Thursday 27 November 2014

ನ.29 ರಂದು ಭಕ್ತ ಕನಕದಾಸ ಜಯಂತ್ಯುತ್ಸವ
ಮಂಡ್ಯ,ನ.27- ಕರ್ನಾಟಕ ರಾಜ್ಯ ಅಹಿಂದ ಯುವ ಸಂಘಟನೆ ಹಾಗೂ ಸಂಸ್ಕøತಿ ಸಂಘದ ವತಿಯಿಂದ ನ.29 ರ ಮಧ್ಯಾಹ್ನ 2ಕ್ಕೆ ನಗರದ ಕಲಾಮಂದಿರದಲ್ಲಿ 527ನೇ ಭಕ್ತ ಕನಕದಾಸರ ಜಯಂತ್ಯುತ್ಸವ ಆಚರಿಸಲಾಗುವುದು ಎಂದು ಕ.ರಾ.ಅ.ಯು.ಸ ಅಧ್ಯಕ್ಷ ಮರಿಗೌಡ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಮತ್ತು ಮಾಜಿ ಸಚಿವ ಹೆಚ್.ಎಂ.ರೇವಣ್ಣರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಕನಕದಾಸರ ಭಾವಚಿತ್ರಕ್ಕೆ ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿರವರು ಮಾಲಾರ್ಪಣೆ ಮಾಡುವರು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರದಾನ ಕಾರ್ಯದರ್ಶಿಗಳಾದ ರಾಮಚಂದ್ರಪ್ಪರವರು ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡುವರು,ಕನಕ ಜ್ಯೋತಿಯನ್ನು ರಾಮಮನೋಹರ ಲೋಹಿಯ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಶಿವಣ್ಣ, ಕನಕ ಸೂಕ್ತಿ ಬಿಡುಗಡೆಯನ್ನು ಜಿಲ್ಲಾ ಕಾಂಗ್ರೆಸ್ ಕೋಶಾಧ್ಯಕ್ಷ ಅಮರಾವತಿ ಚಂದ್ರಶೇಖರ್, ಕುರುಬರ ಸಂಘದ ಅಧ್ಯಕ್ಷ ಕೆ.ಚ್.ನಾಗರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡುವರು.
ಮುಖ್ಯ ಭಾಷಣಾಕಾರರಾಗಿ ಪ್ರೊ.ಕರೀಂ ಮುದ್ದೀನ್‍ರವರು ಭಾಗವಹಿಸಲಿದ್ದು, ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಕಾರ್ಯಕ್ರಮದ ವಿವರಣೆ ನೀಡಿದರು.
ಗೋಷ್ಠಿಯಲ್ಲಿ ಇವರೊಂದಿಗೆ ಪ್ರಮೀಳಾ, ರಾಧಾಮಣಿ ಇದ್ದರು.

ಎಲ್ಲಾ ರೀತಿಯ ಪ್ರಕರಣಗಳಲ್ಲಿಯೂ ಪರಿಣಿತರಾಗಿ : ಕರೆ

ನಾಗಮಂಗಲ,ನ.27- ವಕೀಲರು ಒಂದೇ ರೀತಿಯ ಪ್ರಕರಣದಲ್ಲಿ ಪರಿಣಿತರಾಗದೆ, ಎಲ್ಲಾ ರೀತಿಯ ಪ್ರಕರಣದಲ್ಲಿ ಪರಿಣಿತರಾಗ ಬೇಕೆಂದು ಹಿರಿಯ ವಕೀಲ ಬಸವಯ್ಯ ಕರೆ ನೀಡಿದರು.
ತಾಲ್ಲೂಕಿನ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ವಕೀಲರುಗಳು ತಮ್ಮ ವೃತ್ತಿ ಬದುಕಿನಲ್ಲಿ ತಮಗೆ ತಿಳಿದು ತಿಳಿಯದೆ, ಒಂದೇ ರೀತಿಯ ಪ್ರಕರಣಗಳಿಗೆ ಮಾರು ಹೋಗಿರುತ್ತಾರೆ. ಒಂದೇ ವಿಷಯವಾಗಿ ವಾದಿಸಲು ಮುಂದಾಗಿರುತ್ತಾರೆ. ವಕೀಲರ ಎಂದಮೇಲೆ ಅವರು ಎಲ್ಲಾ ರೀತಿಯ ಕಾನೂನು ಅರಿವನ್ನು ಹೊಂದಿದವರಾಗಿ ತಾವು ಇದುವರೆಗೂ ಕೈಗೆತ್ತಿಕೊಳ್ಳದ ಪ್ರಕರಣಗಳತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಅತ್ಯಾಚಾರ ಪ್ರಕರಣಗಳ ವಿಚಾರಕ್ಕೆ ಬಂದಾಗ ಈ ಹಿಂದಿನ ರೀತಿಯ ಕಾನೂನುಗಳು ಬದಲಾಗಿ ಹೊಸ-ಹೊಸ ರೀತಿಯಾದ ಕಾನೂನುಗಳು ಬಂದಿವೆ. ಪ್ರತಿಯೊಬ್ಬರು ಅವುಗಳನ್ನು ಅರಿತ ತದನಂತರ ವಾದ ಮಂಡಿಸಬೇಕೆಂದು ಹೇಳಿದರು.
ಕಾನೂನಿನಲ್ಲಿ ಆಗುವಂತಹ ಬದಲಾವಣೆಗಳು, ಹಾಗೂ ಕಾನೂನಿನ ಸಮಗ್ರ ಅರಿವನ್ನು ಪಡೆದಂತಹ ವಕೀಲರು ಜನರ ಪ್ರಶಂಸೆಗೆ ಒಳಗಾಗುತ್ತಾರೆ. ಆಗ ಅವರು ಸ್ವಾಮಿ ಎಂದು ಕರೆಯುವ ಮಟ್ಟಿಗೆ ಜನಮಣ್ಣನೆಗೆ ಪಾತ್ರರಾಗುತ್ತಾರೆ. ವೃತ್ತಿನಿಷ್ಠೆಯನ್ನು ಪಾಲಿಸಿದಾಗ ಜನರಲ್ಲಿ ಭರವಸೆ ಮೂಡುತ್ತದೆ. ಆಪ್ರಕರಣವು ಮತ್ತೊಂದು ತಿರುವನ್ನು ಪಡೆದು ಅದನ್ನು ನಿಭಾಯಿಸಲು ಆಗದಿದ್ದಾಗ ಅದು ವಕೀಲನಿಗೆ ಆಗುವ ಅವಮಾನವೇ ಸರಿ ಎಂದರು.
ವಕೀಲರಾದವರು ಭಾರತೀಯ ಸಾಕ್ಷಾಧಾರಿತ ನಿಯಮಗಳ ವಿಚಾರವಾಗಿ ಪರಿಣಿತರಾಗುವುದು ಬಹಳ ಮುಖ್ಯವೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮುಜೀರುಲ್ಲಾ ಉದ್ಘಾಟಿಸಿದರು, ಅಧ್ಯಕ್ಷತೆನ್ನು ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶೆ ಅನುಪಮ ವಹಿಸಿದ್ದರು, ಸರ್ಕಾರಿ ಅಭಿಯೋಜಕಿ ಹೆಚ್.ವಿಮಲಾ, ಸಹಾಯಕ ಅಭಿಯೋಜಕ ಕೆ.ಪಿ.ಜ್ಞಾನೇಂದ್ರ, ಕೆಂಪೇಗೌಡ ಉಪಸ್ಥಿತರಿದ್ದರು.

No comments:

Post a Comment