Friday 21 August 2015

ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ರವ
ವರಿಗೆ ಮಾಜಿ ಸಚಿವ ಜಿ.ಮಾದೇಗೌಡರವರು ಕೊಲೆ ಬೆದರಿಕೆ ಹಾಕಿರುವುದನ್ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಖಂಡಿಸುತ್ತದೆ ಎಂದು ಸಂಘದ ಮಂಡ್ಯ ಜಿಲ್ಲಾದ್ಯಕ್ಷ ನಾಗೇಶ್ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಅತ್ಯಂತ ದಕ್ಷರಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಯವರಿಗೆ ಈ ರೀತಿಯಲ್ಲಿ ಕೊಲೆ ಬೆದರಿಕೆ ಹಾಕಿರುವುದನ್ನ ಕೆಳ ಹಂತದ ಅಧಿಕಾರಿಗಳು ಹಾಗೂ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಹಿರಿಯ ರಾಜಕಾರಣಿ ಯಾದ ಮಾದೇಗೌಡರವರು ಪ್ರಮಾಣಿಕ ಜಿಲ್ಲಾಧಿಕಾರಿಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಬದಲು ಕೊಲೆ ಬೆದರಿಕೆ ಹಾಕಿರುವ ದುರಂತ ಎಂದು ಹೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಅಪ್ಪಾಜಪ್ಪ,ಚಂದ್ರಶೇಖರ್, ತಮ್ಮಣ್ಣಗೌಡ,ಮಹೇಶ್, ನಾಗೇಶ್, ಹೇಮಣ್ಣ ಉಪಸ್ಥಿತರಿದ್ದ ರು.

No comments:

Post a Comment