Thursday 15 September 2016

ದಸರಾ ಆನೆ ಮಾವುತರ ಕುಟುಂಬಕ್ಕೆ ಆರೋಗ್ಯ ತಪಾಸಣೆ
ಮೈಸೂರು,ಸೆ.15- ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನಿಂದ  ನಾಡಿಗೆ ಆಗಮಿಸಿರುವ  ದಸರಾ ಆನೆಗಳ  ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಗಳಿಗೆ  ಇಂದು ಇಂದು ಅರಮನೆ ಆವರಣದಲ್ಲಿ ನಿಮಿಸಿರುವ ಚಿಕಿತ್ಸಾ ಶಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ತೊಂದರೆ ಇರುವವರಿಗೆ ಚಿಕಿತ್ಸೆ ನೀಡಲಾಯಿತು.
 ಜಿಲ್ಲಾಡಳಿತದ ವತಿಯಿಂದ  ಏರ್ಪಡಿಸಿದ್ದ ಈ ಶಿಬಿರದಲ್ಲಿ ಕೆ.ಆರ್. ಆಸ್ಪತ್ರೆಯ ನುರಿತ ವೈದ್ಯರುಗಳು ಪಾಲ್ಗೊಂಡು ಮಾವುತರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.
 ನಿನ್ನೆಯಷ್ಟೇ  ಸಿಕ್ಕು ಎಂಬ ಮಾವುತ ಅರಮನೆ ಆವರಣದಲ್ಲಿ  ಕುಸಿದು ಬಿದ್ದು ಅಶ್ವತ್ಸ ನಾಗಿದ್ದ ರಿಂದ  ತಕ್ಷ ಣ ಎಚ್ಚೆತ್ತುಕೊಂಡ ಜಿಲ್ಲಾಡಳಿತ  ಈ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿತ್ತು.
 12 ಆನೆಗಳ ಮಾವುತರು, ಕಾವಾಡಿಗಳು ಅವರುಗಳ ಹೆಂಡತಿ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಕರ್ನಾಟಕ ಸರ್ಕಾರ ಸು. ಕೋರ್ಟ್ ಸರಿಯಾದ ಅಂಕಿ ಅಂಶ ಕೊಟ್ಟಿಲ್ಲ- ಸಿ.ಶಿವಪ್ಪ
ಮೈಸೂರು,ಸೆ.15- ತಮಿಳುನಾಡಿಗೆ  ಕಾವೇರಿ ನೀರು ಹರಿಸುವ ವಿಷಯದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಸರಿಯಾದ ಅಂಕಿ ಅಂಶಗಳನ್ನು ಕೊಟ್ಟಿಲ್ಲ ಅದರಿಂದಾಗಿಯೇ ಸು.ಕೋರ್ಟ್ ತೀರ್ಪು ತಮಿಳುನಾಡು ಪರವಾಗಿದೆ, ಇಷ್ಟೆಲ್ಲಾ ಗೊಂದಲಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ತಮಿಳುನಾಡು ಹೈಕೋರ್ಟ್‍ನ ನಿವೃತ್ತ ನ್ಯಾಯಧಿಶ ಮಂಡ್ಯ ಜಿಲ್ಲೆಯ ಪಾಂಡವಪುರ ವಾಸಿ
 ಸಿ. ಶವಪ್ಪ ಸ್ಪಷ್ಟ ಪಡಿಸಿದರು.
 ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ,  ತಮಿಳುನಾಡು ನೀರು ಕೇಳಿ ಸು.ಕೋರ್ಟ್ ಮೊರೆ ಹೋದಾಗ ಕರ್ನಾಟಕ ಸರ್ಕಾರ ಕೋರ್ಟಿಗೆ  ಸರಿಯಾದ ಅಂಕಿ ಅಂಶಗಳನ್ನು ಒದಗಿಸಿಲ್ಲ, ಮೊದಲಿಗೆ ಕುಡಿಯಲು ನೀರು, ವಿದ್ಯುತ್ ಉತ್ಪಾದನೆಗೆ ನೀರು, ಶಿಕ್ಷಣ ಕ್ಷೇತ್ರಗಳಿಗೆ ನೀರು, ಕೈಗಾರಿಕೆಗಳಿಗೆ ನೀರು, ಕೊನೆಯಲ್ಲಿ ವೆವಸಾಯಕ್ಕೆ, ಮತ್ತಿತರ ಕೆಲಸಗಳಿಗೆ ಇಂತಿಷ್ಟು ನೀರು ಅವಶ್ಯಕತೆಯಿದೆ ಎಂಬ ಅಂಕಿ ಅಂಶಗಳ ವಿವರಣೆ  ನೀಡಬೇಕಿತ್ತು, ಅದಬಿಟ್ಟು ಸುಮ್ಮನೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು ಸಾಲಲ್ಲ ಎಂದು ಹೇಳಿದರೆ ಕೋರ್ಟ್ ಅದನ್ನು ಕೇಳುವುದಿಲ್ಲ, ಸುಮ್ಮನೆ ಕೋರ್ಟ್ ಮೇಲೆಯು, ಜೆಡ್ಜ್‍ಗಳ ಮೇಲೆ ಕೋಪಗೊಂಡು ಕೋರ್ಟ್ ಗೌರವ ಹಾಳು ಮಾಡುವುದು ಸರಿಯಲ್ಲ, ಸು. ಕೊರ್ರ್ಟ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯು ಸಂಸ್ಥೆಯಾಗಿದೆ ಎಂದರು.
 ಕರ್ನಾಟಕ ಸರ್ಕಾರ ಶವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಪ್ರತಿ ತಿಂಗಳು 2 ಟ.ಎಂ.ಸಿ. ನೀರು ಹರಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ತಾನೆ ಹೋಗುತ್ತದೆ ಅದನ್ನು ಏಕೆ ಎಲ್ಲೂ ಹೇಳಿಲ್ಲ ಅದು ಲೆಕ್ಕೆ ಇಲ್ಲವೇ, ಸು.ಕೋರ್ಟ್‍ಗೆ ಸರ್ಕಾರ ಏಕೆ ಮನವರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಶವಪ್ಪರವರು ಎಲ್ಲಾ ತಪ್ಪುಗಳು ಆಳುವ ಸರ್ಕಾರದ ಮೇಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
 ನಾನು ನ್ಯಾಯಧೀಶನಾಗಿದ್ದವನು, ನಿವೃತ್ತಿ ಆದಮೇಲೆ ಕೃಷಿಯನ್ನೇ ಅವಲಂಭಿಸಿದ್ದೇನೆ, ಒಬ್ಬ ರೈತನಾಗಿ ವ್ಯವಸಾಯ ಮಡುತ್ತಿದ್ದೇನೆ, ನಾನು ಈ ನಾಡಿನ ಮಣ್ಣಿನ ಮಗನೇ ಆದರೂ ನನ್ನ ಮನೆಗೆ ತಿಳಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಸರ್ಕಾರ ಸಣ್ಣ ಪುಟ್ಟ ಪುಡಾರಿಗಳಿಗೆ ರಕ್ಷಣೆ ಕೊಡುತ್ತದೆ, ಆದರೆ ಜೆಡ್ಜ್‍ಸ್‍ಗಳ ಮನೆಗಳಿಗೆ ರಕ್ಷಣೆ ನಿಡುತ್ತಿಲ್ಲ, ನನ್ನ ಮನೆಗೆ ಕಲ್ಲು ಹೊಡೆದವರನ್ನು ಇನ್ನೂ ಬಂಧಿಸಿಲ್ಲ, ಸರ್ಕಾರವೂ ಈಬಗ್ಗೆ ಯಾವೊಮಂದು ಮಾಹಿತಿ ಕೇಳಿಲ್ಲ, ನಾನೂ ಸಹ ಯಾವ ಸಹಾಯವನ್ನೂ ಕೇಳಲ್ಲ ಎಂದು ನುಡಿದರು.
 ಸರ್ಕಾರ ನೀರುಕೊಡುತ್ಗತೇವೆ ಎಂದು ಸುಳ್ಳು ಹೇಳಿ ರೈತರ ದಾರಿತಪ್ಪಿಸುತಿದೆ, ಸುಳ್ಳು ಹೇಳಬೇಡಿ,  ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕಾನೂನು ಸಲಹೆ ಬೇಕಾದರೆ ನನ್ನ ಬಳಿಬರಲಿ, ಆದರೆ ನಾನಾಗೆಯೇ ಅವರ ಬಳಿ ಹೋಗುವುದಿಲ್ಲ. ಎಂದರಲ್ಲದೆ, ರಾಜ್ಯದಲ್ಲಿ ನೀರಿಸ ಸಮಸ್ಯೆ ಉದ್ಭವವಾದಾಗ ರಾಜ್ಯದಲ್ಲೇ ನುರಿತ ಕಾನೂನು ತಜ್ಞರಿದ್ದಾರೆ, ನೀವೃತ್ತ ಜೆಡ್ಜ್‍ಸ್‍ಗಳಿದ್ದಾರೆ ಎಂದಾರೂ ಅವರನ್ನು ಕರೆದು ಚರ್ಚೆ ನಡೆಸಿದ್ದಾರೆಯೇ ಎಂದರು.
 ರಾಜ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಂದ್ ಒಂದೇ ಪರಿಹಾರವಲ್ಲ, ಇನ್ನುಮಂದೆ ಬಂದ್‍ಗೆ ಕರೆಕೊಡಬೇಡಿ, ಇದರಿಮದ ಸಾವಿರಾರು ಮಂದಿ ಬq ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ, ಬಡವರ ಅನ್ನ್ ಕಿತ್ತಂತಾಗುತ್ತದೆ,ಸಾವ್ಜನಿಕರ ಆಸ್ತಿ ಪಾಸ್ತಿ ಹಾಳಾಗುತ್ತದೆ ಎಂದು ತಿಳಿಸಿದರು.

No comments:

Post a Comment