Thursday 27 November 2014

              ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ.

ಮೈಸೂರು: ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಮಡೆ ಮಡೆ ಸ್ನಾನ ವಿರೋಧಿಸಿ ನಿಡುಮಾಮಿಡಿ ಮಠದ ವೀರಭದ್ರ ಚೇನ್ನಮಲ್ಲ ಸ್ವಾಮಿಜಿ ನೇತೃತ್ವದಲ್ಲಿ ಇತ್ತಿಚೇಗೆ ಬೆಂಗಳೂರಿನಲ್ಲಿ ಪ್ರಗತಿಪರ ಮಠಾಧಿಶರುಗಳು  ಪ್ರತಿಭಟನೆ ನಡೆಸಿದರು.

 ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿ ಪ್ರಸ್ಥಾಪಿಸಿ ಲಿಂಗಾಯಿಯಿತ, ಹಿಂದುಳಿದ, ದಲಿತ ವರ್ಗದ ಸ್ವಾಮಿಜಿಗಳೇಲ್ಲಾ ಡೋಂಗಿಸ್ವಾಮಿಜಿಗಳು ಕಪಟ ವೇಶಧಾರಿಗಳು ಇವರಿಗೆ ಧಾರ್ಮಿಕತೆಯ

ಆಚಾರ ವಿಚಾರಗಳು ಗೊತ್ತಿಲ್ಲ ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದನ್ನು ವಿರೋಧಿಸಿ ಪ್ರಗತಿಪರ ಮಠಾಧಿಶರ ವೇದಿಕೆ,ಕರ್ನಾಟಕ ದಲಿತ ವೇದಿಕೆ,ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಗಾಂಧಿನಗರ ಹುರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮಿಜಿ, ನೇತೃತ್ವದಲ್ಲಿ, ಹೋರಾಟಗಾರರಾದ ದ್ಯಾವಪ್ಪ ನಾಯಕ, ಎಸ್.ಡಿ.¥, ಐ, ಅಧ್ಯಕ್ಷ ಅಬ್ದಲ್ ಮಜೀದ್, ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಸೇರಿದಂತೆ ಇನ್ನು ಹಲವಾರು ಮಂದಿ ಭಾಗವಹಿಸಿದು ಪೇಜಾವರ ಶ್ರೀಗಳ ವಿರುದ್ದ ಧಿಕ್ಕಾರ ಘೋಷನೆ ಕೂಗಿದರು.

ರಸ್ತೆ ಅಭಿವೃದ್ದಿಗಾಗಿ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ನಗರದ ಎನ್.ಆರ್.ಕ್ಷೆತ್ರದ ವ್ಯಾಪ್ತಿಗೊಳಪಡುವ ಅಜ್ಜಿಜ್ ಸೇಠ್ ಮುಖ್ಯರಸ್ತೆಯನ್ನು ಮುಖ್ಯಮಂತ್ರಿಗಳ ನೂರು ಕೋಟಿ ಅನುದಾನದಲ್ಲಿ ಅ¨üವೃದ್ದಿಪಡಿಸುವಂತೆ ಸರ್ವಾಜನಾಂಗ ಹಿತರಕ್ಷಣಾ ವೇದಿಕೆ ವತಿಯಿಂದ ಅಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ನಜರ್‍ಬಾದ್‍ನ ತಾಲ್ಲೂಕು ಕಚೇg ಮುಂಭಾಗ ಪ್ರತಿಭಟನೆ ನಡೆಸಿದರು

ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೋಡಿದರು

No comments:

Post a Comment