Thursday 24 March 2016

ನಗರಸಭೆ ಸಾಮಾನ್ಯಸಭೆಯಲ್ಲಿ ಮಹಿಳಾ ಸದಸ್ಯರ ಚರ್ಚೆಗೆ ಅಡ್ಡಿ, ಗದ್ದಲದ ಗೂಡಾದ ಸಭೆ ,ರೂಲಿಂಗ್ ನೀಡುವಲ್ಲಿ ಅಧ್ಯಕ್ಷರ ವೈಫಲ್ಯ .
ಜೆಡಿಎಸ್-ಪಕ್ಷೇತರರ ಸಭಾತ್ಯಾಗ

ಮಂಡ್ಯ- ಮಹಿಳಾ ಸದಸ್ಯೆಯೊಬ್ಬರ ಚರ್ಚೆಗೆ ಅಡ್ಡಿ, ಸದಸ್ಯರ ನಡುವೆ ಮಾತಿನ ಚಕಮಕಿ, ರೂಲಿಂಗ್ ನೀಡುವಲ್ಲಿ ಅಧ್ಯಕ್ಷರ ವೈಫಲ್ಯ, ಗೊಂದಲದ ಗೂಡಾದ ಸಭೆ,ಜಾತ್ಯಾತೀತ ಜನತಾದಳ, ಪಕ್ಷೇತರರ ಸದಸ್ಯರ ಸಭಾತ್ಯಾಗ.ಇದು ಇಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.
 ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆ  ಮಾತನಾಡಿದ  ನಗರಸಭೆ  ಮಾಜಿ ಅಧ್ಯಕ್ಷರು , ಹಾಲಿ ಸದಸ್ಯ ಸಿದ್ದರಾಜು, ಅಧ್ಯಕ್ಷರೆ... ನೀವು ಹೆಬ್ಬೆಟ್ ಆಗಬೇಡಿ...  ಸರಿಯಾದ ಸದನದ ನಡವಳಿಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ಸಭೆ ನಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ ಸದಸ್ಯೆ ಮಧುಶ್ರೀ ಅವರು ಮಾತನಾಡಲು ಮುಂದಾದಾಗ , ಮತ್ತೊಬ್ಬ ಸದಸ್ಯ ಚಂದ್ರಕುಮಾರ್ ಅವರು ಅವರ ಮಾತಿಗೆ ಅಡ್ಡಿ ಪಡಿಸಿದರಲ್ಲದೇ, ಹೆಬ್ಬೆಟ್ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ  ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಸಭೆಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಜತೆಗೆ ಸದಸ್ಯ ಚಂದ್ರಕುಮಾರ್ ಅವರು ಸದಸ್ಯೆ ಮಧುಶ್ರೀ ಅವರಿಗೆ ಏಕ ವಚನ ಸಂಬೋಧಿಸಿದ್ದಾರೆ. ಹಾಗಾಗಿ ಅವರು ಸಭೆಯಲ್ಲಿ P್ಷÀಮೆಯಾಚಿಸಬೇಕು.ಇಲ್ಲದಿದ್ದಲ್ಲಿ ಅಧ್ಯP್ಷÀರು ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು.
 ಇಷ್ಟು ಹೊತ್ತಿಗಾಗಲೇ  ಅಧ್ಯಕ್ಷರ  ಮುಂಭಾಗದಲ್ಲಿ ನೆರೆದ ಸದಸ್ಯರು  ಚಂದ್ರಕುಮಾರ್ ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
 ಜತೆಗೆ  ಮಾತನಾಡಲು ಅವಕಾಶ ನೀಡದಿದ್ದ ಮೇಲೆ ನಾವು ಯಾಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಮಧುಶ್ರೀ ಸೇರಿದಂತೆ ಅನೇಕ ಸದಸ್ಯರು  ಸಭಾತ್ಯಾಗ ಮಾಡಲು ಮುಂದಾದರು, ಆ ಸಂದರ್ಭದಲ್ಲಿ ಪಕ್ಷೇತರ ಸದಸ್ಯ  ಕೆ.ಸಿ.ರವೀಂದ್ರ, ಸಭೆಯಿಂದ ನಿರ್ಗಮಿಸುತ್ತಿದ್ದ ಸದಸ್ಯರಾದ ಸೋಮಶೇಖರ್ ಕೆರಗೋಡು,ಸಿದ್ದರಾಜು, ಮಧುಶ್ರೀ, ಚಿಕ್ಕಣ್ಣ, ಮಹೇಶ್‍ಕೃಷ್ಣ, ಸೇರಿದಂತೆ ಹಲವಾರು ಸದಸ್ಯರ ಮನವೊಲೈಸಿ ಸಭೆಗೆ ಕರೆತಂದರು.
 ನಂತರ ಸಭೆ ಆರಂಭವಾದಂತೆಯೇ  ಸದಸ್ಯೆ ಮಧುಶ್ರೀ ಮಾತನಾಡಿ, ಅಧ್ಯಕ್ಷರೆ, ನೀವು ಮಾತನಾಡಲು ಅವಕಾಶ ನೀಡಿದ್ದೀರಿ. ಅದರಂತೆ  ಮಾತಾಡುತ್ತಿz್ದÉೀವೆ.  ನಮ್ಮ ವಾರ್ಡುಗಳ ಸಮಸ್ಯೆಗಳು ಸಾಕಷ್ಟಿವೆ. ಅದರ ಪರಿಹಾರಕ್ಕಾಗಿ ನಾವು ಬಂದಿz್ದÉೀವೆ. ಆದರೆ ಕೆಲ ಸದಸ್ಯರು, ಚರ್ಚೆಗೆ ಅಡ್ಡಿ ಪಡಿಸುತ್ತಿದ್ದಾರೆ. ಆರೋಗ್ಯಕರವಾಗಿ ಸಭೆ ನಡೆಸಲು ಎಡೆ ಮಾಡಿಕೊಡುತ್ತಿಲ್ಲ ಎಂದು ದೂರಿದರು. ಈ ಸಮಯದಲ್ಲಿ  ಮತ್ತೆ ಕಾಂಗ್ರೆಸ್ ಸದಸ್ಯರು  ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ  ಅಧ್ಯP್ಷÀರ ಎದುರು ಜಮಾವಣೆಗೊಂಡ ಜಾ.ದಳ ಸದಸ್ಯರು, ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಸಭಾತ್ಯಾಗ ಮಾಡಿದರು.

ಉತ್ತರ ಕೊಡಲು ಆಯುಕ್ತರು ಇದ್ದಾರೆ
ಮಂಡ್ಯ- ಉತ್ತರ ಕೊಡಲು ಆಯುಕ್ತರು ಇದ್ದಾರೆ. ಅಧ್ಯP್ಷÀರೇನು ಕೊಡಬೇಕಿಲ್ಲ ಎಂದು   ನಗರಸಭಾ ಸದಸ್ಯ ಟಿ.ಕೆ.ರಾಮಲಿಂಗು  ತಿಳಿಸಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ  ಅಧ್ಯP್ಷÀರ  ಬಗ್ಗೆ ಮಾಜಿ ಅಧ್ಯP್ಷÀ ಸಿದ್ದರಾಜು ಅವರು, ಹೆಬ್ಬೆಟ್ ಆಗಬೇಡಿ ಅಧ್ಯP್ಷÀರೇ... ನೀವು ಕೆಲ ನಿಯಾಮವಳಿಗಳನ್ನು ತಿಳಿದುಕೊಳ್ಳಬೇಕು. ಸದಸ್ಯರಿಗೆ ಉತ್ತರ ಕೊಡಲು ಇದು ಅವಶ್ಯಕ ಎಂದು ಸಲಹೆ ನೀಡಿದ ಸಂದರ್ಭದಲ್ಲಿ  ಟಿ.ಕೆ. ರಾಮಲಿಂಗು ಅವರು  ಈ ರೀತಿ ತಿಳಿಸಿದರು.
ಏರು ಧ್ವನಿಯಲ್ಲಿ ಮಾತನಾಡಿದ ಅವರು, ಅಧ್ಯP್ಷÀರೇ ಉತ್ತರ ಕೊಡುವಂತಿದ್ದರೆ ಆಯುಕ್ತರು ಯಾಕೆ ಬೇಕಿತ್ತು ಎಂದು ಈ ಸಮಯದಲ್ಲಿ ಪ್ರಶ್ನಿಸಿದರು.

ಅಧ್ಯಕ್ಷರೇ ಅಭಿವೃದ್ದಿಗೆ ಗಮನ ನೀಡಿ
ಮಂಡ್ಯ- ಅಧ್ಯಕ್ಷರೇ ನೀವು ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ, ನಗರದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದೆ. ಹಾಗಾಗಿ ಉಳಿದಿರುವ  ಅವಧಿಯಲ್ಲಿ ನಗರದ ಅಭಿವೃದ್ದಿಗೆ ಗಮನ ಹರಿಸಿ ಎಂದು ಸದಸ್ಯ ಸೋಮಶೇಖರ್ ಕೆರಗೋಡು  ತಿಳಿಸಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,ನಗರದಲ್ಲಿ ಕೆಲವು ಸಮಸ್ಯೆಗಳು ಗಂಭೀರವಾಗಿದೆ. ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ.  ಇನ್ನು ಕೆಲವೇ ತಿಂಗಳುಗಳು  ಬಾಕಿಯುಳಿದಿದೆ. ಹಾಗಾಗಿ ಅಭಿವೃದ್ದಿಯತ್ತ ಚಿತ್ತ ಹರಿಸಿ ಎಂದು ಮನವಿ ಮಾಡಿದರು.
ಮತ್ತೊಬ್ಬ ಸದಸ್ಯ ಕೆ.ಸಿ.ರವೀಂದ್ರ ಮಾತನಾಡಿ, ಎರಡೂವರೆ ವರ್ಷಗಳಿಂದ ಅಭಿವೃದ್ದಿ ಕುಂಠಿತವಾಗಿದೆ. ಆದಕಾರಣ ಉಳಿದಿರುವ ಅವಧಿಯಲ್ಲಾದರೂ ಒಳ್ಳೆ ಕೆಲಸ ಮಾಡಿ ಎಂದರು.  ಇದೇ ಸಂದರ್ಭದಲ್ಲಿ ನೂತನ ಅಧ್ಯP್ಷÀರು ಮತ್ತು ಉಪಾಧ್ಯಕ್ಷರನ್ನು  ಅಭಿನಂದಿಸಲಾಯಿತು.

ಗಂಗಾಧರ ಶೆಟ್ಟಿಗೆ ಪಿಹೆಚ್‍ಡಿ ಪದವಿ
ಮಂಡ್ಯ- ಮೈಸೂರು ವಿಶ್ವವಿದ್ಯಾಲಯದಿಂದ ಹೆಚ್.ಎಂ. ಗಂಗಾಧರ ಶೆಟ್ಟಿ ಅವರಿಗೆ  ಪಿಹೆಚ್‍ಡಿ ಪದವಿ ಲಭಿಸಿದೆ.
ಡಾ.ಕೆ.ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರ ಪಡಿಸಿದ ಕೃಷ್ಣರಾಜ ಪೇಟೆ ತಾಲೂಕು- ಸಾಂಸ್ಕøತಿಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ  ಈ ಪದವಿ ದೊರಕಿದ್ದು, ಮುಂದೆ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪೆÇ್ರ.ಆರ್.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಟ್ಟೆ ನೋವು ತಾಳಲಾರದೇ ಮಹಿಳೆ ಆತ್ಮಹತ್ಯೆ
ಮಂಡ್ಯ:ಹೊಟ್ಟೆನೋವು ತಾಳಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಜರುಗಿದೆ.
ಅನುರಾಧ (39) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ.
ಪ್ರತಿನಿತ್ಯ ಅನುರಾಧಗೆ ಹೊಟ್ಟೆನೋವು ಬರುತ್ತಿತ್ತು. ಅಂತೆಯೇ ಇಂದು ಕೂಡ ನೋವು ಕಾಣಿಸಿಕೊಂಡ ಪರಿಣಾಮ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

No comments:

Post a Comment