Tuesday 2 February 2016


ಮಂಡ್ಯ : ಮಾಜಿ ಶಾಸಕ ಎಂ. ಶ್ರೀನಿವಾಸ್‍ರವರ 65ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ನಗರದ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಹುಟ್ಟುಹಬ್ಬ ಆಚರಿಸಿದರು.
ನಂತರ ಮಾತನಾಡಿದ ಉದ್ಯಮಿ ಎಚ್.ಎನ್. ಯೋಗೇಶ್ ಅವರು, ಮಾಜಿ ಶಾಸಕ ಎಂ. ಶ್ರೀನಿವಾಸ್‍ರವರು 2 ಬಾರಿ ಶಾಸಕರಾಗಿ ಮಂಡ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಸೇವೆ ಮಂಡ್ಯ ತಾಲೂಕಿನಲ್ಲಿ ಅವಶ್ಯಕತೆ ಇದೆ. ಅವರ ಅಭಿಮಾನಿಗಳು ರೋಗಿಗಳಿಗೆ ಹಣ್ಣು ವಿತರಿಸಿ ವಿಶೇಷವಾಗಿ ಆಚರಿಸುತ್ತಿz್ದÉೀವೆ ಎಂದು ಹೇಳಿದರು.
ಅವರ ಸೇವೆ ಮತ್ತಷ್ಟು ಈ ತಾಲೂಕಿಗೆ ಲಭಿಸಲಿ, ಅವರಿಗೆ ಆಯುಸ್ಸು, ಆರೋಗ್ಯವನ್ನು ಭಗವಂತ ಕರುಣಿಸಲಿ ಎಂದು ಶುಭ ಕೋರಿದರು.
ಜಿ.ಪಂ. ಅಧ್ಯಕ್ಷೆ ಕೋಮಲಾ ಸ್ವಾಮಿ, ಗ್ರಾ.ಪಂ. ಅಧ್ಯಕ್ಷ ಅಶ್ವತ್ಥ, ಸದಸ್ಯ ಪುಟ್ಟಸ್ವಾಮಿ, ದಿನೇಶ್, ನವಭಾರತ ರಕ್ಷಣಾ ವೇದಿಕೆ ಅಧ್ಯಕ್ಷ , ನಾಸೀರ್, ಆರೀಫ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

No comments:

Post a Comment