Saturday 8 November 2014

ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣರವರಿಗೆ 65ನೇ ಹುಟ್ಟು ಹಬ್ಬ













ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣರವರಿಗೆ 65ನೇ   ಹುಟ್ಟು ಹಬ್ಬ
     
ಶೋಷಿತ ಸಮಾಜದ ಸಂಘಟನಾಕಾರ, ಜನಪರ ಹಿರಿಯ ರಾಜಕಾರಣಿ, ಸಮಾಜಿಕ ನ್ಯಾಯದ ಪ್ರತಿಪಾದಕ ಶೋಷಿತರ ದ್ವನಿ ಶ್ರೀ ಹೆಚ್.ಎಂ.ರೇವಣ್ಣರವರಿಗೆ 65 ನೇ ಹುಟ್ಟು ಹಬ್ಬದ ಶುಭಾಷಯಗಳು.
ರೇವಣ್ಣನವರು ಈ ಗಿನ ರಾಮನಗರ ಜಿಲ್ಲೆಯ ಐತಿಹಾಸಿಕ ನಾಡು ಮಾಗಡಿ ತಾಲ್ಲೋಕಿನ ಹೊಸಪೇಟೆ ಗ್ರಾಮದಲ್ಲಿ ಹಿಂದುಳಿದ ಕುರುಬ ಸಮಾಜದ ಮಾಗಡಪ್ಪ ಮತ್ತು ಲಕ್ಷಮ್ಮ ರವರ ಸುಪುತ್ರರಾಗಿ ದಿನಾಂಕ 8-11-1949ರಲ್ಲಿ ಜನಿಸಿದರು.
ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣ :- ಶಾಲಾ ಕಾಲೇಜುಗಳಲ್ಲಿಯೇ ವಿದ್ಯಾರ್ಥಿನಾಯಕರಾಗಿ ಬೆಳೆದ ಅವರು, ಉತ್ಸಾಹಿ ಯುವ ನಾಯಕರಾಗಿ, ತಮ್ಮ ಅಚ್ಚು ಮೆಚ್ಚಿನ ಕಬ್ಬಡಿ ಆಟಗಾರರಾಗಿ, ಕುಸ್ತಿ ಪಟುವಾಗಿಯೂ ಚಿಕ್ಕಂದಿನಿಂದಲೂ ನಾಟಕ ಕಾರರಾಗಿ ಅಭಿನಯಿಸಿ ಜನಪ್ರಿಯತೆ ಪಡೆದರು. ಕಾಂಗ್ರೆಸ್ ಕ್ಷದಲ್ಲಿ ಸಕ್ರಿಯವಾಗಿ ದುಡಿದು ಹಂತ ಹಂತವಾಗಿ ಮೇಲೇರಿದವರು ರೇವಣ್ಣನವರು.
ಸಾಂಸ್ಕøತಿಕ ಸಂಘಟನೆ ಮತ್ತು ಯುವ ಮುಖಂಡರಾಗಿ ರೇವಣ್ಣ:- ಸಮಾಜದಲ್ಲಿ ಯುವ ನಾಯಕರಾಗಿ ಗುರುತಿಸಿಕೊಂಡ ರೇವಣ್ಣ ಉತ್ತಮವಾದ ಜನಪ್ರಿಯ ನಾಯಕರಾಗಿ ಬೆಳೆದರು. ಸಾಸ್ಕøತಿಕ ಸಂಘಟನೆಗಳ ಮೂಲಕ ಬೆಳಕಿಗೆ ಬಂದ ನಾಯಕರಾದ ಇವರು ಕಾಂಗ್ರೆಸ್ ವಲಯಕ್ಕೆ ಚಿರಪರಿಚಿತರಾದರು, ಹೀಗೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕಸ್ತ ಭಕ್ತ ಹನುಮಂತನಂತೆ ಮಹಾ ಸ್ವಾಭಿಮಾನಿಯಾಗಿ ಪ್ರಮಾಣಿಕ ನಾಯಕರಾದರು.
ಕಾಂಗ್ರೆಸ್ ಪಕ್ಷದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಾ ನಾಯಕರೊಂದಿಗೆ ನಿಕಟ ಸಂಪರ್ಕ ಹಾಗೂ ಒಳ್ಳೆಯ ಸಂಬಂಧವನ್ನು ರೇವಣ್ಣ ಹೊಂದಿದ್ದಾರೆ. ತಮ್ಮನ್ನು ತಾವು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡದ್ದಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ನೇಮಿಸಿರುವುದು ರೇವಣ್ಣನವರು ಒಬ್ಬ ವ್ಯಕ್ತಿಯಲ್ಲ ಪ್ರಬಲವಾದ ಶಕ್ತಿ ಎಂಬುದು ಸಾಭೀತಾಗಿದೆ.
ನಮ್ಮದೇಶ ನಮ್ಮರಾಜ್ಯ ರಾಜಿ ಪ್ರಧಾನವಾದುದು, ಇಂತಹ ಸಂದರ್ಭದಲ್ಲಿ ಮಾಗಡಿ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಾದ ಕುರುಬ ಸಮಾಜದ ಹೆಚ್.ಎಂ.ರೇವಣ್ಣರವರು ಸ್ವಂತ ಬಲದಿಂದ ಮೇಲೆ ಬಂದಿದ್ದಾರೆ.ಈ ರೀತಿಯಲ್ಲಿ ಜಾತಿ ಬೆಂಬಲವಿಲ್ಲದೆ ಪ್ರತಿ ಚುನಾವಣೆಯಲ್ಲಿ ಗೆದ್ದು ಬಂದವರಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮತ್ತು ಸ್ಪೀಕರ್ ರಮೇಶ್‍ಕುಮಾರ್.
ರೇವಣ್ಣನವರು ಜಾತ್ಯಾತೀತ ವ್ಯಕ್ತಿಯಾಗಿದ್ದು, ಮಾಗಡಿ ಕ್ಷೇತ್ರದಿಂದ ಗೆಲ್ಲುವುದು ಸಾಧ್ಯವಾಗುತ್ತಿದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನ್ಮ ಸ್ಥಳದಲ್ಲಿ ತಮ್ಮ ಪ್ರಭಾವವನ್ನು ಬೀರಿದ್ದಾರೆ.
ನಿತ್ಯ ಸಚಿವ ರೇವಣ್ಣ:- 1989ರಲ್ಲಿ ಮತ್ತು 1999 ರಲ್ಲಿ ಶಾಸಕರಾಗಿ ಮಂತ್ರಿಗಳಾಗಿ ಹಲವಾರು ಪ್ರಬಲ ಖಾತೆಗಳನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಿ ಜನಪ್ರಿಯರಾಗಿ ಮಡಿಕೇರಿಯಿಂದ ದೂರದ ಬೀದರ್-ಬಳ್ಳಾರಿ ರಾಯಚೂರು-ವಿಜಾಪುರ-ಬೆಳಗಾವಿ ಹೀಗೆ ಉತ್ತರ ಕರ್ನಾಟಕದ ಬಹುದೂರದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಚುನಾವಣೆಯಲ್ಲಿ ಸೋತರು ಸಹ ಎದೆಗುಂದದೆ ತಮ್ಮ ಸಮಾಜ ಸೇವೆಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಮಾಗಡಿ ಕ್ಷೇತ್ರದ ಮತದಾರರು ಹಾಗೂ ಹೆಬ್ಬಾಳ ಕ್ಷೇತ್ರದ ಮತದಾರರು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ರೇವಣ್ಣರವರ ಬಳಿಗೆ ಬರುತ್ತಾರೆ.
ಆದರೆ ರೇವಣ್ಣರವರು ನಿತ್ಯ ಬರುವ ತಮ್ಮ ಅಭಿಮಾನಿಗಳಿಗೆ ನಗು ಮುಖದಿಂದ ಮಾತನಾಡಿಸಿ, ಅವರ ಕೆಲಸಗಳನ್ನು ಮಾಡಿ ಕೊಡುತ್ತಾರೆ. ಅಧಿಕಾರದಲ್ಲಿ ಇರಲಿ-ಇಲ್ಲದೇ ಇರಲಿನಿರಂತರವಾಗಿ ಜನರ ಸಮಸ್ಯೆಗಳನ್ನು ಆಲಿಸುತ್ತಾ ಜನ ಸೇವೆಗಾಗೆಯೇ ಹುಟ್ಟಿ ಬಂದಿದ್ದಾರೆ.
ಸಿದ್ದರಾಮಯ್ಯರವರ ಸರ್ಕಾರಕ್ಕೆ ಗೌರವ:-ಹೆಚ್.ಎಂ. ರೇವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಅವರ ಸರ್ಕಾರಕ್ಕೆ ಗೌರವ ಹೆಚ್ಚಾಗುತ್ತದೆ. ಅವರ ಜನಪ್ರಿಯ ಕಾರ್ಯಕ್ರಮಗಳನ್ನು ರೇವಣ್ಣನವರು ಸಮರ್ಥನೆ ಮಾಡಿಕೊಳ್ಳುವ ಮೂಲಕ ನಾಡಿನ ಸಮಸ್ತ ಜನತೆಗೆ ಜನಪರ ರೈತಪರ, ಪ್ರಗತಿಪರ ಬಡವರ ಕೆಲಸಗಳನ್ನು ತಿಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ನಾಡಿನ ಸಮಸ್ತ ಜನತೆಯ ಪರವಾಗಿ ರೇವಣ್ಣರವರಿಗೆ 65ನೇ ಹುಟ್ಟು ಹಬ್ಬದ ಶುಭಾಷಯಗಳು.
ಸಭೆ- ಸಮಾರಂಭಗಳಲ್ಲಿಯೂ ಸಹ ಜನಪರ ಕಾರ್ಯಕ್ರಮಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಮೂಲಕ ಜನಪ್ರಿಯ ನಾಕರಾಗಿದ್ದಾರೆ. ಇಂತಹ ನಿಷ್ಠೆಯನ್ನು ಹೊಂದಿರುವ ಪ್ರಾಮಾಣಿಕ ವ್ಯಕ್ತಿಯಾದ ಹೆಚ್.ಎಂ.ರೇವಣ್ಣರವರಿಗೆ ಸಂಪುಟ ಸೇರ್ಪಡೆ ಗೊಳಿಸುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಯಶಸ್ಸು ಖಂಡಿತ ಸಿಗುತ್ತದೆ.
ಹೆಚ್.ಎಂ.ರೇವಣ್ಣನವರು 8-11-2014ರಂದು 65ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಇವರಿಗೆ ಮುಂದೆ ಇನ್ನಷ್ಟು ಉಜ್ವಲವಾದ ಭವಿಷ್ಯ ದೊರೆಯಲಿ-ರಾಜ್ಯಮಾತ್ರವಲ್ಲದೆ ದೇಶವೇ ಮೆಚ್ಚುವಂತಹ ಜನನಾಯಕರಾಗಲಿ ಎಂದು ಒಕ್ಕೊರಲಿನಿಂದ ಶುಭ ಕೋರುತ್ತೇವೆ

No comments:

Post a Comment