Wednesday 11 May 2016

ದಕ್ಷಿಣ ಪದವೀಧರರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ
ನೀತಿಸಂಹಿತೆ ಪಾಲನೆಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಮೈಸೂರು,ಮೇ.11.ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು ಅಧಿಕಾರಿಗಳು ಅತ್ಯಂತ ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲನೆಗೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೇ 10 ರಿಂದಲೇ ಸದಾಚಾರ ಸಂಹಿತೆ ಜಾರಿಗೆ ಬಂದಿದ್ದು, ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಇರಲಿದೆ. ಈ ಅವಧಿಯಲ್ಲಿ ಅನುಸರಿಸಬೇಕಿರುವ ಸದಾಚಾರ ಸಂಹಿತೆ ಕುರಿತು ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದೆ. ಈ ಪ್ರಕಾರ ಅಧಿಕಾರಿಗಳು ಅತ್ಯಂತ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ವೇಳಾಪಟ್ಟಿಯು ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೇ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 24 ರಂದು ನಾಮಪತ್ರಗಳು ಪರಿಶೀಲನೆ ಕಾರ್ಯ ನಡೆಯಲಿದ್ದು, ಮೇ 26 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನ. ಜೂನ್ 9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 13 ರಂದು ಎಣಿಕೆ ಕಾರ್ಯ ನೆರವೇರಲಿದೆ. ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದರು.    
ನೀತಿ ಸಂಹಿತೆ ಅವಧಿ ಜಾರಿ ಇರುವ ಸಮಯದಲ್ಲಿ ಉಲ್ಲಂಘನೆ ಪ್ರಕರಣಗಳÀು ಕಂಡುಬಂದಲ್ಲಿ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು. ನೀತಿಸಂಹಿತೆ ಪಾಲನೆ ನಿಗಾ ಕೆಲಸವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ವಹಿಸದೇ ಚುನಾವಣಾ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಧಿಕಾರಿಗಳು ಅನುಮತಿಯಿಲ್ಲದೆ ರಜೆ ಹೋಗುವಂತಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹೊಸ ವಿಷಯ ನಿಯಮಗಳು ಸೇರ್ಪಡೆಯಾಗುತ್ತವೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಯಾವುದೇ ಅನುಮಾನ ಗೊಂದಲಗಳಿದ್ದರೆ ಪರಿಹರಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
     ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವ ಸಂಬಂಧ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳನ್ನು ಕೂಡಲೇ ಡೇಟಾ ಎಂಟ್ರಿ ಮಾಡಿ ಅನುಮೋದನೆಯನ್ನು ಮೇ 13 ರೊಳಗೆ ನೀಡಲು ಕ್ರಮವಹಿಸುವುದು. ಮೇ 16 ರ ತನಕ ಮಾತ್ರ ಅರ್ಜಿಗಳನ್ನು ಸ್ವೀಕರಿಸುವುದು ಅವುಗಳನ್ನು ಸಹ ಮೇ 23 ರೊಳಗೆ ನಿಯಮಾನುಸಾರ ಇತ್ಯರ್ಥ ಪಡಿಸಲು ಕ್ರಮವಹಿಸುವುದು ಎಂದರು.
    ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ   ಪ್ರಮುಖ ಸ್ಥಳದಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.   ಪ್ರಿಂಟಿಂಗ್ ಪ್ರೆಸ್‍ಗಳಿಗೆ ಸೂಚನೆ ನೀಡಿ, ಚುನಾವಣೆ ಸಂಬಂಧ ಯಾವುದೇ ಅಭ್ಯರ್ಥಿಯಾಗಲಿ ಅಥವಾ ರಾಜಕೀಯ ಪಕ್ಷವಾಗಲಿ ಚುನಾವಣಾ ಪ್ರಚಾರ ಸಾವiಗ್ರಿಗಳನ್ನು ಮುದ್ರಣ ಮಾಡಿಸಿಕೊಂಡ ಬಾಬ್ತು ತಾಲ್ಲೂಕು ತಹಶೀಲ್ದಾರ್‍ರವರ ಕಛೇರಿಗೆ ಪ್ರತಿ ದಿನ ಅಪೆಂಡಿಕ್ಸ್ ಎ ಮತ್ತು ಅಪೆಂಡಿಕ್ಸ್ ಬಿ ಯಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಬೇಕು.  ಚುನಾವಣಾ ಸಾಮಗ್ರಿಗಳನ್ನು ಮುದ್ರಣ ಮಾಡಿದ ಪಕ್ಷದಲ್ಲಿ ಯಾವ ಮುದ್ರಕರು ಮುದ್ರಣ ಮಾಡಿದ್ದಾರೆ, ಮತ್ತು ಎಷ್ಟು ಪ್ರತಿಗಳನ್ನು ಮುದ್ರಣ ಮಾಡಿರುತ್ತಾರೆಂದು ಆ ಪೋಸ್ಟರ್‍ನಲ್ಲಿ ತಪ್ಪದೇ ನಮೂದಿಸಲು ಸೂಚನೆಗಳನ್ನು ಚುನವಣಾ ಅಭ್ಯರ್ಥಿಗಳ ಸಭೆ ಕರೆದು ನೀಡಬೇಕು ಎಂದರು.
    ತಹಶೀಲ್ದಾರಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹಾಗೂ ಎ.ಪಿ.ಎಂ.ಸಿ ಅಧ್ಯಕ್ಷರ ವಾಹನ ಹಾಗೂ ಸರ್ಕಾರಿ ಅತಿಥಿ ಗೃಹ / ಪ್ರವಾಸಿ ಮಂದಿರ ತಹಶೀಲ್ದಾರ್‍ರವರ ಸುಪರ್ದಿಗೆ ಪಡೆದುಕೊಳ್ಳಬೇಕು. ಅಕ್ರಮ ಮದ್ಯ ತಯಾರಿಸಿರುವ ಕೇಂದ್ರಗಳು, ವಿತರಣಾ ಕೇಂದ್ರಗಳ ಮೇಲೆ ದಾಳಿ ನಡೆಸುವಂತೆ ಹಾಗೂ ಸಭೆ ಸಮಾರಂಭ, ಸಾಂಸ್ಕøತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಬೆಟಸೂರ ಮಠ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಮೈಸೂರು ನಗರ ಪೊಲೀಸ್ ಉಪ ಆಯುಕ್ತ ಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ದೂರುಗಳಿದ್ದಲ್ಲಿ ಸಲ್ಲಿಸಿ:
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ10 ರಿಂದಲೇ ಸದಾಚಾರ ಸಂಹಿತೆ ಜಾರಿಗೆ ಬಂದಿದ್ದು, ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಅಥವಾ ಜಿಲ್ಲಾ ಕಂಟ್ರೋಲ್ ರೂಂ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ. ವಿವರ ಇಂತಿದೆ
ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077 ಅಥವಾ 0821-2423800
ಕ್ರ.
ಸಂ.
ಅಧಿಕಾರಿಯವರ ವಿವರ
ಶ್ರೀಯುತರು
ಮೊಬೈಲ್ ಸಂಖ್ಯೆ
ಕಛೇರಿ ದೂರವಾಣಿ
ಕಂಟ್ರೋಲ್ ರೂಂ
1
ಸಿ. ರಾಜು
ಉಪ ಆಯುಕ್ತರು, (ಆಡಳಿತ )
ಮೈಸೂರು ಮಹಾನಗರ ಪಾಲಿಕೆ
94498-41199
0821-2418807
0821-2418800
0821-2418816
2
ಸಿ.ಎಲ್.ಆನಂದ್
ಉಪವಿಭಾಗಾಧಿಕಾರಿಗಳು
ಮೈಸೂರು ಉಪವಿಭಾಗ, ಮೈಸೂರು
95358-70900
0821-2422100
-
3
ರಾಜೇಶ್
ಉಪವಿಭಾಗಾಧಿಕಾರಿಗಳು
ಹುಣಸೂರು ಉಪವಿಭಾಗ, ಹುಣಸೂರು
9986502491
08222-252073
-
4
ಎ.ನವೀನ್‍ಜೋಸೆಫ್
ತಹಶೀಲ್ದಾರ್
ಮೈಸೂರು ತಾಲ್ಲೂಕು, ಮೈಸೂರು
99452-54100
0821-2414811
0821-2414812
5
ಹೆಚ್.ರಾಮಪ್ಪ
ತಹಶೀಲ್ದಾರ್,
ನಂಜನಗೂಡು ತಾಲ್ಲೂಕು, ನಂಜನಗೂಡು
94484-14555
08221-226252
08221-223108
6
ಶೂಲದಯ್ಯ
ತಹಶೀಲ್ದಾರ್,
ಟಿ.ನರಸೀಪುರ ತಾಲ್ಲೂಕು,ಟಿ.ನರಸೀಪುರ
98458-80132
08227-261233
08227-260210
7
ಎನ್.ವಂಕಟಾಚಲಪ್ಪ
ತಹಶೀಲ್ದಾರ್,
ಹುಣಸೂರು ತಾಲ್ಲೂಕು, ಹುಣಸೂರು
94800-58094
08222-252040
08222-252040
8
ಹೆಚ್.ಕೆ.ನಾಗರಾಜು
ತಹಶೀಲ್ದಾರ್,
ಕೆ.ಆರ್.ನಗರ ತಾಲ್ಲೂಕು, ಕೆ.ಆರ್.ನಗರ
84948-28571
08223-262234
08223-262371
9
ರಂಗರಾಜು
ತಹಶೀಲ್ದಾರ್,
ಪಿರಿಯಾಪಟ್ಟಣ ತಾಲ್ಲೂಕು, ಪಿರಿಯಾಪಟ್ಟಣ
9449095793
08223-274175
08223-274007
10
ನಂಜುಂಡಯ್ಯ
ತಹಶೀಲ್ದಾರ್
ಹೆಚ್.ಡಿ.ಕೋಟೆ ತಾಲ್ಲೂಕು, ಹೆಚ್.ಡಿ.ಕೋಟೆ
94490-95782
08228-255325
08228-255325


ದರಪಟ್ಟಿ ಆಹ್ವಾನ
      ಮೈಸೂರು,ಮೇ.11-ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕೋರ್ಟ್ ಹಾಲ್‍ನಲ್ಲಿರುವ ಯು.ಪಿ.ಎಸ್. ಅನ್ನು ಸದರಿ ಕಚೇರಿಯಲ್ಲಿ ತೆರೆದ ಬ್ಯಾಟರಿ ಕೊಠಡಿಗೆ ಸ್ಥಳಾಂತರಿಸಲು ಅಗತ್ಯವಿರುವ ವಿದ್ಯುತ್ ವೈರಿಂಗ್ ಕಾಮಗಾರಿಯನ್ನು ನಿರ್ವಹಿಸಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
     ಆಸಕ್ತ ಸಂಸ್ಥೆಯವರು ಸ್ಥಳ ಪರಿಶೀಲನೆ ಮಾಡಿಕೊಂಡು ಮೇ 16 ರ ಸಂಜೆ 4 ಗಂಟೆಯೊಳಗಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ದರಪಟ್ಟಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವುದು ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ನಾಮ ನಿರ್ದೇಶನ ಆಹ್ವಾನ
    ಮೈಸೂರು,ಮೇ.11.ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪತ್ರಕರ್ತರನ್ನು 2014-15ನೇ ದಿನದರ್ಶೀ ವರ್ಷಗಳ ತಲಾ 50,000 ರೂ ನಗದು ಒಳಗೊಂಡ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹಾಗೂ ಪತ್ರಿಕಾ ಸಂಘಟನೆಗಳು ಮತ್ತು ಸಂಘ-ಸಂಸ್ಥೆಗಳಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ.
ವಾರ್ತಾ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿನ ಪರಿಣಿತರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಈ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದೆ.
ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸುವವರು ಮುದ್ರಣ ಮಾಧಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿರಬೇಕು  ಅಲ್ಲದೆ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರಬೇಕು.
ಅಭಿವೃದ್ಧಿ ಪ್ರಶಸ್ತಿ: ಅಭಿವೃದ್ಧಿಗೆ ರಾಜ್ಯದೆಲ್ಲೆಡೆ ಉತ್ತಮ ವಾತಾವರಣ ಕಲ್ಪಿಸಲು ಅನುವಾಗುವಂತೆ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಬರೆದು ಅಭಿವೃದ್ಧಿ ಪ್ರಕ್ರಿಯೆಗೆ ಪುಷ್ಟಿ ನೀಡಿ ಸಮಾಜಕ್ಕೆ ಉಪಕರಿಸುವ ಪತ್ರಕರ್ತರಿಗೆ ರೂ 50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಪರಿಸರ ಪ್ರಶಸ್ತಿ: ಪರಿಸರ ಸಂರಕ್ಷಣೆ ಕುರಿತು ಪೂರಕ ಲೇಖನಗಳನ್ನು ಬರೆದು ರಾಜ್ಯದಲ್ಲಿನ ಪರಿಸರ ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗೆ ರೂ 50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಮೊಬೈಲ್ ಸಂಖ್ಯೆ ಒಳಗೊಂಡಂತೆ ಸಂಪರ್ಕ ವಿಳಾಸದೊಂದಿಗೆ ಸ್ವ ವಿವರಗಳು ಹಾಗೂ ಮಾಡಿರುವ ಸಾಧನೆಗಳ ವಿವರಗಳನ್ನು ‘ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ ಸಂಖ್ಯೆ : 17, ಭಗವಾನ್ ಮಹಾವೀರ ರಸ್ತೆ ಬೆಂಗಳೂರು-560001’ ಈ ವಿಳಾಸಕ್ಕೆ ಮೇ 25 ರೊಳಗೆ ಸಲ್ಲಿಸಬಹುದು.
ಅರ್ಜಿಯೊಂದಿಗೆ ತಮ್ಮ ವಿಶೇಷ ಸಾಧನೆಯನ್ನು ಸಮರ್ಥಿಸಲು ತಮ್ಮ ಪ್ರಕಟಿತ ವಿಶೇಷ ಲೇಖನಗಳು, ಲೇಖನಾ ಮಾಲೆಗಳ ಪತ್ರಿಕಾ ತುಣುಕುಗಳು ಅಥವಾ ಪ್ರಕಟಿತ ಪುಸ್ತಕಗಳ ಪ್ರತಿಗಳು ಈಗಾಗಲೇ ಪಡೆದಿರುವ ಗೌರವಗಳ ದಾಖಲೆಗಳನ್ನೂ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
     ಮೈಸೂರು,ಮೇ.11.ಮೈಸೂರು ಜಿಲ್ಲಾ ಪಂಚಾಯಿತಿಯ ಸ್ವಚ್ಫ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2016ರ ಮೇ ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಕೆ.ಆರ್.ನಗರ ತಾಲ್ಲೂಕಿನಲ್ಲಿ ಮೇ 12 ರಂದು ಹನಸೋಗೆ, ಮೇ 18 ರಂದು ಹಂಪಾಪುರ, ಮೇ 25 ರಂದು ಹೆಬ್ಬಾಳು, ಮೇ 30 ರಂದು ಹನಸೋಗೆ, ಮೈಸೂರು ತಾಲ್ಲೂಕಿನಲ್ಲಿ ಮೇ 13 ರಂದು ಕೀಳನಪುರ, ಮೇ 26 ರಂದು ಯಡಕೊಳ, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮೇ 16  ರಂದು ನಾಗನಹಳ್ಳಿ,  ಹುಣಸೂರು ತಾಲ್ಲೂಕಿನಲ್ಲಿ ಮೇ 17  ರಂದು ಬೋಳನಹಳ್ಳಿ, ಮೇ 24 ರಂದು ಬಿಜಗನಹಳ್ಳಿ, ತಿ.ನರಸೀಪುರ ತಾಲ್ಲೂಕಿನಲ್ಲಿ ಮೇ 19 ರಂದು ಗರ್ಗೇಶ್ವರಿ, ಮೇ 23 ರಂದು ಸೋಮನಾಥಪುರ, ಮೇ 28 ರಂದು ಕೇತುಪುರ, ನಂಜನಗೂಡು ತಾಲ್ಲೂಕಿನಲ್ಲಿ ಮೇ 20 ರಂದು ದೇಬೂರು, ಮೇ 31 ರಂದು ಹುಳಿಮಾವು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮೇ 21 ರಂದು ಬೈಲುಕುಪ್ಪೆ, ಮೇ 27 ರಂದು ಕಣಗಾಲು ಗ್ರಾಮದಲ್ಲಿ ವಾಹನ ಸಂಚರಿಸಲಿದೆ  ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಗಿತಗೊಂಡಿರುವ ಸಹಕಾರ ಸಂಘಗಳ ಸಮಾಪನೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
    ಮೈಸೂರು,ಮೇ.11-ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸ್ಥಗಿತಗೊಂಡಿರುವ ಅಗಸನಹುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ದೇವಲಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಹೆಚ್.ಡಿ.ಕೋಟೆಯ ತಾಲ್ಲೂಕು ಸ್ತ್ರೀಶಕ್ತಿ ಮಹಿಳಾ ಸಹಕಾರ ಸಂಘ ನಿ., ವಡ್ಡರಗುಡಿಯ ಚಿಕ್ಕದೇವಮ್ಮ ಕಲ್ಲುಕುಟಿಕರ ಲೆಬರ್ ಕಂಟ್ರಾಕ್ಟ್ ಸಹಕಾರ ಸಂಘ ನಿ., ಬಿದರಳ್ಳಿಯ ಬಿದರಳ್ಳಿ ವಿವಿದೋದ್ದೇಶ ಸಹಕಾರ ಸಂಘ ನಿ., ಕಾಟವಾಳು ಶ್ರೀ ಹುಲಿಮಾಸ್ತಮ್ಮ ವಿವಿದೋದ್ದೇಶ ಸಹಕಾರ ಸಂಘ ನಿ., ವಡ್ಡರಪಾಳ್ಯದ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ಲೇಬರ್ ಕಂಟ್ರಾಕ್ಟ್ ಸಹಕಾರ ಸಂಘ ನಿ., ಬೀರನಹಳ್ಳಿಯ ಕಾಳಿಕಾಂಬ ಕಲ್ಲುಕುಟಿಕರ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ ನಿ., ಸರಗೂರಿನ ಬೆಲ್ಲದಕುಪ್ಪೆ ಮಹದೇಶ್ವರ ಸ್ವಾಮಿ ಕಲ್ಲುಕುಟಿಕರ ಲೆಬರ್ ಕಂಟ್ರಾಕ್ಟ್ ಸಹಕಾರ ಸಂಘಗಳು ಸೆಪ್ಟೆಂಬರ್-2015ನೇ ಸಾಲಿನಲ್ಲಿ ನಡೆಸಬೇಕಾಗಿದ್ದ 2014-15ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಸಿರುವ ಬಗ್ಗೆ ಹಾಗೂ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು, ಹುಣಸೂರು ಉಪವಿಭಾಗದ  ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಥವಾ ಹೆಚ್.ಡಿ.ಕೋಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಕಚೇರಿಗೆ ಮಾಹಿತಿ ಸಲ್ಲಿಸಿರುವುದಿಲ್ಲ.
     ಮಾಹಿತಿ ಸಲ್ಲಿಸುವ ಬಗ್ಗೆ  ಸದರಿ ಸಂಘಗಳಿಗೆ ನೋಟೀಸ್ ಜಾರಿ ಮಾಡಿ ಖುದ್ದು ಹಾಜರಾಗುವಂತೆ ತಿಳಿಸಿದ್ದÀರು. ಹಾಜರಾಗಿರುವುದಿಲ್ಲ. ಆದ್ದರಿಂದ  ಸದರಿ ಸಂಘಗಳನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ.  ಸಮಾಪನೆಗೊಳಿಸಲುವ ಬಗ್ಗೆ  ಏನಾದರೂ ಆಕ್ಷೇಪಣೆಗಳಿದ್ದಲ್ಲಿ   ಹೆಚ್.ಡಿ.ಕೋಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆಈ ಪ್ರಕಟಣೆ  ಪ್ರಕಟಣೆಗೊಂಡ 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವುದು.
ಸಿನಿಮಾ ಸಮಯದಲ್ಲಿ ಮೇ 12 ರಂದು ಪಥೇರ್ ಪಾಂಚಾಲಿ
      ಮೈಸೂರು,ಮೇ.11.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಆಯೋಜಿಸುವ ಸಿನಿಮಾ ಸಮಯದಲ್ಲಿ ಮೇ 12  ರಂದು ಗುರುವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಸತ್ಯಜಿತ್ ರೇ ನಿರ್ದೇಶನದ ಪಥೇರ್ ಪಾಂಚಾಲಿ 60ನೇ ವರ್ಷ ಆಚರಣೆ ಸಂಭ್ರಮ ಒಂದು ಸಂವಾದ ನಡೆಯಲಿದೆ.
    ಇದಕ್ಕೂ ಮುನ್ನ ಅಂದು ಸಂಜೆ 5-30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರವÀನ್ನು ಪ್ರದರ್ಶಿಸಲಾಗುವುದು.
     ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
                                                       
   ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
    ಮೈಸೂರು,ಮೇ.11.-ಮೈಸೂರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  2016-17 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಆಸಕ್ತರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಉಳಿತಾಯ ಖಾತೆ ಚಲನ್ ಪಡೆದು, ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಉಳಿತಾಯ ಖಾತೆ ಸಂಖ್ಯೆ: ಇಆ-ಏಇಂ-ಆಅಇಖಿ-2016 64097386381 ಕ್ಕೆ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಇತರೆ ವರ್ಗ ರೂ. 100-00  ಹಾಗೂ Sಅ/Sಖಿ/ಛಿಚಿಣ-I  ಅಭ್ಯರ್ಥಿಗಳು ರೂ-50/- ಗಳ ಶುಲ್ಕವನ್ನು ಜಮೆ ಮಾಡಿ, ಚಲನ್ ಪ್ರತಿಯನ್ನು ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಮೈಸೂರು ಸಂಸ್ಧೆ ಇವರಿಗೆ ಸಲ್ಲಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮೇ 30 ರೊಳಗಾಗಿ ಸಲ್ಲಿಸುವುದು.
      ಅರ್ಜಿ ಪಡೆದ ನಂತರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ, ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ (ಆoಛಿumeಟಿಣ ಗಿeಡಿiಜಿiಛಿಚಿಣioಟಿ ಅum ಔಟಿ ಐiಟಿe ಂಠಿಠಿಟiಛಿಚಿಣioಟಿ Submissioಟಿ ಅeಟಿಣಡಿe/ಔಠಿಣioಟಿ ಇಟಿಣಡಿಥಿ ಊeಟಠಿ ಅeಟಿಣeಡಿes)” ಇರುತ್ತದೆ.
      ಮಾಹಿತಿ ಪುಸ್ತಕದಲ್ಲಿ ನೀಡಿರುವ ಮೂಲ ದಾಖಲಾತಿಗಳು, ಮೂಲ ದಾಖಲಾತಿಗಳ 1 ಜೊತೆ ದೃಢೀಕೃತ ಜೆರಾಕ್ಸ್ ಪ್ರತಿ,  ಮೊಬೈಲ್ ಸಂಖ್ಯೆ ಮತ್ತು  ಈ ಮೇಲ್ ವಿಳಾಸ ಸಹ ಹೊಂದಿರಬೇಕು. “ದಾಖಲೆ ಪರಿಶೀಲನೆ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರದಲ್ಲಿ ಖುದ್ದು ಹಾಜರಾಗಿ ದಾಖಲಾತಿ ಪರಿಶೀಲಿಸಿಕೊಂಡು ಆನ್‍ಲೈನ್‍ನಲ್ಲಿ ಅಪ್ ಲೋಡ್   ಮಾಡಿಸಿ ಭರ್ತಿ ಮಾಡಿದ ಅರ್ಜಿಗೆ ಅomಠಿuಣeಡಿ ಉeಟಿeಡಿಚಿಣeಜ  ಪ್ರತಿ ಹಾಗೂ ಸ್ವೀಕೃತಿ   ಪಡೆಯುವುದು.
     ಹೆಚ್ಚಿನ ಮಾಹಿತಿಗೆ ತಿತಿತಿ.ಜಣe.ಞಚಿಡಿ.ಟಿiಛಿ.iಟಿ  / ತಿತಿತಿ.ಞeಚಿ.ಞಚಿಡಿ.ಟಿiಛಿ.iಟಿ   ಅಥವಾ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಧೆಯನ್ನು  ಸಂಪರ್ಕಿಸುವುದು.
ಕಾರ್ಖಾನೆಗಳ ಸುತ್ತಮುತ್ತ ಪಾಲಿಕೆಯಿಂದ ಸ್ವಚ್ಫತಾ ಕಾರ್ಯಕ್ರಮ
ಮೈಸೂರು,ಮೇ.11. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಕಾರ್ಖಾನೆಗಳ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮೇ2 ರಂದು ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-2ರಲ್ಲಿ ವಾರ್ಡ್ ನಂ 11 ರ ವಿಶ್ವೇಶ್ವರ ನಗರದ ಫ್ಲೋರ್‍ಮಿಲ್ ಫ್ಯಾಕ್ಟರಿ ಹಾಗೂ ಜಾಕಿ ಫ್ಯಾಕ್ಟರಿಯ ಸುತ್ತಮುತ್ತಲಿನ ಆವರಣವನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಖಾನೆ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು.

No comments:

Post a Comment