Monday 26 October 2015


ಮೈಸೂರು ನಗರ ಸಿ.ಸಿ.ಬಿ. ಪೊಲೀಸರಿಂದ ವೇಶ್ಯಾವಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ದಾಳಿ. 05 ಜನರ ಬಂಧನ. ನಗದು , ಮೊಬೈಲ್ ಫೋನ್ ಹಾಗೂ ದ್ವಿ ಚಕ್ರ ವಾಹನ ವಶ.
*****
     24ರಂದು ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮತ್ತು ಲಷ್ಕರ್ ಠಾಣೆ ಪೊಲೀಸರು ಮೈಸೂರು ನಗರ ಹಳ್ಳದಕೇರಿ, ಕೇಶವಾ ಅಯ್ಯಂಗಾರ್ ರಸ್ತೆ, ನಂ: 2896 ರ ಶ್ರೀ ಸಾಯಿ ರೆಸಿಡೆನ್ಸಿ ಮೇಲೆ ದಾಳಿ ಮಾಡಿ
ವೇಶ್ಯಾವಾಟಿಕೆ ನಡೆಸುತ್ತಿದ್ದ –
ಶಿವಕುಮಾರ್.ಕೆ. ಬಿನ್ ಕೃಷ್ಪ್ಪ, 22 ವಷೌ, ನಾಗಸಂಗ್ರ ಕಾಲೋನಿ, ಬೆಂಗಳೂರು
ಅನಿಲ್ ಕುಮಾರ್, ಅಂಬಳಿಕೆ, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ
ತಿಮ್ಮೇಶ ವಿ.ಕೆ. @ ಪ್ರವೀಣ್ ಬಿನ್ ವಿಜಯಕುಮಾರ್, 24 ವರ್ಷ, ಕೊಡಮಗ್ಗೆ, ಶಿವಮೊಗ್ಗ ಜಿಲ್ಲೆ
ಕುಮಾರ್ ಬಿನ್ ಜವರಪ್ಪ, 23 ವರ್ಷ, ಲಾಡ್ಜ್ ರಿಸೆಪ್ಷನಿಷ್ಟ್, ಹಂಪಾಪುರ, ಮೈಸೂರು ಜಿಲ್ಲೆ

ಹಾಗೂ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ-
ಹರೀಶ್ ಬಿನ್ ಚಿಕ್ಕಣ್ಣೇಗೌಡ, 30 ವರ್ಷ, ಬೇವಿನಕುಪ್ಪೆ, ಮಂಡ್ಯ ಜಿಲ್ಲೆ

ಎಂಬುವವರುಗಳನ್ನು ಬಂಧಿಸಿ, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ ರೂ. 8,000/- ನಗದು, 06 ಮೊಬೈಲ್ ಫೋನ್‍ಗಳು ಮತ್ತು 1 ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಹಾಗೂ ಪಶ್ಚಿಮ ಬಂಗಾಳದ  ಮೂವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಆರೋಪಿಗಳು ಬೆಂಗಳೂರಿನಿಂದ ಹುಡುಗಿಯರನ್ನು ಕರೆತಂದು ಮೈಸೂರಿನಲ್ಲಿ ಲಾಡ್ಜ್‍ಗಳನ್ನು ಬುಕ್ ಮಾಡಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

     ಈ ದಾಳಿ ಕಾರ್ಯದಲ್ಲಿ ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.ಎನ್.ಡಿ. ಬಿರ್ಜೆ ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ. ಘಟಕದ ಎ.ಸಿ.ಪಿ. ಸಿ. ಗೋಪಾಲ್ ರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶ್ರೀಮತಿ. ಚಂದ್ರಕಲಾ, ಜಿ.ಸಿ. ರಾಜು ಹಾಗೂ ಲಷ್ಕರ್ ಠಾಣೆ ಇನ್ಸ್‍ಪೆಕ್ಟರ್ ಕಾಂತರಾಜು ಮತ್ತು ಸಿ.ಸಿ.ಬಿ. ಯ ಪಿ.ಎಸ್.ಐ. ಅರುಣಕುಮಾರಿ, ಎ.ಎಸ್.ಐ. ಕೇಶವಮೂರ್ತಿ, ಸಿಬ್ಬಂದಿಗಳಾದ ರವಿ, ರಾಧೇಶ್, ಮಂಜುನಾಥ್, ರಾಮಸ್ವಾಮಿ, ಮಹಿಳಾ ಸಿಬ್ಬಂದಿ ಮಂಜುಳ ಹಾಗೂ ಚಾಲಕರಾದ ರಾಜೇಶ್ ರವರ ತಂಡ ನಡೆಸಲಾಗಿರುತ್ತದೆ ಎಂದು ಪೋಲೀಸ್ ಆಯುಕ್ತರ ಕಛೇರಿಯ
ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ .

No comments:

Post a Comment