Thursday 27 November 2014

ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ.

ಮೈಸೂರು: ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಮಡೆ ಮಡೆ ಸ್ನಾನ ವಿರೋಧಿಸಿ ನಿಡುಮಾಮಿಡಿ ಮಠದ ವೀರಭದ್ರ ಚೇನ್ನಮಲ್ಲ ಸ್ವಾಮಿಜಿ ನೇತೃತ್ವದಲ್ಲಿ ಇತ್ತಿಚೇಗೆ ಬೆಂಗಳೂರಿನಲ್ಲಿ ಪ್ರಗತಿಪರ ಮಠಾಧಿಶರುಗಳು  ಪ್ರತಿಭಟನೆ ನಡೆಸಿದರು.
 ಈ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಜಿ ಪ್ರಸ್ಥಾಪಿಸಿ ಲಿಂಗಾಯಿಯಿತ, ಹಿಂದುಳಿದ, ದಲಿತ ವರ್ಗದ ಸ್ವಾಮಿಜಿಗಳೇಲ್ಲಾ ಡೋಂಗಿಸ್ವಾಮಿಜಿಗಳು ಕಪಟ ವೇಶಧಾರಿಗಳು ಇವರಿಗೆ ಧಾರ್ಮಿಕತೆಯ
ಆಚಾರ ವಿಚಾರಗಳು ಗೊತ್ತಿಲ್ಲ ಎಂದು ಅವಹೇಳನಕಾರಿ ಹೇಳಿಕೆಯನ್ನು ನೀಡಿದನ್ನು ವಿರೋಧಿಸಿ ಪ್ರಗತಿಪರ ಮಠಾಧಿಶರ ವೇದಿಕೆ,ಕರ್ನಾಟಕ ದಲಿತ ವೇದಿಕೆ,ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

No comments:

Post a Comment