಣ ,  ರುದ್ರಭೂಮಿ ನಿರ್ಮಾಣರೈತರ ಕಣ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿಅನುಷ್ಠಾನಗೊಳಿಸುತ್ತಿದೆವೈಯಕ್ತಿಕ  ಹಾಗು ಸಮುದಾಯದ ವಿಭಾಗದಡಿಯೋಜನೆಗಳನ್ನು ಸಮರ್ಪಕವಾಗಿ  ಅನುಷ್ಠಾನಗೊಳಿಸುತ್ತಿದೆಸಾಕ್ಷರತಾ ಪ್ರಮಾಣಹೆಚ್ಚಾಗಿರುವ    ಕೇರಳ ರಾಜ್ಯದೊಂದಿಗೆ ಆರೋಗ್ಯಕರ ಹಾಗು ಸ್ಪರ್ಧಾತ್ಮಕವಾಗಿಕಾರ್ಯನಿರ್ವಹಿಸಲಾಗುತ್ತದೆಜಿಲ್ಲಾ ಪಂಚಾಯತ್ , ತಾಲೂಕ ಪಂಚಾಯತ್ ,ಗ್ರಾಮ ಪಂಚಾಯತ್ ವಿಭಾಗದಲ್ಲೂ  ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಲೋಪದೋಷಗಳನ್ನು ಸರಿಪಡಿಸಿ ಯಾವುದೇ ದುರುಪಯೋಗವಾಗದಂತೆಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.   

No comments:

Post a Comment