Monday 1 February 2016

ಮೈಸೂರು,ಫೆ.01.-ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮೈಸೂರು ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ ನಾಲ್ಕು ಪರದೆಗಳಲ್ಲಿ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಫೆಬ್ರವರಿ 2 ರಂದು ಪ್ರದರ್ಶನಗೊಳ್ಳುವ ಚಲನಚಿತ್ರಗಳ ವಿವರ ಇಂತಿದೆ.
    ಸ್ಕ್ರೀನ್ 1: ಬೆಳಿಗ್ಗೆ 10 ಗಂಟೆಗೆ ಇರಾಕ್‍ನ ಎ ಟೇಲ್ ಆಫ್ ಲವ್, ಮಧ್ಯಾಹ್ನ 12-30 ಗಂಟೆಗೆ  ಮಲಯಾಳಂನ  ಚಾಲಿ ಪೋಲಿಲು,  ಮಧ್ಯಾಹ್ನ 3 ಗಂಟೆಗೆ ಮರಾಠಿಯ  ದಿ ಸೈಲೆನ್ಸ್, ಸಂಜೆ 5-30 ಗಂಟೆಗೆ ಫ್ರಾನ್ಸಿನ ಮುಸ್ಟಂಗ್, ಹಾಗೂ ರಾತ್ರಿ 7-45ಕ್ಕೆ ಕನ್ನಡದ ವಿದಾಯ ಚಲನಚಿತ್ರ ಪ್ರದರ್ಶನವಾಗಲಿದೆ.  
    ಸ್ಕ್ರೀನ್ 2 : ಬೆಳಿಗ್ಗೆ 10-10 ಗಂಟೆಗೆ ಬಂಗಾಳಿಯ ದ ಡಾಕ್‍ಬಾಕ್ಷೋ, ಮಧ್ಯಾಹ್ನ 12-45ಕ್ಕೆ ಕಜಾಕಿಸ್ಥಾನ್ ಸ್ಟೇಂಜರ್, ಮಧ್ಯಾಹ್ನ 3-15ಕ್ಕೆ  ಕಜಾಕಿಸ್ಥಾನ್ ವೊಲ್ಕೆನೊ, ಸಂಜೆ 5-45ಕ್ಕೆ ಫಿಲಿಪೈನ್ಸ್‍ನ ಪ್ಯಾಟ್ರೋಲ್, ರಾತ್ರಿ 8 ಗಂಟೆಗೆ ಇಟಲಿಯ ಮೈ ಮದರ್ ಚಲನಚಿತ್ರ ಪ್ರದರ್ಶನವಾಗಲಿದೆ.
    ಸ್ಕ್ರೀನ್ 3 : ಬೆಳಿಗ್ಗೆ 10-20ಕ್ಕೆ ಫ್ರಾನ್ಸ್‍ನ ಡೈರಿ ಆಫ್ ಎ ಛೇಂಬರ್ ಮೈಡ್, ಮಧ್ಯಾಹ್ನ 1-15ಕ್ಕೆ        ಮಧ್ಯಾಹ್ನ 3-45ಕ್ಕೆ  ಐಲ್ಯಾಂಡ್‍ನ  ರ್ಯಾಮ್ಸ್, ಸಂಜೆ 6 ಗಂಟೆÉ ತೈವಾನ್ ದಿ ಅಸ್ಸಾಸಿನ್, ರಾತ್ರಿ 8-15ಕ್ಕೆ ಕೊಸೋವೂದ  ದ ಹಿರೋ ಚಲನಚಿತ್ರ ಪ್ರದರ್ಶನವಾಗಲಿದೆ.
     ಸ್ಕ್ರೀನ್ 4 : ಬೆಳಿಗ್ಗೆ 10-30 ಗಂಟೆಗೆ ಇರಾನ್ ಡೌರಿಸ್ ಶುಗರ್ ಬೌಲ್, ಮಧ್ಯಾಹ್ನ 1-30ಕ್ಕೆ ಇರಾನ್‍ನ  ದಿ ಲಾಂಗ್ ಫೇರ್‍ವೆಲ್, ಸಂಜೆ 4 ಗಂಟೆಗೆ ಕೈರಗಿಸ್ತಾನ ಅಂಡರ್ ಹೆವನ್,  ಸಂಜೆ 6-15ಕ್ಕೆ ಪ್ಯಾಲಿಸ್ಟೇನ್  ಡಿಗ್ರೇಡ್ ಚಲನಚಿತ್ರಗಳು ಪ್ರದರ್ಶನವಾಗಲಿದೆ.
ಜಿಲ್ಲಾ/ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ: ಜಿಲ್ಲಾ ಮಟ್ಟದ ಸಮಿತಿ ರಚನೆ
    ಮೈಸೂರು,ಫೆ.01.ಜಿಲ್ಲಾ/ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ-2016ರ ಚುನಾವಣೆಗೆ ಸ್ಪರ್ಧಿಸುವ  ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಪತ್ರಿಕಾ, ಶ್ರವಣ ಮತ್ತು ದೃಶ್ಯ ಮಾಧ್ಯಮಗಳಾದ ಟಿವಿ/ಕೇಬಲ್ ಟಿವಿ ಹಾಗೂ ದೂರದರ್ಶನದ ಮೂಲಕ ಮಾಡುವ ಪ್ರಚಾರಗಳಲ್ಲಿ ದೇಶದ ಕಾನೂನು ಉಲ್ಲಂಘನೆಯಾಗುವುದು, ನೈತಿಕತೆ, ಸಭ್ಯತೆ, ಸೂಕ್ಷ್ಮತೆ ಮೀರುವಂತಹ ಅಂಶಗಳನ್ನು ಪ್ರಚಾರಗಳಲ್ಲಿ ಭಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ದಕ್ಕೆ ತರುವುದನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ರಚಿಸಿರುತ್ತಾರೆ.
ಈ ಸಮಿತಿಯಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಮೈಸೂರು ಅಪರ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು, ಮೈಸೂರು ಉಪವಿಭಾಗಾಧಿಕಾರಿಗಳು ಹಾಗೂ ಮೈಸೂರು ತಾಲ್ಲೂಕು ತಹಶೀಲ್ದಾರರ್ ಸದಸ್ಯರಾಗಿ  ಮೈಸೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮೈಸೂರು ಜಿಲ್ಲೆಯ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂಪಾದಕರು / ಮಾಲೀಕರು / ವ್ಯವಸ್ಥಾಪಕರು ಜಿಲ್ಲಾ ಸಮಿತಿಯ ಅನುಮತಿ ಇಲ್ಲದೇ ಯಾವುದೇ ಅಭ್ಯರ್ಥಿ / ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಪ್ರಚಾರ ಜಾಹಿರಾತುಗಳನ್ನು ಸಮಿತಿ ಅನುಮೋದನೆ ಇಲ್ಲದಿದ್ದಲ್ಲಿ ತಮ್ಮ ಮಾಧ್ಯಮದಲ್ಲಿ ಪ್ರಕಟಿಸದಂತೆ ಕೋರಲಾಗಿದೆ.
ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು / ಅಭ್ಯರ್ಥಿಗಳಿಂದ ಜಿಲ್ಲಾ ಸಮಿತಿಯ ಸಂಚಾಲಕರಿಗೆ  (ಉಪನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ) ಅನುಬಂದ -1 ರಲ್ಲಿ ಅರ್ಜಿ ಸಲ್ಲಿಸಬೇಕು.
ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆರವರಿಗೆ ಅಂತಹ ಪ್ರಚಾರದ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಮೂರು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಬೇರೆ ಯಾವುದೇ ವ್ಯಕ್ತಿಯಾದ ಸಂದರ್ಭದಲ್ಲಿ ಅಥವಾ ನೊಂದಾಯಿತವಲ್ಲದ ರಾಜಕೀಯ ಪಕ್ಷವಾದಲ್ಲಿ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಏಳು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಸಿದ್ದತೆ ಪ್ರಾರಂಭ
ಮೈಸೂರು,ಫೆ.01.ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಸಾರ್ವತ್ರಿಕ ಚುನಾವಣೆ 2016ಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ದಿನಾಂಕ:18.01.2016 ರಿಂದ 24.02.2016ರವರೆಗೆ ನೀತಿ ಸಂಹಿತೆಯು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಉನ್ನತೀಕರಿಸಿ ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ನೀತಿ ಸಂಹಿತೆ ಇರುತ್ತದೆ. ಉಳಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
ನೀತಿ ಸಂಹಿತೆಯು ನಗರ / ಪಟ್ಟಣ ಪ್ರದೇಶಗಳಿಗೆ ಅನ್ವಯಿಸುವುದಿಲ್ಲವಾದರೂ, ನಗರ/ ಪಟ್ಟಣ ವಾಸಿಗಳಾಗಿದ್ದು, ಅವರು ಗ್ರಾಮೀಣ ಪ್ರದೇಶದಲ್ಲಿ ಮತದಾರರಾಗಿರುವವವರಿಗೆ ಹಣ, ಮದ್ಯ ಇತ್ಯಾದಿ ವಸ್ತುಗಳ ಆಮಿಶಗಳನ್ನು ನೀಡಿ ಅಕ್ರಮ ಮತದಾನಕ್ಕೆ ಓಲೈಸುವುದು, ಗ್ರಾಮಾಂತರ ಪ್ರದೇಶದ ವಾಸಿಗಳನ್ನು/ ಮತದಾರರನ್ನು ನಗರ/ ಪಟ್ಟಣ ಪ್ರದೇಶಕ್ಕೆ ಕರೆತಂದು ಅವರಿಗೂ ಸಹ ಹಣ, ಮದ್ಯ ಮತ್ತು ಇತರೆ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಲ್ಲಿ ಭಾರತೀಯ ದಂಡ ಸಂಹಿತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದನ್ವಯ ಭ್ರಷ್ಟಾಚಾರವೆಂದು ಪರಿಗಣಿಸಿ ಅಂತಹವರ ವಿರುದ್ಧ ದೂರು ದಾಖಲಿಸಲಾಗುವುದು.
ಇಂತಹ ಪ್ರಕರಣ ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅಥವಾ ಯಾವುದೇ ರೀತಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಈ ಕೆಳಕಂಡ ಕಂಟ್ರೋಲ್ ರೂಂ ಅಥವಾ ಸಂಬಂದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಜಿಲ್ಲಾ ನಿಯಂತ್ರಣ ಕೊಠಡಿ
1077
ಮೈಸೂರು ತಾಲ್ಲೂಕು
0821-2414811
ನಂಜನಗೂಡು ತಾಲ್ಲೂಕು
08221-223108
ಟಿ.ನರಸೀಪುರ ತಾಲ್ಲೂಕು
08227-260210
ಹುಣಸೂರು ತಾಲ್ಲೂಕು
08222-252040
ಕೆ.ಆರ್.ನಗರ ತಾಲ್ಲೂಕು
08223-262371
ಪಿರಿಯಾಪಟ್ಟಣ ತಾಲ್ಲೂಕು
08223-274007
ಹೆಚ್.ಡಿ.ಕೋಟೆ ತಾಲ್ಲೂಕು
08228-255325

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ಮಾಹಿತಿ
ತಾಲ್ಲೂಕಿನ ಹೆಸರು
ಚುನಾವಣಾಧಿಕಾರಿಗಳ ಹೆಸರು ಹುದ್ದೆ ಮತ್ತು ಪದನಾಮ
ಶ್ರೀಯುತರು
ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು
ನಾಮಪತ್ರ ಸ್ವೀಕರಿಸುವ ಸ್ಥಳ
ಮೈಸೂರು
ಸಿ.ಎಲ್.ಆನಂದ್
ಉಪವಿಭಾಗಾಧಿಕಾರಿಗಳು
ಮೈಸೂರು ಉಪವಿಭಾಗ
ಮೈಸೂರು
(ಮೊ: 95358-70900)
1. ಇಲವಾಲ
2. ಹಿನಕಲ್
3. ಸಿದ್ದಲಿಂಗಪುರ
4. ಬೀರಿಹುಂಡಿ(ಮಲ್ಲಹಳ್ಳಿ)
5. ವರುಣ
6. ಜಯಪುರ
7. ಕಡಕೊಳ
8. ಹೂಟಗಳ್ಳಿ
9. ಶ್ರೀರಾಂಪುರ
10. ಹಾರೋಹಳ್ಳಿ(ಮೆಲ್ಲಹಳ್ಳಿ)
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಟಿ.ನರಸೀಪುರ
ಶಶಿಧರ್
ಸಹಕಾರ ಸಂಘಗಳ ಉಪ ನಿಬಂಧಕರು
ಮೈಸೂರು
(ಮೊ: 94489-28132)
11. ತುರುಗನೂರು
12. ಸೋಮನಾಥಪುರ
13. ಸೋಸಲೆ
14. ತಲಕಾಡು
15. ಮೂಗೂರು
16. ಗರ್ಗೇಶ್ವರಿ
ತಾಲ್ಲೂಕು ಪಂಚಾಯಿತಿ ಕಛೇರಿ, ಟಿ.ನರಸೀಪುರ
ನಂಜನಗೂಡು
ಬಿ.ಆರ್.ರೂಪ
ಉಪ ಆಡಳಿತಾಧಿಕಾರಿ
ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ (ಕಾವೇರಿ ಜಲಾನಯನ ಯೋಜನೆಗಳು) ಮೈಸೂರು
(ಮೊ:94482-63897)
17. ಹುರಾ
18. ಹುಲ್ಲಹಳ್ಳಿ
19. ಕಳಲೆ
20. ಬದನವಾಳು
21. ದೊಡ್ಡಕೌಲಂದೆ
22. ತಗಡೂರು
23. ಹದಿನಾರು
24. ತಾಂಡವಪುರ
25. ಹೆಗ್ಗಡಹಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ಹುಣಸೂರು
ಡಾ.ಸೌಜನ್ಯ ಎ
ಉಪವಿಭಾಗಾಧಿಕಾರಿ
ಹುಣಸೂರು ಉಪವಿಭಾಗ, ಹುಣಸೂರು
(ಮೊ:99024-33880)
26. ಗಾವಡಗೆರೆ
27. ಬಿಳಿಕೆರೆ
28. ಧರ್ಮಾಪುರ
29. ಬನ್ನಿಕುಪ್ಪೆ
30. ಚಿಲ್ಕುಂದ
31. ಹನಗೋಡು
ಉಪವಿಭಾಗಾಧಿಕಾರಿಗಳ ಕಛೇರಿ
ಹುಣಸೂರು
ಕೆ.ಆರ್.ನಗರ
ಬಿ.ಎನ್.ವೀಣಾ
ಉಪ ಆಯುಕ್ತರು
ವಲಯ ಕಛೇರಿ-6
ಮೈಸೂರು ಮಹಾನಗರ ಪಾಲಿಕೆ, ಮೈಸೂರು
(ಮೊ:94498-41230)
32. ಸಾಲಿಗ್ರಾಮ
33. ಮಿರ್ಲೆ
34. ಭೇರ್ಯ
35. ತಿಪ್ಪೂರು
36. ಹೆಬ್ಬಾಳು
37. ಹೊಸೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಪಿರಿಯಾಪಟ್ಟಣ
ಎಂ.ಕೆ.ಸವಿತಾ
ಕಾರ್ಯದರ್ಶಿಗಳು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
(ಮೊ: 81050-36666)
38. ಕಂಪಲಾಪುರ
39. ಹುಣಸವಾಡಿ
40. ಕೊಪ್ಪ
41. ಬೆಟ್ಟದಪುರ
42. ರಾವಂದೂರು
43. ಹಲಗನಹಳ್ಳಿ
ತಾಲ್ಲೂಕು ಕಛೇರಿ, ಪಿರಿಯಾಪಟ್ಟಣ
ಹೆಚ್.ಡಿ.ಕೋಟೆ
ಡಾ.ಕೆ.ರಾಮೇಶ್ವರಪ್ಪ
ಉಪ ನಿರ್ದೇಶಕರು
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮೈಸೂರು
(ಮೊ: 96111-65367)
44. ಅಣ್ಣೂರು
45. ಅಂತರಸಂತೆ
46. ಹಂಪಾಪುರ
47. ಹಂಚೀಪುರ
48. ಕೆ.ಬೆಳತ್ತೂರು
49. ಮುಳ್ಳೂರು
ಮಿನಿ ವಿಧಾನ ಸೌಧ
ಹೆಚ್.ಡಿ.ಕೋಟೆ


ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ಮಾಹಿತಿ
ತಾಲ್ಲೂಕಿನ ಹೆಸರು
ಚುನಾವಣಾಧಿಕಾರಿಗಳ ಹೆಸರು ಹುದ್ದೆ ಮತ್ತು ಪದನಾಮ
ಶ್ರೀಯುತರು
ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸಂಖ್ಯೆ ಮತ್ತು ಹೆಸರು
ನಾಮಪತ್ರ ಸ್ವೀಕರಿಸುವ ಸ್ಥಳ
ಮೈಸೂರು
ಎಸ್.ಪಿ.ಮೋಹನ್
ತಹಶೀಲ್ದಾರ್ ವಲಯ
(1, 2 ಮತ್ತು 4)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
( ಮೊ:99807-81656)
1. ಗುಂಗ್ರಾಲ್ ಛತ್ರ
2. ಇಲವಾಲ
3. ಬೊಮ್ಮೇನಹಳ್ಳಿ
4. ಬೆಳವಾಡಿ
12. ದೊಡ್ಡಮಾರಗೌಡನಹಳ್ಳಿ
13. ಮರಟಿಕ್ಯಾತನಹಳ್ಳಿ
14. ಕೇರ್ಗಳ್ಳಿ
15. ಧನಗಳ್ಳಿ
16. ಜಯಪುರ
17. ಹಾರೋಹಳ್ಳಿ(ಜಯಪುರ)
18. ಮಾರ್ಬಳ್ಳಿ
19. ಉದ್ಬೂರು
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಮೈಸೂರು
ಎ.ನವೀನ್‍ಜೋಸೆಫ್
ತಹಶೀಲ್ದಾರ್
ಮೈಸೂರು ತಾಲ್ಲೂಕು
ಮೈಸೂರು
(ಮೊ: 99452-54100)
5. ಆನಂದೂರು
6. ಕೂರ್ಗಳ್ಳಿ
7. ಹೂಟಗಳ್ಳಿ-1
8. ಹೂಟಗಳ್ಳಿ-2
9. ಹಿನಕಲ್ -1
10. ಹಿನಕಲ್-2
11. ಬೋಗಾದಿ
24. ಶ್ರೀರಾಂಪುರ
25. ಚಾಮುಂಡಿಬೆಟ್ಟ
26. ಹಂಚ್ಯಾ
27. ಆಲನಹಳ್ಳಿ
28. ನಾಗನಹಳ್ಳಿ
29. ಸಿದ್ದಲಿಂಗಪುರ
30. ಬೆಲವತ್ತ
31. ರಮ್ಮನಹಳ್ಳಿ
ತಾಲ್ಲೂಕು ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಮೈಸೂರು
ಮಂಜುನಾಥ್
ತಹಶೀಲ್ದಾರ್
(ವಲಯ 5 ಮತ್ತು 5ಎ)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
(ಮೊ:94486-51232)
20. ದೂರ
21. ಸಿಂಧುವಳ್ಳಿ
22. ಕಡಕೊಳ
23. ಹೊಸಹುಂಡಿ
32. ವಾಜಮಂಗಲ
33. ವರುಣ
34. ಆಯರಹಳ್ಳಿ
35. ದೇವಲಾಪುರ
36. ಹಾರೋಹಳ್ಳಿ(ಮೆಲ್ಲಹಳ್ಳಿ)
37. ವರಕೋಡು
38. ಯಡಕೊಳ
ತಾಲ್ಲೂಕು ಪಂಚಾಯಿತಿ ಕಛೇರಿ, ಮಿನಿವಿಧಾನ ಸೌಧ, ನಜûರ್‍ಬಾದ್, ಮೈಸೂರು
ಟಿ.ನರಸೀಪುರ
ಶೂಲದಯ್ಯ
ತಹಶೀಲ್ದಾರ್
ಟಿ.ನರಸೀಪುರ ತಾಲ್ಲೂಕು
(ಮೊ:98458-80132 )
1. ಕೊಡಗಳ್ಳಿ
2. ಬಿ.ಸೀಹಳ್ಳಿ
3. ತುರುಗನೂರು
4. ಮೆಣಸಿಕ್ಯಾತನಹಳ್ಳಿ
5. ಹೆಗ್ಗೂರು
6. ಅತ್ತಹಳ್ಳಿ
7. ಸೋಮನಾಥಪುರ
8. ಚಿದರವಳ್ಳಿ
9. ಸೋಸಲೆ
10. ಮುತ್ತಲವಾಡಿ
11. ದೊಡ್ಡಬಾಗಿಲು
12. ತಲಕಾಡು
ತಾಲ್ಲೂಕು ಕಛೇರಿ, ಟಿ.ನರಸೀಪುರ
ಟಿ.ನರಸೀಪುರ
ಸಿದ್ದರಾಜು
ಸಹಾಯಕ ಕಾರ್ಯಪಾಲಕ ಅಭಿಯಂತರರು
ಪಂಚಾಯತ್ ರಾಜ್ ಉಪವಿಭಾಗ, ಟಿ.ನರಸೀಪುರ
( 99003-09378)
13. ಟಿ.ಮೇಗಡಹಳ್ಳಿ
14. ಹೊಳೆಸಾಲು(ಕಾವೇರಿಪುರ)
15. ಮಾಲಂಗಿ
16. ಮಾದಾಪುರ
17. ಕೊತ್ತೇಗಾಲ
18. ಮೂಗೂರು
19. ಹ್ಯಾಕನೂರು
20. ಕೇತಹಳ್ಳಿ
21. ಕಿರಗಸೂರು
22. ಗರ್ಗೇಶ್ವರಿ
23. ರಂಗಸಮುದ್ರ
24. ತುಂಬಲ
ತಾಲ್ಲೂಕು ಕಛೇರಿ, ಟಿ.ನರಸೀಪುರ
ನಂಜನಗೂಡು
ಚಂದ್ರಕಾತ್
ಕ್ಷೇತ್ರ ಶಿಕ್ಷಣಾಧಿಕಾರಿ
ಶಿಕ್ಷಣ ಇಲಾಖೆ
ನಂಜನಗೂಡು
( 94806-95308)
1. ಹರದನಹಳ್ಳಿ
2. ನೆಲ್ಲಿತಾಳಪುರ
3. ಕುರಿಹುಂಡಿ
4. ಹುಲ್ಲಹಳ್ಳಿ
5. ಬಿದರಗೂಡು
6. ತಾಂಡವಪುರ
7. ಇಮ್ಮಾವು
8. ಹೊಸಕೋಟೆ
9. ತಾಯೂರು
10. ಹದಿನಾರು
11. ಸುತ್ತೂರು
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ನಂಜನಗೂಡು
ಹೆಚ್.ರಾಮಪ್ಪ
ತಹಶೀಲ್ದಾರ್
ನಂಜನಗೂಡು ತಾಲ್ಲೂಕು ನಂಜನಗೂಡು
(ಮೊ:94484-14555)
12. ನಗರ್ಲೆ
13. ಮಲ್ಲೂಪುರ
14. ತಗಡೂರು
15. ಕಾರ್ಯ
16. ದಾಸನೂರು
17. ಕೋಣನೂರು
18. ದೊಡ್ಡಕೌಲಂದೆ
19. ನೇರಳೆ
20. ಹೆಮ್ಮರಗಾಲ
21. ಹೆಡತಲೆ
22. ಹೊರಳವಾಡಿ
ತಾಲ್ಲೂಕು ಕಛೇರಿ, ನಂಜನಗೂಡು
ನಂಜನಗೂಡು
ಡಾ.ಎಂ.ಕೃಷ್ಣಂರಾಜು
ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯಿತಿ, ನಂಜನಗೂಡು
(ಮೊ:94808-73121)
23. ದೇವರಸನಹಳ್ಳಿ
24. ಕೂಡ್ಲಾಪುರ
25. ಸಿಂಧುವಳ್ಳಿ
26. ಕಳಲೆ
27. ಸೂರಹಳ್ಳಿ
28. ದೇವೀರಮ್ಮನಹಳ್ಳಿ
29. ದೇಬೂರು
30. ಹೆಗ್ಗಡಹಳ್ಳಿ
31. ಹಗಿನವಾಳು
32. ಹುರಾ
33. ಹಾಡ್ಯ
34. ಹೆಡಿಯಾಲ
ತಾಲ್ಲೂಕು ಪಂಚಾಯಿತಿ ಕಛೇರಿ, ನಂಜನಗೂಡು
ಹುಣಸೂರು
ಸಿ.ಆರ್.ಕೃಷ್ಣಕುಮಾರ್
ಕಾರ್ಯನಿರ್ವಾಹಕ ಅಧಿಕಾರಿಗಳು
ತಾಲ್ಲೂಕು ಪಂಚಾಯಿತಿ ಹುಣಸೂರು
(ಮೊ:94808-73110)
1. ಕಟ್ಟೆಮಳಲವಾಡಿ
2. ಜಾಬಗೆರೆ
3. ಗಾವಡಗೆರೆ
4. ಬೋಳನಹಳ್ಳಿ
5. ಹಳೇಬೀಡು
6. ಬಿಳಿಕೆರೆ
7. ಗಾಗೇನಹಳ್ಳಿ
8. ಧರ್ಮಾಪುರ
9. ಉದ್ದೂರು ಕಾವಲ್
10. ಕರಿಮುದ್ದನಹಳ್ಳಿ
11. ಉಯಿಗೊಂಡನಹಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ಹುಣಸೂರು
ಹುಣಸೂರು
ಎನ್.ವೆಂಕಟಾಚಲಪ್ಪ
ತಹಶೀಲ್ದಾರ್
ಹುಣಸೂರು ತಾಲ್ಲೂಕು
ಹುಣಸೂರು
(ಮೊ:94800-58094)
12. ಬನ್ನಿಕುಪ್ಪೆ
13. ಮರದೂರು
14. ಗೋವಿಂದನಹಳ್ಳಿ
15. ಆಸ್ಪತ್ರೆಕಾವಲ್
16. ಮೋದೂರು
17. ಚಿಲ್ಕುಂದ
18. ತಟ್ಟೆಕೆರೆ
19. ಉಮ್ಮತ್ತೂರು
20. ಕಲ್ಲಹಳ್ಳಿ
21. ಹನಗೋಡು
22. ಹೆಗ್ಗಂದೂರು
23. ದೊಡ್ಡಹೆಜ್ಜೂರು
ತಾಲ್ಲೂಕು ಕಛೇರಿ,
ಹುಣಸೂರು
ಕೆ.ಆರ್.ನಗರ
ಜಿ.ಹೆಚ್.ನಾಗರಾಜು
ತಹಶೀಲ್ದಾರ್
ಕೆ.ಆರ್.ನಗರ ತಾಲ್ಲೂಕು
ಕೆ.ಆರ್.ನಗರ
(ಮೊ:84948-28571)
1. ಹರದನಹಳ್ಳಿ
2. ಮುಂಡೂರು
3. ಲಕ್ಕಿಕುಪ್ಪೆ
4. ಮಿರ್ಲೆ
5. ತಂದ್ರೆ
6. ಭೇರ್ಯ
7. ಮೇಲೂರು
8. ಹೊಸಅಗ್ರಹಾರ
9. ಹನಸೋಗೆ
10. ಮಾಯಿಗೌಡನಹಳ್ಳಿ
11. ಹಳಿಯೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಕೆ.ಆರ್.ನಗರ
ಗುರುಶಾಂತಪ್ಪ
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಕೆ.ಆರ್.ನಗರ ತಾಲ್ಲೂಕು
(ಮೊ:88805-41218)
12. ಹೊಸಕೋಟೆ
13. ಸಾಲಿಗ್ರಾಮ
14. ಕುಪ್ಪೆ
15. ಕೆಸ್ತೂರು
16. ಬ್ಯಾಡರಹಳ್ಳಿ
17. ಹೆಬ್ಬಾಳು
18. ಡೋರನಹಳ್ಳಿ
19. ಲಾಳಂದೇವನಹಳ್ಳಿ
20. ಗಂಧನಹಳ್ಳಿ
21. ಹಂಪಾಪುರ
22. ತಿಪ್ಪೂರು
ತಾಲ್ಲೂಕು ಕಛೇರಿ, ಕೆ.ಆರ್.ನಗರ
ಪಿರಿಯಾಪಟ್ಟಣ
ಡಾ.ವಿ.ರಂಗನಾಥ್
ತಹಶೀಲ್ದಾರ್
ಪಿರಿಯಾಪಟ್ಟಣ ತಾಲ್ಲೂಕು
(ಮೊ:97421-79000)
1. ಹಲಗನಹಳ್ಳಿ
2. ಕಣಗಾಲು
3. ಚಪ್ಪರದಹಳ್ಳಿ
4. ಚಿಕ್ಕನೇರಳೆ
5. ಬೆಟ್ಟದಪುರ
6. ಭುವನಹಳ್ಳಿ
7. ಅತ್ತಿಗೋಡು
8. ಕಿತ್ತೂರು
9. ಚನ್ನಕಲ್‍ಕಾವಲ್
10. ಕೊಪ್ಪ
11. ದೊಡ್ಡಹರವೆ
12. ಬೈಲಕುಪ್ಪೆ
ತಾಲ್ಲೂಕು ಕಛೇರಿ
ಪಿರಿಯಾಪಟ್ಟಣ
ಪಿರಿಯಾಪಟ್ಟಣ
ಆರ್.ಕರೀಗೌಡ
ಕ್ಷೇತ್ರ ಶಿಕ್ಷಣಾಧಿಕಾರಿ
ಪಿರಿಯಾಪಟ್ಟಣ
(ಮೊ:94806-95309)
13. ಮುತ್ತೂರು
14. ಹಬಟೂರು
15. ಆಲನಹಳ್ಳಿ
16. ಕೋಮಲಾಪುರ
17. ಹಿಟ್ನೆಹೆಬ್ಬಾಗಿಲು
18. ಹೊನ್ನೇನಹಳ್ಳಿ
19. ರಾವಂದೂರು
20. ದೊಡ್ಡಬ್ಯಾಲಾಳು
21. ಕಂಪಲಾಪುರ
22. ಪಂಚವಳ್ಳಿ
ತಾಲ್ಲೂಕು ಪಂಚಾಯಿತಿ ಕಛೇರಿ, ಪಿರಿಯಾಪಟ್ಟಣ
ಹೆಚ್.ಡಿ.ಕೋಟೆ
ಎಂ.ನಂಜುಂಡಯ್ಯ
ತಹಶೀಲ್ದಾರ್
ಹೆಚ್.ಡಿ.ಕೋಟೆ ತಾಲ್ಲೂಕು
ಹೆಚ್.ಡಿ.ಕೋಟೆ
(ಮೊ:94490-95782)
1. ಅಣ್ಣೂರು
2. ಪಡುಕೋಟೆಕಾವಲ್
3. ನಾಗನಹಳ್ಳಿ
4. ಬೂದನೂರು
5. ಜಿ.ಬಿ.ಸರಗೂರು
6. ಹೊಮ್ಮರಗಳ್ಳಿ
7. ಚಿಕ್ಕೆರೆಯೂರು
8. ಕಂಚಮಳ್ಳಿ
9. ಮಾದಾಪುರ
10. ಹೈರಿಗೆ
11. ಹೆಬ್ಬಲಗುಪ್ಪೆ
12. ತುಂಬಸೋಗೆ
ತಾಲ್ಲೂಕು ಕಛೇರಿ, ಹೆಚ್.ಡಿ.ಕೋಟೆ
ಹೆಚ್.ಡಿ.ಕೋಟೆ
ಶ್ರೀಕಂಠೇರಾಜೇಅರಸು
ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಹೆಚ್.ಡಿ.ಕೋಟೆ
(ಮೊ:99026-33060)
13. ಹಿರೇಹಳ್ಳಿ
14. ಅಂತರಸಂತೆ
15. ಎನ್.ಬೆಳ್ತೂರು
16. ಮಚ್ಚೂರು
17. ಹಂಚೀಪುರ
18. ಕಿತ್ತೂರು(ತೆರಣಿಮಂಟಿ)
19. ಕೆಂಚನಹಳ್ಳಿ
20. ಬಿ.ಮಟಕೆರೆ
21. ಸಾಗರೆ
22. ಲಂಕೆ
23. ಮುಳ್ಳೂರು
24. ಹಾದನೂರು
ತಾಲ್ಲೂಕು ಕಛೇರಿ, ಹೆಚ್.ಡಿ.ಕೋಟೆ

ಜಿಲ್ಲಾ / ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ -2016,  ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮ  ವೈಯಕ್ತಿಕ ಪ್ರಚಾರವನ್ನು ಪತ್ರಿಕಾ / ಶ್ರವಣ ಮತ್ತು ದೃಶ್ಯ ಮಾಧ್ಯಮಗಳಾದ ಟಿ.ವಿ / ಕೇಬಲ್ ಟಿ.ವಿ. ಹಾಗೂ ದೂರದರ್ಶನದ ಮೂಲಕ ಮಾಡುವವರಿರುತ್ತಾರೆ. ಇಂತಹ ಪ್ರಚಾರಗಳಲ್ಲಿ ಚುನಾವಣೆಗೆ ಸಂಬಂಧಪಟ್ಟ ದೇಶದ ಕಾನೂನು ಉಲ್ಲಂಘನೆಯಾಗುವುದು ಹಾಗೂ ನೈತಿಕತೆ, ಸಭ್ಯತೆ ಸೂಕ್ಷ್ಮತೆ ಮೀರುವಂತಹ ಅಂಶಗಳನ್ನು ತಮ್ಮ ಪ್ರಚಾರಗಳಲ್ಲಿ ಬಿತ್ತರಿಸುವುದು ಹಾಗೂ ವ್ಯಕ್ತಿಗಳ ಭಾವನೆಗೆ ಧಕ್ಕೆ ತರುವಂತಹದನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸುವಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನವಿರುತ್ತದೆ.
    ಅದರಂತೆ ಪತ್ರಿಕಾ, ಶ್ರವಣ, ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ನಿಯಂತ್ರಣಗಳನ್ನು ಜಾರಿಯಲ್ಲಿ ತರಲು ಈ ಕೆಳಕಂಡಂತೆ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ
1
ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು
ಅಧ್ಯಕ್ಷರು
2
ಪೊಲೀಸ್ ಅಧೀಕ್ಷರು, ಮೈಸೂರು ಜಿಲ್ಲೆ, ಮೈಸೂರು
ಸದಸ್ಯರು
3
ಅಪರ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು
ಸದಸ್ಯರು
4
ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರು
ಸಂಚಾಲಕರು
5
ಉಪವಿಭಾಗಾಧಿಕಾರಿಗಳು, ಮೈಸೂರು ಉಪವಿಭಾಗ, ಮೈಸೂರು
ಸದಸ್ಯರು
6
ತಹಶೀಲ್ದಾರ್, ಮೈಸೂರು ತಾಲ್ಲೂಕು, ಮೈಸೂರು
ಸದಸ್ಯರು


ಮೈಸೂರು ಜಿಲ್ಲೆಯ ಎಲ್ಲಾ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂಪಾದಕರು / ಮಾಲೀಕರು / ವ್ಯವಸ್ಥಾಪಕರು ಜಿಲ್ಲಾ ಸಮಿತಿಯ ಅನುಮತಿ ಇಲ್ಲದೇ ಯಾವುದೇ ಅಭ್ಯರ್ಥಿ / ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಪ್ರಚಾರಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸದಂತೆ ಕೋರಲಾಗಿದೆ.
ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು / ಅಭ್ಯರ್ಥಿಗಳಿಂದ ಜಿಲ್ಲಾ ಸಮಿತಿಯ ಸಂಚಾಲಕರಿಗೆ  ( ಉಪನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ) ಅನುಬಂದ -1 ರಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

1. ಪ್ರತಿಯೊಂದು ನೋಂದಾಯಿತ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳು ಮತ್ತು ಪ್ರತಿಯೊಬ್ಬ ಸ್ಪರ್ಧಿಸುವ ಅಭ್ಯರ್ಥಿಯು ಉಪ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆರವರಿಗೆ ಅಂತಹ ಪ್ರಚಾರದ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಮೂರು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.
2. ಬೇರೆ ಯಾವುದೇ ವ್ಯಕ್ತಿಯ ಸಂದರ್ಭದಲ್ಲಿ ಅಥವಾ ನೊಂದಾಯಿತವಲ್ಲದ ರಾಜಕೀಯ ಪಕ್ಷವಾದಲ್ಲಿ ದೂರದರ್ಶನ ಪ್ರಸಾರವು ಪ್ರಾರಂಭವಾಗುವ ದಿನಾಂಕಕ್ಕಿಂತ ಏಳು ದಿನ ಮೊದಲು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.

   ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳು 125 ಮತ್ತು 164 ಕ್ಕೆ ತಿದ್ದುಪಡಿಯಾಗಿರುವುದರಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಂದರ್ಭದಲ್ಲಿ ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕಾಗಿರುತ್ತದೆ.
ಅಲ್ಲದೇ ಮತದಾರನು ಯಾವುದೇ ಅಭ್ಯರ್ಥಿಯ ಪರವಾಗಿ ಮತ ನೀಡಲು ಬಯಸದಿದ್ದ ಪಕ್ಷದಲ್ಲಿ ತನ್ನ ಮತವನ್ನು ಸ್ಪರ್ಧಿಸಿರುವ ಅಭ್ಯರ್ಥಿಗಳ ಹೊರತುಪಡಿಸಿ ಮೇಲ್ಕಂಡ ಯಾರೂ ಅಲ್ಲ (ಓಔಖಿಂ) ಗೆ ಮತಚಲಾಯಿಸಲು ರಾಜ್ಯ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿರುತ್ತದೆ.
ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಗ್ರಾಮೀಣ ಪ್ರದೇಶದ ಮತದಾರರು ಜಿಲ್ಲಾ / ತಾಲ್ಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2016 ರಲ್ಲಿ ಕಡ್ಡಾಯವಾಗಿ ಮತದಾನವನ್ನು ಮಾಡುವಂತೆ ಕೋರಲಾಗಿದೆ. ಹಾಗೂ ಸದರಿ ಚುನಾವಣೆಯಲ್ಲಿ “ಮೇಲ್ಕಂಡ ಯಾರೂ ಅಲ್ಲ (ಓಔಖಿಂ)” ಸಹ ಮತಪತ್ರದಲ್ಲಿ ಇರುತ್ತದೆ ಎಂದು ಮತದಾರರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಚುನಾವಣಾ ಅಧಿಕಾರಿ ನೇಮಕ
   ಮೈಸೂರು,ಫೆ.01.(ಕ.ವಾ.)-ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2016ಕ್ಕೆ ಸಂಬಂಧಿಸಿದಂತೆ ಟಿ.ನರಸೀಪುರ ತಾಲ್ಲೂಕು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಹಕಾರ ಸಂಘಗಳ ಉಪನಿಬಂಧಕ ಪಿ. ಶಶಿಧರ್ ಅವರನ್ನು ನೇಮಕ ಮಾಡಲಾಗಿದೆ.
   ಸದರಿ ಕ್ಷೇತ್ರದ ಚುನಾವಣೆಯ ಅರ್ಹ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಚುನಾವಣಾಧಿಕಾರಿಗಳನ್ನು ದಿನಾಂಕ 01-02-2016 ರಿಂದ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು 8-2-2016 ಕೊನೆಯ ದಿನಾಂಕವಾಗಿರುತ್ತದೆ ಎಂದು ಟಿ.ನರಸೀಪುರ ತಾಲ್ಲೂಕು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣಾಧಿಕಾರಿ ಪಿ. ಶಶಿಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಶೋಧನಾ ಅಧ್ಯಯನಕ್ಕೆ ಅರ್ಜಿ ಆಹ್ವಾನ
      ಮೈಸೂರು,ಫೆ.01.(ಕ.ವಾ.)-ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2015-16ನೇ ಸಾಲಿನ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಯಕ್ಷಗಾನ ಬಯಲಾಟದ ಕಲಾ ಪ್ರಕಾರಗಳ ಬಗ್ಗೆ 1 ವರ್ಷ ಕಾಲ ಅಧ್ಯಯನ ನಡೆಸಿ ಪ್ರಬಂಧ ಮಂಡಿಸುವವರಿಗೆ ಫೆಲೋಶಿಪ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
      ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಅಭ್ಯರ್ಥಿಗೆ 1 ಲಕ್ಷ ರೂ. ನಿಗಧಿಪಡಿಸಿದ್ದು, ಕನ್ನಡ ಎಂ.ಎ (ಜಾನಪದ, ಸಮಾಜ ವಿಜ್ಞಾನ, ಮಹಿಳಾ ಅಧ್ಯಯನ, ಸಾಹಿತ್ಯ ಚರಿತ್ರೆ, ಮಾನವಶಾಸ್ತ್ರ ಇತ್ಯಾದಿ) ವಿದ್ಯಾರ್ಹತೆ ಹೊಂದಿರುವ ಪರಿಶಿಷ್ಟ ವರ್ಗ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
      ಸಂಶೋಧನಾ ಅಭ್ಯರ್ಥಿಗಳು ಬಯಲಾಟದಲ್ಲಿ ಮೂಡಲಪಾಯ ಯಕ್ಷಗಾನ, ದೊಡ್ಡಾಟ, ಕೇಳಿಕೆ, ಘಟ್ಟದಕೋಣೆ ಯಕ್ಷಗಾನ ಇತ್ಯಾದಿ, ಸಣ್ಣಾಟದಲ್ಲಿ ಸಂಗ್ಯಾ-ಬಾಳ್ಯ, ರಾಧಾನಾಟ, ಕಡ್ಲೀಮಟ್ಟಿ ಸ್ಟೇಷನ್ ಮಾಸ್ಟರ್ ಇತ್ಯಾದಿ, ಯಕ್ಷಗಾನದಲ್ಲಿ ತೆಂಕುತಿಟ್ಟು, ಬಡಗುತಿಟ್ಟು, ತಾಳಮದ್ದಳೆ, ಸೂತ್ರದಗೊಂಬೆಯಾಟ, ತೊಗಲುಗೊಂಬೆಯಾಟ, ಶ್ರೀ ಕೃಷ್ಣಪಾರಿಜಾತ  ಕಲಾಪ್ರಕಾರಗಳಲ್ಲಿ ಸಂಶೋಧನಾ ನಡೆಸಬೇಕು.
     ಆಸಕ್ತರು ಆಯ್ಕೆ ಮಾಡಿಕೊಳ್ಳುವ ಅಧ್ಯಯನ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಾಂಶ ತಮ್ಮ ಸಾಧನೆಯ ಕಿರು ಪರಿಚಯ ಹಾಗೂ ಜಾತಿ ಪ್ರಮಾಣಪತ್ರದೊಂದಿಗೆ ಅರ್ಜಿಯನ್ನು ಫೆಬ್ರವರಿ 25 ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-2 ಅಥವಾ ಇ-ಮೇಲ್ ವಿಳಾಸಕ್ಕೆ ಞಥಿbಚಿbಚಿಟಿgಚಿಟoಡಿe@gmಚಿiಟ.ಛಿom  ನಲ್ಲಿ ಅರ್ಜಿ ಸಲ್ಲಿಸುವುದು.
   ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು ಇವರನ್ನು ಸಂಪರ್ಕಿಸುವುದು.
   
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಫೆ.01.(ಕ.ವಾ.)-ಮೈಸೂರು ರೈಲು ನಿಲ್ದಾಣದ ರೈಲುಗಾಡಿ ನಂ. 16229/16230 ಕೋಚ್ ನಂ. ಎಸ್‍ಡಬ್ಲ್ಯೂಆರ್ ಜಿ.ಎಸ್. 14425 ರಲ್ಲಿ ಫೆಬ್ರವರಿ 1 ರಂದು ಸುಮಾರು 38 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ವ್ಯಕ್ತಿ 5.7 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ಮೈಬಣ್ಣ, ದುಂಡುಮುಖ, ತಲೆಯಲ್ಲಿ ಸುಮಾರು 1.5 ಅಡಿ ಉದ್ದದ ಕಪ್ಪು ಕೂದಲು, ಕಪ್ಪು ಬಣ್ಣದ ನೀಲಿ ಗೆರೆಯುಳ್ಳ ಟೀ ಶರ್ಟ್, ನೀಲಿ ಬಣ್ಣದ ಜಾಗಿಂಗ್ ಪ್ಯಾಂಟ್ ಧರಿಸಿರುತ್ತಾರೆ.
ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

"ಭಾರತೀಯ ವಾಯುದಳ"ದ ನೇಮಕಾತಿ ರ್ಯಾಲಿ
ಮೈಸೂರು,ಭಾರತೀಯ ವಾಯುದಳದಲ್ಲಿ 'ಙ' ಗುಂಪಿನ ಏರ್‍ಮೆನ್ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್,ಐ.ಎ.ಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗಾಗಿ  ದಿನಾಂಕ : 17-2-2016 ರಂದು ಚಾಮುಂಡಿ ವಿಹಾರ್ ಕ್ರೀಡಾಂಗಣ, ನಜರಬಾದ್, ಮೈಸೂರು ಇಲ್ಲಿ ನೇರ ನೇಮಕಕ್ಕಾಗಿ ರ್ಯಾಲಿ ಆಯೋಜಿಸಲಾಗಿದೆ.  ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅರ್ಹರು.  ಅಭ್ಯರ್ಥಿಗಳು ದಿನಾಂಕ: 1-8-1996 ರಿಂದ 30-11-1999 ರ ಅವಧಿಯಲ್ಲಿ ಜನಿಸಿದವರಾಗಿರಬೇಕು.
ವಿದ್ಯಾರ್ಹತೆ:
'ಙ'  ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‍ಟ್ರಕ್ಟರ್, ಐ.ಐ.ಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ 10 + 2 ಅಥವಾ ದ್ವಿತೀಯ ಪಿ.ಯು.ಸಿ.ಯಲ್ಲಿ ಸರಾಸರಿ ಕನಿಷ್ಟ ಶೇ  50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು. ಅಥವಾ ಸಿ.ಬಿ.ಎಸ್.ಇ/ರಾಜ್ಯ ಶಿಕ್ಷಣ ಮಂಡಳಿ /ಪರಿಷತ್‍ನಿಂದ ಅಂಗೀಕೃತವಾದ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‍ನಿಂದ 10+2 ಕ್ಕೆ ತತ್ಸಮಾನ ಎಂದು ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ ಶೇ 50 ಅಂಕಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು.  ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಇಲ್ಲದಿದ್ದಲ್ಲಿ ಇಂಡರ್‍ಮೀಡಿಯೆಟ್/ ಮೆಟ್ರಿಕುಲೇಷನ್‍ನ ಇಂಗ್ಲೀಷ್ ವಿಷಯದಲ್ಲಿ ಶೇ 50 ಅಂಕ ಗಳಿಸಿರಬೇಕು.
'ಙ' ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳೀಗೆ 10+2 ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾÀಷೆ ವಿಷಯಗಳನ್ನು ಹೊಂದಿದ್ದು, ಸರಾಸರಿ ಶೇ 50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ 50 ಅಂಕ ಪಡೆದಿರಬೇಕು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ 4 ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ 7 ಭಾವಚಿತ್ರಗಳೊಂದಿಗೆ ದಿನಾಂಕ: 17-2-2016 ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜಿರಬಾದ್, ಮೈಸೂರು ಇಲ್ಲಿ ಹಾಜರಾಗುವುದು.  ಅರ್ಹತಾ ನಿಬಂಧನೆಗಳು, ವೈದ್ಯಕೀಯ ವಾಯುದಳದ ವೆಬ್‍ಸೈಟ್ ತಿತಿತಿ/ಚಿiಡಿmeಟಿseಟeಛಿಣioಟಿ.gov.iಟಿ ಗೆ ಭೇಟಿ ನೀಡಿ ಅಥವಾ,  7 ಂiಡಿmeಟಿ Seಟeಛಿಣioಟಿ ಅeಟಿಣಡಿe, ಓo. 1, ಅubboಟಿ ಖoಚಿಜ, ಃಚಿಟಿgಚಿಟoಡಿe – 560 001 ಈ ಕಚೇರಿಯನ್ನು ದೂರವಾಣಿ ಸಂಖ್ಯೆ 080-25592100,          ಇ-ಮೇಲ್ ವಿಳಾಸ ಮೂಲಕ ಸಂಪರ್ಕಿಸಿ ಅಭ್ಯರ್ಥಿಗಳು ಹತ್ತಿರದ ಉದ್ಯೋಗಾಧಿಕಾರಿ,ಜಿಲ್ಲಾ ಉದ್ಯೋಗ ವಿನಿÀಮಯ ಕಚೆÉೀರಿ, ಮೈಸೂರು ಇವರನ್ನು ಸಹ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.





No comments:

Post a Comment