Sunday 7 February 2016

ಫೆ. 17 ರಂದು ಏರ್‍ಮೆನ್ ನೇಮಕಾತಿಗೆ ರ್ಯಾಲಿ.
      ಭಾರತೀಯ ವಾಯುಪಡೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಿನಾಂಕ: 17-02-2016 ರಂದು ‘ವೈ’ ಗುಂಪಿನ ಆಟೋಮೋಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್.(ಪೊಲೀಸ್) ಹಾಗೂ ವೈ’ ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಏರ್‍ಮೆನ್ ನೇಮಕಾತಿಗೆ ರ್ಯಾಲಿ ಆಯೋಜಿಸಿದೆ.
     ಅರ್ಜಿ ಸಲ್ಲಿಸುವವರು ದಿನಾಂಕ:  01-08-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿರಬೇಕು. ಆಟೋಮೋಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್.(ಪೊಲೀಸ್)  ಹುದ್ದೆಗಾಗಿ ರ್ಯಾಲಿಯಲ್ಲಿ ಭಾಗವಹಿಸುವವರು  ಕನಿಷ್ಠ ಶೇ.50 ಅಂಕಗಳೊಂದಿಗೆ ಪಿ.ಯು.ಸಿ. ಪಾಸಗಿರಬೇಕು. ಇಂಗ್ಲೀಷ್‍ನಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಾಗಿ ರ್ಯಾಲಿಯಲ್ಲಿ ಭಾಗವಹಿಸುವವರು ಕನಿಷ್ಠ ಶೇ. 50 ಅಂಕಗಳೋಂದಿಗೆ ಪಿ.ಯು.ಸಿ. ಪಾಸಗಿರಬೇಕು. ಹಾಗೂ ಭೌತಶಾಸ್ತ್ರ/ ರಸಾಯನಶಾಸ್ತ್ರ/ ಜೀವಶಾಸ್ತ್ರ ಮತ್ತು ಇಂಗ್ಲೀಷ್ ವಿಷಯದಲ್ಲಿ ಕನಿಷ್ಠ ಶೇ. 50 ಅಂಕಗಳೋಂದಿಗೆ ಪಾಸಗಿರಬೇಕು.
      ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮೂಲ  ಅಂಕಪಟ್ಟಿ, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಜೊತೆ ಜೆರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳೊಂದಿಗೆ ದಿನಾಂಕ:17/02/2016 ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಸ್ಪೋಟ್ಸ್ ಸ್ಟೇಡಿಯಂ ನಜರ್‍ಬಾದ್, ಮೈಸೂರು ಇಲ್ಲಿ ಹಾಜರಾಗುವುದು.
       ಅರ್ಹತಾ ನಿಬಂಧನೆಗಳು,ವೈದ್ಯಕೀಯ ಪ್ರಮಾಣಗಳು, ಬೇಕಾಗಿರುವ ದಾಖಲೆಗಳು, ಆಯ್ಕೆ ವಿಧಾನ ಮುಂತಾದ ವಿವರಗಳಿಗೆ ಭಾರತೀಯ ವಾಯುದಳದ ವೆಬ್‍ಸೈಟ್ ವಿಳಾಸ: ತಿತಿತಿ.ಚಿiಡಿmeಟಿseಟeಛಿಣioಟಿ.gov.iಟಿ  ಗೆ ಭೇಟಿ ನೀಡಿ ಅಥವಾ 7 ಂiಡಿmeಟಿ Seಟeಛಿಣioಟಿ ಅeಟಿಣಡಿe,ಓo.1, ಅubboಟಿ Pಚಿಡಿಞ ಖoಚಿಜ,ಃಚಿಟಿgಚಿಟoಡಿe-560001 ಈ ಕಛೇರಿ ದೂರವಾಣಿ ಸಂಖ್ಯೆ:080-25592199 ಗೆ ಸಂಪರ್ಕಿಸಬಹುದು.
ಪ್ರವಾಸ ಕಾರ್ಯಕ್ರಮ
   ಮೈಸೂರು,ಫೆ.06.ಕಾನೂನು ಆಯೋಗದ ಅಧ್ಯಕ್ಷ ನಾಡೋಜ ಡಾ: ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು ಫೆಬ್ರವರಿ 7 ರಿಂದ 9 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅವರು ಫೆಬ್ರವರಿ 7 ರಂದು ರಾತ್ರಿ 12-30 ಕ್ಕೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 8 ರಂದು ಬೆಳಿಗ್ಗೆ 10-30ಕ್ಕೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಕ್ಯಾನ್ಸರ್ ಸ್ಕ್ರಿನಿಂಗ್ ಕ್ಯಾಂಪ್‍ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಫೆಬ್ರವರಿ 9 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ.



ಪ್ರವಾಸ ಕಾರ್ಯಕ್ರಮ
    ಮೈಸೂರು,ಫೆ.06-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ್ ಅವರು ಫೆಬ್ರವರಿ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅವರು ಅಂದು ಬೆಳಿಗ್ಗೆ 10 ಗಂಟೆಗೆ ಬಂಬೂ ಬಜಾರ್‍ನಲ್ಲಿರುವ ಪೌರಕಾರ್ಮಿಕರ ಕಾಲೋನಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಮಹಾನಗರಪಾಲಿಕೆಯಲ್ಲಿ ಪೌರಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಮನವಿ
      ಮೈಸೂರು,ಫೆ.06.(ಕ.ವಾ.)-ಮೈಸೂರು ನಗರದ ನಿಮಿಷಾಂಬ ಬಡಾವಣೆಯ 32 ವರ್ಷದ  ಶಿವರಾಜ್ ಎಂ.ಎಸ್. ಜನವರಿ 4 ರಿಂದ ಕಾಣೆಯಾಗಿದ್ದಾರೆ. ಮಾಹಿತಿ ದೊರೆತಲ್ಲಿ ಹತ್ತಿರ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 9448424478, 9972635222 ನ್ನು ಸಂಪರ್ಕಿಸಲು ಕೋರಿದೆ.
                  ಆದರ್ಶ ಶಾಲೆ: ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
   
   ಮೈಸೂರು,ಫೆ.06.ಮೈಸೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ 2016-17ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಗೆ  ಅರ್ಜಿ ಆಹ್ವಾನಿಸಿದೆ.
      ಮೈಸೂರು ನಗರ ಹಾಗೂ ಮೈಸೂರು ತಾಲ್ಲೂಕಿನ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಉಚಿತವಾಗಿ ಸರ್ಕಾರಿ ಆದರ್ಶ ವಿದ್ಯಾಲಯ ಹಳೇ ಕೃಷ್ಣಮೂರ್ತಿಪುರಂ 6ನೇ ಕ್ರಾಸ್, ಮೈಸೂರು ಮತ್ತು ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು 18/02/2016ರ 3.00 ಗಂಟೆಯೊಳಗಾಗಿ ಸಲ್ಲಿಸುವುದು ಎಂದು ಮೈಸೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಬಿ.ಎನ್. ಶಿವರಾಮೇಗೌಡ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನ: ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಿ
     ಮೈಸೂರು,ಫೆ.06.-2015-16 ನೇ ಸಾಲಿನಲ್ಲಿ 9, 10 ನೇ ತರಗತಿ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕಾಗಿ hಣಣಠಿs://sಛಿhoಟಚಿಡಿshiಠಿs.gov.iಟಿ  ಮೂಲಕ ಹೆಸರು ನೊಂದಾಯಿಸಿಕೊಳ್ಳಬೇಕಿರುತ್ತದೆ. 2015-16 ಶೈಕ್ಷಣಿಕ ಸಾಲು ಮುಕ್ತಾಯಗೊಳ್ಳುತ್ತಿದ್ದು, ಶಾಲಾ/ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿವೇತನದ ಬಗ್ಗೆ ಗಮನ ಹರಿಸಿ ತುರ್ತಾಗಿ ಪರಿಶೀಲಿಸಿ ಮುಂದಿನ ಹಂತಕ್ಕೆ ಕಳುಹಿಸಿಕೊಡುವುದು. ಅರ್ಜಿ ಪರಿಶೀಲನೆಗೆ ಸಂಬಂಧಿಸಿದಂತೆ ಶಾಲಾ/ಕಾಲೇಜು ಮುಖ್ಯಸ್ಥರಿಗೆ ಸಮಸ್ಯೆಗಳಿದ್ದಲ್ಲಿ ಇ-ಮೇಲ್ ವಿಳಾಸ ಟಿsಠಿsಣmಥಿsoಡಿe@gmಚಿiಟ.ಛಿom  ಗೆ ವಿದ್ಯಾರ್ಥಿ, ಶಾಲಾ/ಕಾಲೇಜು ವಿವರ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಕಳುಹಿಸಿಕೊಡುವುದು.
       ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಅಥವಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಅಥವಾ ಯೋಜನಾ ಸಮನ್ವಾಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ದೂರವಾಣಿ ಸಂಖ್ಯೆ 0821-2427140 ಯನ್ನು ಸಂಪರ್ಕಿಸುದು.




























No comments:

Post a Comment