Sunday 21 February 2016

ಕೊಳ್ಳೆಗಾಲ ಶಾಂತಿಸಭೆ

ನಾರಾಯಣಸ್ವಾಮಿ ತೇರು : ಶಾಂತಿಸಭೆ

ಕೊಳ್ಳೇಗಾಲ, ಫೆ.21 : ಹಬ್ಬದ ಆಚರಣೆಯು ಸಾರ್ವಜನಿಕರ ನೆಮ್ಮದಿಗೆ ಯಾವುದೇ ರೀತಿಯ ಭಂಗವಾಗದಿರಲಿ ಹಾಗೂ ನಿಯಮಗಳನ್ನು ಮೀರದಿರಲಿ ಎಂದು ಡಿ.ವೈ.ಎಸ್.ಪಿ ಸುರೇಶಬಾಬು ಹೇಳಿದರು.
        ನಗರದಲ್ಲಿ ನಾಳೆ ನಡೆಯುವ ಪ್ರಸಿದ್ಧ ನಾರಾಯಣಸ್ವಾಮಿ ತೇರಿನ ಹಬ್ಬದ ಮುನ್ನಾ ದಿನವಾದ ಇಂದು ವಿವಿಧ ಜನಾಂಗದ ಯಜಮಾನರುಗಳನ್ನು ಕರೆಯಿಸಿ ನಡೆಸಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಹಬ್ಬದ ಆಚರಣೆಗಳು ದೇವರ ಅನುಗ್ರಹಕ್ಕಾಗಿ ಹಾಗೂ ಭಕ್ತಿಗಾಗಿ ಮಾಡಲಾಗುತ್ತದೆ. ಇದರಿಂದ ಯಾರಿಗೂ ತೊಂದರೆಯಾಗದಂತೆ ಆಚರಿಸಿ ಎಂದು ತಿಳಿಸಿದರು.
        ಶಾಂತಿಗೆ ಭಂಗ ತರುವಂತಹ ಕೆಲಸ ಯಾರೇ ಮಾಡಿದರೂ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
         ಸಭೆಯಲ್ಲಿ ನಟರಾಜಮಾಳಿಗೆ, ಲಿಂಗರಾಜು, ಸೋಮಶೇಖರ್, ಚಿಕ್ಕಲಿಂಗಯ್ಯ, ಚಿಕ್ಕಮಾದನಾಯಕ, ರಾಜೇಂದ್ರಪ್ರಸಾದ್,ಶಿವರಾಜು ಭಾಗವಹಿಸಿದ್ದರು.

No comments:

Post a Comment