Sunday 16 November 2014

ಮೈಸೂರು ವಾರಿಯರ್ಸ್ ಕ್ರಿಕೆಟ್ ಕ್ವಿಜ್‍ಗೆ
ಸೈಕಲ್ ಪ್ಯೂರ್ ಅಗರಬತ್ತಿ ಆತಿಥ್ಯ
ಮೈಸೂರು, ನವೆಂಬರ್  2014:ಸೈಕಲ್ ಪ್ಯೂರ್ ಅಗರಬತ್ತಿ, ವಿಶ್ವದಲ್ಲಿಯೇ ಅತಿಹೆಚ್ಚು ಅಗರಬತ್ತಿ ಉತ್ಪಾದಿಸುವ ಸಂಸ್ಥೆಯಾಗಿದ್ದು,  ಎಸಿಯುಕೆ (ಅಸೋಸಿಯೇಷನ್ ಆಫ್ ಕ್ರಿಕೆಟ್ ಅಂಪೈರ್ಸ್ ಕರ್ನಾಟಕ) ಮೈಸೂರು ವಲಯಸಹಯೋಗದಲ್ಲಿ  ಮೈಸೂರು ನಗರದಲ್ಲಿ “ಮೈಸೂರು ವಾರಿಯ್ಸ್ ಕ್ರಿಕೆಟ್ ಕ್ರಿಜ್” ಅನ್ನು ಆಯೋಜಿಸಿದೆ. ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಈ ಕ್ವಿಜ್‍ನಲ್ಲಿ ನಗರದ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಎಸಿಯುಕೆ ಕರ್ನಾಟಕ ಘಟಕದ ಅಧ್ಯಕ್ಷ ಎಸ್.ಮುರಳೀಧರ ಮತ್ತು ಮೈಸೂರು ವಲಯದ ಕೆಎಸ್‍ಸಿಎ ಅಧ್ಯಕ್ಷ ಬಾಲಚಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜೇತರನ್ನು ಅಭಿನಂದಿಸಿದ ಮುರಳೀಧರ ಅವರು, `ಈ ಕ್ವ್ವಿಜ್‍ಗೆ ದೊರೆತ ಅತೀವ ಪ್ರತಿಕ್ರಿಯೆಯಿಂದ ನಮಗೆ ಹೆಚ್ಚಿನ ಸಂತಸವಾಗಿದೆ. ಜ್ಞಾನ ಎಂಬುದು ಎಂದಿಗೂ ಯಾರೊಬ್ಬರೂ ಉತ್ತಮ ಸಾಧನೆ ಮಾಡಲು ಸಹಕಾರಿ ಆÀಗಲಿದೆ. ಈ ಕಾರ್ಯಕ್ರಮದ ಮೂಲಕ ಕ್ರೀಡಾ ಜ್ಞಾನ ಉತ್ತಮಪಡಿಸಲು ಹಾಗೂಮಕ್ಕಳು ಕ್ರೀಡೆಯನ್ನು ತಮ್ಮ ಆಯ್ಕೆಯಾಗಿ ಪರಿಗಣಿಸಲು ಸಹಕಾರಿಯಾಗಲಿದೆ’ ಎಂದರು.
24ನೇ ಅಂಪ್ಶೆರ್ಸ್‍ಗಳ ದಿನದ ನಿಮಿತ್ತ ರಾಜ್ಯ ಮಟ್ಟದ ಕ್ರಿಕೆಟ್ ಕ್ವಿಜ್ ಸ್ಪರ್ಧೆಯ ಮೈಸೂರು ವಲಯ ಸುತ್ತಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯು 8 ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ವಲಯ ಮಟ್ಟದ ಟ್ರೋಫಿ ಅಲ್ಲದೆ ವಿಜೇತರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನವೆಂಬರ್ 22, 2014ರ ಶನಿವಾರ ನಡೆಯಲಿರುವ ರಾಜ್ಯ ಮಟ್ಟದ ಉಪಾಂತ್ಯ ಸ್ಪರ್ಧೆಗಳಲ್ಲಿ ಮೈಸೂರು ವಲಯ ಪ್ರತಿನಿಧಿಸಲು ಅರ್ಹತೆ ಪಡೆದಿದ್ದರು.
ಕಳೆದ ವರ್ಷಗಳಲ್ಲಿ, ಸೈಕಲ್ ಪ್ಯೂರ್ ಅಗರಬತ್ತಿ ಭಾರತದಲ್ಲಿ ಕ್ರಿಕೆಟ್ ಜೊತೆಗೆ ಸಹಯೋಗ ಹೊಂದಿರುವ ಪ್ರಮುಖ ಬ್ರಾಂಡ್‍ಗಳಲ್ಲಿ ಒಂದಾಗಿದೆ. ರೆಡ್ ಅಲರ್ಟ್, ಥರ್ಡ್ ಅಂಪೈರ್ ಬ್ರಾಂಡಿಂಗ್, ಮೈಲ್‍ಸ್ಟೋನ್ ಬ್ರಾಂಡಿಂಗ್ ಜೊತೆಗೂ ಸಂಸ್ಥೆಯು ಗುರುತಿಸಿಕೊಂಡಿದೆ. ವಿಶ್ವದ ವಿವಿಧೆಡೆ ನಡೆಯುವ  ವಿವಿಧ ಕ್ರಿಕೆಟ್ ಪಂದ್ಯಾವಳಿಗಳ ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿಯು ಸಾಕಷ್ಟು ಜನಪ್ರಿಯವಾಗಿದ್ದ `ಪ್ರೇ ಫಾರ್ ಇಂಡಿಯಾ’ ಪ್ರಚಾರಾಂದೋಲನವನ್ನು 2011ರಲ್ಲಿ ಐಸಿಸಿ ವಲ್ರ್ಡ್ ಕಪ್ ಸಂದರ್ಭದಲ್ಲಿ 100ಕ್ಕೂ ಅಧಿಕ ನಗರಗಳಲ್ಲಿ ಆಯೋಜಿಸಿತ್ತು.
ಸೈಕಲ್ ಪ್ಯೂರ್ ಸೇರ್ಪಡೆಯುಕ್ತ ಪ್ರಗತಿಗೆ ಒತ್ತು ನೀಡಲಿದ್ದು, ಭಾರತದ ಸಣ್ಣ ಪಟ್ಟಣಗಳಲ್ಲಿ ಕ್ರಿಕೆಟ್ ಪ್ರತಿಭೆಗಳು ಇದ್ದು, ಅವಕಾಶಗಳಿಗಾಗಿ ಕಾಯುತ್ತಿದ್ದಾರೆ ಎಂದು ಭಾವಿಸುತ್ತದೆ. ಸೈಕಲ್ ಪ್ಯೂರ್ ಅಗರಬತ್ತಿ ಕ್ರಿಕೆಟ್ ಕ್ರೀಡೆ ಬಗೆಗೆ ಒಲವು ಹೊಂದಿದ್ದು, ಒಟ್ಟಾರೆಆಟ ಮತ್ತು ಆಟಗಾರರ ಪ್ರಗತಿಗೆ ಆದ್ಯತೆ ನೀಡಲಿದೆ. ಈ ಒಲವಿನ ಪರಿಣಾಮ ಸೈಕಲ್ ಪ್ಯೂರ್ ಅಗರಬತ್ತಿ ಕೆಪಿಎಲ್ ಜೊತೆಗೆ ಗುರುತಿಸಿಕೊಂಡಿದೆ. ಇದು, ಅಂತಿಮವಾಗಿ ಮೈಸೂರು ಫ್ರಾಂಚೈಸಿ ಪಡೆಯಲು ಕಾರಣವಾಯಿತು.  ಪೂರ್ಣ ಸಹಕಾರದ ಪರಿನಾಮ ಮೈಸೂರು ವಾರಿಂiÀiರ್ಸ್ ತಂಡವು ಕೆಪಿಎಲ್‍ನ 2014ರ ವಿಜೇತ ತಂಡವಾಗಿ ಹೊರಹೊಮ್ಮಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment