Monday 1 February 2016

ಹಳ್ಳಕ್ಕೆ ಉರುಳಿ ಬಿದ್ದ ಟಾಟಾ ಸುಮೋ.. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ ಅಣೆಬೆ ಹೋಟೇಲ್ ಸಮೀಪ ದುರ್ಘಟನೆ... ಓರ್ವ ಯುವಕ ಸಾವು, ಮೂವರಿಗೆ ಗಂಭೀರ ಗಾಯ... ಮಧ್ಯರಾತ್ರಿ ಮುಂಜಾನೆ ೨ಗಂಟೆಯಲ್ಲಿ ನಡೆದಿರುವ ಘಟನೆ.  ಮೃತ ಯುವಕ ಮದ್ದೂರು ತಾಲ್ಲೂಕಿನ, ಚಾಮನಹಳ್ಳಿ ಗ್ರಾಮದ ಚೇತನ( 22)... ಪ್ರದೀಪ್(23) ಪ್ರತಾಪ್(25) ಭರತ್(26) ಗಾಯಗೊಂಡವರು... ಗಾಯಾಳುಗಳು ಮಂಡ್ಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು  ... ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...

ಸಾಲಬಾಧೆ,  ರೈತ ಆತ್ಮಹತ್ಯೆ.. ಮದ್ದೂ ತಾಲೂಕಿನ ಸೊಳ್ಳೆಪುರದಲ್ಲಿ ಸಾಲಬಾಧೆ ತಾಳಲಾರದೆ ರಾಜಣ್ಣ (೫೪) ಜಮೀನಿನ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ... ಎಸ್. ಬಿ. ಐ ಬ್ಯಾಂಕ್ ನಲ್ಲಿ ೭೦ ಸಾವಿರ, ಸೊಸೈಟಿಯಲ್ಲಿ ೩೦ ಸಾವಿರ, ಕೈಸಾಲ ೨ ಲಕ್ಷ ಸಾಲ ಮಾಡಿದ್ದರು...  ೧ ಎಕರೆ ೪ ಗುಂಟೆ ಜಮೀನಿನಲ್ಲಿ ಭತ್ತ ರಾಗಿ ಬೆಳೆದಿದ್ದರು..  ನಾಲ್ಕು ಹೆಣ್ಣು ಮಕ್ಕಳು...  ಇಬ್ಬರಿಗೆ ಮದುವೆಯಾಗಿತ್ತು ... ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

No comments:

Post a Comment