Monday 28 September 2015

ದಸಂಸ ರಾಜ್ಯ ಸಂಚಾಲಕರಾಗಿ ಗುರುಪ್ರಸಾದ್ ಕೆರಗೋಡು ಪುನರಾಯ್ಕೆ
ಮಂಡ್ಯ:ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಭೆಯಲ್ಲಿ ಮಂಡ್ಯದ ಗುರುಪ್ರಸಾದ್ ಕೆರೆಗೋಡು ಅವರನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರನ್ನಾಗಿ ಪುನರ್ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಗಿದ್ದು, ಪಟ್ಟಿ ಇಂತಿದೆ.
ಗುರುಪ್ರಸಾದ್ ಕೆರಗೋಡು ರಾಜ್ಯ ಸಂಚಾಲಕ, ಮರಿಯಪ್ಪ  ಹಳ್ಳಿ,ರಾಜ್ಯ ಸಂಘಟನಾ ಸಂಚಾಲಕ ( ಆಂತರಿಕ ಶಿಸ್ತು ತರಬೇತಿ ವಿಭಾಗ), ಸಿದ್ದಲಿಂಗಯ್ಯ ಕಮಲನಗರ, ರಾಜ್ಯ ಸಂಘಟನಾ ಸಂಚಾಲಕ (ದಲಿತ ನೌಕರರು, ಕಾರ್ಮಿಕರ ವಿಭಾಗ), ಗೋವಿಂದಪ್ಪ ಕೊಡಗು, ರಾಜ್ಯ ಸಂಘಟನಾ ಸಂಚಾಲಕ ( ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿಭಾಗ), ಶ್ರೀನಿವಾಸ್ ಚಿಕ್ಕಮಗಳೂರು, ರಾಜ್ಯ ಸಂಘಟನಾ ಸಂಚಾಲಕ, ಗಂಗನಂಜಯ್ಯ  ರಾಜ್ಯ ಖಜಾಂಚಿ ಹಾಗೂ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಹಿರಿಯರಾದ ಹೆಬ್ಬಾಳೆ ಲಿಂಗರಾಜು, ಉಲ್ಕೆರೆ ಮಹದೇವ ಅವರನ್ನು ಆಯ್ಕೆ ಮಾಡಲಾಗಿದ್ದು, ಉಳಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಮುಂದಿನ ರಾಜ್ಯ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಗುವುದು.

No comments:

Post a Comment