Wednesday 8 April 2015

“ಕೊರಮ” ಎಂದು ನಮೂದಿಸುವಂತೆ ಜಿಲ್ಲಾ ಕುಳುವ ಸಮಾಜ ಮನವಿ
ಮಂಡ್ಯ: ಏಪ್ರಿಲ್ 11 ರಿಂದ 30ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಳುವ ಸಮಾಜದ ಬಂಧುಗಳು ಉಪ ಜಾತಿ ಕಲಂನಲ್ಲಿ “ಕೊರಮ” ಎಂದು ನಮೂದಿಸಬೇಕು ಎಂದು ಮಂಡ್ಯ ಜಿಲ್ಲಾ ಕುಳುವ ಸಮಾಜ ಮನವಿ ಮಾಡಿದೆ.
ಮುಂಬರುವ ದಿನಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಈ ಸಮೀಕ್ಷೆ ಪ್ರಮುಖವಾದುದರಿಂದ ಜಿಲ್ಲೆಯ ಎಲ್ಲ ಕುಳುವ ಬಂಧುಗಳು ಎಚ್ಚರಿಕೆಯಿಂದ ಯಾವುದೇ ಪಂಗಡ,ಬೆಡಗುಗಳನ್ನು ನಮೂದಿಸದೆ “ಕೊರಮ” ಎಂದಷ್ಟೇ ನಮೂದಿಸಬೇಕು ಎಂದು ಜಿಲ್ಲಾ ಕುಳುವ ಸಮಾಜದ ಮುಖಂಡ ಗಣಂಗೂರು ವೆಂಕಟೇಶ್, ಸೋಮಶೇಖರ್ ತಿರುಮಲಾಪುರ, ಚಾಮಲಾಪುರ ರಾಮಕೃಷ್ಣ, ಮಾಲಗಾರನಹಳ್ಳಿ ವೆಂಕಟೇಶ್, ಗವಿರಂಗ ಮತ್ತಿತರ ಮುಖಂಡರು ಪ್ರಕಟಣೆಯಲ್ಲಿ ಕೋರಿದ್ದಾರೆ.

No comments:

Post a Comment