Saturday 31 October 2015

ಕ.ರ.ವೆ ಹೋರಾಟಗಾರರ ವಿರುದ್ಧದ ಮೊಕ್ಕದ್ದಮೆ ಹಿಂಪಡೆಯಲು ಒತ್ತಾಯ
ಮೈಸೂರು,ಅ.31-ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಬರರ್ಬನ್ ಬಸ್ ನಿಲ್ದಾಣದಲ್ಲಿ ಬಾಟ ಮಳಿಗೆ ಮೇಲೆ ದಾಳಿನಡೆಸಿ ಮಾಲೀಕರ ವರ್ತನೆ ವಿರುದ್ಧ ಹೋರಾಡಿದಕ್ಕಾಗಿ ಕಾರ್ಯಕರ್ತರ ಮೇಲೆ ದರೋಡೆ, ಡಕಾಯಿತಿ ಮೊಕದ್ದಮೆ ದಾಖಲಿಸಿರುತ್ತಾರೆ ಈ ಮೊಕ್ಕದಮೆಯನ್ನು ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದಲ್ಲಿ ವೇದಿಕೆಯು ರಾಜ್ಯಾದ್ಯಂತ ಇರುವ ಎಲ್ಲಾ ಬಾಟ ಷೋ ರೂಂಗಳ ಎದುರು ಪ್ರತಿಭಟನೆ ಮಡೆಸಬೇಕಾಗುತ್ತದೆ ಎಂದು ಕ.ರ.ವೇ ಜಿಲ್ಲಾಧ್ಯಕ್ಷ ಕಿರಣ್ ಗೌಡ ತೀಳಿಸಿದರು.
 ಇಂದು  ಸುದ್ಧುಗೋಷ್ಟಿಯಲ್ಲಿ ಮಾತನಾಡುz ಅವರು ಮೈಸೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಾಟ ಶೂ ಕಂಪನಿಯವರು ಮಳಿಗೆ ತೆರೆದಿದ್ದು, ಅಲ್ಲಿ ಶೂ ಚಪ್ಪಲಿಗಳನ್ನು ಮಾರಾಟ ಮಾಡುವಾಗ  ಕನ್ನಡ ಬಾವುಟದ ಬಣ್ಣ ಹೊಂದಿರುವ ಬಟ್ಟೆಗಳನ್ನು ಹಾಸಿ ಅಲಂಕರಿಸಿ ಅದರ ಮೇಲೆ ಶೂಸ್‍ಗಳು, ಚಪ್ಪಲಿಗಳನ್ನು ಪ್ರದರ್ಶನಕ್ಕೆ ಇರಿಸಿ ವ್ಯಾಪಾರ ಮಾಡುತ್ತಿದ್ದರು.
 ಆ ಸಂದರ್ಭದಲ್ಲಿ ಕನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಬ್ಬರು ಶೂ ತೆಗೆದುಕೊಳ್ಳಲು ತೆರಳಿದ್ದು, ಅಲ್ಲಿ ಕನ್ನಡ ಬಾವುಟ ಹಾಸಿ ಚಪ್ಪಲಿ ಇರಿಸಿರುವುದನ್ನು ಕಂಡು ಮನನೊಂದು ಇತರೆ ಕಾರ್ಯ ಕತ್ರಿಗೆ ವಿಷಯ ತಿಳಿಸÀಲಾಗಿ ಅವರುಗಳು ಬಂದು ಇದು ಕನ್ನಡ ದ್ವಜಕ್ಕೆ  ಮಾಡಿದ ಅವಮಾನ ಆದ್ದರಿಂದ ಇದನ್ನು ತೆಗೆಯಿರಿ ಎಮದು ಹೇಳಿದ್ದಕ್ಕೆ  ಮಾಲೀಕ ಉದ್ದಟತನದ ಮಾತಾಡಿದ ಇದರಿಂದ ಕೆರಳಿದ  ಕಾರ್ಯಕರ್ತರು ದಾಳಿಮಾಡಿದರು ಇಷ್ಟಕ್ಕೆ ಕಾರ್ಯಕರ್ತರ ವಿರುದ್ಧ ದರೋಡೆ, ಡಕಾಯಿತಿ  ಪ್ರಕರಣ ದಾಖಲಿಸಿ ದೂರು ನೀಡಿರುವುದು ಖಂಡನೀಯ, ಆದ್ದರಿಂದ ಈ ಮೊಕ್ಕದ್ದಮೆ ಹಿಂಪಡೆಯಬೇಕೆಂದು ಒತ್ತಾಯಿಸಿದರು.
 ಪತ್ರಿಕಾ ಗೋಷ್ಠಿಯಲ್ಲಿ ಸತೀಶ್‍ಗೌಡ, ಮಧು, ಆನಂದ, ಪರಮೇಶ್, ಶ್ರೀಕಾಂತ್ ಉಪಸ್ಥಿತರಿದ್ದರು.
 ಮಗು ಅನುಮಾನಾಸ್ಪದ ಸಾವು, ಕೊಲೆ ಶಂಕೆ
ಮೈಸೂರು,ಅ.31- ಸುಮಾರು ಎರಡು ವರ್ಷದ ಹೆಣ್ಣು ಮಗುವೊಂದು ಅನುಮಾನಾಸ್ಪದ ರೀತಿಯಲ್ಲಿ  ಕೊಲೆಯಾಗಿದ್ದು, ಅರತ್ಯಾಚಾರ ಮತ್ತು ಕೊಲೆ ಶಂಕೆ ವ್ಯಕ್ತವಾಗಿದ್ದು ಮೇಟಗಳ್ಳಿ ಠಾನಾ ವ್ಯಾಪಿಯಲ್ಲಿ ಜರುಗಿದೆ.
  ಮೇಟಗಳ್ಳಿಯ ಅಂಬೇಡ್ಕರ್‍ನಗರ ವಾಸಿ ಲಕ್ಷ್ಮಣ್ ಎಮಬುವರ ಮಗು ಇದಾಗಿದ್ದು, ಲಕ್ಷ್ಮಣ್ ಹೆಂಡತಿಯಿಂದ ದೂರಾಗಿ ಮಗುವಿನಜೊತೆ ವಾಸವಾಗಿದ್ದ, ಕೆಲಸಕ್ಕೆ  ಹೋಗುವಾಗ ನಗರದ ಹೊರ ವಲಯದಲ್ಲಿರುವ ತನ್ನ ತಂಗಿ ಮನೆಯಲ್ಲಿ ಮಗುವನ್ನು ಬಿಟ್ಟು ಹೋಗುತ್ತಿದ್ದ, ತಂಗಿ ಮುಸ್ಲೀಂ ವರ್ಗಕ್ಕೆ ಸೇರಿz ಸದ್ದಾಂ ಎಂಬುವವರನ್ನು ಮದುವೆಯಾಗಿ ಆತನೊಮದಿಗೆ ವಾಸವಾಗಿದ್ದಳು, ಸದ್ದಾಂ ಚಿಂದಿಆಯುವ ಕೆಲಸ ಮಾಡಿಕೊಂಡಿದ್ದ,  ನಿನ್ನೆ ದಿನ ಇದ್ದಕಿದ್ದಂತೆ ಮಗು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ, ಸದ್ದಾಂ ಈ ವಿಷಯವನ್ನು ತನ್ನೆ ಹೆಂಡತಿ ಹಾಗೂ  ಲಕ್ಷ್ಮಣ್‍ಗೆ  ತಿಳಿಸಿ ಮಗುವನ್ನು ತಂದು ಅಂತ್ಯಸಂಸ್ಕಾರ ಮಾಡಲು ತಯಾರಿ ನಡೆಸುವಾಗ ಮಗುವಿನ ಮೈಮೇಲೆ ಗಾಯದ ಗುರುತುಗಳು ಇರುವುದನ್ನು  ಗಮನಿಸಿದ ಸಾರ್ವಜನಿಕರು ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿ ಕೂಲಂಕುಶವಾಗಿ ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದರು.  ಪೊಲೀಸರು ಬಂದು ಪರಿಶೀಲಿ ಕೊಲೆಪ್ರಕರಣ ದಾಖಲಿಸಿಕೊಂಡು  ಶವವನ್ನು ಪರೀಕ್ಷೆಗೆ  ಕಳುಹಿಸಿದ್ದಾರೆ.  ಶವಪರೀಕ್ಷೆಯ ವರಧಿ ಬಂದನಂತರವೇ ನಿಜಾಂಶ ತಿಳಿಯಲಿದೆ.
ಒಂದು ಮೂಲದ ಪ್ರಕಾರ ಸದ್ದಾಂ ಮಗುವಿನಮೇಲೆ  ಅತ್ತಯಾರವೆಸಗಿ ಹತ್ಯೆಮಾಡಿದ್ದಾನೆ ಎಂದು ಹೇಳಲಾಗಿದೆ.

No comments:

Post a Comment